AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೆಂಡ್​​ನಲ್ಲಿರೋ ‘ಧುರಂಧರ್​’ನ ಈ ಹಾಡು ಒಂದಲ್ಲ, ಎರಡಲ್ಲ 65 ವರ್ಷ ಹಳೆಯದು

ಧುರಂಧರ್ ಸಿನಿಮಾ 350 ಕೋಟಿ ರೂ.ಗೂ ಹೆಚ್ಚು ಗಳಿಸಿ ಯಶಸ್ವಿ ಯಾತ್ರೆ ಮುಂದುವರೆಸಿದೆ. ಸಿನಿಮಾದ 'ನಾ ತೋ ಕಾರವಾನಕಿ ತಲಾಶ ಹೇ' ಹಾಡು ವೈರಲ್ ಆಗಿದೆ. ಇದು 65 ವರ್ಷ ಹಳೆಯ ಹಾಡಾಗಿದ್ದು, 1960ರ ಬಸರತ್ ಕಿ ರಾತ್ ಚಿತ್ರದ್ದು. ಹೃತಿಕ್ ರೋಷನ್ ತಾತ ರೋಷನ್ ಸಂಗೀತ ಸಂಯೋಜಿಸಿದ್ದ ಈ ಕವ್ವಾಲಿಯನ್ನು ಮನ್ನಾ ಡೇ, ಮೊಹಮ್ಮದ್ ರಫಿ ಅಂತಹ ದಿಗ್ಗಜರು ಹಾಡಿದ್ದಾರೆ.

ಟ್ರೆಂಡ್​​ನಲ್ಲಿರೋ ‘ಧುರಂಧರ್​’ನ ಈ ಹಾಡು ಒಂದಲ್ಲ, ಎರಡಲ್ಲ 65 ವರ್ಷ ಹಳೆಯದು
ಧುರಂಧರ್
ರಾಜೇಶ್ ದುಗ್ಗುಮನೆ
|

Updated on: Dec 16, 2025 | 2:31 PM

Share

‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 350+ ಕೋಟಿ ರೂಪಾಯಿ ಬಾಚಿಕೊಂಡು ಮುಂದಕ್ಕೆ ಸಾಗುತ್ತಿದೆ. ಈ ಸಿನಿಮಾ ಶೀಘ್ರವೇ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈಗ ‘ಧುರಂಧರ್’ ಸಿನಿಮಾದ ಹಾಡು ಗಮನ ಸೆಳೆದಿದೆ. ಈ ಹಾಡು 65 ವರ್ಷ ಹಿಂದಿನದು.

‘ಧುರಂಧರ್’ ಸಿನಿಮಾದಲ್ಲಿ ಬರೋ ‘ನಾ ತೋ ಕಾರವಾನಕಿ ತಲಾಶ ಹೇ’ ಹಾಡು ಗಮನ ಸೆಳೆಯುತ್ತಿದೆ. ರೀಲ್ಸ್​ ಮಾಡಲಾಗುತ್ತಿದೆ. ಎಲ್ಲರೂ ಈ ಹಾಡು ಹೊಸದಾಗಿ ಕಂಪೋಸ್ ಮಾಡಿರೋದು ಎಂದು ಭಾವಿಸಿದ್ದರು. ಆದರೆ, ಈ ಹಾಡು ಮೊದಲು ಕಂಪೋಸ್ ಆಗಿದ್ದು ಆರೂವರೆ ದಶಕಗಳ ಹಿಂದೆ.

ಈ ಸಾಲುಗಳು ಹೃತಿಕ್ ರೋಷನ್ ಅವರ ತಾತ ಅವರ ಕವ್ವಾಲಿಯಿಂದ ತೆಗೆದುಕೊಂಡ ಸಾಲುಗಳಾಗಿವೆ. ‘ಬಸರತ್ ಕಿ ರಾತ್’ ಸಿನಿಮಾದ ಹಾಡು ಇದು. ಈ ಸಿನಿಮಾ ಬಂದಿದ್ದು 1960ರಲ್ಲಿ. ಮೂಲ ಹಾಡು ಕೂಡ ‘ನಾ ತೋ ಕಾರವಾನಕಿ ತಲಾಶ ಹೇ’ ಎಂದೇ ಇದೆ. ಆ ಕಾಲದ ಅತಿ ಉದ್ದದ ಕವ್ವಾಲಿಯಾಗಿತ್ತು. ಶಾರುಖ್ ಖಾನ್ ಈ ಕವ್ವಾಲಿಯಿಂದ ತೀವ್ರವಾಗಿ ಪ್ರಭಾವಿತರಾಗಿದ್ದರು.

ರೋಷನ್ ಈ ಕವ್ವಾಲಿಯನ್ನು ರಚಿಸಿದ ನಂತರ ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಪತ್ನಿಯೊಂದಿಗೆ ಈ ಬಗ್ಗೆ ಹೇಳಿದ್ದರಂತೆ. ‘ಇಂದು ನಾನು 13 ನಿಮಿಷಗಳ ಕವ್ವಾಲಿಯನ್ನು ರಚಿಸಿದ್ದೇನೆ’ ಎಂದಿದ್ದರು. ಆಗ ಅವರ ಪತ್ನಿ ‘ಇತ್ತೀಚಿನ ದಿನಗಳಲ್ಲಿ, ಯಾರೂ ನಾಲ್ಕು ನಿಮಿಷಗಳ ಹಾಡನ್ನು ಕೇಳುವುದಿಲ್ಲ. ಹೀಗಿರುವಾಗ ನೀವು 13 ನಿಮಿಷಗಳ ಕವ್ವಾಲಿಯನ್ನು ರಚಿಸಿದ್ದೀರಲ್ಲ’ ಎಂದರಂತೆ. ಆದರೆ, ನಿರ್ದೇಶಕ ಪಿ.ಎಲ್. ಸಂತೋಷಿ ಅವರಿಗೆ ಇದರ ಮೇಲೆ ಸಂಪೂರ್ಣ ನಂಬಿಕೆ ಇತ್ತು.

ಇದನ್ನೂ ಓದಿ: ಸೋಮವಾರ ‘ಧುರಂಧರ್’, ‘ಅಖಂಡ 2’ ಎದುರು ಮಂಕಾದ ‘ಡೆವಿಲ್’ ಕಲೆಕ್ಷನ್

ಈ ಕವ್ವಾಲಿಯಲ್ಲಿ ಮನ್ನಾ ಡೇ, ಆಶಾ ಭೋಂಸ್ಲೆ, ಎಸ್.ಡಿ. ಬತೀಶ್, ಸುಧಾ ಮಲ್ಹೋತ್ರಾ ಮತ್ತು ಮೊಹಮ್ಮದ್ ರಫಿ ಅವರಂತಹ ಪ್ರಸಿದ್ಧ ಗಾಯಕರು ಇದ್ದರು. ಈ ಕವ್ವಾಲಿ ದೀರ್ಘವಾಗಿದ್ದರೂ ಕೇಳಲು ಇಂಪಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?