ಮಹಿಳೆಯರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದ ಅಮಿತಾಭ್ ಬಚ್ಚನ್; ಸಖತ್ ಟ್ರೋಲ್ ಆದ ನಟ

ಅಮಿತಾಭ್ ಅವರು ಮಾಡಿರುವ ಟ್ವೀಟ್​ನ ಸಂಖ್ಯೆ ಈಗ ನಾಲ್ಕು ಸಾವಿರ ದಾಟಿದೆ. ಹೀಗಿರುವಾಗ ಅವರ 26ನೇ ಸಂಖ್ಯೆಯ ಟ್ವೀಟ್ ವೈರಲ್ ಆಗಿದೆ.

ಮಹಿಳೆಯರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದ ಅಮಿತಾಭ್ ಬಚ್ಚನ್; ಸಖತ್ ಟ್ರೋಲ್ ಆದ ನಟ
ಅಮಿತಾಭ್
Follow us
|

Updated on:Jul 27, 2023 | 10:49 AM

ಸೋಶಿಯಲ್ ಮೀಡಿಯಾದಲ್ಲಿ ಎಂದೋ ಬರೆದುಕೊಂಡಿದ್ದ ಸಾಲುಗಳು ಮತ್ತೆ ವೈರಲ್ ಆಗಬಹುದು. ಇದಕ್ಕೆ ಕಾರಣ ಬೇಕಿಲ್ಲ. ಯಾವುದೋ ಸಂದರ್ಭದಲ್ಲಿ ಹಾಕಿದ ಟ್ವೀಟ್​ಗಳನ್ನು ಇಟ್ಟುಕೊಂಡು ದಶಕಗಳ ಬಳಿಕ ಟ್ರೋಲ್ ಮಾಡಲಾಗುತ್ತದೆ. ಈಗ ನಟ ಅಮಿತಾಭ್ ಬಚ್ಚನ್​ಗೂ (Amitabh Bacchan) ಹಾಗೆಯೇ ಆಗಿದೆ. ಟ್ವಿಟರ್ ಖಾತೆ ತೆರೆದ ಸಂದರ್ಭದಲ್ಲಿ ಅವರು ಮಾಡಿದ್ದ ಪೋಲಿ ಟ್ವೀಟ್ ವೈರಲ್ ಆಗಿದೆ. ಅವರು ಈ ಟ್ವೀಟ್ ಮಾಡಿ ದಶಕಗಳೇ ಕಳೆದಿದೆ. ಆದರೂ ಅದನ್ನು ಈಗ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.

ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮದೇ ಆದ ನಿಯಮ ಹಾಕಿಕೊಂಡಿದ್ದಾರೆ. ಪ್ರತೀ ಟ್ವೀಟ್ ಮಾಡುವಾಗಲೂ ಅದಕ್ಕೆ ಅವರು ನಂಬರ್ ನೀಡುತ್ತಾರೆ. ಅವರು ಮಾಡಿರುವ ಟ್ವೀಟ್​ನ ಸಂಖ್ಯೆ ಈಗ ನಾಲ್ಕು ಸಾವಿರ ದಾಟಿದೆ. ಹೀಗಿರುವಾಗ ಅವರ 26ನೇ ಸಂಖ್ಯೆಯ ಟ್ವೀಟ್ ವೈರಲ್ ಆಗಿದೆ.

ಅಮಿತಾಭ್ ಬಚ್ಚನ್ ಅವರು ಜೂನ್ 10, 2010ರ 3:24ಕ್ಕೆ ಟ್ವೀಟ್ ಒಂದನ್ನು ಮಾಡಿದ್ದರು. ‘ಇಂಗ್ಲಿಷ್ ಭಾಷೆಯಲ್ಲಿ ಏಕೆ ‘ಬ್ರಾ’ ಏಕವಚನ ಹಾಗೂ ‘ಪ್ಯಾಂಟೀಸ್’ ಬಹುವಚನ’ ಎಂದು ಪ್ರಶ್ನೆ ಮಾಡಿದ್ದರು. ಈ ಟ್ವೀಟ್​ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ಈ ಟ್ವೀಟ್​ನ ಅವರು ಡಿಲೀಟ್ ಮಾಡಿಲ್ಲ. ಈ ಟ್ವೀಟ್​ನ ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಅಮಿತಾಭ್ ಅವರೇ, ಇದೇನಿದು? ಇದುವೇ ನಿಮ್ಮ ಸಭ್ಯತೆಯೇ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ಅಂತೂ ಒಬ್ಬರು ಮುಖ್ಯ ಪ್ರಶ್ನೆ ಕೇಳಿದ್ದಾರೆ’ ಎಂದು ಟೀಕಿಸಿದ್ದಾರೆ

ಅಮಿತಾಭ್ ಬಚ್ಚನ್ ಅವರು ಮಾಡಿರುವ ಟ್ವೀಟ್ ಸಂಖ್ಯೆ ಈಗ 4,715 ದಾಟಿದೆ. 4,715  ಟ್ವೀಟ್​ನಲ್ಲಿ ಅವರು ‘ಕೌನ್ ಬನೇಗಾ ಕರೋಡ್ಪತಿ ಸೀಸನ್ 15’ ಆರಂಭ ಆಗುವ ಬಗ್ಗೆ ಮಾಹಿತಿ ನೀಡಿದ್ದರು. ಹಲವು ದಶಕಗಳಿಂದ ಅಮಿತಾಭ್ ಅವರು ಈ ಶೋನ ನಡೆಸಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: ಅಮಿತಾಭ್ ಬಚ್ಚನ್​ಗೆ ಮತ್ತೆ ಕಾಡಿದೆ ಅನಾರೋಗ್ಯ? ಅಭಿಮಾನಿಗಳಿಗೆ ಮೂಡಿದೆ ಆತಂಕ

ಸಿನಿಮಾ ಕೆಲಸಗಳಲ್ಲೂ ಅಮಿತಾಭ್ ಬ್ಯುಸಿ ಇದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ. ಸ್ಯಾನ್ ಡಿಯಾಗೋದಲ್ಲಿ ಈ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಯಿತು. ಇದರಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದರು. ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:42 am, Thu, 27 July 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ