AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಬಾಲಿವುಡ್​ನಲ್ಲಿ 3 ಸಾವು; ಆಘಾತದ ಸುದ್ದಿ ಕೇಳಿ ಕಂಬನಿ ಮಿಡಿದ ಸೆಲೆಬ್ರಿಟಿಗಳು

ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಭಾವ, ಗಾಯಕ ಶಾನ್​ ಅವರ ತಾಯಿ ಹಾಗೂ ಬಾಲಿವುಡ್​ ನಟ ಅರುಣ್​ ವರ್ಮಾ ನಿಧನರಾಗಿದ್ದಾರೆ. ಒಂದೇ ದಿನ ಈ ಮೂವರ ಸಾವು ಸಂಭವಿಸಿದೆ.

ಒಂದೇ ದಿನ ಬಾಲಿವುಡ್​ನಲ್ಲಿ 3 ಸಾವು; ಆಘಾತದ ಸುದ್ದಿ ಕೇಳಿ ಕಂಬನಿ ಮಿಡಿದ ಸೆಲೆಬ್ರಿಟಿಗಳು
ಒಂದೇ ದಿನ ಬಾಲಿವುಡ್​ನಲ್ಲಿ 3 ಸಾವು
TV9 Web
| Edited By: |

Updated on: Jan 21, 2022 | 12:08 PM

Share

2022ರ ಆರಂಭದಲ್ಲಿ ಸಾಲು ಸಾಲು ಸಾವಿನ ಸುದ್ದಿ ಕೇಳಿಬರುತ್ತಿದೆ. ಇದು ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ಕಳೆದೆರಡು ವರ್ಷಗಳಿಂದ ಕೊವಿಡ್​ ಕಾರಣಕ್ಕೆ ಸಾವು-ನೋವಿನ ಪ್ರಕರಣಗಳು ಹೆಚ್ಚು ವರದಿ ಆಗುತ್ತಿದ್ದವು. 2022ರ ವರ್ಷದಲ್ಲಾದರೂ ನೆಮ್ಮದಿ ಕಾಣಬೇಕು ಎಂದುಕೊಳ್ಳಲಾಗಿತ್ತು. ಆದರೆ ಈ ವರ್ಷಾರಂಭದಲ್ಲೇ ಕಹಿ ಸುದ್ದಿ ಕೇಳಿಬಂದಿದೆ. ‘ಮಹಾಭಾರತ’ ಸೀರಿಯಲ್​ನಲ್ಲಿ ಅರ್ಜುನನ ಪಾತ್ರ ಮಾಡಿ ಫೇಮಸ್​ ಆಗಿದ್ದ ಶಾಹೀರ್​ ಶೇಖ್​ ಅವರ ತಂದೆ ಇತ್ತೀಚೆಗಷ್ಟೇ ಕೊವಿಡ್​ನಿಂದ ಮೃತರಾದರು. ಅದರ ಬೆನ್ನಲ್ಲೇ ಇನ್ನೂ ಮೂವರು ಕೊನೆಯುಸಿರೆಳೆದಿರುವುದು ವರದಿ ಆಗಿದೆ. ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ (Ramo Dsouza) ಅವರ ಭಾವ ಜೇಸನ್​ ವಾಟ್ಕಿನ್ಸ್​, ಗಾಯಕ ಶಾನ್ (Singer Shaan)​ ಅವರ ತಾಯಿ ಸೊನಾಲಿ ಮುಖರ್ಜಿ ಹಾಗೂ ಬಾಲಿವುಡ್​ (Bollywood) ನಟ ಅರುಣ್​ ವರ್ಮಾ ಅವರು ನಿಧನರಾಗಿದ್ದಾರೆ. ಒಂದೇ ದಿನ (ಜ.20) ಈ ಮೂವರ ಸಾವು ಸಂಭವಿಸಿದೆ ಎಂಬುದು ಆಘಾತಕಾರಿ ಸಂಗತಿ. ಅರುಣ್​ ವರ್ಮಾ ಮತ್ತು ಸೊನಾಲಿ ಮುಖರ್ಜಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರೆ, ಜೇಸನ್​ ವಾಟ್ಕಿನ್ಸ್​ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಜೇಸನ್​ ವಾಟ್ಕಿನ್ಸ್​:

ಗುರುವಾರ (ಜ.20) ಮುಂಬೈನ ನಿವಾಸದಲ್ಲಿ ಜೇಸನ್​ ವಾಟ್ಕಿನ್ಸ್​ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಘಟನೆ ನಡೆದಾಗ ರೆಮೋ ಡಿಸೋಜಾ ಮತ್ತು ಅವರ ಪತ್ನಿ ಲಿಸೆಲ್ಲೆ ಅವರು ಗೋವಾದಲ್ಲಿದ್ದರು. ಜೇಸನ್​ ವಾಟ್ಕಿನ್ಸ್​ ಅವರು ಕೆಲವು ಅನಾರೋಗ್ಯದ ಸಮಸ್ಯೆಗಳಿಂದ ಬೇಸತ್ತಿದ್ದರು ಎನ್ನಲಾಗಿದೆ. ಆ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ. ಆದರೆ ಯಾವುದೇ ಸೂಸೈಡ್​ ನೋಟ್​ ಪತ್ತೆ ಆಗಿಲ್ಲ.

​ಶಾನ್​ ತಾಯಿ ನಿಧನಕ್ಕೆ ಕೈಲಾಶ್​ ಖೇರ್​ ಸಂತಾಪ:

ಖ್ಯಾತ ಗಾಯಕ ಶಾನ್​ ಅವರ ತಾಯಿ ಸೊನಾಲಿ ಮುಖರ್ಜಿ ನಿಧನರಾದ ಸುದ್ದಿಯನ್ನು ಗಾಯಕ ಕೈಲಾಶ್​ ಖೇರ್​ ಅವರು ಖಚಿತಪಡಿಸಿದ್ದಾರೆ. ‘ಶಾನ್​ ತಾಯಿ ಕೊನೆಯುಸಿರೆಳೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಶಾನ್​ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿಯನ್ನು ಶಿವ ನೀಡಲಿ’ ಎಂದು ಕೈಲಾಶ್​ ಖೇರ್​ ಟ್ವೀಟ್​ ಮಾಡಿದ್ದಾರೆ.

ಅನಾರೋಗ್ಯದಿಂದ ಅರುಣ್​ ವರ್ಮಾ ವಿಧಿವಶ:

ಹಿರಿಯ ನಟ ಅರುಣ್​ ವರ್ಮಾ ಅವರಿಗೆ 62 ವರ್ಷ ವಯಸ್ಸಾಗಿತ್ತು. ಸಲ್ಮಾನ್​ ಖಾನ್​ ಅಭಿನಯದ ‘ಕಿಕ್​’, ‘ಮುಜ್ಸೆ ಶಾದಿ ಕರೋಗೆ’ ಮುಂತಾದ ಸಿನಿಮಾಗಳಲ್ಲಿ ಅರುಣ್​ ವರ್ಮಾ ನಟಿಸಿದ್ದರು. ಅವರಿಗೆ ಬ್ರೇನ್​ ಸ್ಟ್ರೋಕ್​ ಆಗಿತ್ತು. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಅವರು ಬದುಕುಳಿಯಲಿಲ್ಲ. ಕಿಡ್ನಿ ವೈಫಲ್ಯ ಕೂಡ ಅವರ ನಿಧನಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:

‘ಮಹಾಭಾರತ​’ ಸೀರಿಯಲ್​ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್​ ತಂದೆ ಕೊವಿಡ್​ನಿಂದ ನಿಧನ

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು

Follow Us
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?