AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ್ ಆರ್ಯನ್ ಕಾಲ್​ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್

ಐಶ್ವರ್ಯಾ ಶರ್ಮಾ ಅವರಿಗೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಬೇಕು ಎಂದಿತ್ತು. ಈ ಚಿತ್ರಕ್ಕೆ ‘ಲವ್​ ಇನ್ ಲಂಡನ್’ ಎಂದು ಟೈಟಲ್ ಇಡೋಕೆ ನಿರ್ಧರಿಸಿದ್ದರು. ಈ ವಿಚಾರ ಕೃಷ್ಣ ಕುಮಾರ್​ಗೆ ಗೊತ್ತಾಗಿತ್ತು. ಆತ ಐಶ್ವರ್ಯಾನ ಸಂಪರ್ಕಿಸಿ, ನಟನ ಭೇಟಿ ಮಾಡಿಸೋದಾಗಿ ಹೇಳಿದ್ದರು.

ಕಾರ್ತಿಕ್ ಆರ್ಯನ್ ಕಾಲ್​ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್
ಕಾರ್ತಿಕ್ ಆರ್ಯನ್
Follow us
ರಾಜೇಶ್ ದುಗ್ಗುಮನೆ
|

Updated on: Jun 07, 2024 | 2:25 PM

ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಕನಸು ಕಾಣುವ ಅನೇಕರು ಮೋಸ ಹೋಗುತ್ತಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮೋಸ ಮಾಡುವವರ ಸಂಖ್ಯೆ ಹೆಚ್ಚಿದೆ. ಈಗ ಬಾಲಿವುಡ್​ನಲ್ಲಿ ನಿರ್ಮಾಪಕಿ ಆಗಬೇಕು ಎಂದು ಕನಸು ಕಾಣುತ್ತಿದ್ದ ಐಶ್ವರ್ಯಾ ಶರ್ಮಾ (Aishwarya Sharma) ಅವರಿಗೆ ಮೋಸ ಆಗಿದೆ. ಕಾರ್ತಿಕ್ ಆರ್ಯನ್​ ಅವರ ಕಾಲ್​ಶೀಟ್ ಕೊಡಿಸೋ ನೆಪದಲ್ಲಿ ಬರೋಬ್ಬರಿ 82.75 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸದ್ಯ ಕೃಷ್ಣ ಕುಮಾರ್ ಶರ್ಮಾ ಎಂಬಾತನನ್ನು ಬಂಧಿಸಲಾಗಿದೆ.

ಐಶ್ವರ್ಯಾ ಶರ್ಮಾ ಅವರಿಗೆ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡಬೇಕು ಎಂದಿತ್ತು. ಈ ಚಿತ್ರಕ್ಕೆ ‘ಲವ್​ ಇನ್ ಲಂಡನ್’ ಎಂದು ಟೈಟಲ್ ಇಡೋಕೆ ನಿರ್ಧರಿಸಿದ್ದರು. ಈ ವಿಚಾರ ಕೃಷ್ಣ ಕುಮಾರ್​ಗೆ ಗೊತ್ತಾಗಿತ್ತು. ಆತ ಐಶ್ವರ್ಯಾನ ಸಂಪರ್ಕಿಸಿ, ನಟನ ಭೇಟಿ ಮಾಡಿಸೋದಾಗಿ ಹೇಳಿದ್ದರು. ಈ ಭೇಟಿಗೆ ಒಂದಷ್ಟು ಹಣದ ಅವಶ್ಯಕತೆ ಇದೆ ಎಂದಿದ್ದ ಕೃಷ್ಣ, ಐಶ್ವರ್ಯಾ ಅವರಿಂದ ಬರೋಬ್ಬರಿ 82 ಲಕ್ಷ ರೂಪಾಯಿ ಪಡೆದಿದ್ದ.

ಹಣ ಸಿಕ್ಕ ಬಳಿಕ ಕಾರ್ತಿಕ್ ಆರ್ಯನ್​ನ ಕೃಷ್ಣ ಭೇಟಿ ಮಾಡಿಸಲೇ ಇಲ್ಲ. ಈ ಬಗ್ಗೆ ಕೇಳಿದಾಗೆಲ್ಲ ಕಾರ್ತಿಕ್ ಆರ್ಯನ್ ಬ್ಯುಸಿ ಇದ್ದಾರೆ ಎನ್ನುತ್ತಿದ್ದ. ನಿಧಾನವಾಗಿ ಐಶ್ವರ್ಯಾಗೆ ತಾವು ಮೋಸ ಹೋಗಿದ್ದು ಗೊತ್ತಾಗಿದೆ. ಆತನಿಗೆ ಚಿತ್ರರಂಗದ ಜೊತೆ ನಂಟೇ ಇಲ್ಲ ಎಂಬ ವಿಚಾರ ತಿಳಿಸಿದೆ. .

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆತ ಕರ್ನಾಟಕದಲ್ಲಿ ಇದ್ದ ಎನ್ನಲಾಗಿದೆ. ಇತ್ತೀಚೆಗೆ ಆತನ ಬಂಧಿಸಲಾಗಿದೆ. ಸದ್ಯ ಆತನ ವಿರುದ್ಧ ಮುಂಬೈ, ದೆಹಲಿ ಹಾಗೂ ಚೆನ್ನೈನಲ್ಲಿ ವಂಚನೆ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ನಟಿಸೋ ಚಾನ್ಸ್ ಪಡೆದ ತೃಪ್ತಿ ದಿಮ್ರಿ; ಹಾರರ್ ಸಿನಿಮಾಗೆ ಆಯ್ಕೆ

ಈ ಬಗ್ಗೆ ಕಾರ್ತಿಕ್ ಆರ್ಯನ್​ಗೆ ಮಾಹಿತಿಯೇ ಇರಲಿಲ್ಲ. ಅವರು ‘ಚಂದು ಚಾಂಪಿಯನ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಕಬಿರ್ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಜೂನ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಇದರ ಜೊತೆಗೆ ‘ಭೂಲ್ ಭುಲಯ್ಯ 3’ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್