AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಹೀರೋ ಮೇಲೆ ಹಲವು ನಟಿಯರಿಗೆ ಪ್ರೀತಿ.. ಇಲ್ಲಿದೆ ಬಾಲಿವುಡ್ ಪ್ರೇಮ ಕಹಾನಿ..

ಒಬ್ಬರ ಜೊತೆ ಬ್ರೇಕಪ್ ಆದ ಬಳಿಕ ಮತ್ತೊಬ್ಬರ ಜೊತೆ ಓಡಾಡಿ ಸುದ್ದಿ ಆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಜಾನ್ವಿ ಕಪೂರ್, ಕತ್ರಿನಾ ಕೈಫ್, ಆಲಿಯಾ ಭಟ್, ಹೃತಿಕ್ ರೋಷನ್, ಅಮಿತಾಭ್ ಬಚ್ಚನ್, ರೇಖಾ, ಜಯಾ ಬಚ್ಚನ್, ಶಾಹಿದ್ ಕಪೂರ್, ಕರೀನಾ ಕಪೂರ್ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ.

ಒಂದೇ ಹೀರೋ ಮೇಲೆ ಹಲವು ನಟಿಯರಿಗೆ ಪ್ರೀತಿ.. ಇಲ್ಲಿದೆ ಬಾಲಿವುಡ್ ಪ್ರೇಮ ಕಹಾನಿ..
ಬಾಲಿವುಡ್ ಪ್ರೇಮ ಕಹಾನಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Jan 14, 2024 | 10:39 AM

ಸೆಲೆಬ್ರಿಟಿಗಳ ಮಧ್ಯೆ ಪ್ರಿತಿ-ಪ್ರೇಮ ಕಾಮನ್. ಹಲವು ಪ್ರೇಮ ಕಥೆಗಳು ಮದುವೆವರೆಗೆ ಹೋಗಿದೆ. ಇನ್ನೂ ಕೆಲವು ಅರ್ಧದಲ್ಲೇ ಕೊನೆ ಆಗಿದೆ. ಇತ್ತೀಚೆಗೆ ಜಾನ್ವಿ ಕಪೂರ್ ಹಾಗೂ ಅನನ್ಯಾ ಪಾಂಡೆ (Ananya Pandey) ಅವರು ಕಾರ್ತಿಕ್ ಆರ್ಯನ್​ನ ಒಟ್ಟೊಟ್ಟಿಗೆ ಇಷ್ಟಪಡುತ್ತಿದ್ದರು ಎನ್ನುವ ವಿಚಾರ ರಿವೀಲ್ ಆಗಿತ್ತು. ಈ ರೀತಿ ಅನೇಕ ಘಟನೆಗಳು ಬಾಲಿವುಡ್​ನಲ್ಲಿ (Bollywood) ನಡೆದಿವೆ. ಒಬ್ಬರ ಜೊತೆ ಬ್ರೇಕಪ್ ಆದ ಬಳಿಕ ಮತ್ತೊಬ್ಬರ ಜೊತೆ ಓಡಾಡಿ ಸುದ್ದಿ ಆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಜಾನ್ವಿ ಕಪೂರ್-ಸಾರಾ ತೆಂಡೂಲ್ಕರ್: ಜಾನ್ವಿ ಕಪೂರ್ ಹಾಗೂ ಶಿಖರ್ ಪಹರಿಯಾ ಪ್ರೀತಿಸುತ್ತಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ತಿರುಪತಿಗೆ ಇಬ್ಬರೂ ಒಟ್ಟಾಗಿ ತೆರಳಿದ್ದರು. ಇದರಿಂದ ಇವರ ಮದುವೆ ವಿಚಾರ ಹುಟ್ಟಿಕೊಂಡಿದೆ. ಈಗ ಜಾನ್ವಿ ಕಪೂರ್ ಅವರು ಸಾರಾ ತೆಂಡೂಲ್ಕರ್​ನ ಅನ್​ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಸಾರಾ ಹಾಗೂ ಶಿಖರ್ ಗೆಳೆತನ. ಈ ಮೊದಲು ಇಬ್ಬರೂ ಆತ್ಮೀಯವಾಗಿದ್ದರು ಎನ್ನಲಾಗಿದೆ.

ಕತ್ರಿನಾ ಕೈಫ್-ಆಲಿಯಾ ಭಟ್: ಕತ್ರಿನಾ ಕಪೂರ್ ಹಾಗೂ ರಣಬೀರ್ ಕಪೂರ್ ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇಬ್ಬರೂ ಬೇರೆ ಆದರು. ಆ ಬಳಿಕ ರಣಬೀರ್ ಅವರು ಆಲಿಯಾ ಜೊತೆ ಡೇಟ್ ಮಾಡಿದರು. ಇಬ್ಬರೂ ನಂತರ ಮದುವೆ ಆದರು. ಆಲಿಯಾ ಹಾಗೂ ಕತ್ರಿನಾ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ.

ಇದನ್ನೂ ಓದಿ: ದೀಪಿಕಾ, ಆಲಿಯಾ, ಕತ್ರಿನಾ ಹಾದಿಯಲ್ಲಿ ಕೃತಿ ಸೆನನ್​: ಕೋಟ್ಯಂತರ ಹಣ ಹೂಡಿಕೆ

ಕಂಗನಾ, ಸುಸಾನೆ ಖಾನ್: ಹೃತಿಕ್ ರೋಷನ್ ಅವರು ಸುಸಾನೆ ಖಾನ್ ಅವರನ್ನು ಪ್ರೀತಿಸಿ ಮದುವೆ ಆದರು. ಇಬ್ಬರೂ ಒಟ್ಟಿಗೆ ಇರುವಾಗಲೇ ಹೃತಿಕ್ ಅವರು ಕಂಗನಾ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಸುದ್ದಿ ಆಯಿತು. ಈಗ ಹೃತಿಕ್ ಅವರು ಸಬಾ ಆಜಾದ್​ನ ಪ್ರೀತಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ಟ್ವಿಂಕಲ್ ಖನ್ನಾ: ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಪ್ರೀತಿಸುತ್ತಿದ್ದರು. ಆದರೆ, ಇವರ ಸಂಬಂಧ ಮದುವೆವರೆಗೆ ಹೋಗಿಲ್ಲ. ಇಬ್ಬರೂ ಸಂಬಂಧ ಮುರಿದುಕೊಂಡರು. ಆ ಬಳಿಕ ಶಿಲ್ಪಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅಕ್ಷಯ್ ಕುಮಾರ್​ಗೆ ಟ್ವಿಂಕಲ್ ಖನ್ನಾ ಮೇಲೆ ಮನಸ್ಸಿತ್ತು. ಆ ಬಳಿಕ ಶಿಲ್ಪಾ ದೂರ ಆದರು. ಟ್ವಿಂಕಲ್ ಖನ್ನಾ ಹಾಗೂ ಅಕ್ಷಯ್ ಮದುವೆ ಆದರು.

ಇದನ್ನೂ ಓದಿ: ಹುಡುಗರು ಜಾನ್ವಿನ ​ನೋಡಿದಾಕ್ಷಣ ಮೊದಲು ಗಮನಿಸೋದೇನು? ಮುಚ್ಚುಮರೆ ಇಲ್ಲದೆ ಉತ್ತರಿಸಿದ ನಟಿ  

ರೇಖಾ-ಜಯಾ: ಅಮಿತಾಭ್ ಬಚ್ಚನ್, ರೇಖಾ ಹಾಗೂ ಜಯಾ ಬಚ್ಚನ್ ಟ್ರಯಾಂಗಲ್ ಲವ್​ ಸ್ಟೋರಿ ಸಾಕಷ್ಟು ಸುದ್ದಿ ಆಗಿತ್ತು. ಅಮಿತಾಭ್ ಬಚ್ಚನ್ ಹಾಗೂ ಜಯಾ ಮದುವೆ ಆದರು. ಆ ಬಳಿಕ ರೇಖಾ ಜೊತೆ ಅಮಿತಾಭ್ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿತ್ತು. ಆದರೆ, ಜಯಾ ಅವರು ಪರಿಸ್ಥಿತಿಯನ್ನು ಉತ್ತಮವಾಗಿ ಹ್ಯಾಂಡಲ್ ಮಾಡಿದರು. ಆ ಬಳಿಕ ಅಮಿತಾಭ್ ಅವರಿಂದ ರೇಖಾ ದೂರ ಆದರು.

ಪ್ರಿಯಾಂಕಾ ಹಾಗೂ ಕರೀನಾ: ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಇಬ್ಬರೂ ದೂರ ಆದರು. ಶಾಹಿದ್ ಅವರು ನಂತರ ಪ್ರಿಯಾಂಕಾ ಚೋಪ್ರಾ ಜೊತೆ ಡೇಟಿಂಗ್ ಶುರು ಮಾಡಿದರು.

ಅಮೃತಾ ಸಿಂಗ್, ಕರೀನಾ ಕಪೂರ್: ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಹಾಯಾಗಿ ಜೀವನ ನಡೆಸುತ್ತಿದ್ದರು. ಆ ಬಳಿಕ ಇಬ್ಬರೂ ವಿಚ್ಛೇದನ ಪಡೆದರು. ಇದಕ್ಕೆ ಕಾರಣ ನೀಡಿಲ್ಲ. ಆ ಬಳಿಕ ಸೈಫ್ ಅವರು ಕರೀನಾ ಕಪೂರ್ ಜೊತೆ ವಿವಾಹ ಆದರು. ಇವರಿಗೆ ತೈಮೂರ್ ಹಾಗೂ ಜೇ ಹೆಸರಿನ ಮಕ್ಕಳಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್​: ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ರಿಲೇಶನ್​ಶಿಪ್​ನಲ್ಲಿದ್ದರು. ಆ ಬಳಿಕ ರಣಬೀರ್ ಹಾಗೂ ದೀಪಿಕಾ ಬೇರೆ ಆದರು. ನಂತರ ಅವರ ಬಾಳಲ್ಲಿ ಕತ್ರಿನಾ ಬಂದರು. ನಂತರ ಇವರ ಸಂಬಂಧವೂ ಮುರಿದು ಬಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?