ಊರ್ಮಿಳಾಗೆ ಟಿಕೆಟ್ ದೊರೆತಾಗ ಏನು ಹೇಳಿದ್ದರು ಕಂಗನಾ: ವೈರಲ್ ಆಗುತ್ತಿದೆ ಹಳೆ ವಿಡಿಯೋ

Kangana Ranaut: ನಟಿ ಕಂಗನಾ ರನೌತ್ ವಿರುದ್ಧ ಕಾಂಗ್ರೆಸ್ ಸದಸ್ಯೆ ಮಾಡಿರುವ ಕೀಳು ಅಭಿರುಚಿ ಹೇಳಿಕೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ 2019ರಲ್ಲಿ ಕಾಂಗ್ರೆಸ್​ ಟಿಕೆಟ್ ಪಡೆದಿದ್ದ ಊರ್ಮಿಳಾ ಬಗ್ಗೆ ಇದೇ ಕಂಗನಾ ನೀಡಿದ್ದ ಅತ್ಯಂತ ಕೀಳು ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಊರ್ಮಿಳಾಗೆ ಟಿಕೆಟ್ ದೊರೆತಾಗ ಏನು ಹೇಳಿದ್ದರು ಕಂಗನಾ: ವೈರಲ್ ಆಗುತ್ತಿದೆ ಹಳೆ ವಿಡಿಯೋ
Follow us
|

Updated on:Mar 27, 2024 | 10:59 AM

ಬಾಲಿವುಡ್ (Bollywood) ನಟಿ ಕಂಗನಾ ರನೌತ್ (Kangana Ranaut)​ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಂಗನಾ ರನೌತ್​ಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್​ನ ಸುಪ್ರಿಯಾ ಶ್ರೀನಾಥೆ ಎಂಬುವರು ಕಂಗನಾರ ಗ್ಲಾಮರಸ್ ಫೋಟೊ ಒಂದನ್ನು ಹಂಚಿಕೊಂಡು, ‘ಮಂಡಿಯಲ್ಲಿ (ಮಾರುಕಟ್ಟೆ) ಇಂದಿನ ರೇಟೆಷ್ಟು?’ ಎಂದು ಬರೆದುಕೊಂಡಿದ್ದರು. ಸುಪ್ರಿಯಾರ ಈ ಪೋಸ್ಟ್​ಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್​ನ ಮುಖಂಡರು ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾ ಸಹ ಆ ಪೋಸ್ಟ್​ ಅನ್ನು ಡಿಲೀಟ್ ಮಾಡಿದ್ದಾರೆ. ಕಂಗನಾ ವಿರುದ್ಧ ಸುಪ್ರಿಯಾ ಕೀಳು ಅಭಿರುಚಿಯ ಪದ ಬಳಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಕೆಲ ವರ್ಷದ ಹಿಂದೆ ಇದೇ ಕಂಗನಾ, ಊರ್ಮಿಳಾ ಮತೋಡ್ಕರ್​ಗೆ ಟಿಕೆಟ್ ದೊರೆತಾಗ ಮಾಡಿದ್ದ ಕಮೆಂಟ್ ಸಖತ್ ವೈರಲ್ ಆಗುತ್ತಿದೆ.

ನಟಿ, ಊರ್ಮಿಳಾ ಮತೋಡ್ಕರ್​ಗೆ 2019ರಲ್ಲಿ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಿತ್ತು. ಆ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರನೌತ್, ‘ಆಕೆಯೊಬ್ಬ ಸಾಫ್ಟ್ ಪಾರ್ನ್ ಸ್ಟಾರ್’ ಎಂದಿದ್ದರು. ಆಕೆ ತನ್ನ ನಟನೆಯಿಂದ ಜನಪ್ರಿಯವಾಗಿಲ್ಲ, ಬೇರೆ ಕಾರಣಗಳಿಂದ ಮಾತ್ರವೇ ಜನಪ್ರಿಯರಾಗಿದ್ದಾರೆ. ಆಕೆ ಸಾಫ್ಟ್ ಪಾರ್ನ್ ನಿಂದಲೇ ಜನಪ್ರಿಯತೆ ಗಳಿಸಿದ್ದಾಳೆ. ಆಕೆಗೆ ಟಿಕೆಟ್ ದೊರಕಿದೆ ಎಂದ ಮೇಲೆ ನನಗೇಕೆ ಟಿಕೆಟ್ ಸಿಗಬಾರದು’ ಎಂದು ಕಂಗನಾ ರನೌತ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ದೇವಸ್ಥಾನದ ಕಸ ಗುಡಿಸಿದ ಕಂಗನಾ ರನೌತ್ ಮೇಲೆ ಟೀಕಾಪ್ರಹಾರ: ಯಾಕೆ?

ಆಗ ಕಂಗನಾ ರನೌತ್, ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಊರ್ಮಿಳಾ ವಿರುದ್ಧ ಅತ್ಯಂತ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದರು. ಈಗ ಇದೇ ಕಂಗನಾ ವಿರುದ್ಧ ಮತ್ತೊಬ್ಬರು ಕೀಳು ಹೇಳಿಕೆ ನೀಡಿದ್ದಾರೆ. ಆದರೆ ಈಗ ಕಂಗನಾ, ತಮ್ಮ ವಿರುದ್ಧದ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಂಗನಾ, ಊರ್ಮಿಳಾ ವಿರುದ್ಧ ಅವಾಚ್ಯ ಹೇಳಿಕೆ ನೀಡಿದಾಗ ಸುಮ್ಮನಿದ್ದಾಗ ಬಿಜೆಪಿ ಮುಖಂಡರು ಈಗ ಕಂಗನಾ ವಿರುದ್ಧ ಹೇಳಿಕೆ ಬಂದಾಗ ಸಿಡಿದೆದ್ದಿದ್ದಾರೆ. ಊರ್ಮಿಳಾ ವಿರುದ್ಧ ಕಂಗನಾ ಆಡಿದ ಮಾತನ್ನು ಖಂಡಿಸದಿದ್ದ ಕಾಂಗ್ರೆಸ್ ಮುಖಂಡರು, ಈಗ ಕಂಗನಾ ವಿರುದ್ಧ ತಮ್ಮದೇ ಸದಸ್ಯೆ ಮಾಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.

ದ್ವೇಷಭರಿತ ಹೇಳಿಕೆಗಳು, ಮಾತ್ಸರ್ಯದ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಗಳು, ಸಹ ನಟ-ನಟಿಯರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳು ಕಂಗನಾ ರನೌತ್​ಗೆ ಹೊಸದೇನೂ ಅಲ್ಲ. ಆಗಾಗ್ಗೆ ಕಂಗನಾ ರನೌತ್ ತಮ್ಮ ನಾಲಗೆ ಹರಿಬಿಡುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ವಿವಾದಗಳ್ನು ಸಹ ಮೈಮೇಲೆ ಎಳೆದುಕೊಂಡಿದ್ದಾರೆ. ರೈತ ಹೋರಾಟದ ಬಗ್ಗೆ ನೀಡಿದ್ದ ಹೇಳಿಕೆಯಿಂದ ದೇಶದ ಹಲವೆಡೆ ಕಂಗನಾ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Wed, 27 March 24

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು