AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?

ಸಮಯ್ ರೈನಾ ಅವರು 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ತಮ್ಮ ಆಟೋಗ್ರಾಫ್ ನೀಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಅವರ ವಿಚಿತ್ರ ಬೇಡಿಕೆಯನ್ನು ಅಮಿತಾಭ್ ಬಚ್ಚನ್ ಒಪ್ಪಿಕೊಂಡರು. ಈ ಘಟನೆಯು ಸಮಯ್ ರೈನಾ ಅವರ ಹಾಸ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅವರ ಅಭಿಮಾನಿಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?
ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on: Feb 01, 2025 | 12:52 PM

Share

ಸಮಯ್ ರೈನಾ ಅವರು ತಮ್ಮ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್​ಪತಿ’ ಶೋಗೆ ಆಗಮಿಸಿದ್ದರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ಸಮಯ್ ರೈನಾ ಬಳಿ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಟೆಲಿವಿಷನ್ ಶೋ ‘ಕೌನ್ ಬನೇಗಾ ಕರೋಡ್​ಪತಿ’ 25 ವರ್ಷಗಳ ಸಂಭ್ರಮದಲ್ಲಿ ಇದೆ. ಈ ಅಪರೂಪದ ಮೈಲುಗಲ್ಲು ಸ್ಥಾಪಿಸಿದ ಖುಷಿಯಲ್ಲಿ ಸೋನಿ ಟಿವಿ ವಿಶೇಷ ವ್ಯಕ್ತಿಗಳನ್ನು ಆಹ್ವಾನಿಸಿತ್ತು. ಅದರಲ್ಲೂ ವಿಡಿಯೋ ಕಂಟೆಂಟರ್​​ಗಳಾದ ಕಾಮಿಯಾ ಜಾನಿ, ತನ್ಮಯ್ ಭಟ್, ಭುವನ್ ಬಾಮ್ ಹಾಗೂ ಸಮಯ್ ರೈನಾ ಇದರಲ್ಲಿ ಇದ್ದರು.

ಸಮಯ್ ರೈನಾ ಯಾವಾಗಲೂ ಜಾಲಿ ಆಗಿರುತ್ತಾರೆ. ಸದಾ ನಗಿಸುವ ಪ್ರಯತ್ನ ಮಾಡುತ್ತಾರೆ. ಅವರು ಅಮಿತಾಭ್ ಬಚ್ಚನ್ ಬಳಿ ವಿಚಿತ್ರ ಬೇಡಿಕೆ ಇಟ್ಟರು. ‘ನನ್ನ ಆಟೋಗ್ರಾಫ್​ನ ನೀವು ತೆಗೆದುಕೊಳ್ಳಿ. ಆ ಬಳಿಕ ಅದನ್ನು ಕಸದಬುಟ್ಟಿಗೆ ಬೇಕಿದ್ದರೂ ಹಾಕಿ. ಆ ಬಗ್ಗೆ ನಾನು ಚಿಂತಿಸೋದಿಲ್ಲ. ನನ್ನಿಂದ ಅಮಿತಾಭ್ ಆಟೋಗ್ರಾಫ್ ಪಡೆದುಕೊಂಡರು ಎಂದಾಗಬೇಕು’ ಎಂದು ಸಮಯ್ ರೈನಾ ಹೇಳಿದರು.

ಇದಕ್ಕೆ ಅಮಿತಾಭ್ ಬಚ್ಚನ್ ವಿರೋಧ ತೋರಿಸಲಿಲ್ಲ. ಬದಲಿಗೆ ಅವರು ಒಪ್ಪಿದರು. ‘ಟಿಶ್ಯೂ ಪೇಪರ್​ ಇದೆ. ಅದರಲ್ಲಿ ಆಟೋಗ್ರಾಫ್ ಹಾಕಿ ಕೊಡ್ತೀನಿ’ ಎಂದು ಸಮಯ್ ರೈನಾ ಹೇಳಿದರು. ‘ಅದರಲ್ಲಿ ಆಟೋಗ್ರಾಫ್ ಹಾಕೋಕೆ ಬರುತ್ತಾ’ ಎಂದು ಅಮಿತಾಭ್ ಅಚ್ಚರಿಯಿಂದ ಕೇಳಿದರು. ‘ನಾವು ಆಟೋಗ್ರಾಫ್ ಹಾಕೋದು ಇದರಲ್ಲಿಯೇ’ ಎಂದು ಸಮಯ್ ಹೇಳಿದರು.

ಇದನ್ನೂ ಓದಿ: ಸೂಪರ್​ಸ್ಟಾರ್ ಆದರೂ ಪತ್ನಿಯಿಂದ ಹಣ ಪಡೆಯುತ್ತಾರೆ ಅಮಿತಾಭ್ ಬಚ್ಚನ್

ವಿಶೇಷ ಎಂದರೆ ಸಮಯ್ ರೈನಾ ಅವರು ಕೊಟ್ಟ ಆಟೋಗ್ರಾಫ್​ನ ಹಾಗೆಯೇ ಕೂಡಿಟ್ಟುಕೊಳ್ಳೋದಾಗಿ ಅಮಿತಾಭ್ ಬಚ್ಚನ್ ಹೇಳಿದರು. ಈ ವಿಚಾರ ಕೇಳಿ ಸಮಯ್ ರೈನಾ ಖುಷಿಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್