AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ

Taapsee Pannu | Paparazzi: ನಟಿ ತಾಪ್ಸಿ ಪನ್ನು ಮತ್ತು ಪಾಪರಾಜಿಗಳ ನಡುವೆ ಮುಂಬೈನಲ್ಲಿ ಕಿರಿಕ್​ ಆಗಿದೆ. ಈ ಸಂದರ್ಭದ ವಿಡಿಯೋ ಸಖತ್​ ವೈರಲ್​ ಆಗಿದೆ.

Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ
ತಾಪ್ಸಿ ಪನ್ನು ವೈರಲ್ ವಿಡಿಯೋ
TV9 Web
| Edited By: |

Updated on:Aug 09, 2022 | 8:32 AM

Share

ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು (Paparazzi) ಮುತ್ತಿಗೆ ಹಾಕಿಕೊಳ್ಳುತ್ತಾರೆ. ನಟ-ನಟಿಯರ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುವ ಸಲುವಾಗಿ ಪಾಪರಾಜಿಗಳು ಸದಾ ಕಿತ್ತಾಟ ನಡೆಸುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆದಂತಹ ಅನೇಕ ಉದಾಹರಣೆಗಳಿವೆ. ಈಗ ನಟಿ ತಾಪ್ಸಿ ಪನ್ನು (Taapsee Pannu) ಅವರಿಗೂ ಅದೇ ರೀತಿ ಆಗಿದೆ. ಮುಂಬೈನಲ್ಲಿ ಅವರು ಕೋಪಗೊಂಡು ಕೂಗಾಡಿದ ವಿಡಿಯೋ ವೈರಲ್​ ಆಗಿದೆ. ಒಂದೇ ಒಂದು ಫೋಟೋ ಸಲುವಾಗಿ ಇಷ್ಟೆಲ್ಲ ಕಿರಿಕ್​ ಆಗಿದೆ. ತಾಪ್ಸಿ ಪನ್ನು ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ. ಆ ಕಾರಣಕ್ಕಾಗಿ ಅವರು ಅನೇಕ ಬಾರಿ ವಿವಾದ (Taapsee Pannu Controversy) ಮಾಡಿಕೊಂಡಿದ್ದಿದೆ. ಈಗ ಪಾಪರಾಜಿಗಳ ಜೊತೆ ಅವರು ಜಗಳವಾಡಿದ್ದಾರೆ. ಅಂತಿಮವಾಗಿ ‘ನೀವೇ ಸರಿ.. ಕಲಾವಿದರದ್ದೇ ತಪ್ಪು ಬಿಡಿ’ ಎಂದು ಕೈ ಮುಗಿದು ಮುಂದೆ ಸಾಗಿದ್ದಾರೆ. ಆ ಘಟನೆಯ ವಿವರ ಇಲ್ಲಿದೆ.

ಪವೇಲ್​ ಗುಲಾಟಿ ಮತ್ತು ತಾಪ್ಸಿ ಪನ್ನು ಜೊತೆಯಾಗಿ ನಟಿಸಿರುವ ‘ದೋಬಾರಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಆಗಸ್ಟ್​ 19ರಂದು ತೆರೆಕಾಣಲಿದೆ.​ ಅದರ ಪ್ರಚಾರದ ಸಲುವಾಗಿ ಅವರು ಅನೇಕ ಕಡೆಗಳಿಗೆ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚಿಗೆ ಮುಂಬೈನಲ್ಲಿ ಅವರೊಂದು ಕಾರ್ಯಕ್ರಮಕ್ಕೆ ಹಾಜರಿ ಹಾಕಿದರು. ಈ ವೇಳೆ ಪಾಪರಾಜಿಗಳ ಜೊತೆ ಕಿರಿಕ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Taapsee Pannu: ಮನಮೋಹಕ ಚೆಲುವೆ ತಾಪ್ಸಿ ಪನ್ನು ಕ್ಯೂಟ್ ಫೋಟೋಆಲ್ಬಂ
Image
Taapsee Pannu: ಬಾಲಿವುಡ್​ನಲ್ಲಿ ಮಹಿಳಾ ನಟಿಯರ ಸಂಭಾವನೆ ನಿಗದಿಯಾಗೋದು ಹೇಗೆ? ತಾಪ್ಸಿ ಪನ್ನು ಹೇಳಿದ್ದಿಷ್ಟು..
Image
‘ನಿಮ್ಮ ದೇಹ ಗಂಡಸರ ರೀತಿ ಇದೆ’; ತಾಪ್ಸಿ ಪನ್ನು ಬಾಡಿ ಬಗ್ಗೆ ನೆಟ್ಟಿಗರ ಕಮೆಂಟ್​; ಖುಷಿಯಾದ ನಟಿ
Image
Haseen Dillruba Trailer: ಬದಲಾಯ್ತು ತಾಪ್ಸಿ ಪನ್ನು ಅವತಾರ; ಬೋಲ್ಡ್ ಲುಕ್​ ನೋಡಿ ಫ್ಯಾನ್ಸ್​ ಫಿದಾ

ಇವೆಂಟ್​ ನಡೆಯುವ ಸ್ಥಳಕ್ಕೆ ತಾಪ್ಸಿ ಪನ್ನು ಆಗಮಿಸುತ್ತಿದ್ದಂತೆಯೇ ಅವರ ಫೋಟೋಗಳನ್ನು ಸೆರೆ ಹಿಡಿಯಲು ಪಾಪರಾಜಿಗಳು ಮುಗಿಬಿದ್ದರು. ಆದರೆ ಅವರಿಗೆ ತಾಪ್ಸಿ ಪೋಸ್ ನೀಡಲಿಲ್ಲ. ಅದಾಗಲೇ ಕಾರ್ಯಕ್ರಮಕ್ಕೆ ತಡವಾಗಿದ್ದರಿಂದ ನೇರವಾಗಿ ಅವರು ವೇದಿಕೆ ಕಡೆಗೆ ಹೋಗಲು ಮುಂದಾದರು. ಆದರೆ ಅವರನ್ನು ಪಾಪರಾಜಿಗಳು ಸುತ್ತಿವರಿದು ಪೋಸ್​ ನೀಡಲೇಬೇಕು ಎಂದು ಪಟ್ಟು ಹಿಡಿದರು. ಇದರಿಂದ ತಾಪ್ಸಿಗೆ ಸಿಟ್ಟು ಬಂತು.

‘ನಿಮಗಾಗಿ ನಾವು ಕಾಯುತ್ತಿದ್ದೇವೆ. ಇಷ್ಟು ತಡವಾಗಿ ಬಂದು ಪೋಸ್​ ನೀಡುತ್ತಿಲ್ಲವಲ್ಲ’ ಎಂದು ಪಾಪರಾಜಿಗಳು ಹೇಳಿದರು. ‘ಆಯೋಜಕರು ಹೇಳಿದ ಸಮಯಕ್ಕೆ ನಾನು ಬಂದಿದ್ದೇನೆ’ ಎಂದು ತಾಪ್ಸಿ ತಿರುಗೇಟು ನೀಡಿದರು. ಈ ವಾದ ಕೆಲವು ನಿಮಿಷ ಮುಂದುವರಿಯಿತು. ನಂತರ ‘ನಿಮ್ಮದೇ ಸರಿ.. ಕಲಾವಿದರದ್ದು ಯಾವಾಗಲೂ ತಪ್ಪು’ ಎಂದು ವ್ಯಂಗ್ಯವಾಗಿ ಹೇಳಿ ಕೈ ಮುಗಿದು ತಾಪ್ಸಿ ಮುಂದೆ ಸಾಗಿದರು. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:29 am, Tue, 9 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್