AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೌಟುಂಬಿಕ ದೌರ್ಜನ್ಯ ಆರೋಪದ ನಂತರ ಮೊದಲ ಬಾರಿಗೆ ಹೊಸ ಹಾಡಿನ ಪೋಸ್ಟ್ ಹಂಚಿಕೊಂಡ ಯೋ ಯೋ ಹನಿ ಸಿಂಗ್

Honey Singh: ಖ್ಯಾತ ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ತಮ್ಮ ಮುಂದಿನ ಹಾಡಿನ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಕೌಟುಂಬಿಕ ದೌರ್ಜನ್ಯ ಆರೋಪದ ನಂತರ ಮೊದಲ ಬಾರಿಗೆ ಹೊಸ ಹಾಡಿನ ಪೋಸ್ಟ್ ಹಂಚಿಕೊಂಡ ಯೋ ಯೋ ಹನಿ ಸಿಂಗ್
ಯೋ ಯೋ ಹನಿ ಸಿಂಗ್
TV9 Web
| Updated By: shivaprasad.hs|

Updated on: Aug 26, 2021 | 5:39 PM

Share

ಬಾಲಿವುಡ್​ನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ ವೈವಾಹಿಕ ದೌರ್ಜನ್ಯದ ಆರೋಪದ ನಂತರ ಮೊದಲ ಬಾರಿಗೆ ತಮ್ಮ ನೂತನ ಹಾಡಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹನಿ ಸಿಂಗ್ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದರು. ಜೊತೆಗೆ ಹನಿ ಸಿಂಗ್ ಅವರಿಗೆ ಅಕ್ರಮ ಸಂಬಂಧವಿದೆ ಎಂದೂ ಅವರು ಆರೋಪಿಸಿದ್ದರು. ನಂತರದಲ್ಲಿ ಹನಿ ಸಿಂಗ್ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೇ ಒಂದು ಸ್ಪಷ್ಟೀಕರಣವನ್ನು ಕೊಟ್ಟಿದ್ದರು. ಇದೀಗ ಹನಿ ಸಿಂಗ್, ತಮ್ಮ ನೂತನ ಆಲ್ಬಂ ಸಾಂಗ್​ನ ಮಾಹಿತಿಗಳನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ಹನಿ ಸಿಂಗ್ ಮುಂದಿನ ಆಲ್ಬಂ ಯಾವುದು? ಬಾಲಿವುಡ್​ನ ಸಂಗೀತದಲ್ಲಿ ಹೆಸರು ಮಾಡಿರುವ ಖ್ಯಾತರಾದ ಟೋನಿ ಕಕ್ಕರ್ ಹಾಗೂ ನೇಹಾ ಕಕ್ಕರ್ ಅವರೊಂದಿಗೆ ಹನಿ ಸಿಂಗ್ ತಮ್ಮ ನೂತನ ಹಾಡಿಗೆ ಜೊತೆಯಾಗಲಿದ್ದಾರೆ. ಹನಿ ಸಿಂಗ್ ತಿಳಿಸಿರುವ ಪ್ರಕಾರ, ನೂತನ ಹಾಡಿನ ಸಾಹಿತ್ಯವನ್ನು ಬರೆದು, ಸಂಗೀತವನ್ನು ನೀಡಿರುವುದು ಟೋನಿ ಕಕ್ಕರ್. ಇದರೊಂದಿಗೆ ಹಾಡಿನ ಭರ್ಜರಿ ಧಮಾಕಾದ ಸುಳಿವನ್ನೂ ನೀಡಿರುವ ಹನಿ ಸಿಂಗ್, ಈ ವರ್ಷದ ಅತ್ಯಂತ ದೊಡ್ಡ ಹಾಡಾಗಲಿದೆ ಇದು ಎಂದು ಬರೆದುಕೊಂಡಿದ್ದಾರೆ. ಹಾಡಿಗೆ ‘ಕಂಟಾ ಲಗಾ’ ಎಂಬ ಶೀರ್ಷಿಕೆ ನೀಡಲಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹನಿ ಸಿಂಗ್ ತಿಳಿಸಿದ್ದಾರೆ.

ಹನಿ ಸಿಂಗ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಇದಕ್ಕೂ ಮುನ್ನ ಹನಿ ಸಿಂಗ್ ತಮ್ಮ ಪತ್ನಿ ಶಾಲಿನಿ ಮಾಡಿದ ಆರೋಪಕ್ಕೆ ಸಾಮಾಜಿಕ ಜಾಲತಾಣಗಳ ಮುಖಾಂತರವೇ ಉತ್ತರ ಕೊಟ್ಟಿದ್ದರು. ‘ಕಳೆದ 15 ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿದ್ದೇನೆ. ದೇಶ-ವಿದೇಶದ ಹಲವು ಕಲಾವಿದರು ಮತ್ತು ಸಂಗೀತಗಾರರ ಜೊತೆ ಕೆಲಸ ಮಾಡಿದ್ದೇನೆ. ಪತ್ನಿ ಜೊತೆ ನನ್ನ ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆಕೆ ಕೂಡ ನನ್ನ ಕಾರ್ಯಕ್ಷೇತ್ರದ ಭಾಗವಾಗಿರುತ್ತಿದ್ದಳು. ನಾನು ಹೋದಲೆಲ್ಲ ಬರುತ್ತಿದ್ದಳು. ಆಕೆ ಮಾಡಿದ ಎಲ್ಲ ಆರೋಪಗಳನ್ನು ನಾನು ಅಲ್ಲಗಳೆಯುತ್ತೇನೆ. ಆದರೆ ಹೆಚ್ಚಿನ ಕಮೆಂಟ್​ ಮಾಡುವುದಿಲ್ಲ. ಯಾಕೆಂದರೆ ಈ ಪ್ರಕರಣ ಈಗ ಕೋರ್ಟ್​ನಲ್ಲಿದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​

ಪ್ರತೀ ಚಿತ್ರಕ್ಕೂ ಕೋಟಿಗಟ್ಟಲೆ ಪಡೆಯುವ ಅಮಿತಾಭ್ ‘ಚೆಹ್ರೆ’ ಚಿತ್ರಕ್ಕೆ ಸಂಭಾವನೆಯೇ ಪಡೆದಿಲ್ಲ; ಅಚ್ಚರಿಯ ಕಾರಣ ಇಲ್ಲಿದೆ

(Honey Singh opens up about his new project Kanta Lagaa with Kakkar Siblings)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!