ನಷ್ಟದಲ್ಲಿಲ್ಲ ಪೂಜಾ ಎಂಟರ್​ಟೇನ್​ಮೆಂಟ್; ಲಾಭ ಕಂಡ ರಕುಲ್ ಪತಿಯ ಸಂಸ್ಥೆ

ಬಾಲಿವುಡ್​ನಲ್ಲಿ ಪೂಜಾ ಎಂಟರ್​ಟೇನ್​ಮೆಂಟ್ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಅಕ್ಷಯ್ ಕುಮಾರ್ ಸಿನಿಮಾಗಳನ್ನು ಹೆಚ್ಚೆಚ್ಚು ನಿರ್ಮಿಸಿ ಈ ಸಂಸ್ಥೆ ನಷ್ಟ ಅನುಭವಿಸಿದೆ. ‘ಬಡೇ ಮಿಯಾ ಚೋಟೆ ಮಿಯಾ’, ‘ಗಣಪತ್’, ‘ಮಿಷನ್ ರಾಣಿಗಂಜ್​’ ರೀತಿಯ ಸಿನಿಮಾಗಳು ನಿರ್ಮಾಣ ಸಂಸ್ಥೆಗೆ ಹೊರೆಯಾಗಿದೆ.

ನಷ್ಟದಲ್ಲಿಲ್ಲ ಪೂಜಾ ಎಂಟರ್​ಟೇನ್​ಮೆಂಟ್; ಲಾಭ ಕಂಡ ರಕುಲ್ ಪತಿಯ ಸಂಸ್ಥೆ
ರಕುಲ್-ಜಾಕಿ
Follow us
|

Updated on: Jul 02, 2024 | 12:58 PM

ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಪೂಜಾ ಎಂಟರ್​ಟೇನ್​ಮೆಂಟ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಈ ಸಂಸ್ಥೆಯ ವಶು ಭಗ್ನಾನಿ ಹಾಗೂ ಜಾಕಿ ಭಗ್ನಾನಿಗೆ ಸಂಕಷ್ಟ ಉಂಟಾಗಿದೆ ಎನ್ನಲಾಗಿದೆ. 250 ಕೋಟಿ ರೂಪಾಯಿ ಸಾಲ ತೀರಿಸಲು ಮುಂಬೈನ ಎಳಂತಸ್ತಿನ ಕಚೇರಿಯನ್ನು ಇವರು ಮಾರಾಟ ಮಾಡಿದರು ಎಂದು ಕೂಡ ವರದಿ ಆಗಿದೆ. ಈಗ 2023-24ನೇ ಸಾಲಿನ ಇವರ ಲಾಭ-ನಷ್ಟದ ಲೆಕ್ಕ ಸಿಕ್ಕಿದೆ. ಈ ವರದಿ ಗಮನ ಸೆಳೆದಿದೆ.

ಪೂಜಾ ಎಂಟರ್​ಟೇನ್​ಮೆಂಟ್ ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಸಿನಿಮಾಗಳನ್ನು ಹೆಚ್ಚೆಚ್ಚು ನಿರ್ಮಿಸಿ ಈ ಸಂಸ್ಥೆ ಕೈ ಸುಟ್ಟುಕೊಂಡಿದೆ. ‘ಬಡೇ ಮಿಯಾ ಚೋಟೆ ಮಿಯಾ’, ‘ಗಣಪತ್’, ‘ಮಿಷನ್ ರಾಣಿಗಂಜ್​’ ರೀತಿಯ ಸಿನಿಮಾಗಳು ನಿರ್ಮಾಣ ಸಂಸ್ಥೆಗೆ ಹೊರೆಯಾಗಿದೆ. ಆದರೆ, ಸಾಲದ ವಿಚಾರವನ್ನು ವಶು ಅವರು ಅಲ್ಲಗಳೆದಿದ್ದಾರೆ. ಈ ಮಧ್ಯೆ ಸಂಸ್ಥೆ ಲಾಭದಲ್ಲಿದೆ ಎಂದು ವರದಿ ಆಗಿದೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಪೂಜಾ ಎಂಟರ್​ಟೇನ್​ಮೆಂಟ್ ಲಾಭದಲ್ಲಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಪೂಜಾ ಎಂಟರ್​ಟೇನ್​ಮೆಂಟ್ 58.07 ಕೋಟಿ ಆದಾಯ ಗಳಿಸಿದೆ. ಇತರ ಖರ್ಚುಗಳನ್ನು ಕಳೆದರೆ ಈ ಚಿತ್ರದಿಂದ ಸಂಸ್ಥೆಗೆ ಆದ ಲಾಭ ಕೇವಲ 8 ಕೋಟಿ ರೂಪಾಯಿ. 2022-23ನೇ ಸಾಲಿನಲ್ಲಿ ಆದಾಯ 46.6 ಕೋಟಿ ರೂಪಾಯಿ ಇತ್ತು ಮತ್ತು ಲಾಭ ಕೇವ 2.86 ಕೋಟಿ ರೂಪಾಯಿ ಆಗಿತ್ತು.

ಷೇರು ಮಾರುಕಟ್ಟೆಯಲ್ಲಿ ಪೂಜಾ ಎಂಟರ್​ಟೇನ್​ಮೆಂಟ್ (Vashu Bhagnani Industries Ltd) ಷೇರು ನಷ್ಟ ಅನುಭವಿಸುತ್ತಿದೆ. ಸೋಮವಾರ ಹಾಗೂ ಮಂಗಳವಾರ ಈ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸುತ್ತಿವೆ. ಈ ಸಂಸ್ಥೆಯ ಷೇರಿನ ಬೆಲೆ 406 ರೂಪಾಯಿ ತಲುಪಿತ್ತು. ಈಗ 283 ರೂಪಾಯಿಗೆ ಇಳಿದಿದೆ.

ಇದನ್ನೂ ಓದಿ: ತಮ್ಮ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡ ನಿರ್ಮಾಪಕನಿಗೆ ಅಕ್ಷಯ್​ ಕುಮಾರ್ ಸಹಾಯ

‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದ ಸಂಭಾವನೆಯನ್ನು ಈಗಲೇ ನೀಡೋದು ಬೇಡ ಎಂದು ಅಕ್ಷಯ್ ಹೇಳಿದ್ದಾರಂತೆ. ‘ಅಕ್ಷಯ್ ಕುಮಾರ್​ ಇತ್ತೀಚೆಗೆ ಭೇಟಿ ಆಗಿದ್ದರು. ಸಿನಿಮಾಗಾಗಿ ಕೆಲಸ ಮಾಡಿದ ಎಲ್ಲರಿಗೂ ಸಂಬಳ ನೀಡುವ ತನಕ ತಮ್ಮ ಸಂಭಾವನೆಯನ್ನು ನೀಡುವುದು ಬೇಡ ಅಂತ ಅವರು ಹೇಳಿದ್ದಾರೆ. ನಮ್ಮ ಸಂದರ್ಭವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಅಕ್ಷಯ್​ ಕುಮಾರ್ ಅವರಿಗೆ ಧನ್ಯವಾದಗಳು’ ಎಂದು ಜಾಕಿ ಭಗ್ನಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯ ಅಸಮಂಜಸ ಉತ್ತರ
ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯ ಅಸಮಂಜಸ ಉತ್ತರ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಪ್ರಯಾಣಕರಿದ್ದ ಬಸ್!
ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಪ್ರಯಾಣಕರಿದ್ದ ಬಸ್!
Team India: ಟೀಮ್ ಇಂಡಿಯಾದ ಚಾಂಪಿಯನ್ಸ್​ ಜೆರ್ಸಿ ಅನಾವರಣ
Team India: ಟೀಮ್ ಇಂಡಿಯಾದ ಚಾಂಪಿಯನ್ಸ್​ ಜೆರ್ಸಿ ಅನಾವರಣ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಆರಂಭದಲ್ಲೇ 100 ಅಡಿ ನೀರು!
ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಆರಂಭದಲ್ಲೇ 100 ಅಡಿ ನೀರು!
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್