AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸರ್ಕಾರದ ಪರವಾಗಿ ಸಿನಿಮಾ ಮಾಡ್ತೀರಿ ಎಂಬ ಆರೋಪಕ್ಕೆ ಉತ್ತರ ನೀಡಿದ ಅಕ್ಷಯ್​ ಕುಮಾರ್​

ಬಿಜೆಪಿ ಸರ್ಕಾರದ ಮಾರ್ಸ್​ ಮಿಷನ್​ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಪ್ರಮೋಟ್​ ಮಾಡುವ ಸಲುವಾಗಿ ಅಕ್ಷಯ್​ ಕುಮಾರ್​ ಅವರು ‘ಮಿಷನ್​ ಮಂಗಳ್​’ ಹಾಗೂ ‘ಟಾಯ್ಲೆಟ್​: ಏಕ್​ ಪ್ರೇಮ್​ ಕಥಾ’ ಸಿನಿಮಾವನ್ನು ಮಾಡಿದರು ಎಂಬುದು ಅನೇಕರ ಆರೋಪ. ಆದರೆ ಅದನ್ನು ಅಕ್ಷಯ್​ ಕುಮಾರ್​ ಅವರು ತಳ್ಳಿಹಾಕಿದ್ದಾರೆ.

ಬಿಜೆಪಿ ಸರ್ಕಾರದ ಪರವಾಗಿ ಸಿನಿಮಾ ಮಾಡ್ತೀರಿ ಎಂಬ ಆರೋಪಕ್ಕೆ ಉತ್ತರ ನೀಡಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​
ಮದನ್​ ಕುಮಾರ್​
|

Updated on: Oct 10, 2023 | 12:00 PM

Share

ನಟ ಅಕ್ಷಯ್​ ಕುಮಾರ್ (Akshay Kumar)​ ಅವರು ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಟೀಕೆಗೆ ಒಳಗಾಗಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲದೇ ಅವರು ಬೇರೆ ಬೇರೆ ಕಾರಣಕ್ಕೆ ಟ್ರೋಲ್​ ಆಗುತ್ತಾರೆ. ಅವರು ಕೆನಡಾದ ಪೌರತ್ವ ಪಡೆದಿದ್ದು ಕೂಡ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿತ್ತು. ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ಸರ್ಕಾರವನ್ನು ಅಕ್ಷಯ್​ ಕುಮಾರ್​ ಅವರು ಬೆಂಬಲಿಸುತ್ತಾ ಬಂದಿದ್ದಾರೆ. ಅವರ ಸಿನಿಮಾಗಳು ಕೂಡ ಬಿಜೆಪಿ (BJP Government) ಪರವಾಗಿ ಇವೆ ಎಂಬುದು ಕೆಲವರ ಆರೋಪ. ಅಂತಹ ಆರೋಪಗಳಿಗೆ ಅಕ್ಷಯ್​ ಕುಮಾರ್​ ಈಗ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರದ ಮಾರ್ಸ್​ ಮಿಷನ್​ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಪ್ರಮೋಟ್​ ಮಾಡುವ ಸಲುವಾಗಿ ಅಕ್ಷಯ್​ ಕುಮಾರ್​ ಅವರು ‘ಮಿಷನ್​ ಮಂಗಳ್​’ ಹಾಗೂ ‘ಟಾಯ್ಲೆಟ್​: ಏಕ್​ ಪ್ರೇಮ್​ ಕಥಾ’ ಸಿನಿಮಾವನ್ನು ಮಾಡಿದರು ಎಂಬುದು ಅನೇಕರ ಆರೋಪ. ಆದರೆ ಅದನ್ನು ಅಕ್ಷಯ್​ ಕುಮಾರ್​ ಅವರು ತಳ್ಳಿಹಾಕಿದ್ದಾರೆ. ‘ಇಂಡಿಯಾ ಟುಡೆ’ ನಡೆಸಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಹೇಳೋದೇನು?

‘ಜನರು ಹಾಗೆ ಹೇಳುತ್ತಾರೆ. ಆದರೆ ಅಸಲಿ ವಿಷಯ ಆ ರೀತಿ ಇಲ್ಲ. ನಾನು ‘ಏರ್​ಲಿಫ್ಟ್​’ ಸಿನಿಮಾವನ್ನು ಮಾಡಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿ ಇತ್ತು. ಆದರೆ ಅದರ ಬಗ್ಗೆ ಯಾರೂ ಮಾತನಾಡಲಿಲ್ಲ. ‘ಮಿಷನ್​ ರಾಣಿಗಂಜ್​’ ಸಿನಿಮಾದ ನೈಜ ಘಟನೆ ನಡೆದಿದ್ದು ಕೂಡ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ. ಅದು ಒಳ್ಳೆಯತನಕ್ಕೆ ಮತ್ತು ಶ್ರೇಷ್ಠತೆಗೆ ಸಂಬಂಧಿಸಿದ್ದು. ಯಾರು ಅಧಿಕಾರದಲ್ಲಿ ಇದ್ದರು ಎಂಬುದು ಮುಖ್ಯವಲ್ಲ. ದೇಶದ ಹಿತಕ್ಕಾಗಿ ಏನು ಮಾಡಲಾಯಿತು ಎಂಬುದು ಮಾತ್ರ ಮುಖ್ಯ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:ಅಕ್ಷಯ್​ ಕುಮಾರ್​ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?

ಒಂದು ಕಾಲದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ ಸಿನಿಮಾಗಳು ಸತತವಾಗಿ ಸೋಲು ಕಂಡಿದ್ದವು. ಇನ್ನೇನು ಬಾಲಿವುಡ್​ನಲ್ಲಿ ತಮ್ಮ ಭವಿಷ್ಯ ಅಂತ್ಯವಾಯ್ತು ಎಂದು ಅಕ್ಷಯ್​ ಕುಮಾರ್​ ಅಂದುಕೊಂಡಿದ್ದರು. ಹಾಗಾಗಿ ಕೆನಡಾಗೆ ತೆರಳಿ ಅಲ್ಲಿಯೇ ಜೀವನ ಕಟ್ಟಿಕೊಳ್ಳಬೇಕು ಎಂದು ಅವರು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಅವರು ಕೆನಡಾದ ಪೌರತ್ವ ಪಡೆದುಕೊಂಡಿದ್ದರು. ಬಳಿಕ ಅವರಿಗೆ ಮತ್ತೆ ಬಾಲಿವುಡ್​ನಲ್ಲಿ ಯಶಸ್ಸು ಸಿಕ್ಕಿತು. ಆದರೂ ಭಾರತದ ಪೌರತ್ವ ಇರಲಿಲ್ಲ. 2023ರಲ್ಲಿ ಅವರಿಗೆ ಮರಳಿ ಭಾರತದ ಪೌರತ್ವ ಸಿಕ್ಕಿತು. ಅದನ್ನು ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಿಳಿಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ