AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಾ ಅಲಿ ಖಾನ್ ಓಪನ್ ಟಾಕ್ ಬಗ್ಗೆ ಅಪ್ಸೆಟ್ ಆದ ಕಾರ್ತಿಕ್ ಆರ್ಯನ್?

ಕಾರ್ತಿಕ್ ಆಡಿದ ಮಾತುಗಳು ಸಾಕಷ್ಟು ಅರ್ಥಗಳನ್ನು ಹೊಂದಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳು ನೇರವಾಗಿ ಸಾರಾ ಹಾಗೂ ಅನನ್ಯಾ ಅವರನ್ನು ಉದ್ದೇಶಿಸಿ ಹೇಳಿದ ಮಾತು ಎಂದು ಕೂಡ ಹೇಳಲಾಗುತ್ತಿದೆ.

ಸಾರಾ ಅಲಿ ಖಾನ್ ಓಪನ್ ಟಾಕ್ ಬಗ್ಗೆ ಅಪ್ಸೆಟ್ ಆದ ಕಾರ್ತಿಕ್ ಆರ್ಯನ್?
ಸಾರಾ-ಕಾರ್ತಿಕ್
ರಾಜೇಶ್ ದುಗ್ಗುಮನೆ
|

Updated on: Nov 23, 2023 | 10:29 AM

Share

‘ಕಾಫಿ ವಿತ್ ಕರಣ್’ ಶೋನಲ್ಲಿ ಎದುರಾಗುವ ಬಹುತೇಕ ವಿಚಾರಗಳು ಕಾಂಟ್ರವರ್ಸಿ ಹುಟ್ಟುಹಾಕುತ್ತವೆ. ಲವ್​, ಅಫೇರ್ ಕುರಿತು ಹೆಚ್ಚಿನ ಪ್ರಶ್ನೆ ಕೇಳಲಾಗುತ್ತದೆ. ಬಂದ ಅತಿಥಿಗಳು ನೀಡುವ ಉತ್ತರ ಮತ್ತೊಬ್ಬರ ಬದುಕಿನ ಮೇಲೆ ಪ್ರಭಾವ ಬೀರುತ್ತವೆ. ಇತ್ತೀಚೆಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಹಾಗೂ ಅನನ್ಯಾ ಪಾಂಡೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕಾರ್ತಿಕ್ ಆರ್ಯನ್ ವಿಚಾರ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ಅವರು ಆಡಿದ ಮಾತುಗಳಿಂದ ಕಾರ್ತಿಕ್ ಅಪ್ಸೆಟ್ ಆಗಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ ಅನನ್ಯಾ ಹಾಗೂ ಸಾರಾ ಇಬ್ಬರೂ ಡೇಟ್ ಮಾಡಿದ್ದಾರೆ ಎನ್ನಲಾಗಿದೆ. ಕರಣ್ ಜೋಹರ್ ಈ ಬಗ್ಗೆ ಕೇಳಿದಾಗ ಸಾರಾ ಹಾಗೂ ಅನನ್ಯಾ ನೋ ಎಂದು ಹೇಳಿಲ್ಲ. ಇನ್ನು, ಎಕ್ಸ್ ಜೊತೆ ಫ್ರೆಂಡ್ ಆಗಿರುವುದು ಎಷ್ಟು ಕಷ್ಟ ಎಂಬುದನ್ನು ಸಾರಾ ವಿವರಿಸಿದ್ದರು. ಈ ಎಲ್ಲಾ ಮಾತುಗಳು ಕಾರ್ತಿಕ್ ಅವರ ಅಸಮಾಧಾನಕ್ಕೆ ಕಾರಣ ಆಗಿದೆ. ಅವರು ಸಂದರ್ಶನ ಒಂದರಲ್ಲಿ ಹೇಳಿದ ಮಾತು ಸಾರಾಗೆ ಹೇಳಿದ ರೀತಿಯಲ್ಲಿ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ನಾನು ನಂಬುವ ಒಂದು ವಿಚಾರ ಎಂದರೆ ರಿಲೇಶನ್​ಶಿಪ್ ಇಬ್ಬರ ಮಧ್ಯೆ ಇದ್ದಾಗ ಇನ್ನೊಬ್ಬ ವ್ಯಕ್ತಿ ಅದರ ಬಗ್ಗೆ ಮಾತನಾಡಬಾರದು. ನಾವೆಲ್ಲರೂ ನಮ್ಮ ಸಂಬಂಧಗಳನ್ನು ಗೌರವಿಸಬೇಕು. ನನ್ನ ಸಂಗಾತಿಯಿಂದ ನಾನು ನಿರೀಕ್ಷಿಸುವುದು ಅದನ್ನೇ. ರಿಲೇಶನ್​ಶಿಪ್​ ಬಗ್ಗೆ ಯಾರ್ಯಾರೋ ಮಾತನಾಡುವುದು ಸರಿಯಲ್ಲ. ನೀವು ಯಾರೊಂದಿಗಾದರೂ ಇದ್ದಾಗ ಆ ಸಂಬಂಧ ಕೊನೆಗೊಳ್ಳುತ್ತದೆ ಎಂದು ನೀವು ಊಹಿಸುವುದಿಲ್ಲ’ ಎಂದಿದ್ದಾರೆ ಕಾರ್ತಿಕ್ ಆರ್ಯನ್.

ಕಾರ್ತಿಕ್ ಆಡಿದ ಮಾತುಗಳು ಸಾಕಷ್ಟು ಅರ್ಥಗಳನ್ನು ಹೊಂದಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳು ನೇರವಾಗಿ ಸಾರಾ ಹಾಗೂ ಅನನ್ಯಾ ಅವರನ್ನು ಉದ್ದೇಶಿಸಿ ಹೇಳಿದ ಮಾತು ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ‘ನೀನು ನನ್ನ ಹುಡುಗನನ್ನು ನೋಡಿದ್ರೆ ಹೊಡೆಯುತ್ತೇನೆ’; ಅನನ್ಯಾಗೆ ಬೆದರಿಕೆ ಹಾಕಿದ್ದ ಸಾರಾ ಅಲಿ ಖಾನ್​

ಕಾರ್ತಿಕ್ ಆರ್ಯನ್ ನಟನೆಯ ‘ಶೆಹಜಾದ’ ಹಾಗೂ ‘ಸತ್ಯಪ್ರೇಮ್​ ಕಿ ಕಥಾ’ ಈ ವರ್ಷ ರಿಲೀಸ್ ಆಯಿತು. ‘ಶೆಹಜಾದ’ ಸಿನಿಮಾ ಹೀನಾಯವಾಗಿ ಸೋತರೆ, ‘ಸತ್ಯಪ್ರೇಮ್ ಕಿ ಕಥಾ’ ಸಾಧಾರಣ ಹಿಟ್ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ