AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ ‘ಚೆಹ್ರೆ’ ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ

ಬಾಲಿವುಡ್ ಬಿಗ್​ಬಿ ಅಮಿತಾಭ್ ಬಚ್ಚನ್ ತಮ್ಮ ನೂತನ ಚಿತ್ರ ‘ಚೆಹ್ರೆ’ಗೆ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲವಂತೆ. ಅದರ ಕುರಿತಾದ ಅಚ್ಚರಿಯ ವಿಚಾರ ಇಲ್ಲಿದೆ.

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ 'ಚೆಹ್ರೆ' ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ
ಅಮಿತಾಭ್ ಬಚ್ಚನ್ (ಸಾಂದರ್ಭಿಕ ಚಿತ್ರ)
TV9 Web
| Updated By: shivaprasad.hs|

Updated on: Aug 26, 2021 | 4:44 PM

Share

ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಚೆಹ್ರೆ’ ಚಿತ್ರವು ಬಿಡುಗಡೆಗೆ ಕಾದು ಕುಳಿತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲವೊಂದು ಕುತೂಹಲಕರ ವಿಚಾರಗಳು ಬೆಳಕಿಗೆ ಬರುತ್ತಿವೆ. ಚಿತ್ರದ ನಿರ್ಮಾಪಕ ಆನಂದ್ ಪಂಡಿತ್ ಇತ್ತೀಚೆಗೆ ಹಂಚಿಕೊಂಡ ಒಂದು ಮಾಹಿತಿ ಸಖತ್ ಸುದ್ದಿ ಮಾಡುತ್ತಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಕಾರಣ, ಆನಂದ್ ಹೇಳಿರುವಂತೆ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಅಮಿತಾಭ್ ಬಚ್ಚನ್ ಚಿತ್ರಕ್ಕೆ ಸಂಭಾವನೆಯನ್ನೇ ಪಡೆದಿಲ್ಲವಂತೆ. ಜೊತೆಗೆ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳುವಾಗಲೂ ಸ್ವತಃ ತಮ್ಮ ಹಣದಿಂದ ಪ್ರಯಾಣ ಮಾಡಿದ್ದರಂತೆ. ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಅಮಿತಾಭ್ ಅವರ ಈ ನಡೆಯಿಂದ ಎಲ್ಲರಿಗೂ ಅಚ್ಚರಿಯಾಗಿದೆ.

ನಿರ್ಮಾಪಕ ಆನಂದ್ ಪಂಡಿತ್ ಅಮಿತಾಭ್ ಸಂಭಾವನೆ ಪಡೆಯದೇ ಇರುವ ಕಾರಣವನ್ನೂ ತಿಳಿಸಿದ್ದಾರೆ. ತೆರಿಗೆಯ ಕಾರಣದಿಂದಾಗಿ ಅಮಿತಾಭ್ ಅವರಿಗೆ ಚಿತ್ರದಲ್ಲಿ ‘ಅತಿಥಿ ಪಾತ್ರ’ ಎಂಬ ಕ್ರೆಡಿಟ್ ನೀಡಲಾಗಿದೆಯಂತೆ. ‘‘ತೆರಿಗೆಯ ದಾಖಲಾತಿಗಳಲ್ಲಿ ಅನಾವಶ್ಯಕ ಗೊಂದಲವೇರ್ಪಡುವ ಕಾರಣದಿಂದಾಗಿ ನಾವು ಆ ನಿರ್ಧಾರ ಕೈಗೊಂಡೆವು. ಇದಕ್ಕೆ ಸಂಪೂರ್ಣ ಬದ್ಧರಾದ ಅಮಿತಾಭ್, ವಿದೇಶ ಪ್ರಯಾಣಕ್ಕೂ ತಮ್ಮ ಸ್ವಂತ ಹಣವನ್ನು ಉಪಯೋಗಿಸಿದರು. ಇದು ಅವರ ಬದ್ಧತೆಯನ್ನು ತೋರಿಸುತ್ತದೆ’’ ಎಂದು ಆನಂದ್ ಬಿಗ್​ಬಿ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.

ಮಿಸ್ಟರಿ- ಥ್ರಿಲ್ಲರ್ ಮಾದರಿಯಲ್ಲಿರುವ ಈ ಚಿತ್ರ ಈಗಾಗಲೇ ತನ್ನ ತಾರಾಗಣದಿಂದ ಕುತೂಹಲ ಕೆರಳಿಸಿದೆ. ಅಮಿತಾಭ್​ರೊಂದಿಗೆ ಇಮ್ರಾನ್ ಹಶ್ಮಿ, ಕ್ರಿಸ್ಟಲ್ ಡಿಸೋಜಾ, ರಿಯಾ ಚಕ್ರವರ್ತಿ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಮಿತಾಭ್ ಬತ್ತಳಿಕೆಯಲ್ಲಿ ಈ ಚಿತ್ರವಲ್ಲದೇ ಹಲವು ಚಿತ್ರಗಳಿವೆ.  ‘ಬ್ರಹ್ಮಾಸ್ತ್ರ’, ‘ಮೇಡೇ’, ‘ಗುಡ್​ ಬೈ’ ಮೊದಲಾದ ಚಿತ್ರಗಳಲ್ಲಿ ಅಮಿತಾಭ್ ಕಾಣಿಸಿಕೊಳ್ಳುತ್ತಿದ್ದು, ಜೊತೆಜೊತೆಗೆ ಕೌನ್ ಬನೇಗಾ ಕರೋಡ್​ ಪತಿಯ 13ನೇ ಸೀಸನ್​ ಕೂಡಾ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ:

ಮುಗ್ಧ ನೋಟ ಮತ್ತು ಆಕರ್ಷಕ ಮೈಮಾಟದ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಮೊದಲು ಡುಮ್ಮಿಯಾಗಿದ್ದಳು ಅಂತ ನಿಮಗೆ ಗೊತ್ತಾ?

ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್​ ಪಡೆದ ಸಮಂತಾ ಅಕ್ಕಿನೇನಿ 

(Amitabh Bachchan does not take any payment for his movie Chehre says producer Anand Pandit)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!