AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆತ್ತಲೆ ಪಾರ್ಟಿಗೆ ಹೋಗಿ, ಭಯಾನಕ ಅನುಭವ ಹಂಚಿಕೊಂಡ ನಟಿ

ಕನ್ನಡದ ಸಿನಿಮಾ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ಸುಚಿತ್ರ ಇತ್ತೀಚೆಗೆ ಜರ್ಮನಿ ರಾಜಧಾನಿ ಬರ್ಲಿನ್​ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದರಂತೆ. ಆ ಪಾರ್ಟಿಯ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆತ್ತಲೆ ಪಾರ್ಟಿಗೆ ಹೋಗಿ, ಭಯಾನಕ ಅನುಭವ ಹಂಚಿಕೊಂಡ ನಟಿ
ಮಂಜುನಾಥ ಸಿ.
|

Updated on: Jul 16, 2024 | 2:01 PM

Share

ಇತ್ತೀಚೆಗೆ ಬಾಡಿ ಪಾಸಿಟಿವಿಟಿ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ತಮ್ಮ ದೇಹ ಹೇಗಿದ್ದರೂ ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಅದರ ಬಗ್ಗೆ ಹೆಮ್ಮೆ ಪಡುವುದನ್ನು ಹೇಳಿಕೊಡಲಾಗುತ್ತಿದೆ. ಇದು ವಿಶ್ವಮಟ್ಟದ ಚಳವಳಿಯಾಗಿ ರೂಪುಗೊಂಡಿದೆ. ಭಾರತದ ಹಲವು ನಟ-ನಟಿಯರು ಸಹ ಬಾಡಿ ಪಾಸಿಟಿವಿಯನ್ನು ಬೆಂಬಲಿಸಿದ್ದಾರೆ. ವಿದೇಶದಲ್ಲಂತೂ ಈ ಚಳವಳಿ ಜೋರಾಗಿದೆ. ಬಾಡಿ ಪಾಸಿಟಿವಿಟಿ ಪ್ರಚಾರಕ್ಕೆ ಕರೆಯಲಾಗಿದ್ದ ನ್ಯೂಡ್ ಪಾರ್ಟಿಯಲ್ಲಿ ಭಾರತದ ನಟಿಯೊಬ್ಬರು ಇತ್ತೀಚೆಗೆ ಭಾಗವಹಿಸಿದ್ದರು. ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಭವ ಬರೆದುಕೊಂಡಿದ್ದಾರೆ.

ಕನ್ನಡದ ಸೂಪರ್ ಹಿಟ್ ಸಿನಿಮಾ ‘ವಿಶ್ವ’ (ಶಿವರಾಜ್ ಕುಮಾರ್ ನಾಯಕ) ಸೇರಿದಂತೆ ಮಲಯಾಳಂ, ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿರುವ ಸುಚಿತ್ರ ಕೃಷ್ಣಮೂರ್ತಿ, ಜರ್ಮನಿಯಲ್ಲಿ ನಡೆದ ಬಾಡಿ ಪಾಸಿಟಿವಿಟಿ/ ನ್ಯೂಡ್ ಪಾರ್ಟಿಯಲ್ಲಿ ಇತ್ತೀಚೆಗೆ ಭಾಗಿಯಾಗಿದ್ದರಂತೆ. ಆದರೆ ಅಲ್ಲಿ ತಮಗೆ ಆದ ಕೆಟ್ಟ ಅನುಭವದ ಬಗ್ಗೆ ನಟಿ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಎರಡು ದಿನದ ಹಿಂದೆ ನಟಿ ಸುಚಿತ್ರ ಕೃಷ್ಣಮೂರ್ತಿ ಜರ್ಮನಿಯಲ್ಲಿ ನೇಕೆಡ್ ಪಾರ್ಟಿಯಲ್ಲಿ ಭಾಗವಹಿಸಿದ್ದರಂತೆ. ‘ಬರ್ಲಿನ್​ನ (ಜರ್ಮನಿ ರಾಜಧಾನಿ) ಬಾಡಿ ಪಾಸಿಟಿವಿಟಿ/ ನೇಕೆಡ್ ಪಾರ್ಟಿಯಲ್ಲಿ ಭಾಗವಹಿಸಿದೆ. ಅಲ್ಲಿಗೆ ಹೋದ ಬಳಿಕ ‘ಮೆದುಳೇ ಬಿದ್ದು ಹೋಗುವಷ್ಟು ಓಪನ್ ಮೈಂಡೆಡ್ ಆಗಬಾರದು’ ಎಂಬ ಮಾತು ನೆನಪಾಯ್ತು. ನಾನು ಯಾವತ್ತಿದ್ದರೂ ದೇಸಿ ಹುಡುಗಿಯೇ, ಈ ಕೂಡಲೇ ಸ್ನಾನ ಮಾಡಿ, ಗಾಯತ್ರಿ ಮಂತ್ರ ಪಠಣ ಮಾಡಬೇಕು’ ಎಂದು ನಟಿ ಬರೆದುಕೊಂಡಿದ್ದಾರೆ. ಅಲ್ಲಿಗೆ ಹೋಗಿ ಪಾಪ ಮಾಡಿದ ಅನುಭವ ನಟಿ ಸುಚಿತ್ರ ಕೃಷ್ಣಮೂರ್ತಿಗೆ ಆಯ್ತಂತೆ, ಅದಕ್ಕೆಂದೆ ಸ್ನಾನ ಮಾಡಿ ಶುದ್ಧವಾಗಿ ಗಾಯತ್ರಿ ಮಂತ್ರ ಪಠಿಸಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಗ್ಲಾಮರ್​ ಗೊಂಬೆ ಅಪ್ಸರ ರಾಣಿ

ಈ ಬಗ್ಗೆ ಬಾಲಿವುಡ್ ಹಂಗಾಮ ಜೊತೆಗೆ ಈ ಬಗ್ಗೆ ಮಾತನಾಡಿರುವ ನಟಿ ಸುಚಿತ್ರ, ‘ನನ್ನ ಗೆಳೆಯರ ಹತ್ತಿರದ ಗೆಳೆಯರೊಬ್ಬರ ಬಾರ್​ನಲ್ಲಿ ಈ ನ್ಯೂಡ್ ಪಾರ್ಟಿ ಆಯೋಜಿತವಾಗಿತ್ತು. ಸರಿ ಒಮ್ಮೆ ನೋಡಿಬಿಡೋಣ ಎಲ್ಲದರ ಅನುಭವ ಇರಬೇಕು ಎಂದುಕೊಂಡು ಹೋಗಿದ್ದೆ. ಆದರೆ ಅಲ್ಲಿಗೆ ಹೋದ ಮೇಲೆ ಕೇವಲ 20 ನಿಮಿಷಕ್ಕೆ ಅಲ್ಲಿಂದ ವಾಪಸ್ ಓಡಿ ಬಂದೆ. ನನಗೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ. ನನಗೆ ಇನ್ನೊಬ್ಬರ ಸ್ತನ, ನಿತಂಬಗಳನ್ನು ನೋಡಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

‘ಆದರೆ ಇಂಥಹ ಪಾರ್ಟಿಗಳೆಲ್ಲ ಇಲ್ಲಿ ತೀರ ಸಾಮಾನ್ಯ. ಫನ್ ಗಾಗಿ ಹಾಗೂ ಪಾಸಿಟಿವಿಟಿ ಹೆಚ್ಚಿಸಲು ಈ ರೀತಿಯ ಇವೆಂಟ್​ಗಳನ್ನು ಆರ್ಗನೈಜ್ ಮಾಡುತ್ತಿರುತ್ತಾರೆ. ಅದು ಅಸಹ್ಯ ಎಂದೇನೂ ಅಲ್ಲ. ಆದರೆ ನಾವು ಭಾರತೀಯರು ಭಿನ್ನವಾಗಿ ಬೆಳೆದಿರುತ್ತೇವೆ. ನಮ್ಮ ದೇಹದ ಬಗ್ಗೆ ನಾವು ಹೆಚ್ಚು ಜಾಗೃತರಾಗಿಯೂ, ಗುಪ್ತಭಾವವನ್ನೂ ಹೊಂದಿರುತ್ತೇವೆ. ದೇಹವನ್ನು ಮುಚ್ಚಿಟ್ಟುಕೊಳ್ಳಬೇಕು ಎಂದು ನಮಗೆ ಕಲಿಸಲಾಗಿರುತ್ತದೆ ಹಾಗಾಗಿ ಇದೆಲ್ಲ ನಮಗೆ ಸರಿ ಎನಿಸುವುದಿಲ್ಲ’ ಎಂದಿದ್ದಾರೆ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಜೋಶಿ ವಾಗ್ದಾಳಿ
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?