AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?

ಸಮಯ್ ರೈನಾ ಅವರು 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ತಮ್ಮ ಆಟೋಗ್ರಾಫ್ ನೀಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಅವರ ವಿಚಿತ್ರ ಬೇಡಿಕೆಯನ್ನು ಅಮಿತಾಭ್ ಬಚ್ಚನ್ ಒಪ್ಪಿಕೊಂಡರು. ಈ ಘಟನೆಯು ಸಮಯ್ ರೈನಾ ಅವರ ಹಾಸ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅವರ ಅಭಿಮಾನಿಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?
ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on: Feb 01, 2025 | 12:52 PM

Share

ಸಮಯ್ ರೈನಾ ಅವರು ತಮ್ಮ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್​ಪತಿ’ ಶೋಗೆ ಆಗಮಿಸಿದ್ದರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ಸಮಯ್ ರೈನಾ ಬಳಿ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಟೆಲಿವಿಷನ್ ಶೋ ‘ಕೌನ್ ಬನೇಗಾ ಕರೋಡ್​ಪತಿ’ 25 ವರ್ಷಗಳ ಸಂಭ್ರಮದಲ್ಲಿ ಇದೆ. ಈ ಅಪರೂಪದ ಮೈಲುಗಲ್ಲು ಸ್ಥಾಪಿಸಿದ ಖುಷಿಯಲ್ಲಿ ಸೋನಿ ಟಿವಿ ವಿಶೇಷ ವ್ಯಕ್ತಿಗಳನ್ನು ಆಹ್ವಾನಿಸಿತ್ತು. ಅದರಲ್ಲೂ ವಿಡಿಯೋ ಕಂಟೆಂಟರ್​​ಗಳಾದ ಕಾಮಿಯಾ ಜಾನಿ, ತನ್ಮಯ್ ಭಟ್, ಭುವನ್ ಬಾಮ್ ಹಾಗೂ ಸಮಯ್ ರೈನಾ ಇದರಲ್ಲಿ ಇದ್ದರು.

ಸಮಯ್ ರೈನಾ ಯಾವಾಗಲೂ ಜಾಲಿ ಆಗಿರುತ್ತಾರೆ. ಸದಾ ನಗಿಸುವ ಪ್ರಯತ್ನ ಮಾಡುತ್ತಾರೆ. ಅವರು ಅಮಿತಾಭ್ ಬಚ್ಚನ್ ಬಳಿ ವಿಚಿತ್ರ ಬೇಡಿಕೆ ಇಟ್ಟರು. ‘ನನ್ನ ಆಟೋಗ್ರಾಫ್​ನ ನೀವು ತೆಗೆದುಕೊಳ್ಳಿ. ಆ ಬಳಿಕ ಅದನ್ನು ಕಸದಬುಟ್ಟಿಗೆ ಬೇಕಿದ್ದರೂ ಹಾಕಿ. ಆ ಬಗ್ಗೆ ನಾನು ಚಿಂತಿಸೋದಿಲ್ಲ. ನನ್ನಿಂದ ಅಮಿತಾಭ್ ಆಟೋಗ್ರಾಫ್ ಪಡೆದುಕೊಂಡರು ಎಂದಾಗಬೇಕು’ ಎಂದು ಸಮಯ್ ರೈನಾ ಹೇಳಿದರು.

ಇದಕ್ಕೆ ಅಮಿತಾಭ್ ಬಚ್ಚನ್ ವಿರೋಧ ತೋರಿಸಲಿಲ್ಲ. ಬದಲಿಗೆ ಅವರು ಒಪ್ಪಿದರು. ‘ಟಿಶ್ಯೂ ಪೇಪರ್​ ಇದೆ. ಅದರಲ್ಲಿ ಆಟೋಗ್ರಾಫ್ ಹಾಕಿ ಕೊಡ್ತೀನಿ’ ಎಂದು ಸಮಯ್ ರೈನಾ ಹೇಳಿದರು. ‘ಅದರಲ್ಲಿ ಆಟೋಗ್ರಾಫ್ ಹಾಕೋಕೆ ಬರುತ್ತಾ’ ಎಂದು ಅಮಿತಾಭ್ ಅಚ್ಚರಿಯಿಂದ ಕೇಳಿದರು. ‘ನಾವು ಆಟೋಗ್ರಾಫ್ ಹಾಕೋದು ಇದರಲ್ಲಿಯೇ’ ಎಂದು ಸಮಯ್ ಹೇಳಿದರು.

ಇದನ್ನೂ ಓದಿ: ಸೂಪರ್​ಸ್ಟಾರ್ ಆದರೂ ಪತ್ನಿಯಿಂದ ಹಣ ಪಡೆಯುತ್ತಾರೆ ಅಮಿತಾಭ್ ಬಚ್ಚನ್

ವಿಶೇಷ ಎಂದರೆ ಸಮಯ್ ರೈನಾ ಅವರು ಕೊಟ್ಟ ಆಟೋಗ್ರಾಫ್​ನ ಹಾಗೆಯೇ ಕೂಡಿಟ್ಟುಕೊಳ್ಳೋದಾಗಿ ಅಮಿತಾಭ್ ಬಚ್ಚನ್ ಹೇಳಿದರು. ಈ ವಿಚಾರ ಕೇಳಿ ಸಮಯ್ ರೈನಾ ಖುಷಿಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
NEET-PG Exam: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ