AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಕಾರ್ಯಕ್ರಮದಲ್ಲಿ ಪ್ರೇಕಕನೊಂದಿಗೆ ಗಾಯಕ ಆದಿತ್ಯ ದುರ್ವರ್ತನೆ

Adithya Narayan: ಗಾಯಕ ಆದಿತ್ಯಾ ನಾರಾಯಣ್, ಲೈವ್ ಕಾನ್ಸರ್ಟ್​ನಲ್ಲಿ ಅಭಿಮಾನಿಯೊಬ್ಬರೊಟ್ಟಿಗೆ ದುರ್ವರ್ತನೆ ತೋರಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...

ವಿಡಿಯೋ: ಕಾರ್ಯಕ್ರಮದಲ್ಲಿ ಪ್ರೇಕಕನೊಂದಿಗೆ ಗಾಯಕ ಆದಿತ್ಯ ದುರ್ವರ್ತನೆ
ಮಂಜುನಾಥ ಸಿ.
|

Updated on: Feb 13, 2024 | 5:51 PM

Share

ಜನಪ್ರಿಯ ಗಾಯಕ ಉದಿತ್ ನಾರಾಯಣ್ (Udith Narayan) ಪುತ್ರ ಆದಿತ್ಯ ನಾರಾಯಣ್ ಸಹ ಒಳ್ಳೆಯ ಗಾಯಕರಾಗಿದ್ದು ಈಗಾಗಲೇ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ತಮ್ಮದೇ ಬ್ಯಾಂಡ್ ಕಟ್ಟಿಕೊಂಡು ಲೈವ್ ಶೋಗಳನ್ನು ಸಹ ಮಾಡುತ್ತಾರೆ. ಲೈವ್ ಶೋಗಳಿಂದ ಭಾರಿ ಪ್ರಮಾಣದ ಹಣ ಗಾಯಕರಿಗೆ ಸಂಗೀತಕಾರರಿಗೆ ಇತ್ತೀಚಿನ ವರ್ಷಗಳಲ್ಲಿ ಹರಿದು ಬರುತ್ತಿದೆ. ಆದರೆ ಈ ಲೈವ್​ ಶೋಗಳಲ್ಲಿ ಒಮ್ಮೊಮ್ಮೆ ಪ್ರೇಕ್ಷಕರು ದುರ್ವರ್ತನೆ ತೋರುವುದುಂಟು, ಆದರೆ ಈ ಬಾರಿ ಗಾಯಕ ಆದಿತ್ಯ ನಾರಾಯವಣ್ ಅಹಂಕಾರದಿಂದ ವರ್ತಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲೈವ್ ಶೋಗಳಲ್ಲಿ ಪ್ರೇಕ್ಷಕರೊಟ್ಟಿಗೆ ಸಂವಾದ ಮಾಡಿಕೊಂಡು ಗಾಯಕರು ಹಾಡು ಹಾಡುತ್ತಾರೆ. ಕೆಲವೊಮ್ಮೆ ವೇದಿಕೆ ಮೇಲಿನಿಂದಲೇ ಸೆಲ್ಫಿ ಸಹ ನೀಡುತ್ತಾರೆ. ಆದಿತ್ಯ ನಾರಾಯಣ್ ಚತ್ತೀಸ್​ಘಡದ ಬಿಲಾಲಿಯಲ್ಲಿ ಲೈವ್ ಕಾನ್ಸರ್ಟ್ ಮಾಡುತ್ತಿದ್ದರು. ವೇದಿಕೆ ಮೇಲೆ ಓಡಾಡುತ್ತಾ ಹಾಡು ಹಾಡಿದರು. ಜನರನ್ನು ರಂಜಿಸಿದರು. ಆದರೆ ಈ ವೇಳೆ ವೇದಿಕೆಯ ಕೆಳಗಿದ್ದ ಅಭಿಮಾನಿಯೊಬ್ಬ ಅವನ ಫೋನ್ ನೀಡಿ ಸೆಲ್ಫಿ ತೆಗೆದುಕೊಡುವಂತೆ ಕೇಳಿದ್ದಾನೆ. ಇದರಿಂದ ಸಿಟ್ಟಾದ ಆದಿತ್ಯ, ಮೊದಲು ಮೈಕ್​ನಿಂದ ಆ ವ್ಯಕ್ತಿಯ ಕೈಗೆ ಹೊಡೆದಿದ್ದಾನೆ, ಬಳಿಕ ಆತನ ಫೋನ್ ಕಿತ್ತುಕೊಂಡು ಅದನ್ನು ದೂರ ಬಿಸಾಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ಆಟೋಗ್ರಾಫ್ ನೀಡಲು ಹೆಲಿಕ್ಯಾಪ್ಟರ್​ನಲ್ಲಿ ಬರುತ್ತಿದ್ದ ಗಾಯಕ ಕುಮಾರ್ ಸಾನು

ಆದಿತ್ಯ ಬಿಸಾಡಿದ ಫೋನು ಎರಡು ಭಾಗವಾಗಿ ಒಡೆದು ಹೋಗಿದೆ. ಆ ಫೋನ್​ನ ಚಿತ್ರವೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೆಲ್ಫಿ ಕೇಳಲೆಂದು ಆ ಯುವಕ ತನ್ನ ಫೋನ್​ನಿಂದ ವೇದಿಕೆ ಮೇಲಿದ್ದ ಆದಿತ್ಯನ ಕಾಲಿಗೆ ಮೆತ್ತಗೆ ಹೊಡೆದಿದ್ದಾನಷ್ಟೆ, ಇದಕ್ಕೆ ಕೋಪಗೊಂಡು ಫೋನ್ ಅನ್ನು ಎತ್ತಿ ಬಿಸಾಡಿದ್ದಾರೆ ಆದಿತ್ಯ ನಾರಾಯಣ್.

ಆದಿತ್ಯಾರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಆದಿತ್ಯಾ ನಾರಾಯಣ್​ರ ವರ್ತನೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಆದಿತ್ಯಾ ನಾರಾಯಣ್ ಅಭಿಮಾನಿಗಳಿಂದಲೇ ಬೆಳೆದವರು, ಈಗ ಅಹಂಕಾರದಿಂದ ಅಭಿಮಾನಗಳ ಮೇಲೆ ಅಹಂಕಾರ ತೋರುತ್ತಿದ್ದಾರೆ. ಈತನಿಗೆ ಸರಿಯಾಗಿ ಬುದ್ಧಿಕಲಿಸಬೇಕು ಈತನ ಲೈವ್ ಕಾನ್ಸರ್ಟ್ ಗೆ ಅವಕಾಶ ನೀಡಬಾರದು. ಯಾರೂ ಸಹ ಈತನಿಂದ ಲೈವ್ ಕಾನ್ಸರ್ಟ್ ಮಾಡಿಸಬೇಡಿ ಎಂದು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!