AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ಮೋಸ ಮಾಡಲು ಹೋಗಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಕ್ರೋಚ್ ಸುಧಿ

ಕಾಕ್ರೋಚ್ ಸುಧಿ ಅವರು ಬಹಳ ಚಾಲಾಕಿ ಎಂಬುದು ಗೊತ್ತು. ಆದರೆ ಬಿಗ್ ಬಾಸ್ ಮುಂದೆ ಅದು ನಡೆಯುತ್ತಿಲ್ಲ. ಟಾಸ್ಕ್ ವೇಳೆ ಯಾರಿಗೂ ಕಾಣದಂತೆ ಯಾಮಾರಿಸಲು ಕಾಕ್ರೋಚ್ ಸುಧಿ ಅವರು ಪ್ರಯತ್ನಿಸಿರುವುದು ಗೊತ್ತಾಗಿದೆ. ಬಿಗ್ ಬಾಸ್ ಮನೆಯ ಕ್ಯಾಮೆರಾದಲ್ಲಿ ಅದು ಸೆರೆಯಾಗಿದೆ. ಕೂಡಲೇ ಅವರಿಗೆ ಬಿಗ್ ಬಾಸ್ ಎಚ್ಚರಿಕೆ ನೀಡಿದರು.

ಬಿಗ್ ಬಾಸ್​ಗೆ ಮೋಸ ಮಾಡಲು ಹೋಗಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಕ್ರೋಚ್ ಸುಧಿ
Cockroach Sudhi
ಮದನ್​ ಕುಮಾರ್​
|

Updated on: Nov 10, 2025 | 10:43 PM

Share

ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ಕಾಕ್ರೋಚ್ ಸುಧಿ ಅವರಿಗೆ ಒಂದು ಇಮೇಜ್ ಇತ್ತು. ಸಿನಿಮಾಗಳಲ್ಲಿ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಬಿಗ್ ಬಾಸ್ (Bigg Boss Kannada Season 12) ಆಟದಲ್ಲಿ ಅವರ ಚಾರ್ಮ್ ಕಡಿಮೆ ಆಗಿದೆ. ಅನೇಕ ಸಂದರ್ಭಗಳಲ್ಲಿ ಅವರು ಹಿಂದೇಟು ಹಾಕುತ್ತಾರೆ. ತಾವೇ ಮುಂದಾಳತ್ವ ವಹಿಸುವ ಶಕ್ತಿ ಇದ್ದರೂ ಕೂಡ ಅದನ್ನು ಅವರು ಬಳಸಿಕೊಂಡಂತೆ ಕಾಣುತ್ತಿಲ್ಲ. ಅದೂ ಸಾಲದೆಂಬಂತೆ ಅವರು ಕಳ್ಳಾಟ ಆಡಿ ಸಿಕ್ಕಿ ಬಿದ್ದಿದ್ದಾರೆ. ಸ್ಪರ್ಧಿಗಳಿಗೆ ಮಾತ್ರವಲ್ಲದೇ ಸ್ವತಃ ಬಿಗ್ ಬಾಸ್​​ಗೂ ಚಳ್ಳೆ ಹಣ್ಣು ತಿನ್ನಿಸಲು ಕಾಕ್ರೋಚ್ ಸುಧಿ (Cockroach Sudhi) ಪ್ರಯತ್ನಿಸಿದರು. ಆದರೆ ಕ್ಯಾಮೆರಾ ಕಣ್ಣಲ್ಲಿ ಅವರ ಕಳ್ಳಾಟ ಸೆರೆ ಆಯಿತು.

ನವೆಂಬರ್ 10ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಈ ಮನೆಯಲ್ಲಿ ಹೆಚ್ಚು ವಿಷ ಕಾರುವ ವ್ಯಕ್ತಿ ಯಾರು ಎಂಬುದನ್ನು ಸೂಚಿಸಿ ಅವರಿಗೆ ಹಸಿ ಮೆಣಸಿನ ಕಾಯಿ ತಿನ್ನಬೇಕು ಎಂದು ಟಾಸ್ಕ್ ನೀಡಲಾಯಿತು. ಹಲವರು ಕಾಕ್ರೋಚ್ ಸುಧಿ ಹೆಸರನ್ನು ಹೇಳಿದರು. ಪ್ರತಿ ಬಾರಿ ಹೆಸರು ಬಂದಾಗ ಕಾಕ್ರೋಚ್ ಸುಧಿ ಅವರು ಒಂದೊಂದು ಹಸಿ ಮೆಣಸಿನ ಕಾಯಿ ತಿನ್ನಬೇಕಾಯಿತು.

ಹಸಿ ಮೆಣಸಿನಕಾಯಿ ತಿನ್ನುವುದು ಸುಲಭ ಅಲ್ಲ. ಅದರಲ್ಲೂ ಒಂದರ ಹಿಂದೊಂದು ಮೆಣಸಿನಕಾಯಿ ತಿನ್ನಬೇಕಾದ ಸಂದರ್ಭ ಬಂದಾಗ ಕಾಕ್ರೋಚ್ ಸುಧಿ ಅವರು ಕಳ್ಳಾಟದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಮೆಣಸಿನಕಾಯಿ ಒಳಗೆ ಇದ್ದ ಬೀಜಗಳನ್ನು ಯಾರಿಗೂ ಕಾಣದಂತೆ ನೆಲಕ್ಕೆ ಬೀಳಿಸಿದರು. ಆ ಮೂಲಕ ಖಾರದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದು ಅವರ ಪ್ಲ್ಯಾನ್ ಆಗಿತ್ತು.

ಆದರೆ ಅವರ ಈ ಕಳ್ಳಾಟ ಮುಂದುವರಿಯಲು ಬಿಗ್ ಬಾಸ್ ಬಿಡಲಿಲ್ಲ. ‘ನೀವು ಮಾಡಿದ ತಪ್ಪು ನಮಗೆ ಕಾಣಿಸಿದೆ’ ಎಂದು ಹೇಳುವ ಮೂಲಕ ಸರಿಯಾಗಿ ಮೆಣಸಿನಕಾಯಿ ತಿನ್ನುವಂತೆ ಸುಧಿಗೆ ಬಿಗ್ ಬಾಸ್ ಸೂಚಿಸಿದರು. ಹೊಸದಾಗಿ ಮೆಣಸಿನಕಾಯಿ ತಿನ್ನುವುದು ಅನಿವಾರ್ಯ ಆಯಿತು. ಈ ಟಾಸ್ಕ್ ವೇಳೆ ಅವರು ಹಲವು ಮೆಣಸಿನಕಾಯಿ ತಿಂದು ಸುಸ್ತಾದರು.

ಇದನ್ನೂ ಓದಿ: ಬಿಗ್ ಬಾಸ್ ಕರಿಬಸಪ್ಪ ಸದಾ ಖುಷಿ ಆಗಿರೋದು ಯಾಕೆ ಗೊತ್ತಾ?

ಅಶ್ವಿನಿ ಗೌಡ ಕೂಡ ಅತಿ ವಿಷಕಾರಿ ವ್ಯಕ್ತಿ ಎಂದು ಹಲವರು ಹೇಳಿದರು. ಅಲ್ಲದೇ ಜಾಹ್ನವಿ ಮತ್ತು ಅಶ್ವಿನಿ ಗೌಡ ನಡುವೆ ಇದ್ದ ಜಟಾಪಟಿ ಜಾಸ್ತಿ ಆಯಿತು. ಕೆಲವು ಸೀಕ್ರೆಟ್​​ಗಳು ಕೂಡ ಬಯಲಾದವು. ತಾವಿಬ್ಬರು ಜಗಳ ಮಾಡಿಕೊಂಡಂತೆ ನಟಿಸಬೇಕು ಎಂದು ಡ್ರೆಸಿಂಗ್ ರೂಮ್​​ನಲ್ಲಿ ಮೈಕ್ ಇಲ್ಲದೇ ಮಾತನಾಡಿಕೊಂಡು ಪ್ಲ್ಯಾನ್ ಮಾಡಿದ್ದನ್ನು ಕೂಡ ಅಶ್ವಿನಿ ಗೌಡ ಅವರು ಬಾಯಿ ಬಿಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ