Alia Bhatt: ಆಲಿಯಾ ಭಟ್​ಗೆ ಅನುಪಮ್​ ಖೇರ್​ ಮೆಚ್ಚುಗೆ; ಕಂಗನಾ ಪ್ರತಿಕ್ರಿಯೆ ತಿಳಿಯಲು ಕಾದಿರುವ ನೆಟ್ಟಿಗರು

Kangana Ranaut | Anupam Kher: ಆಲಿಯಾ ಭಟ್​ ಅವರನ್ನು ಹೊಗಳಿ ಅನುಪಮ್​ ಖೇರ್​ ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇದು ಇನ್ನೂ ಕಂಗನಾ ರಣಾವತ್​ ಕಣ್ಣಿಗೆ ಬಿದ್ದಿಲ್ಲವೇ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

Alia Bhatt: ಆಲಿಯಾ ಭಟ್​ಗೆ ಅನುಪಮ್​ ಖೇರ್​ ಮೆಚ್ಚುಗೆ; ಕಂಗನಾ ಪ್ರತಿಕ್ರಿಯೆ ತಿಳಿಯಲು ಕಾದಿರುವ ನೆಟ್ಟಿಗರು
ಕಂಗನಾ ರಣಾವತ್, ಅನುಪಮ್ ಖೇರ್, ಆಲಿಯಾ ಭಟ್

Updated on: Feb 14, 2023 | 4:53 PM

ನಟಿ ಕಂಗನಾ ರಣಾವತ್​ (Kangana Ranaut) ಅವರು ಬಾಲಿವುಡ್​ನಲ್ಲಿ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ನಟನೆ ವಿಚಾರದಲ್ಲಿ ತಮ್ಮನ್ನು ಯಾರಾದರೂ ಕಡೆಗಣಿಸಿ, ಇತರೆ ನಟಿಯರಿಗೆ ಬಿಲ್ಡಪ್​ ಕೊಟ್ಟರೆ ಅದನ್ನು ಕಂಗನಾ ಸಹಿಸುವುದೇ ಇಲ್ಲ. ಅದಕ್ಕೆ ಹಲವು ಘಟನೆಗಳು ಸಾಕ್ಷಿ ಆಗಿವೆ. ಹಾಗಾಗಿ ಪ್ರತಿ ಬಾರಿಯೂ ಅಂಥದ್ದೇನಾದರೂ ನಡೆದರೆ ಅದಕ್ಕೆ ಕಂಗನಾ ಹೇಗೆ ಪ್ರತಿಕ್ರಿಯಿಸಬಹುದು ಎಂಬ ನಿರೀಕ್ಷೆ ನೆಟ್ಟಿಗರಿಗೆ ಇರುತ್ತದೆ. ಈಗ ಅದೇ ರಿತಿ ಆಗಿದೆ. ಹಿರಿಯ ನಟ ಅನುಪಮ್​ ಖೇರ್​ (Anupam Kher) ಅವರು ಆಲಿಯಾ ಭಟ್​ ಅವರನ್ನು ಮನಸಾರೆ ಹೊಗಳಿದ್ದಾರೆ. ‘ಹುಟ್ಟು ಕಲಾವಿದೆ’ ಎಂದು ಆಲಿಯಾ ಭಟ್​ (Alia Bhatt) ಬಗ್ಗೆ ಅವರು ಮೆಚ್ಚುಗೆ ನುಡಿಗಳನ್ನು ಹೇಳಿದ್ದಾರೆ. ಇದಕ್ಕೆ ಕಂಗನಾ ಕಡೆಯಿಂದ ಎಂತಹ ಪ್ರತಿಕ್ರಿಯೆ ಬರಬಹುದು ಎಂಬ ಕೌತುಕ ಮೂಡಿದೆ.

ಸಿದ್ದಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ಮದುವೆ ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆಯಿತು. ಬಳಿಕ ಅವರು ಮುಂಬೈನಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳಿಗಾಗಿ ರಿಸೆಪ್ಷನ್​ ಏರ್ಪಡಿಸಿದ್ದರು. ಅದಕ್ಕೆ ಅನೇಕ ತಾರೆಯರು ಹಾಜರಿ ಹಾಕಿದ್ದರು. ಈ ವೇಳೆ ಅನುಪಮ್​ ಖೇರ್ ಮತ್ತು ಆಲಿಯಾ ಭಟ್​ ಭೇಟಿ ಆಗಿದ್ದಾರೆ. ಆ ಸಂದರ್ಭದ ಫೋಟೋವನ್ನು ಪೋಸ್ಟ್​ ಮಾಡಿರುವ ಅನುಪಮ್​ ಖೇರ್​ ಅವರು ಆಲಿಯಾಗೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ಇದನ್ನೂ ಓದಿ: ಕಂಗನಾ ಬಿಟ್ಟು ದೀಪಿಕಾ, ಆಲಿಯಾ ಹೊಗಳಿದ ಆಮಿರ್ ಖಾನ್; ಸರಿಯಾಗಿ ತಿರುಗೇಟು ಕೊಟ್ಟ ರಣಾವತ್

‘ಪ್ರೀತಿಯ ಆಲಿಯಾ ಭಟ್​.. ತುಂಬ ದಿನಗಳ ಬಳಿಕ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ರಿಸೆಪ್ಷನ್​ನಲ್ಲಿ ನಿನ್ನನ್ನು ಭೇಟಿ ಮಾಡಿ ಖುಷಿ ಆಯಿತು. ಶಾಲೆಯಲ್ಲಿ ಕಲಿಯುತ್ತಿದ್ದಾಗ ನಿನ್ನನ್ನು ನಾನು ಹುಟ್ಟು ಕಲಾವಿದೆ ಅಂತ ಟೀಸ್​ ಮಾಡುತ್ತಿದ್ದ ದಿನಗಳ ಬಗ್ಗೆ ಈಗ ಮಾತನಾಡಿದ್ದು ಚೆನ್ನಾಗಿತ್ತು. ನಿನ್ನ ನಟನೆಯನ್ನು ಇಷ್ಟಪಟ್ಟಿದ್ದೇನೆ. ಅದರಲ್ಲೂ ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲಿ ಅಭಿನಯ ಚೆನ್ನಾಗಿದೆ. ಹೀಗೆ ಮುಂದುವರಿ. ನಿನಗಾಗಿ ಸದಾ ನನ್ನ ಪ್ರೀತಿ ಮತ್ತು ಪ್ರಾರ್ಥನೆಗಳು’ ಎಂದು ಅನುಪಮ್​ ಖೇರ್​ ಪೋಸ್ಟ್​ ಮಾಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇದು ಇನ್ನೂ ಕಂಗನಾ ರಣಾವತ್​ ಕಣ್ಣಿಗೆ ಬಿದ್ದಿಲ್ಲವೇ? ಅನುಪಮ್​ ಖೇರ್​ ಮೇಲೆ ಅವರು ದಾಳಿ ಮಾಡೋದು ಗ್ಯಾರಂಟಿ. ಹೊಟ್ಟೆ ಉರಿಯಿಂದಾಗಿ ಅವರು ಹೇಗೆ ರಿಯಾಕ್ಟ್​ ಮಾಡುತ್ತಾರೋ ಅಂತ ನೋಡಬೇಕು’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಕೆಲವೇ ದಿನಗಳ ಹಿಂದೆ ಕಂಗನಾ ರಣಾವತ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ದೀರ್ಘವಾಗಿ ಬರೆದುಕೊಂಡಿದ್ದರು. ತಮ್ಮನ್ನು ಸೆಲೆಬ್ರಿಟಿ ದಂಪತಿ ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು. ಆದರೆ ಯಾರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಅದು ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಬಗ್ಗೆಯೇ ಬರೆದಿದ್ದು ಎಂದು ನೆಟ್ಟಿಗರು ಊಹಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us