AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

‘ಲಾಕ್​ ಅಪ್​’ ಸುದ್ದಿಗೋಷ್ಠಿಯಲ್ಲಿ ತಮಗೆ ಸಂಬಂಧವೇ ಇಲ್ಲದ ದೀಪಿಕಾ ಪಡುಕೋಣೆ ವಿಚಾರವನ್ನು ಎಳೆದು ತಂದಿದ್ದಕ್ಕಾಗಿ ಪತ್ರಕರ್ತನಿಗೆ ಕಂಗನಾ ರಣಾವತ್​ ಚಳಿ ಬಿಡಿಸಿದರು. ಅದು ವಿವಾದಕ್ಕೆ ಕಾರಣ ಆಗಿದೆ.

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​
ಕಂಗನಾ ರಣಾವತ್​, ದೀಪಿಕಾ ಪಡುಕೋಣೆ
TV9 Web
| Edited By: |

Updated on:Feb 04, 2022 | 8:15 AM

Share

ನಟಿ ಕಂಗನಾ ರಣಾವತ್ (Kangana Ranaut)​ ಅವರ ವ್ಯಕ್ತಿತ್ವ ಯಾವ ರೀತಿ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ಆ ವಿಚಾರದಲ್ಲಿ ಕಾಂಟ್ರವರ್ಸಿ ಆದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ನೇರ ನಡೆ-ನುಡಿಯ ಕಾರಣದಿಂದ ಬಾಲಿವುಡ್​ನಲ್ಲಿ ಕಂಗನಾ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇಂದು ಅವರು ಓರ್ವ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಕಂಗನಾ ಅವರ ಹೊಸ ರಿಯಾಲಿಟಿ ಶೋ ‘ಲಾಕ್​ ಅಪ್​’ ಆರಂಭ ಆಗುತ್ತಿದೆ. ಇದರ ಪ್ರಚಾರದ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಇದರಲ್ಲಿ ಪತ್ರಕರ್ತರೊಬ್ಬರು ನಟಿ ದೀಪಿಕಾ ಪಡುಕೋಣೆ ( Deepika Padukone) ಬಟ್ಟೆಯ ಕಾಂಟ್ರವರ್ಸಿ ಬಗ್ಗೆ ಪ್ರಸ್ತಾಪ ಮಾಡಿದರು. ಅದರಿಂದ ಕಂಗನಾಗೆ ಕೊಂಚ ಕಿರಿಕಿರಿ ಆಯಿತು. ಅವರು ನೇರವಾಗಿಯೇ ಅದಕ್ಕೆ ತಿರುಗೇಟು ನೀಡಿದರು. ಈ ಸುದ್ದಿಗೋಷ್ಠಿಗೆ ಸಂಬಂಧವೇ ಇಲ್ಲದ ದೀಪಿಕಾ ಪಡುಕೋಣೆ ಬಗ್ಗೆ ಪ್ರಶ್ನೆ ಎದುರಾಗಿದ್ದು ಯಾಕೆ ಎಂಬುದನ್ನು ಕಂಗನಾ ರಣಾವತ್​ ಅವರು ಸ್ಥಳದಲ್ಲೇ ಬಯಲು ಮಾಡಿದರು. ಇದೆಲ್ಲವೂ ದೀಪಿಕಾ ನಟನೆಯ ‘ಗೆಹರಾಯಿಯಾ’ (Gehraiyaan Movie) ಸಿನಿಮಾದ ಪ್ರಚಾರ ತಂತ್ರ ಎಂದು ಕಂಗನಾ ಖಡಕ್​ ಉತ್ತರ ನೀಡಿದರು.

ದೀಪಿಕಾ ಪಡುಕೋಣೆ ನಟಿಸಿರುವ ‘ಗೆಹರಾಯಿಯಾ’ ಸಿನಿಮಾ ಹಲವು ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಸಖತ್​ ಬೋಲ್ಡ್​ ಆಗಿ ನಟಿಸಿದ್ದಾರೆ. ಅಲ್ಲದೇ ಪ್ರಚಾರದ ಸಮಯದಲ್ಲೂ ಅವರು ಚಿಕ್ಕ ಬಟ್ಟೆ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಕೆಲವು ನೆಟ್ಟಗರು ಟ್ರೋಲ್​ ಮಾಡಿದ್ದರು. ಟ್ರೋಲ್​ ಮಾಡಿದವರ ವಿರುದ್ಧ ಸೆಲೆಬ್ರಿಟಿಗಳು ಗರಂ ಆಗಿದ್ದರು. ಇದೇ ವಿಚಾರವನ್ನು ಕಂಗನಾಗೆ ಕೇಳಲಾಯಿತು. ‘ಲಾಕ್​ ಅಪ್​’ ಸುದ್ದಿಗೋಷ್ಠಿಯಲ್ಲಿ ತಮಗೆ ಸಂಬಂಧವೇ ಇಲ್ಲದ ವಿಚಾರವನ್ನು ಎಳೆದು ತಂದಿದ್ದಕ್ಕಾಗಿ ಆ ಪತ್ರಕರ್ತನಿಗೆ ಕಂಗನಾ ಚಳಿ ಬಿಡಿಸಿದರು.

‘ಯಾರಿಗೆ ಧ್ವನಿ ಇಲ್ಲವೋ ಅವರ ಪರವಾಗಿ ಮಾತನಾಡಲು ನಾನು ಇಲ್ಲಿದ್ದೇನೆ. ದೀಪಿಕಾ ಪರವಾಗಿ ನಾನೇಕೆ ಮಾತನಾಡಬೇಕು? ಅವರೇ ಈ ಬಗ್ಗೆ ವಾದ ಮಾಡಬಹುದು. ಇಲ್ಲಿ ನಾನು ಅವರ ಸಿನಿಮಾವನ್ನು ಪ್ರಚಾರ ಮಾಡಲು ಸಾಧ್ಯವಿಲ್ಲ, ಕುಳಿತುಕೊಳ್ಳಿ’ ಎಂದು ಪತ್ರಕರ್ತನಿಗೆ ಕಂಗನಾ ತಿರುಗೇಟು ನೀಡಿದರು. ಅಷ್ಟಕ್ಕೇ ಸುಮ್ಮನಾಗದ ಪತ್ರಕರ್ತನಿಂದ ಮತ್ತೆ ಪ್ರಶ್ನೆ ಮುಂದುವರಿಯಿತು. ಆಗ ಕಂಗನಾ ಇನ್ನಷ್ಟು ಗರಂ ಆದರು.

‘ನೀವು ಆ ಸಿನಿಮಾದ ಹೆಸರು ಹೇಳಿದ್ದೀರಿ. ಆ ಸಿನಿಮಾದ ಪಬ್ಲಿಸಿಟಿ ಟೀಮ್​ನವರೇ ನಿಮ್ಮನ್ನು ಇಲ್ಲಿಗೆ ಕಳಿಸಿದ್ದಾರೆ. ಅಷ್ಟನ್ನೂ ಅರ್ಥ ಮಾಡಿಕೊಳ್ಳದೇ ಇರುವಷ್ಟು ಮುಗ್ಧೆ ನಾನಲ್ಲ’ ಎಂದು ಕಂಗನಾ ಉತ್ತರಿಸಿದರು. ಅವರು ಉತ್ತರ ನೀಡಿದ ಧಾಟಿ ಸ್ವಲ್ಪ ಕಟುವಾಗಿತ್ತು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ ಅಭಿನಯದ ‘ಗೆಹರಾಯಿಯಾ’ ಸಿನಿಮಾ ಫೆ.11ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆ ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ:

‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?

ಇತರರಿಗೆ ಕೊವಿಡ್​ ಹರಡುವಂತೆ ವರ್ತಿಸಿದ ಕಂಗನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್: ನಟಿ ಮಾಡಿದ ತಪ್ಪೇನು?​

Published On - 8:06 am, Fri, 4 February 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್