AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ ‘ಚೆಹ್ರೆ’ ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ

ಬಾಲಿವುಡ್ ಬಿಗ್​ಬಿ ಅಮಿತಾಭ್ ಬಚ್ಚನ್ ತಮ್ಮ ನೂತನ ಚಿತ್ರ ‘ಚೆಹ್ರೆ’ಗೆ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲವಂತೆ. ಅದರ ಕುರಿತಾದ ಅಚ್ಚರಿಯ ವಿಚಾರ ಇಲ್ಲಿದೆ.

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ 'ಚೆಹ್ರೆ' ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ
ಅಮಿತಾಭ್ ಬಚ್ಚನ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on: Aug 26, 2021 | 4:44 PM

ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಚೆಹ್ರೆ’ ಚಿತ್ರವು ಬಿಡುಗಡೆಗೆ ಕಾದು ಕುಳಿತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲವೊಂದು ಕುತೂಹಲಕರ ವಿಚಾರಗಳು ಬೆಳಕಿಗೆ ಬರುತ್ತಿವೆ. ಚಿತ್ರದ ನಿರ್ಮಾಪಕ ಆನಂದ್ ಪಂಡಿತ್ ಇತ್ತೀಚೆಗೆ ಹಂಚಿಕೊಂಡ ಒಂದು ಮಾಹಿತಿ ಸಖತ್ ಸುದ್ದಿ ಮಾಡುತ್ತಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಕಾರಣ, ಆನಂದ್ ಹೇಳಿರುವಂತೆ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಅಮಿತಾಭ್ ಬಚ್ಚನ್ ಚಿತ್ರಕ್ಕೆ ಸಂಭಾವನೆಯನ್ನೇ ಪಡೆದಿಲ್ಲವಂತೆ. ಜೊತೆಗೆ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳುವಾಗಲೂ ಸ್ವತಃ ತಮ್ಮ ಹಣದಿಂದ ಪ್ರಯಾಣ ಮಾಡಿದ್ದರಂತೆ. ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಅಮಿತಾಭ್ ಅವರ ಈ ನಡೆಯಿಂದ ಎಲ್ಲರಿಗೂ ಅಚ್ಚರಿಯಾಗಿದೆ.

ನಿರ್ಮಾಪಕ ಆನಂದ್ ಪಂಡಿತ್ ಅಮಿತಾಭ್ ಸಂಭಾವನೆ ಪಡೆಯದೇ ಇರುವ ಕಾರಣವನ್ನೂ ತಿಳಿಸಿದ್ದಾರೆ. ತೆರಿಗೆಯ ಕಾರಣದಿಂದಾಗಿ ಅಮಿತಾಭ್ ಅವರಿಗೆ ಚಿತ್ರದಲ್ಲಿ ‘ಅತಿಥಿ ಪಾತ್ರ’ ಎಂಬ ಕ್ರೆಡಿಟ್ ನೀಡಲಾಗಿದೆಯಂತೆ. ‘‘ತೆರಿಗೆಯ ದಾಖಲಾತಿಗಳಲ್ಲಿ ಅನಾವಶ್ಯಕ ಗೊಂದಲವೇರ್ಪಡುವ ಕಾರಣದಿಂದಾಗಿ ನಾವು ಆ ನಿರ್ಧಾರ ಕೈಗೊಂಡೆವು. ಇದಕ್ಕೆ ಸಂಪೂರ್ಣ ಬದ್ಧರಾದ ಅಮಿತಾಭ್, ವಿದೇಶ ಪ್ರಯಾಣಕ್ಕೂ ತಮ್ಮ ಸ್ವಂತ ಹಣವನ್ನು ಉಪಯೋಗಿಸಿದರು. ಇದು ಅವರ ಬದ್ಧತೆಯನ್ನು ತೋರಿಸುತ್ತದೆ’’ ಎಂದು ಆನಂದ್ ಬಿಗ್​ಬಿ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.

ಮಿಸ್ಟರಿ- ಥ್ರಿಲ್ಲರ್ ಮಾದರಿಯಲ್ಲಿರುವ ಈ ಚಿತ್ರ ಈಗಾಗಲೇ ತನ್ನ ತಾರಾಗಣದಿಂದ ಕುತೂಹಲ ಕೆರಳಿಸಿದೆ. ಅಮಿತಾಭ್​ರೊಂದಿಗೆ ಇಮ್ರಾನ್ ಹಶ್ಮಿ, ಕ್ರಿಸ್ಟಲ್ ಡಿಸೋಜಾ, ರಿಯಾ ಚಕ್ರವರ್ತಿ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಮಿತಾಭ್ ಬತ್ತಳಿಕೆಯಲ್ಲಿ ಈ ಚಿತ್ರವಲ್ಲದೇ ಹಲವು ಚಿತ್ರಗಳಿವೆ.  ‘ಬ್ರಹ್ಮಾಸ್ತ್ರ’, ‘ಮೇಡೇ’, ‘ಗುಡ್​ ಬೈ’ ಮೊದಲಾದ ಚಿತ್ರಗಳಲ್ಲಿ ಅಮಿತಾಭ್ ಕಾಣಿಸಿಕೊಳ್ಳುತ್ತಿದ್ದು, ಜೊತೆಜೊತೆಗೆ ಕೌನ್ ಬನೇಗಾ ಕರೋಡ್​ ಪತಿಯ 13ನೇ ಸೀಸನ್​ ಕೂಡಾ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ:

ಮುಗ್ಧ ನೋಟ ಮತ್ತು ಆಕರ್ಷಕ ಮೈಮಾಟದ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಮೊದಲು ಡುಮ್ಮಿಯಾಗಿದ್ದಳು ಅಂತ ನಿಮಗೆ ಗೊತ್ತಾ?

ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್​ ಪಡೆದ ಸಮಂತಾ ಅಕ್ಕಿನೇನಿ 

(Amitabh Bachchan does not take any payment for his movie Chehre says producer Anand Pandit)

ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಆಟೋ ಚಾಲಕ 37-ವರ್ಷ ವಯಸ್ಸಿನ ಗೋವಿಂದ ಇಂದು ಬೆಳಗ್ಗೆ ಸಾವನ್ನಪ್ಪಿದವರು
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಹಿರಿತೆರೆ-ಕಿರುತೆರೆನ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ನಿಶಾ ರವಿಕೃಷ್ಣನ್?
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
ಮೋದಿ ನೇತೃತ್ವದ ಭಾರತದಲ್ಲಿ ಎಲ್ಲರೂ ಸಮಾನರು, ಸುರಕ್ಷಿತರು: ಕೇಂದ್ರ ಸಚಿವೆ
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು
VIDEO: 5 ವರ್ಷದ ಪೋರನ ಸ್ಫೋಟಕ ಬ್ಯಾಟಿಂಗ್ ನೀವು ನೋಡಲೇಬೇಕು