ರಾಜಮೌಳಿಯನ್ನು ಟೀಕಿಸಿದ ಬಲಪಂಥೀಯರಿಗೆ ಖಡಕ್ ಎಚ್ಚರಿಕೆ ನೀಡಿದ ಕಂಗನಾ ರಣಾವತ್

ನ್ಯೂಯಾರ್ಕರ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಜಮೌಳಿ ಅವರು, ‘ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ' ಎಂದು ಹೇಳಿದ್ದರು.

ರಾಜಮೌಳಿಯನ್ನು ಟೀಕಿಸಿದ ಬಲಪಂಥೀಯರಿಗೆ ಖಡಕ್ ಎಚ್ಚರಿಕೆ ನೀಡಿದ ಕಂಗನಾ ರಣಾವತ್
ಕಂಗನಾ-ರಾಜಮೌಳಿ
Follow us
|

Updated on: Feb 18, 2023 | 6:21 PM

ನಟಿ ಕಂಗನಾ ರಣಾವತ್ (Kangana Ranaut) ಅವರು ಸದಾ ಎಲ್ಲರನ್ನೂ ಟೀಕೆ ಮಾಡುತ್ತಾ ಇರುತ್ತಾರೆ. ಚಿತ್ರರಂಗದ ಬಹುತೇಕರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಈಗ ಕಂಗನಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರಾಜಮೌಳಿ ಅವರು ಮಾತನಾಡುತ್ತಾ ಧರ್ಮದ ಬಗ್ಗೆ ಮಾತನಾಡಿದ್ದರು. ತಾವು ಧರ್ಮದಿಂದ ದೂರ ಇರುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಅನೇಕರು ಅವರನ್ನು ಟೀಕೆ ಮಾಡಿದ್ದರು. ಈಗ ಕಂಗನಾ ರಣಾವತ್ ಅವರು ರಾಜಮೌಳಿ ಪರ ಬ್ಯಾಟ್ ಬೀಸಿದ್ದಾರೆ.

ನ್ಯೂಯಾರ್ಕರ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಜಮೌಳಿ ಅವರು, ‘ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ’ ಎಂದು ಹೇಳಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು. ಈಗ ಕಂಗನಾ ಅವರು ರಾಜಮೌಳಿ ಪರ ಮಾತನಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿಮೂಡಿಸಿದೆ.

‘ಇದಕ್ಕೆ ಅತಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಎಲ್ಲ ಕಡೆ ಕೇಸರಿ ಬಾವುಟ ತೆಗೆದುಕೊಂಡು ಹೋಗದೇ ಇದ್ದರೆ ತೊಂದರೆ ಏನಿಲ್ಲ. ಮಾತಿಗಿಂತ ನಮ್ಮ ಕೆಲಸ ದೊಡ್ಡದಾಗಿ ಕಾಣುತ್ತದೆ. ನಾವು ಎಲ್ಲರಿಗೋಸ್ಕರ ಸಿನಿಮಾ ಮಾಡುತ್ತೇವೆ. ನಾವು ಕಲಾವಿದರು ದುರ್ಬಲರಾಗಿದ್ದೇವೆ. ವಿಶೇಷವಾಗಿ ಬಲಪಂಥೀಯರು ಎಂದು ಕರೆಯುವವರಿಂದ ನಮಗೆ ಯಾವುದೇ ಬೆಂಬಲ ಸಿಗದ ಕಾರಣ, ನಾವು ಸಂಪೂರ್ಣವಾಗಿ ನಮ್ಮ ಕಾಲ ಮೇಲೆ ನಿಂತಿದ್ದೇವೆ. ದಯವಿಟ್ಟು ಕುಳಿತುಕೊಳ್ಳಿ, ಧೈರ್ಯ ಮಾಡಬೇಡಿ. ಮಳೆಯಲ್ಲಿ ಜ್ವಾಲೆಯಂತಿರುವ ರಾಜಮೌಳಿ ವಿರುದ್ಧ ಮಾತನಾಡಿದರೆ ನಾನು ಏನನ್ನೂ ಸಹಿಸುವುದಿಲ್ಲ. ಅವರು ಒಬ್ಬ ಮೇಧಾವಿ ಮತ್ತು ರಾಷ್ಟ್ರವಾದಿ. ಅವರು ನಮ್ಮ ಜೊತೆ ಇರೋದು ನಮ್ಮ ಅದೃಷ್ಟ’ ಎಂದು ಕಂಗನಾ ಹೇಳಿದ್ದಾರೆ.

ರಾಜಮೌಳಿ ಹೇಳಿದ್ದೇನು?

‘ನಾನು ನಿಧಾನವಾಗಿ ಧರ್ಮದಿಂದ ದೂರ ಸರಿಯಲು ಪ್ರಾರಂಭಿಸಿದೆ. ಆ ಕಾಲದಲ್ಲಿ ಮಹಾಭಾರತ ಅಥವಾ ರಾಮಾಯಣದಂತಹ ಕಥೆಗಳ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ನಾನು ಅವುಗಳ ಧಾರ್ಮಿಕ ಅಂಶಗಳಿಂದ ದೂರ ತಳ್ಳಲು ಪ್ರಾರಂಭಿಸಿದೆ. ಆದರೆ ನನ್ನೊಂದಿಗೆ ಉಳಿದುಕೊಂಡಿದ್ದು ಹೇಗೆ ಕಥೆ ಹೇಳಬೇಕು ಎನ್ನುವುದು’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ