AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ ನಂತರ ಬಾಲಿವುಡ್​ಗೂ ಸಿಕ್ತು ಗುಡ್​ ನ್ಯೂಸ್​; ಸಂಭ್ರಮಿಸಿದ ಅಕ್ಷಯ್​ ಕುಮಾರ್

ಕರ್ನಾಟಕದಲ್ಲಿ ಇಷ್ಟುದಿನ ಚಿತ್ರಮಂದಿರಗಳಲ್ಲಿ ಶೆ. 50 ಸೀಟುಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಕರ್ನಾಟಕ ಸರ್ಕಾರ ಅಕ್ಟೋಬರ್ 1ರಿಂದ ಹೌಸ್​ಫುಲ್​ಗೆ ಅವಕಾಶ ನೀಡುತ್ತಿದೆ.

ಸ್ಯಾಂಡಲ್​ವುಡ್​ ನಂತರ ಬಾಲಿವುಡ್​ಗೂ ಸಿಕ್ತು ಗುಡ್​ ನ್ಯೂಸ್​; ಸಂಭ್ರಮಿಸಿದ ಅಕ್ಷಯ್​ ಕುಮಾರ್
ಸ್ಯಾಂಡಲ್​ವುಡ್​ ನಂತರ ಬಾಲಿವುಡ್​ಗೂ ಸಿಕ್ತು ಗುಡ್​ ನ್ಯೂಸ್​; ಸಂಭ್ರಮಿಸಿದ ಅಕ್ಷಯ್​ ಕುಮಾರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Sep 25, 2021 | 6:49 PM

Share

ಕೊವಿಡ್​ ಎರಡನೇ ಅಲೆ ಕಾಣಿಸಿಕೊಂಡ ನಂತರ ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಮುಚ್ಚಲಾಗಿತ್ತು. ಬಾಲಿವುಡ್​ನ ಮುಖ್ಯ ಹಬ್​ ಎಂದೇ ಕರೆಯಲ್ಪಡುವ ಮುಂಬೈನಲ್ಲಿ ಥಿಯೇಟರ್​ ಮುಚ್ಚಿದ್ದರಿಂದ ಬಾಲಿವುಡ್​ ಸ್ಟಾರ್​ ಸಿನಿಮಾಗಳು ಅಷ್ಟಾಗಿ ರಿಲೀಸ್​ ಆಗಿರಲಿಲ್ಲ. ಈಗ ಅಕ್ಟೋಬರ್​ 22ರಿಂದ ಚಿತ್ರಮಂದಿರ ರೀಓಪನ್​ಗೆ ಅವಕಾಶ ನೀಡಲಾಗಿದೆ. ಇದರಿಂದ ಬಾಲಿವುಡ್​ ಮತ್ತೆ ಕಳೆಗಟ್ಟುತ್ತಿದೆ. ಸ್ಟಾರ್​ ನಟರ ಸಿನಿಮಾಗಳು ರಿಲೀಸ್​ಗೆ ರೆಡಿ ಆಗುತ್ತಿದೆ.

ಕರ್ನಾಟಕದಲ್ಲಿ ಇಷ್ಟುದಿನ ಚಿತ್ರಮಂದಿರಗಳಲ್ಲಿ ಶೆ. 50 ಸೀಟುಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಕರ್ನಾಟಕ ಸರ್ಕಾರ ಅಕ್ಟೋಬರ್ 1ರಿಂದ ಹೌಸ್​ಫುಲ್​ಗೆ ಅವಕಾಶ ನೀಡುತ್ತಿದೆ. ಇದಾದ ಬೆನ್ನಲ್ಲೇ ಈಗ ಮಹಾರಾಷ್ಟ್ರದಲ್ಲೂ ಚಿತ್ರಮಂದಿರ ಓಪನ್​ ಮಾಡೋಕೆ ಅವಕಾಶ ನೀಡಲಾಗಿದೆ. ಅಕ್ಟೋಬರ್​ 22ರಿಂದ ಮಹಾರಾಷ್ಟ್ರದಲ್ಲಿ ಮತ್ತೆ ಸಿನಿಮಾ ರಿಲೀಸ್​ ಆಗಲಿದೆ.

ಈ ಬಗ್ಗೆ ಅಕ್ಷಯ್​ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ‘ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಸಾಕಷ್ಟು ಕುಟುಂಬಗಳು ಧನ್ಯವಾದ ಹೇಳುತ್ತವೆ. ಅಕ್ಟೋಬರ್​ 22ರಿಂದ ಚಿತ್ರಮಂದಿರ ಓಪನ್​ ಮಾಡೋಕೆ ಅವಕಾಶ ನೀಡಿದ್ದು ಉತ್ತಮ ಕೆಲಸ’ ಎಂದಿರುವ ಅಕ್ಷಯ್​ ಕುಮಾರ್​, ದೀಪಾವಳಿಗೆ ‘ಸೂರ್ಯವಂಶಿ’ ಸಿನಿಮಾ ಬರಲಿದೆ ಎಂಬುದನ್ನು ಘೋಷಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರನ್ನು ರೋಹಿತ್​ ಶೆಟ್ಟಿ ಭೇಟಿ ಮಾಡಿದ್ದಾರೆ. ಈ ಮೂಲಕ ಅವರು ವಿಶೇಷ ಧನ್ಯವಾದ ಹೇಳಿದ್ದಾರೆ.

ಅಕ್ಷಯ್​ ಕುಮಾರ್​ ನಟನೆಯ ‘ಬೆಲ್​ ಬಾಟಮ್’ ಸಿನಿಮಾ ತೆರೆಗೆ ಬಂದಿತ್ತು. ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಓಪನ್​ ಇಲ್ಲ ಎಂಬುದು ಸಿನಿಮಾಗೆ ದೊಡ್ಡ ಪೆಟ್ಟು ನೀಡಿತ್ತು. ನೂರಾರು ಕೋಟಿ ರೂಪಾಯಿ ಬಾಚುವ ಅಕ್ಷಯ್​ ಕುಮಾರ್​ ಸಿನಿಮಾ ಕೆಲವೇ ಕೆಲವು ಕೋಟಿ ಗಳಿಸಿ ಥಿಯೇಟರ್​ನಿಂದ ಕಾಲ್ಕಿತ್ತಿತ್ತು. ಈಗ ಈ ಸಿನಿಮಾ ಅಮೇಜಾನ್​ ಪ್ರೈಮ್​ನಲ್ಲಿ ತೆರೆಗೆ ಬಂದು ಹೆಸರು ಮಾಡುತ್ತಿದೆ.

ಇದನ್ನೂ ಓದಿ: ಥಿಯೇಟರ್​ ಹೌಸ್​ಫುಲ್​ಗೆ ಅವಕಾಶ; ಷರತ್ತುಗಳೇನು?

ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?

Published On - 6:48 pm, Sat, 25 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ