AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ್ ಆರ್ಯನ್ ಕಾಲ್​ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್

ಐಶ್ವರ್ಯಾ ಶರ್ಮಾ ಅವರಿಗೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಬೇಕು ಎಂದಿತ್ತು. ಈ ಚಿತ್ರಕ್ಕೆ ‘ಲವ್​ ಇನ್ ಲಂಡನ್’ ಎಂದು ಟೈಟಲ್ ಇಡೋಕೆ ನಿರ್ಧರಿಸಿದ್ದರು. ಈ ವಿಚಾರ ಕೃಷ್ಣ ಕುಮಾರ್​ಗೆ ಗೊತ್ತಾಗಿತ್ತು. ಆತ ಐಶ್ವರ್ಯಾನ ಸಂಪರ್ಕಿಸಿ, ನಟನ ಭೇಟಿ ಮಾಡಿಸೋದಾಗಿ ಹೇಳಿದ್ದರು.

ಕಾರ್ತಿಕ್ ಆರ್ಯನ್ ಕಾಲ್​ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್
ಕಾರ್ತಿಕ್ ಆರ್ಯನ್
ರಾಜೇಶ್ ದುಗ್ಗುಮನೆ
|

Updated on: Jun 07, 2024 | 2:25 PM

Share

ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಕನಸು ಕಾಣುವ ಅನೇಕರು ಮೋಸ ಹೋಗುತ್ತಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮೋಸ ಮಾಡುವವರ ಸಂಖ್ಯೆ ಹೆಚ್ಚಿದೆ. ಈಗ ಬಾಲಿವುಡ್​ನಲ್ಲಿ ನಿರ್ಮಾಪಕಿ ಆಗಬೇಕು ಎಂದು ಕನಸು ಕಾಣುತ್ತಿದ್ದ ಐಶ್ವರ್ಯಾ ಶರ್ಮಾ (Aishwarya Sharma) ಅವರಿಗೆ ಮೋಸ ಆಗಿದೆ. ಕಾರ್ತಿಕ್ ಆರ್ಯನ್​ ಅವರ ಕಾಲ್​ಶೀಟ್ ಕೊಡಿಸೋ ನೆಪದಲ್ಲಿ ಬರೋಬ್ಬರಿ 82.75 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸದ್ಯ ಕೃಷ್ಣ ಕುಮಾರ್ ಶರ್ಮಾ ಎಂಬಾತನನ್ನು ಬಂಧಿಸಲಾಗಿದೆ.

ಐಶ್ವರ್ಯಾ ಶರ್ಮಾ ಅವರಿಗೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಬೇಕು ಎಂದಿತ್ತು. ಈ ಚಿತ್ರಕ್ಕೆ ‘ಲವ್​ ಇನ್ ಲಂಡನ್’ ಎಂದು ಟೈಟಲ್ ಇಡೋಕೆ ನಿರ್ಧರಿಸಿದ್ದರು. ಈ ವಿಚಾರ ಕೃಷ್ಣ ಕುಮಾರ್​ಗೆ ಗೊತ್ತಾಗಿತ್ತು. ಆತ ಐಶ್ವರ್ಯಾನ ಸಂಪರ್ಕಿಸಿ, ನಟನ ಭೇಟಿ ಮಾಡಿಸೋದಾಗಿ ಹೇಳಿದ್ದರು. ಈ ಭೇಟಿಗೆ ಒಂದಷ್ಟು ಹಣದ ಅವಶ್ಯಕತೆ ಇದೆ ಎಂದಿದ್ದ ಕೃಷ್ಣ, ಐಶ್ವರ್ಯಾ ಅವರಿಂದ ಬರೋಬ್ಬರಿ 82 ಲಕ್ಷ ರೂಪಾಯಿ ಪಡೆದಿದ್ದ.

ಹಣ ಸಿಕ್ಕ ಬಳಿಕ ಕಾರ್ತಿಕ್ ಆರ್ಯನ್​ನ ಕೃಷ್ಣ ಭೇಟಿ ಮಾಡಿಸಲೇ ಇಲ್ಲ. ಈ ಬಗ್ಗೆ ಕೇಳಿದಾಗೆಲ್ಲ ಕಾರ್ತಿಕ್ ಆರ್ಯನ್ ಬ್ಯುಸಿ ಇದ್ದಾರೆ ಎನ್ನುತ್ತಿದ್ದ. ನಿಧಾನವಾಗಿ ಐಶ್ವರ್ಯಾಗೆ ತಾವು ಮೋಸ ಹೋಗಿದ್ದು ಗೊತ್ತಾಗಿದೆ. ಆತನಿಗೆ ಚಿತ್ರರಂಗದ ಜೊತೆ ನಂಟೇ ಇಲ್ಲ ಎಂಬ ವಿಚಾರ ತಿಳಿಸಿದೆ. .

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆತ ಕರ್ನಾಟಕದಲ್ಲಿ ಇದ್ದ ಎನ್ನಲಾಗಿದೆ. ಇತ್ತೀಚೆಗೆ ಆತನ ಬಂಧಿಸಲಾಗಿದೆ. ಸದ್ಯ ಆತನ ವಿರುದ್ಧ ಮುಂಬೈ, ದೆಹಲಿ ಹಾಗೂ ಚೆನ್ನೈನಲ್ಲಿ ವಂಚನೆ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ನಟಿಸೋ ಚಾನ್ಸ್ ಪಡೆದ ತೃಪ್ತಿ ದಿಮ್ರಿ; ಹಾರರ್ ಸಿನಿಮಾಗೆ ಆಯ್ಕೆ

ಈ ಬಗ್ಗೆ ಕಾರ್ತಿಕ್ ಆರ್ಯನ್​ಗೆ ಮಾಹಿತಿಯೇ ಇರಲಿಲ್ಲ. ಅವರು ‘ಚಂದು ಚಾಂಪಿಯನ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಕಬಿರ್ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಜೂನ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇದರ ಜೊತೆಗೆ ‘ಭೂಲ್ ಭುಲಯ್ಯ 3’ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!