AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವಿ ಮಾವನ ಜತೆ ಆಗಾಗ ವಾದ ಮಾಡುವ ಕೆಎಲ್​ ರಾಹುಲ್; ಕಾರಣವೇನು? ಎಲ್ಲವನ್ನೂ ಹೇಳಿಕೊಂಡ ಕ್ರಿಕೆಟ್ ತಾರೆ

KL Rahul | Athiya Shetty | Suniel Shetty: ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಶೆಟ್ಟಿ- ಕೆಎಲ್ ರಾಹುಲ್ ಆಗಾಗ ತಮಾಷೆಯ ಸಂಭಾಷಣೆಗಳನ್ನು ನಡೆಸುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ರಾಹುಲ್ ಭಾವಿ ಮಾವನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸುನೀಲ್ ಶೆಟ್ಟಿ ಜತೆ ವಾದ ಮಾಡುವ ಸಂದರ್ಭಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಭಾವಿ ಮಾವನ ಜತೆ ಆಗಾಗ ವಾದ ಮಾಡುವ ಕೆಎಲ್​ ರಾಹುಲ್; ಕಾರಣವೇನು? ಎಲ್ಲವನ್ನೂ ಹೇಳಿಕೊಂಡ ಕ್ರಿಕೆಟ್ ತಾರೆ
ಸುನೀಲ್ ಶೆಟ್ಟಿ, ಕೆಎಲ್ ರಾಹುಲ್-ಆಥಿಯಾ ಶೆಟ್ಟಿ
Follow us
TV9 Web
| Updated By: shivaprasad.hs

Updated on: Apr 03, 2022 | 6:59 PM

ಭಾರತ ಕ್ರಿಕೆಟ್ ತಂಡದ ತಾರೆ, ಲಕ್ನೋ ಸೂಪರ್ ಜೈಂಟ್ಸ್ ಕ್ರಿಕೆಟ್ ತಂಡದ ನಾಯಕ ಕೆ.ಎಲ್.ರಾಹುಲ್ (KL Rahul) ಕಳೆದ ಕೆಲವು ಸಮಯದಿಂದ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಜತೆ ಸುತ್ತಾಡುತ್ತಿದ್ದಾರೆ. ಮೊದಮೊದಲು ಈರ್ವರೂ ತಮ್ಮ ಸಂಬಂಧವನ್ನು ಗುಟ್ಟಾಗಿಟ್ಟಿದ್ದರೂ ಕೂಡ, ಈಗ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ವ್ಯಾಲಂಟೈನ್ಸ್ ಡೇ ದಿನ ಆಥಿಯಾ ಜತೆಗಿರುವ ಚಿತ್ರವನ್ನು ಹಂಚಿಕೊಂಡು ರಾಹುಲ್ ಶುಭಾಶಯ ಹೇಳಿದ್ದರು. ಆ ಮೂಲಕ ಗಾಸಿಪ್​ಗಳಿಗೆ ತೆರೆ ಎಳೆದಿದ್ದರು. ಆಥಿಯಾ ತಂದೆ ಸುನೀಲ್ ಶೆಟ್ಟಿ ಕನ್ನಡದಲ್ಲೂ ನಟಿಸಿದ್ದು, ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಅವರು ಹಲವು ಬಾರಿ ರಾಹುಲ್ ಹಾಗೂ ಆಥಿಯಾ ಗೆಳೆತನದ ಬಗ್ಗೆ ನಗುತ್ತಾ ಮಾತನಾಡಿದ್ದರು. ಇದೀಗ ರಾಹುಲ್ ಸರದಿ. ಸಾಮಾಜಿಕ ಜಾಲತಾಣದಲ್ಲಿ ಭಾವಿ ಮಾವ- ಅಳಿಯರಾದ ಸುನೀಲ್- ರಾಹುಲ್ ಆಗಾಗ ತಮಾಷೆಯ ಸಂಭಾಷಣೆಗಳನ್ನು ಕಾಮೆಂಟ್​ಗಳ ಮೂಲಕ ನಡೆಸುತ್ತಿರುತ್ತಾರೆ. ಇದೀಗ ರಾಹುಲ್ ಸಂದರ್ಶನದಲ್ಲಿ ಸುನೀಲ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಅವರೊಂದಿಗೆ ಜತೆ ವಾದ ಮಾಡುವ ಸಂದರ್ಭಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಸುನೀಲ್ ಶೆಟ್ಟಿ ರಾಹುಲ್​ಗೆ ಸದಾ ಫಿಟ್​ನೆಸ್ ಬಗ್ಗೆ ಗಮನ ಹರಿಸುವಂತೆ ಹೇಳುತ್ತಿರುತ್ತಾರಂತೆ. ಸುನೀಲ್ ಶೆಟ್ಟಿಗೆ ಈಗ 60ರ ಪ್ರಾಯ. ಆದರೆ ಅವರು ಈ ವಯಸ್ಸಿನಲ್ಲಿ ಯುವಕರೂ ನಾಚುವಂತೆ ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಸಹಜವಾಗಿಯೆ ಫಿಟ್​ನೆಸ್, ತಿನ್ನುವ ಆಹಾರ, ಜೀವನ ಶೈಲಿಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ. ರಾಹುಲ್​ಗೂ ಈ ಬಗ್ಗೆ ಸುನೀಲ್ ಸದಾ ಎಚ್ಚರಿಸುತ್ತಿರುತ್ತಾರಂತೆ.

ಗೌರವ್ ಕಪೂರ್​ರೊಂದಿಗಿನ ಸಂದರ್ಶನದಲ್ಲಿ ರಾಹುಲ್ ಈ ಬಗ್ಗೆ ಮಾತನಾಡಿದ್ದಾರೆ. ಸುನೀಲ್ ಶೆಟ್ಟಿಗಿರುವ ಕ್ರಿಕೆಟ್ ಜ್ಞಾನದ ಬಗ್ಗೆಯೂ ಮಾತನಾಡಿರುವ ರಾಹುಲ್, ‘‘ಇಲ್ಲ, ಅವರು ಕೇವಲ ಕ್ರಿಕೆಟ್ ಫ್ಯಾನ್​​ ಅಲ್ಲ. ಅವರಿಗೆ ಕ್ರಿಕೆಟ್ ಬಗ್ಗೆ ಆಳವಾದ ಜ್ಞಾನವಿದೆ. ಆಟವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಮ್ಮ ನಡುವೆ ಕ್ರಿಕೆಟ್ ಬಗ್ಗೆ ಚರ್ಚೆಗಳು ನಡೆಯುತ್ತವೆ. ಕೆಲವೊಮ್ಮೆ ವಾದಗಳೂ ನಡೆಯುತ್ತವೆ’’ ಎಂದಿದ್ದಾರೆ.

ಫಿಟ್​ನೆಸ್ ಬಗ್ಗೆ ಸುನೀಲ್ ಸಲಹೆ:

ಕೆ.ಎಲ್.ರಾಹುಲ್​ಗೆ ಫಿಟ್​ನೆಸ್ ಬಗ್ಗೆ ಸುನೀಲ್ ಶೆಟ್ಟಿ ಹೇಳುತ್ತಲೇ ಇರುತ್ತಾರಂತೆ. ‘‘ನೀನು ಫಿಟ್ ಆಗಿರುವುದು ಸಾಲದು. ಆಗಾಗ ಗಾಯಕ್ಕೆ ತುತ್ತಾಗುತ್ತೀಯ. ಆರೋಗ್ಯಕ್ಕೆ ಅವಶ್ಯಕವಾಗಿದ್ದು ಹಾಗೂ ಅಗತ್ಯವಾಗಿದ್ದನ್ನು ನೀನು ತಿನ್ನುತ್ತಿಲ್ಲ’’ ಎಂದು ಕೆಎಲ್​ಗೆ ಸುನೀಲ್ ಎಚ್ಚರಿಸುತ್ತಿರುತ್ತಾರಂತೆ. ‘‘ಸುನೀಲ್​ ಶೆಟ್ಟಿಯವರಿಗೆ 60 ದಾಟಿದರೂ ಫಿಟ್​ ಆಗಿ ವರ್ಕೌಟ್ ಮಾಡುತ್ತಾರೆ. ಅವರಿಗೆ ಸಾಧ್ಯವಿರುವುದು ನನಗೇಕೆ ಸಾಧ್ಯವಾಗಬಾರದು? ಎಂದು ನಾನು ಯೋಚಿಸುತ್ತಿರುತ್ತೇನೆ’’ ಎಂದಿದ್ದಾರೆ ರಾಹುಲ್.

ಶೆಟ್ಟಿ ಕುಟುಂಬದ ನಂಟಿನ ಬಗ್ಗೆ ಮಾತನಾಡಿರುವ ರಾಹುಲ್, ‘‘ನನ್ನ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ಖುಷಿ ಇದೆ. ಸರಳವಾಗಿ ಹೇಳುವುದಾದರೆ, ನನಗೇನು ಬೇಕೋ ಅದು ಆಗುತ್ತಿದೆ’’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಕೆಲ ಸಮಯದ ಹಿಂದೆ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಮೊದಲ ಚಿತ್ರ ‘ತಡಪ್’ನ ಸ್ಕ್ರೀನಿಂಗ್​​ಗೆ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬಹಿರಂಗವಾಗಿ ಈರ್ವರೂ ಜತೆಯಾಗಿ ಕಾಣಿಸಿಕೊಂಡಿದ್ದು ಅದೇ ಮೊದಲಾಗಿತ್ತು.

ಇದನ್ನೂ ಓದಿ: RRR Box Office Collection: ಬಾಕ್ಸಾಫೀಸ್​ನಲ್ಲಿ ‘ಆರ್​ಆರ್​ಆರ್​’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್​ಗೆ ಇನ್ನೆಷ್ಟು ದೂರ?

ಬಿಗ್​ ಬಾಸ್​ ವೈಷ್ಣವಿ ಗೌಡ ಹೊಸ ಸಿನಿಮಾ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ಇದರಲ್ಲಿದೆ ಡಿಫರೆಂಟ್​ ಕಾನ್ಸೆಪ್ಟ್​​

5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಸೈಪ್ರಸ್​​ನ ಐತಿಹಾಸಿಕ ಭೇಟಿ ಮುಗಿಸಿ ಕೆನಡಾಕ್ಕೆ ಹೊರಟ ಭಾರತದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ