ಬಾಲಿವುಡ್​ ಮಂದಿಯನ್ನು ಬೆರಗುಗೊಳಿಸಿದ ‘12th ಫೇಲ್​’; ಕರಣ್​ ಕಡೆಯಿಂದಲೂ ಚಪ್ಪಾಳೆ

‘12th ಫೇಲ್​’ ಸಿನಿಮಾದ ಯಶಸ್ಸಿನ ಬಳಿಕ ವಿಕ್ರಾಂತ್​ ಮಾಸ್ಸಿ ಅವರ ಫ್ಯಾನ್​ ಫಾಲೋಯಿಂಗ್​ ಹೆಚ್ಚಾಗಿದೆ. ಅವರಿಗೆ ಜೋಡಿಯಾಗಿ ನಟಿಸಿದ ಮೇಧಾ ಶಂಕರ್​ ಕೂಡ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಬಡ ಹುಡುಗನೊಬ್ಬ ಐಪಿಎಸ್​ ಅಧಿಕಾರಿ ಆಗುವ ನೈಜ ಕಥೆಯನ್ನು ಆಧರಿಸಿ ‘12th ಫೇಲ್​’ ಸಿನಿಮಾ ಮೂಡಿಬಂದಿದೆ.

ಬಾಲಿವುಡ್​ ಮಂದಿಯನ್ನು ಬೆರಗುಗೊಳಿಸಿದ ‘12th ಫೇಲ್​’; ಕರಣ್​ ಕಡೆಯಿಂದಲೂ ಚಪ್ಪಾಳೆ
ವಿಕ್ರಾಂತ್​ ಮಾಸ್ಸಿ, ಕರಣ್​ ಜೋಹರ್​
Follow us
| Updated By: ಮದನ್​ ಕುಮಾರ್​

Updated on: Jan 18, 2024 | 7:27 PM

ಪ್ರತಿಭಾವಂತ ನಟ ವಿಕ್ರಾಂತ್​ ಮಾಸ್ಸಿ (Vikrant Massey) ಅವರು ‘12th ಫೇಲ್​’ ಸಿನಿಮಾ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅನೇಕ ವರ್ಷಗಳಿಂದ ಅವರು ಬಾಲಿವುಡ್​ನಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಈ ಮಟ್ಟದ ಜನಪ್ರಿಯತೆ ಅವರಿಗೆ ಈ ಮೊದಲು ಸಿಕ್ಕಿರಲಿಲ್ಲ. 12th ಫೇಲ್​’ ಸಿನಿಮಾ (12th Fail) ಬಾಕ್ಸ್​ ಆಫೀಸ್​ನಲ್ಲಿ ಹಿಟ್​ ಆಗಿದ್ದೂ ಅಲ್ಲದೇ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ಖ್ಯಾತ ನಿರ್ಮಾಪಕ ಕರಣ್​ ಜೋಹರ್​ (Karan Johar) ಅವರು ಈ ಸಿನಿಮಾವನ್ನು ನೋಡಿ ಹೊಗಳಿದ್ದಾರೆ. ರಿಯಲ್​ ಲೈಫ್​ ಕಹಾನಿ ಈ ಸಿನಿಮಾದಲ್ಲಿದೆ. ಮೇಕಿಂಗ್​, ಅಭಿನಯ ಮುಂತಾದ ವಿಚಾರಗಳಲ್ಲಿ ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಇತ್ತೀಚೆಗೆ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಕರಣ್​ ಜೋಹರ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ಯಾವ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಬೇಕು? ಯಾವ ಸಿನಿಮಾ ಚಿತ್ರಮಂದಿರದಲ್ಲಿ ತೆರೆಕಾಣಬೇಕು ಎಂಬುದಕ್ಕೆ ಯಾವುದಾದರೂ ಸೂತ್ರ ಇದೆಯೇ ಎಂದು ಕರಣ್​ ಜೋಹರ್​ ಅವರಿಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸುವಾಗ ‘12th ಫೇಲ್​’ ಸಿನಿಮಾ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಒಟಿಟಿಗೆ ಬಂದ್ಮೇಲೂ ಚಿತ್ರಮಂದಿರದಲ್ಲಿ ಕೋಟಿ ರೂಪಾಯಿ ಕಲೆಕ್ಷನ್​; ಇದು ‘12th ಫೇಲ್​’ ತಾಕತ್ತು

‘ಆ ರೀತಿ ನಿಮಯ ಇಲ್ಲ. 12th ಫೇಲ್​ ಚಿತ್ರವೇ ಅದಕ್ಕೆ ಉದಾಹರಣೆ. ಇದು ಒಟಿಟಿಗೆ ಸರಿಯಾಗುವಂತಹ ಸಿನಿಮಾ ಎಂದು ಕೆಲವರು ಹೇಳಬಹುದು. ಆದರೆ ಆ ಸಿನಿಮಾ ಚಿತ್ರಮಂದಿರದಲ್ಲೂ ಉತ್ತಮವಾಗಿ ಪ್ರದರ್ಶನ ಕಂಡಿದೆ. ಹಿರಿಯ ನಿರ್ದೇಶಕ ವಿಧು ವಿನೋದ್​ ಚೋಪ್ರಾ ಅವರು ತುಂಬ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ’ ಎಂದು ಕರಣ್​ ಜೋಹರ್​ ಹೇಳಿದ್ದಾರೆ. ‘ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​’ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ: ‘12th ಫೇಲ್​’ ಚಿತ್ರದಿಂದ ಹೆಚ್ಚಿತು ವಿಕ್ರಾಂತ್​ ಮಾಸ್ಸಿ ಜನಪ್ರಿಯತೆ

‘12th ಫೇಲ್​’ ಸಿನಿಮಾದ ಯಶಸ್ಸಿನ ಬಳಿಕ ವಿಕ್ರಾಂತ್​ ಮಾಸ್ಸಿ ಅವರ ಫ್ಯಾನ್​ ಫಾಲೋಯಿಂಗ್​ ಹೆಚ್ಚಾಗಿದೆ. ಅವರಿಗೆ ಜೋಡಿಯಾಗಿ ನಟಿಸಿದ ಮೇಧಾ ಶಂಕರ್​ ಕೂಡ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಬಹಳ ಹಿಂದುಳಿದ ಪ್ರದೇಶದಿಂದ ಬಂದ ಬಡ ಹುಡುಗನೊಬ್ಬ ಐಪಿಎಸ್​ ಅಧಿಕಾರಿ ಆಗುವ ನೈಜ ಕಥೆಯನ್ನು ಆಧರಿಸಿ ‘12th ಫೇಲ್​’ ಸಿನಿಮಾ ಮೂಡಿಬಂದಿದೆ. ಅನೇಕರಿಗೆ ಈ ಸಿನಿಮಾ ಸ್ಫೂರ್ತಿ ಆಗುವಂತಿದೆ. ಹೃತಿಕ್​ ರೋಷನ್​, ಕಂಗನಾ ರಣಾವತ್​, ಜಾನ್ವಿ ಕಪೂರ್​ ಮುಂತಾದ ಸೆಲೆಬ್ರಿಟಿಗಳು ಸಹ ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ