AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್ ಸಿನಿಮಾ ನೋಡಿ ಸಿಟ್ಟಾಗಿದ್ದ ಅಮಿತಾಬ್ ಬಚ್ಚನ್: ಯಾಕೆ? ಸಿನಿಮಾ ಯಾವುದು?

Amitabh Bachchan: ಪವನ್ ಕಲ್ಯಾಣ್​ರ ಹಳೆಯ ಸಿನಿಮಾ ಒಂದನ್ನು ನೋಡುವಾಗ ಸಿಟ್ಟು ಬಂದು ಕೀ ಬಿಸಾಡಿದ್ದರಂತೆ ಅಮಿತಾಬ್ ಬಚ್ಚನ್! ಯಾವುದು ಆ ಸಿನಿಮಾ?

ಪವನ್ ಕಲ್ಯಾಣ್ ಸಿನಿಮಾ ನೋಡಿ ಸಿಟ್ಟಾಗಿದ್ದ ಅಮಿತಾಬ್ ಬಚ್ಚನ್: ಯಾಕೆ? ಸಿನಿಮಾ ಯಾವುದು?
ಅಮಿತಾಬ್ ಬಚ್ಚನ್-ಪವನ್ ಕಲ್ಯಾಣ್
ಮಂಜುನಾಥ ಸಿ.
|

Updated on: Jun 30, 2023 | 8:06 PM

Share

ಪವನ್ ಕಲ್ಯಾಣ್ (Pawan Kalyan) ಈಗ ಸೂಪರ್ ಸ್ಟಾರ್ ನಟ, ಅವರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಅವರ ಸಿನಿಮಾಗಳನ್ನು ತೆಲುಗು ಜನರು ಮಾತ್ರವಲ್ಲದೆ ಇತರೆ ಭಾಷೆಯ ಜನರೂ ನೋಡಿ ಮೆಚ್ಚಿದ್ದಾರೆ. ಆದರೆ ಬಹಳ ವರ್ಷಗಳ ಹಿಂದೊಮ್ಮೆ ಪವನ್ ಕಲ್ಯಾಣ್​ರ ಸಿನಿಮಾ ನೋಡಿದ್ದ ಅಮಿತಾಬ್ ಬಚ್ಚನ್ (Amitabh Bachchan), ಸಿನಿಮಾ ನೋಡುವಾಗಲೇ ಸಿಟ್ಟಾಗಿ ಬೀಗವನ್ನು ಟಿವಿಯತ್ತ ಬಿಸಾಡಿಬಿಟ್ಟಿದ್ದರಂತೆ.

ಪವನ್ ಕಲ್ಯಾಣ್​ರ ನಾಲ್ಕನೇ ಸಿನಿಮಾ ‘ತೊಲಿ ಪ್ರೇಮ’ ಬಿಡುಗಡೆ ಆಗಿ ಬರೋಬ್ಬರಿ 25 ವರ್ಷಗಳಾಗಿವೆ. ‘ತೊಲಿ ಪ್ರೇಮ’ ಕಲ್ಟ್ ಕ್ಲಾಸಿಕ್ ಎಂದು ತೆಲುಗು ಚಿತ್ರರಂಗದಲ್ಲಿ ಗುರುತಾಗಿರುವ ಸಿನಿಮಾ. ಈ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗಿದ್ದು, ಪವನ್ ಅಭಿಮಾನಿಗಳು ಹುಚ್ಚೆದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾ 25 ವರ್ಷ ಪೂರೈಸಿದ ಕಾರಣ ಸಿನಿಮಾ ನಿರ್ದೇಶಕ ಎ ಕರುಣಾಕರನ್ ಹಲವು ಸಂದರ್ಶನಗಳನ್ನು ನೀಡಿದ್ದು, ಅಮಿತಾಬ್ ಬಚ್ಚನ್ ಒಮ್ಮೆ ತಮ್ಮ ತೊಲಿ ಪ್ರೇಮ ಸಿನಿಮಾ ನೀಡಿ ಸಿಟ್ಟಿನಿಂದ ವರ್ತಿಸಿದ್ದ ಘಟನೆ ಬಿಚ್ಚಿಟ್ಟದ್ದಾರೆ.

”ಅಮಿತಾಬ್ ಬಚ್ಚನ್ ತಮ್ಮ ಮನೆಯಲ್ಲಿ ‘ತೊಲಿ ಪ್ರೇಮ’ ಸಿನಿಮಾ ನೋಡಿದರಂತೆ. ಸಿನಿಮಾದ ಕ್ಲೈಮ್ಯಾಕ್ಸ್ ಗೆ ಬಂದರೂ ನಾಯಕ, ನಾಯಕಿಗೆ ತನ್ನ ಪ್ರೇಮನಿವೇದನೆ ಮಾಡದೇ ಇರುವುದನ್ನು ಕಂಡು ಟೆನ್ಷನ್​ನಿಂದ ತಮ್ಮ ಕೈಯಲ್ಲಿದ್ದ ಕೀ ಒಂದನ್ನು ಟಿವಿಯ ಕಡೆ ಎಸೆದುಬಿಟ್ಟರಂತೆ. ಆದರೆ ಅವರ ಜೊತೆಗೆ ಸಿನಿಮಾ ನೋಡುತ್ತಿದ್ದ ಜಯಾ ಬಚ್ಚನ್ ಅವರು ಸಿನಿಮಾವನ್ನು ಬಹಳ ಎಂಜಾಯ್ ಮಾಡಿದರಂತೆ. ಕೊನೆಯಲ್ಲಿ ನಾಯಕಿ ಮರಳಿ ನಾಯಕನ ಬಳಿ ಬಂದಾಗ ಖುಷಿಯಿಂದ ಚಪ್ಪಾಳೆ ತಟ್ಟಿದರಂತೆ” ಈ ವಿಷಯವನ್ನು ಸ್ವತಃ ಅಮಿತಾಬ್ ಬಚ್ಚನ್ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ತಮ್ಮ ಬಳಿ ಹೇಳಿದ್ದರು ಎಂದು ಕರುಣಾಕರನ್ ಹೇಳಿದ್ದಾರೆ.

ಇದನ್ನೂ ಓದಿ:‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು’; ಸಾರ್ವಜನಿಕವಾಗಿ ಒಪ್ಪಿಕೊಂಡ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ನಟಿಸಿದ್ದ ತೊಲಿ ಪ್ರೇಮ ಸಿನಿಮಾ 1998 ರ ಜುಲೈ 24 ರಂದು ಬಿಡುಗಡೆ ಆಗಿತ್ತು. ಅದ್ಭುತವಾದ ಹಾಡುಗಳು, ಕಾಮಿಡಿ ಹಾಗೂ ಸುಂದರ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿತ್ತು. ಕರುಣಾಕರನ್ ಅವರ ಮೊದಲ ಸಿನಿಮಾ ಇದಾಗಿದ್ದು ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಸಿನಿಮಾ ಮರು ಬಿಡುಗಡೆ ಆಗಿದ್ದು ಮತ್ತೊಮ್ಮೆ ಪವನ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ತೊಲಿ ಪ್ರೇಮ ಸಿನಿಮಾ ತಮಿಳಿಗೆ ಆನಂದಮಳೈ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆ ಆಯ್ತು. ಕನ್ನಡದಲ್ಲಿ ಈ ಸಿನಿಮಾ ಪ್ರೀತ್ಸು ತಪ್ಪೇನಿಲ್ಲ ಹೆಸರಿನಲ್ಲಿ ರೀಮೇಕ್ ಆಯ್ತು. ಸಿನಿಮಾದಲ್ಲಿ ರವಿಚಂದ್ರನ್ ನಾಯಕ. ಹಿಂದಿಯಲ್ಲಿ ಇದೇ ಸಿನಿಮಾ ಮುಝೆ ಕುಚ್ ಕೆಹನಾ ಹೈ ಹೆಸರಿನಲ್ಲಿ ರೀಮೇಕ್ ಆಗಿ ಅಲ್ಲಿಯೂ ಹಿಟ್ ಆಯಿತು.

1998 ಪವನ್ ಕಲ್ಯಾಣ್ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಯ್ತು. ಪವನ್​ರ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸುಸ್ವಾಗತಂ ಸಹ ಇದೇ ವರ್ಷ ಬಿಡುಗಡೆ ಆಯ್ತು. ಸುಸ್ವಾಗತಂ ಹಾಗೂ ತೊಲಿ ಪ್ರೇಮ ಸಿನಿಮಾಗಳ ಬಳಿಕ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿಬಿಟ್ಟರು ಪವನ್ ಕಲ್ಯಾಣ್. ಆ ನಂತರ ಪವನ್ ನಟಿಸಿದ ಐದು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿ ದೊಡ್ಡ ಹಿಟ್ ಆದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ