ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?

ಸಮಯ್ ರೈನಾ ಅವರು 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ತಮ್ಮ ಆಟೋಗ್ರಾಫ್ ನೀಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಅವರ ವಿಚಿತ್ರ ಬೇಡಿಕೆಯನ್ನು ಅಮಿತಾಭ್ ಬಚ್ಚನ್ ಒಪ್ಪಿಕೊಂಡರು. ಈ ಘಟನೆಯು ಸಮಯ್ ರೈನಾ ಅವರ ಹಾಸ್ಯ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ ಮತ್ತು ಅವರ ಅಭಿಮಾನಿಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?
ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್
Follow us
ರಾಜೇಶ್ ದುಗ್ಗುಮನೆ
|

Updated on: Feb 01, 2025 | 12:52 PM

ಸಮಯ್ ರೈನಾ ಅವರು ತಮ್ಮ ಕಾಮಿಡಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್​ಪತಿ’ ಶೋಗೆ ಆಗಮಿಸಿದ್ದರು. ಈ ವೇಳೆ ಅಮಿತಾಭ್ ಬಚ್ಚನ್ ಅವರು ಸಮಯ್ ರೈನಾ ಬಳಿ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಟೆಲಿವಿಷನ್ ಶೋ ‘ಕೌನ್ ಬನೇಗಾ ಕರೋಡ್​ಪತಿ’ 25 ವರ್ಷಗಳ ಸಂಭ್ರಮದಲ್ಲಿ ಇದೆ. ಈ ಅಪರೂಪದ ಮೈಲುಗಲ್ಲು ಸ್ಥಾಪಿಸಿದ ಖುಷಿಯಲ್ಲಿ ಸೋನಿ ಟಿವಿ ವಿಶೇಷ ವ್ಯಕ್ತಿಗಳನ್ನು ಆಹ್ವಾನಿಸಿತ್ತು. ಅದರಲ್ಲೂ ವಿಡಿಯೋ ಕಂಟೆಂಟರ್​​ಗಳಾದ ಕಾಮಿಯಾ ಜಾನಿ, ತನ್ಮಯ್ ಭಟ್, ಭುವನ್ ಬಾಮ್ ಹಾಗೂ ಸಮಯ್ ರೈನಾ ಇದರಲ್ಲಿ ಇದ್ದರು.

ಸಮಯ್ ರೈನಾ ಯಾವಾಗಲೂ ಜಾಲಿ ಆಗಿರುತ್ತಾರೆ. ಸದಾ ನಗಿಸುವ ಪ್ರಯತ್ನ ಮಾಡುತ್ತಾರೆ. ಅವರು ಅಮಿತಾಭ್ ಬಚ್ಚನ್ ಬಳಿ ವಿಚಿತ್ರ ಬೇಡಿಕೆ ಇಟ್ಟರು. ‘ನನ್ನ ಆಟೋಗ್ರಾಫ್​ನ ನೀವು ತೆಗೆದುಕೊಳ್ಳಿ. ಆ ಬಳಿಕ ಅದನ್ನು ಕಸದಬುಟ್ಟಿಗೆ ಬೇಕಿದ್ದರೂ ಹಾಕಿ. ಆ ಬಗ್ಗೆ ನಾನು ಚಿಂತಿಸೋದಿಲ್ಲ. ನನ್ನಿಂದ ಅಮಿತಾಭ್ ಆಟೋಗ್ರಾಫ್ ಪಡೆದುಕೊಂಡರು ಎಂದಾಗಬೇಕು’ ಎಂದು ಸಮಯ್ ರೈನಾ ಹೇಳಿದರು.

ಇದಕ್ಕೆ ಅಮಿತಾಭ್ ಬಚ್ಚನ್ ವಿರೋಧ ತೋರಿಸಲಿಲ್ಲ. ಬದಲಿಗೆ ಅವರು ಒಪ್ಪಿದರು. ‘ಟಿಶ್ಯೂ ಪೇಪರ್​ ಇದೆ. ಅದರಲ್ಲಿ ಆಟೋಗ್ರಾಫ್ ಹಾಕಿ ಕೊಡ್ತೀನಿ’ ಎಂದು ಸಮಯ್ ರೈನಾ ಹೇಳಿದರು. ‘ಅದರಲ್ಲಿ ಆಟೋಗ್ರಾಫ್ ಹಾಕೋಕೆ ಬರುತ್ತಾ’ ಎಂದು ಅಮಿತಾಭ್ ಅಚ್ಚರಿಯಿಂದ ಕೇಳಿದರು. ‘ನಾವು ಆಟೋಗ್ರಾಫ್ ಹಾಕೋದು ಇದರಲ್ಲಿಯೇ’ ಎಂದು ಸಮಯ್ ಹೇಳಿದರು.

ಇದನ್ನೂ ಓದಿ: ಸೂಪರ್​ಸ್ಟಾರ್ ಆದರೂ ಪತ್ನಿಯಿಂದ ಹಣ ಪಡೆಯುತ್ತಾರೆ ಅಮಿತಾಭ್ ಬಚ್ಚನ್

ವಿಶೇಷ ಎಂದರೆ ಸಮಯ್ ರೈನಾ ಅವರು ಕೊಟ್ಟ ಆಟೋಗ್ರಾಫ್​ನ ಹಾಗೆಯೇ ಕೂಡಿಟ್ಟುಕೊಳ್ಳೋದಾಗಿ ಅಮಿತಾಭ್ ಬಚ್ಚನ್ ಹೇಳಿದರು. ಈ ವಿಚಾರ ಕೇಳಿ ಸಮಯ್ ರೈನಾ ಖುಷಿಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ