AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಛಾವಾ’ ಪ್ರಭಾವ, ಕೋಟೆ ಅಗಿದು ನಿಧಿಗಾಗಿ ಹುಡುಕಿದ ಜನ

Chhaava movie: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆ ಬಳಿಕ ಸಂಬಾಜಿ ಮಹಾರಾಜರ ಕತೆ ಪಠ್ಯ ಮಾಡುವಂತೆ ಬೇಡಿಕೆ ಹೆಚ್ಚಾಗಿದೆ. ಕೆಲವೆಡೆ ಸಂಬಾಜಿಯ ಪ್ರತಿಮೆ ಸ್ಥಾಪಿಸಲಾಗಿದೆ. ಸಾಕಷ್ಟು ಪ್ರಭಾವವನ್ನು ಈ ಸಿನಿಮಾ ಬೀರಿದೆ. ಆದರೆ ಇದೀಗ ಇದೇ ಸಿನಿಮಾದಿಂದ ಪ್ರಭಾವಿತರಾಗಿ ಕೆಲ ಜನ ಐತಿಹಾಸಿಕ ಕೋಟೆಯೊಂದರ ಮೇಲೆ ದಾಳಿ ಮಾಡಿ, ನೆಲ ಅಗೆದು ಚಿನ್ನ ಹುಡುಕುವ ಯತ್ನ ಮಾಡಿದ್ದಾರೆ.

‘ಛಾವಾ’ ಪ್ರಭಾವ, ಕೋಟೆ ಅಗಿದು ನಿಧಿಗಾಗಿ ಹುಡುಕಿದ ಜನ
Chhaava
ಮಂಜುನಾಥ ಸಿ.
|

Updated on: Mar 09, 2025 | 9:54 AM

Share

ವಿಕ್ಕಿ ಕೌಶಲ್ (vicky kaushal), ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಈಗಾಗಲೇ ವಿಶ್ವದಾದ್ಯಂತ 700 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾದ ಕಲೆಕ್ಷನ್ ಆದಷ್ಟು ಶೀಘ್ರದಲ್ಲೇ 1000 ಕೋಟಿ ಕಲೆಕ್ಷನ್ ದಾಟುವ ಸಾಧ್ಯತೆ ಇದೆ. ‘ಛಾವಾ’ ಸಿನಿಮಾ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಾಂಬಾಜಿ ಮಹರಾಜ್ ಕುರಿತಾದದ್ದಾಗಿದ್ದು, ಸಿನಿಮಾ ಬಿಡುಗಡೆ ಬಳಿಕ ಸಾಂಬಾಜಿಯ ಇತಿಹಾಸವನ್ನು ಪಠ್ಯಕ್ಕೆ ಸೇರಿಸುವಂತೆ ಬೇಡಿಕೆ ಎದ್ದಿದೆ. ಕೆಲವೆಡೆ ಸಂಬಾಜಿಯ ಮೂರ್ತಿಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದೆಲ್ಲದರ ನಡುವೆ ‘ಛಾವಾ’ ಸಿನಿಮಾ ನೋಡಿ ಕೆಲ ಜನ ಕೋಟೆಗಳನ್ನು ಕೊರೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.

‘ಛಾವಾ’ ಸಿನಿಮಾನಲ್ಲಿ ಬರುವ ಕತೆ, ದೃಶ್ಯಗಳನ್ನು ನಂಬಿಕೊಂಡು ಮಧ್ಯ ಪ್ರದೇಶ ರಾಜ್ಯದ ಅಸಿರ್​ಘಡ ಕೋಟೆ ಬಳಿಯ ಹಳ್ಳಿಗರು ಅಸಿರ್​ಘಡ ಕೋಟೆಗೆ ಮುತ್ತಿಗೆ ಹಾಕಿ, ಕೋಟೆಯ ಸುತ್ತಲೂ ಅಗಿದು ಮೊಘಲರು ಬಚ್ಚಿಟ್ಟಿದ್ದ ಚಿನ್ನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ‘ಛಾವಾ’ ಸಿನಿಮಾನಲ್ಲಿ ಮೊಘಲರು ಲೂಟಿ ಹೊಡೆದ ಚಿನ್ನದ ಬಗ್ಗೆ ಉಲ್ಲೇಖ ಇದೆಯೆನ್ನಲಾಗುತ್ತಿದೆ. ಅಲ್ಲದೆ ಅಸಿರ್​ಘಡ ಕೋಟೆಗೂ, ಮೊಘಲರ ಇತಿಹಾಸಕ್ಕೂ ಗಾಢ ಬಂಧ ಇರುವ ಕಾರಣ, ಸ್ಥಳೀಯ ಹಳ್ಳಿಗರು ಚಿನ್ನಕ್ಕಾಗಿ ಅಸಿರ್​ಘಡ ಕೋಟೆಗೆ ಮುತ್ತಿಗೆ ಹಾಕಿದ್ದರು. ‘ಛಾವಾ’ ಸಿನಿಮಾದ ಕತೆ ಮಾತ್ರವೇ ಅಲ್ಲದೆ, ಸ್ಥಳೀಯ ಜನಪದ ಕತೆಗಳಲ್ಲಿಯೂ ಸಹ ಮೊಘಲರ ಚಿನ್ನದ ಬಗ್ಗೆ ಉಲ್ಲೇಖಗಳು ಇವೆ. ಹಾಗಾಗಿ ಜನ ಒಟ್ಟೊಟ್ಟಿಗೆ ತಂಡೋಪತಂಡವಾಗಿ ಕೋಟೆಗೆ ಮುತ್ತಿಗೆ ಹಾಕಿ ಚಿನ್ನದ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ:ಬಾಕ್ಸ್ ಆಫೀಸ್ ಕಲೆಕ್ಷನ್: 16 ದಿನಕ್ಕೆ ‘ಛಾವಾ’ ಗಳಿಸಿದ್ದೆಷ್ಟು?

ಜನ, ಕೊಡಲಿ, ಗಡಾರ, ಸಲಿಕೆಗಳು, ಟಾರ್ಚ್ ಲೈಟು ಇನ್ನಿತರೆಗಳನ್ನು ಹಿಡಿದುಕೊಂಡು ದೊಡ್ಡ ಸಂಖ್ಯೆಯಲ್ಲಿ ಕೋಟೆಯ ಸುತ್ತ ಅಗೆಯಲು ಆರಂಭಿಸಿದ್ದರು. ಕೆಲ ದಿನದ ಹಿಂದೆ ಈ ಕಾರ್ಯ ನಡೆದಿದ್ದು, ಸುಮಾರು ನೂರಕ್ಕೂ ಹೆಚ್ಚು ಜನ ಕೋಟೆಯ ಸುತ್ತ ಅಗಿಯಲು ಆರಂಭಿಸಿದ್ದರು. ರಾತ್ರಿ ಏಳರಿಂದ ಮಧ್ಯ ರಾತ್ರಿ 3 ಗಂಟೆ ವರೆಗೆ ಜನ ಚಿನ್ನಕ್ಕಾಗಿ ಕೋಟೆಯ ಸುತ್ತ ಹಳ್ಳಗಳನ್ನು ಅಗೆದಿದ್ದರು. ಆದರೆ ಜನ ನಿಧಿಗಾಗಿ ನೆಲ ಅಗೆಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿದರು. ಪೊಲೀಸರು ಆಗಮಿಸುತ್ತಿದ್ದಂತೆ ನಿಧಿ ಅಗೆಯಲು ಬಂದಿದ್ದ ಜನ ಅಲ್ಲಿಂದ ಪರಾರಿ ಆದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಒಟ್ಟಾರೆ ‘ಛಾವಾ’ ಸಿನಿಮಾದಿಂದಾಗಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆ. ಜನ ನಿಧಿಗಾಗಿ ಕೋಟೆ ಅಗೆದರೆ ಕೆಲ ದಿನದ ಹಿಂದೆ ವ್ಯಕ್ತಿಯೊಬ್ಬ ‘ಛಾವಾ’ ಸಿನಿಮಾ ವೀಕ್ಷಿಸಲು ಕುದುರೆ ಮೇಲೆ ಸಿನಿಮಾ ಪ್ರದರ್ಶನ ಆಗುತ್ತಿದ್ದ ಹಾಲ್​ಗೆ ಬಂದಿದ್ದ.

‘ಛಾವಾ’ ಸಿನಿಮಾ, ಸಂಬಾಜಿ ಮಹಾರಾಜನ ಜೀವನದ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್, ಸಂಬಾಜಿ ಮಹಾರಾಜನ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ, ಯೆಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಔರಂಗಾಜೇಬನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶಕ ಮಾಡಿರುವುದು ಲಕ್ಷ್ಮಣ ಉಠೇಕರ್. ಸಿನಿಮಾ ಈಗಾಗಲೇ 700 ಕೋಟಿಗೂ ಹೆಚ್ಚು ಹಣ ಗಳಿಸಿದ್ದು, ಈ ವರ್ಷದ ಈ ವರೆಗಿನ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ