AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?

ಅಕ್ಷಯ್​ ಕುಮಾರ್​ ಬಾಡಿ ಗಾರ್ಡ್​ ಹೆಸರು ಶ್ರೇಯಸ್​ ಟೇಲೆ. ಹಲವು ವರ್ಷಗಳಿಂದ ಅವರು ಅಕ್ಷಯ್​ ಕುಮಾರ್​ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಅಕ್ಕಿಗೆ ಸಿಕ್ಕಾಪಟ್ಟೆ ನಂಬಿಕೆ.

ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ; ಈ ವ್ಯಕ್ತಿಯ ಕೆಲಸಗಳೇನು?
ಅಕ್ಷಯ್​ ಕುಮಾರ್​ ನಂಬಿಕಸ್ಥ ಬಾಡಿಗಾರ್ಡ್ ಶ್ರೇಯಸ್​​ಗೆ 1.2 ಕೋಟಿ ರೂ. ಸಂಬಳ
TV9 Web
| Edited By: |

Updated on: Sep 14, 2021 | 3:32 PM

Share

ಬಾಲಿವುಡ್​ನಲ್ಲಿ ಸದಾ ಕಾಲ ಬ್ಯುಸಿ ಆಗಿರುವ ನಟ ಅಕ್ಷಯ್​ ಕುಮಾರ್​ ಅವರು ಹೆಚ್ಚು ಸಮಯ ಶೂಟಿಂಗ್​ನಲ್ಲೇ ಕಳೆಯುತ್ತಾರೆ. ಪ್ರತಿ ವರ್ಷ ಅತಿ ಹೆಚ್ಚು ಸಿನಿಮಾ ಮಾಡುವ ಸ್ಟಾರ್​ಗಳ ಪಟ್ಟಿಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಸಿನಿಮಾ ಚಟುವಟಿಕೆ ಮಾತ್ರವಲ್ಲದೇ ಹತ್ತಾರು ಕೆಲಸಗಳ ನಿಮಿತ್ತ ಅವರು ಹೊರಗಡೆ ಸುತ್ತಾಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಅವರ ರಕ್ಷಣೆಗೆ ಒರ್ವ ಅಂಗರಕ್ಷಕನನ್ನು ನೇಮಿಸಿಕೊಂಡಿದ್ದಾರೆ. ಆ ಬಾಡಿಗಾರ್ಡ್​ಗೆ ಅಕ್ಷಯ್​ ಕುಮಾರ್​ ವಾರ್ಷಿಕೆ 1.2 ಕೋಟಿ ರೂ. ನೀಡುತ್ತಾರೆ ಎಂಬುದು ಅಚ್ಚರಿಯ ಮಾಹಿತಿ!

ಅಕ್ಷಯ್​ ಕುಮಾರ್​ ಬಾಡಿ ಗಾರ್ಡ್​ ಹೆಸರು ಶ್ರೇಯಸ್​ ಟೇಲೆ. ಹಲವು ವರ್ಷಗಳಿಂದ ಅವರು ಅಕ್ಷಯ್​ ಕುಮಾರ್​ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಅಕ್ಕಿಗೆ ಸಿಕ್ಕಾಪಟ್ಟೆ ನಂಬಿಕೆ. ಅಕ್ಷಯ್​ ಎಂಥದ್ದೇ ಜನಜಂಗುಳಿಯ ಪ್ರದೇಶದಲ್ಲಿ ಇದ್ದರೂ ಕೂಡ ಅವರನ್ನು ಶ್ರೇಯಸ್​ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಇದು ಅವರ ಮುಖ್ಯ ಕೆಲಸ. ಇದಲ್ಲದೆ ಅವರು ಅಕ್ಷಯ್​ ಕುಟುಂಬದವರ ರಕ್ಷಣೆಯನ್ನೂ ಮಾಡುತ್ತಾರೆ. ಅಕ್ಷಯ್​ ಕುಮಾರ್​ ಪುತ್ರ ಆರವ್​ ಎಲ್ಲಿಗೆ ಹೋದರೂ ಕೂಡ ಅವರ ಜೊತೆ ಶ್ರೇಯಸ್​ರನ್ನು ಕಳಿಸಿಕೊಡಲಾಗುತ್ತದೆ. ಈ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಕ್ಕಾಗಿ ಅವರಿಗೆ ವಾರ್ಷಿಕ 1.2 ಕೋಟಿ ರೂ. ಸಂಬಳ ಸಿಗುತ್ತಿದೆ. ಅಂದರೆ, ಪ್ರತಿ ತಿಂಗಳು ಅವರಿಗೆ 10 ಲಕ್ಷ ರೂ. ಸಂಬಳ ನೀಡುತ್ತಾರೆ ಅಕ್ಷಯ್​ ಕುಮಾರ್​.

ಅಕ್ಷಯ್ ಕುಮಾರ್​ ಮಾತ್ರವಲ್ಲದೇ ಸಲ್ಮಾನ್​ ಖಾನ್​, ಶಾರುಖ್​ ಖಾಣ್​, ದೀಪಿಕಾ ಪಡುಕೋಣೆ ಮುಂತಾದವರು ಕೂಡ ತಮ್ಮ ಬಾಡಿಗಾರ್ಡ್​ಗಳಿಗೆ ಕೋಟಿಗಟ್ಟಲೆ ಸಂಬಳ ನೀಡುತ್ತಾರೆ. ಸಲ್ಮಾನ್​ ಬಾಡಿಗಾರ್ಡ್​ ಶೇರಾ ಅವರು ವಾರ್ಷಿಕ 2 ಕೋಟಿ ರೂ. ಸಂಬಳ ಪಡೆಯುತ್ತಾರೆ. ಶಾರುಖ್​ ಖಾನ್​ ಬಾಡಿಗಾರ್ಡ್​ ರವಿ ವಾರ್ಷಿಕ 2.7 ಕೋಟಿ ರೂ. ಪಡೆಯುವ ಮೂಲಕ ಅತಿ ದುಬಾರಿ ಬಾಡಿಗಾರ್ಡ್​ ಎನಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಬಾಡಿಗಾರ್ಡ್​ ಜಲಾಲ್​ ಹಾಗೂ ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ ಬಾಡಿಗಾರ್ಡ್​ ಪ್ರಕಾಶ್​ ಸಿಂಗ್​ಗೆ ತಲಾ 1.2 ಕೋಟಿ ರೂ. ಸಿಗುತ್ತಿದೆ. ಅಮಿತಾಭ್​ ಬಚ್ಚನ್​ ಅವರ ಅಂಗರಕ್ಷಕ ಜೀತೇಂದ್ರ ಅವರು ವಾರ್ಷಿಕ 1.5 ಕೋಟಿ ರೂ. ಸಂಬಳ ಪಡೆಯುತ್ತಾರೆ.

ಇದನ್ನೂ ಓದಿ:

ತಾಯಿ ಸತ್ತ ಮರುದಿನವೇ ಅಕ್ಷಯ್​ ಕುಮಾರ್​ ಹುಟ್ಟುಹಬ್ಬ; ಅಮ್ಮನ ಬಗ್ಗೆ ನಟನ ಭಾವುಕ ಮಾತು​

‘ಅಕ್ಷಯ್​ ಕುಮಾರ್​ ಸಿನಿಮಾ ನೋಡೋರಿಗೆ ನಾಚಿಕೆ ಆಗ್ಬೇಕು’; ಘೋಷಣೆ ಕೂಗಿ ಪ್ರತಿಭಟಿಸಿದ ಪಂಜಾಬ್​ ರೈತರು

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ