ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

‘ಲಾಕ್​ ಅಪ್​’ ಸುದ್ದಿಗೋಷ್ಠಿಯಲ್ಲಿ ತಮಗೆ ಸಂಬಂಧವೇ ಇಲ್ಲದ ದೀಪಿಕಾ ಪಡುಕೋಣೆ ವಿಚಾರವನ್ನು ಎಳೆದು ತಂದಿದ್ದಕ್ಕಾಗಿ ಪತ್ರಕರ್ತನಿಗೆ ಕಂಗನಾ ರಣಾವತ್​ ಚಳಿ ಬಿಡಿಸಿದರು. ಅದು ವಿವಾದಕ್ಕೆ ಕಾರಣ ಆಗಿದೆ.

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​
ಕಂಗನಾ ರಣಾವತ್​, ದೀಪಿಕಾ ಪಡುಕೋಣೆ
Follow us
| Updated By: ಮದನ್​ ಕುಮಾರ್​

Updated on:Feb 04, 2022 | 8:15 AM

ನಟಿ ಕಂಗನಾ ರಣಾವತ್ (Kangana Ranaut)​ ಅವರ ವ್ಯಕ್ತಿತ್ವ ಯಾವ ರೀತಿ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ಆ ವಿಚಾರದಲ್ಲಿ ಕಾಂಟ್ರವರ್ಸಿ ಆದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ನೇರ ನಡೆ-ನುಡಿಯ ಕಾರಣದಿಂದ ಬಾಲಿವುಡ್​ನಲ್ಲಿ ಕಂಗನಾ ಅವರು ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಇಂದು ಅವರು ಓರ್ವ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಕಂಗನಾ ಅವರ ಹೊಸ ರಿಯಾಲಿಟಿ ಶೋ ‘ಲಾಕ್​ ಅಪ್​’ ಆರಂಭ ಆಗುತ್ತಿದೆ. ಇದರ ಪ್ರಚಾರದ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಇದರಲ್ಲಿ ಪತ್ರಕರ್ತರೊಬ್ಬರು ನಟಿ ದೀಪಿಕಾ ಪಡುಕೋಣೆ ( Deepika Padukone) ಬಟ್ಟೆಯ ಕಾಂಟ್ರವರ್ಸಿ ಬಗ್ಗೆ ಪ್ರಸ್ತಾಪ ಮಾಡಿದರು. ಅದರಿಂದ ಕಂಗನಾಗೆ ಕೊಂಚ ಕಿರಿಕಿರಿ ಆಯಿತು. ಅವರು ನೇರವಾಗಿಯೇ ಅದಕ್ಕೆ ತಿರುಗೇಟು ನೀಡಿದರು. ಈ ಸುದ್ದಿಗೋಷ್ಠಿಗೆ ಸಂಬಂಧವೇ ಇಲ್ಲದ ದೀಪಿಕಾ ಪಡುಕೋಣೆ ಬಗ್ಗೆ ಪ್ರಶ್ನೆ ಎದುರಾಗಿದ್ದು ಯಾಕೆ ಎಂಬುದನ್ನು ಕಂಗನಾ ರಣಾವತ್​ ಅವರು ಸ್ಥಳದಲ್ಲೇ ಬಯಲು ಮಾಡಿದರು. ಇದೆಲ್ಲವೂ ದೀಪಿಕಾ ನಟನೆಯ ‘ಗೆಹರಾಯಿಯಾ’ (Gehraiyaan Movie) ಸಿನಿಮಾದ ಪ್ರಚಾರ ತಂತ್ರ ಎಂದು ಕಂಗನಾ ಖಡಕ್​ ಉತ್ತರ ನೀಡಿದರು.

ದೀಪಿಕಾ ಪಡುಕೋಣೆ ನಟಿಸಿರುವ ‘ಗೆಹರಾಯಿಯಾ’ ಸಿನಿಮಾ ಹಲವು ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಸಖತ್​ ಬೋಲ್ಡ್​ ಆಗಿ ನಟಿಸಿದ್ದಾರೆ. ಅಲ್ಲದೇ ಪ್ರಚಾರದ ಸಮಯದಲ್ಲೂ ಅವರು ಚಿಕ್ಕ ಬಟ್ಟೆ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೇ ಇಟ್ಟುಕೊಂಡು ಕೆಲವು ನೆಟ್ಟಗರು ಟ್ರೋಲ್​ ಮಾಡಿದ್ದರು. ಟ್ರೋಲ್​ ಮಾಡಿದವರ ವಿರುದ್ಧ ಸೆಲೆಬ್ರಿಟಿಗಳು ಗರಂ ಆಗಿದ್ದರು. ಇದೇ ವಿಚಾರವನ್ನು ಕಂಗನಾಗೆ ಕೇಳಲಾಯಿತು. ‘ಲಾಕ್​ ಅಪ್​’ ಸುದ್ದಿಗೋಷ್ಠಿಯಲ್ಲಿ ತಮಗೆ ಸಂಬಂಧವೇ ಇಲ್ಲದ ವಿಚಾರವನ್ನು ಎಳೆದು ತಂದಿದ್ದಕ್ಕಾಗಿ ಆ ಪತ್ರಕರ್ತನಿಗೆ ಕಂಗನಾ ಚಳಿ ಬಿಡಿಸಿದರು.

‘ಯಾರಿಗೆ ಧ್ವನಿ ಇಲ್ಲವೋ ಅವರ ಪರವಾಗಿ ಮಾತನಾಡಲು ನಾನು ಇಲ್ಲಿದ್ದೇನೆ. ದೀಪಿಕಾ ಪರವಾಗಿ ನಾನೇಕೆ ಮಾತನಾಡಬೇಕು? ಅವರೇ ಈ ಬಗ್ಗೆ ವಾದ ಮಾಡಬಹುದು. ಇಲ್ಲಿ ನಾನು ಅವರ ಸಿನಿಮಾವನ್ನು ಪ್ರಚಾರ ಮಾಡಲು ಸಾಧ್ಯವಿಲ್ಲ, ಕುಳಿತುಕೊಳ್ಳಿ’ ಎಂದು ಪತ್ರಕರ್ತನಿಗೆ ಕಂಗನಾ ತಿರುಗೇಟು ನೀಡಿದರು. ಅಷ್ಟಕ್ಕೇ ಸುಮ್ಮನಾಗದ ಪತ್ರಕರ್ತನಿಂದ ಮತ್ತೆ ಪ್ರಶ್ನೆ ಮುಂದುವರಿಯಿತು. ಆಗ ಕಂಗನಾ ಇನ್ನಷ್ಟು ಗರಂ ಆದರು.

‘ನೀವು ಆ ಸಿನಿಮಾದ ಹೆಸರು ಹೇಳಿದ್ದೀರಿ. ಆ ಸಿನಿಮಾದ ಪಬ್ಲಿಸಿಟಿ ಟೀಮ್​ನವರೇ ನಿಮ್ಮನ್ನು ಇಲ್ಲಿಗೆ ಕಳಿಸಿದ್ದಾರೆ. ಅಷ್ಟನ್ನೂ ಅರ್ಥ ಮಾಡಿಕೊಳ್ಳದೇ ಇರುವಷ್ಟು ಮುಗ್ಧೆ ನಾನಲ್ಲ’ ಎಂದು ಕಂಗನಾ ಉತ್ತರಿಸಿದರು. ಅವರು ಉತ್ತರ ನೀಡಿದ ಧಾಟಿ ಸ್ವಲ್ಪ ಕಟುವಾಗಿತ್ತು ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ ಅಭಿನಯದ ‘ಗೆಹರಾಯಿಯಾ’ ಸಿನಿಮಾ ಫೆ.11ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆ ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕರ್ವ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇದನ್ನೂ ಓದಿ:

‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?

ಇತರರಿಗೆ ಕೊವಿಡ್​ ಹರಡುವಂತೆ ವರ್ತಿಸಿದ ಕಂಗನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್: ನಟಿ ಮಾಡಿದ ತಪ್ಪೇನು?​

Published On - 8:06 am, Fri, 4 February 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ