AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಹೀರೋ ಮೇಲೆ ಹಲವು ನಟಿಯರಿಗೆ ಪ್ರೀತಿ.. ಇಲ್ಲಿದೆ ಬಾಲಿವುಡ್ ಪ್ರೇಮ ಕಹಾನಿ..

ಒಬ್ಬರ ಜೊತೆ ಬ್ರೇಕಪ್ ಆದ ಬಳಿಕ ಮತ್ತೊಬ್ಬರ ಜೊತೆ ಓಡಾಡಿ ಸುದ್ದಿ ಆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಜಾನ್ವಿ ಕಪೂರ್, ಕತ್ರಿನಾ ಕೈಫ್, ಆಲಿಯಾ ಭಟ್, ಹೃತಿಕ್ ರೋಷನ್, ಅಮಿತಾಭ್ ಬಚ್ಚನ್, ರೇಖಾ, ಜಯಾ ಬಚ್ಚನ್, ಶಾಹಿದ್ ಕಪೂರ್, ಕರೀನಾ ಕಪೂರ್ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ.

ಒಂದೇ ಹೀರೋ ಮೇಲೆ ಹಲವು ನಟಿಯರಿಗೆ ಪ್ರೀತಿ.. ಇಲ್ಲಿದೆ ಬಾಲಿವುಡ್ ಪ್ರೇಮ ಕಹಾನಿ..
ಬಾಲಿವುಡ್ ಪ್ರೇಮ ಕಹಾನಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 14, 2024 | 10:39 AM

Share

ಸೆಲೆಬ್ರಿಟಿಗಳ ಮಧ್ಯೆ ಪ್ರಿತಿ-ಪ್ರೇಮ ಕಾಮನ್. ಹಲವು ಪ್ರೇಮ ಕಥೆಗಳು ಮದುವೆವರೆಗೆ ಹೋಗಿದೆ. ಇನ್ನೂ ಕೆಲವು ಅರ್ಧದಲ್ಲೇ ಕೊನೆ ಆಗಿದೆ. ಇತ್ತೀಚೆಗೆ ಜಾನ್ವಿ ಕಪೂರ್ ಹಾಗೂ ಅನನ್ಯಾ ಪಾಂಡೆ (Ananya Pandey) ಅವರು ಕಾರ್ತಿಕ್ ಆರ್ಯನ್​ನ ಒಟ್ಟೊಟ್ಟಿಗೆ ಇಷ್ಟಪಡುತ್ತಿದ್ದರು ಎನ್ನುವ ವಿಚಾರ ರಿವೀಲ್ ಆಗಿತ್ತು. ಈ ರೀತಿ ಅನೇಕ ಘಟನೆಗಳು ಬಾಲಿವುಡ್​ನಲ್ಲಿ (Bollywood) ನಡೆದಿವೆ. ಒಬ್ಬರ ಜೊತೆ ಬ್ರೇಕಪ್ ಆದ ಬಳಿಕ ಮತ್ತೊಬ್ಬರ ಜೊತೆ ಓಡಾಡಿ ಸುದ್ದಿ ಆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಜಾನ್ವಿ ಕಪೂರ್-ಸಾರಾ ತೆಂಡೂಲ್ಕರ್: ಜಾನ್ವಿ ಕಪೂರ್ ಹಾಗೂ ಶಿಖರ್ ಪಹರಿಯಾ ಪ್ರೀತಿಸುತ್ತಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ತಿರುಪತಿಗೆ ಇಬ್ಬರೂ ಒಟ್ಟಾಗಿ ತೆರಳಿದ್ದರು. ಇದರಿಂದ ಇವರ ಮದುವೆ ವಿಚಾರ ಹುಟ್ಟಿಕೊಂಡಿದೆ. ಈಗ ಜಾನ್ವಿ ಕಪೂರ್ ಅವರು ಸಾರಾ ತೆಂಡೂಲ್ಕರ್​ನ ಅನ್​ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಸಾರಾ ಹಾಗೂ ಶಿಖರ್ ಗೆಳೆತನ. ಈ ಮೊದಲು ಇಬ್ಬರೂ ಆತ್ಮೀಯವಾಗಿದ್ದರು ಎನ್ನಲಾಗಿದೆ.

ಕತ್ರಿನಾ ಕೈಫ್-ಆಲಿಯಾ ಭಟ್: ಕತ್ರಿನಾ ಕಪೂರ್ ಹಾಗೂ ರಣಬೀರ್ ಕಪೂರ್ ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇಬ್ಬರೂ ಬೇರೆ ಆದರು. ಆ ಬಳಿಕ ರಣಬೀರ್ ಅವರು ಆಲಿಯಾ ಜೊತೆ ಡೇಟ್ ಮಾಡಿದರು. ಇಬ್ಬರೂ ನಂತರ ಮದುವೆ ಆದರು. ಆಲಿಯಾ ಹಾಗೂ ಕತ್ರಿನಾ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ.

ಇದನ್ನೂ ಓದಿ: ದೀಪಿಕಾ, ಆಲಿಯಾ, ಕತ್ರಿನಾ ಹಾದಿಯಲ್ಲಿ ಕೃತಿ ಸೆನನ್​: ಕೋಟ್ಯಂತರ ಹಣ ಹೂಡಿಕೆ

ಕಂಗನಾ, ಸುಸಾನೆ ಖಾನ್: ಹೃತಿಕ್ ರೋಷನ್ ಅವರು ಸುಸಾನೆ ಖಾನ್ ಅವರನ್ನು ಪ್ರೀತಿಸಿ ಮದುವೆ ಆದರು. ಇಬ್ಬರೂ ಒಟ್ಟಿಗೆ ಇರುವಾಗಲೇ ಹೃತಿಕ್ ಅವರು ಕಂಗನಾ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಸುದ್ದಿ ಆಯಿತು. ಈಗ ಹೃತಿಕ್ ಅವರು ಸಬಾ ಆಜಾದ್​ನ ಪ್ರೀತಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ಟ್ವಿಂಕಲ್ ಖನ್ನಾ: ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಪ್ರೀತಿಸುತ್ತಿದ್ದರು. ಆದರೆ, ಇವರ ಸಂಬಂಧ ಮದುವೆವರೆಗೆ ಹೋಗಿಲ್ಲ. ಇಬ್ಬರೂ ಸಂಬಂಧ ಮುರಿದುಕೊಂಡರು. ಆ ಬಳಿಕ ಶಿಲ್ಪಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅಕ್ಷಯ್ ಕುಮಾರ್​ಗೆ ಟ್ವಿಂಕಲ್ ಖನ್ನಾ ಮೇಲೆ ಮನಸ್ಸಿತ್ತು. ಆ ಬಳಿಕ ಶಿಲ್ಪಾ ದೂರ ಆದರು. ಟ್ವಿಂಕಲ್ ಖನ್ನಾ ಹಾಗೂ ಅಕ್ಷಯ್ ಮದುವೆ ಆದರು.

ಇದನ್ನೂ ಓದಿ: ಹುಡುಗರು ಜಾನ್ವಿನ ​ನೋಡಿದಾಕ್ಷಣ ಮೊದಲು ಗಮನಿಸೋದೇನು? ಮುಚ್ಚುಮರೆ ಇಲ್ಲದೆ ಉತ್ತರಿಸಿದ ನಟಿ  

ರೇಖಾ-ಜಯಾ: ಅಮಿತಾಭ್ ಬಚ್ಚನ್, ರೇಖಾ ಹಾಗೂ ಜಯಾ ಬಚ್ಚನ್ ಟ್ರಯಾಂಗಲ್ ಲವ್​ ಸ್ಟೋರಿ ಸಾಕಷ್ಟು ಸುದ್ದಿ ಆಗಿತ್ತು. ಅಮಿತಾಭ್ ಬಚ್ಚನ್ ಹಾಗೂ ಜಯಾ ಮದುವೆ ಆದರು. ಆ ಬಳಿಕ ರೇಖಾ ಜೊತೆ ಅಮಿತಾಭ್ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿತ್ತು. ಆದರೆ, ಜಯಾ ಅವರು ಪರಿಸ್ಥಿತಿಯನ್ನು ಉತ್ತಮವಾಗಿ ಹ್ಯಾಂಡಲ್ ಮಾಡಿದರು. ಆ ಬಳಿಕ ಅಮಿತಾಭ್ ಅವರಿಂದ ರೇಖಾ ದೂರ ಆದರು.

ಪ್ರಿಯಾಂಕಾ ಹಾಗೂ ಕರೀನಾ: ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಇಬ್ಬರೂ ದೂರ ಆದರು. ಶಾಹಿದ್ ಅವರು ನಂತರ ಪ್ರಿಯಾಂಕಾ ಚೋಪ್ರಾ ಜೊತೆ ಡೇಟಿಂಗ್ ಶುರು ಮಾಡಿದರು.

ಅಮೃತಾ ಸಿಂಗ್, ಕರೀನಾ ಕಪೂರ್: ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಹಾಯಾಗಿ ಜೀವನ ನಡೆಸುತ್ತಿದ್ದರು. ಆ ಬಳಿಕ ಇಬ್ಬರೂ ವಿಚ್ಛೇದನ ಪಡೆದರು. ಇದಕ್ಕೆ ಕಾರಣ ನೀಡಿಲ್ಲ. ಆ ಬಳಿಕ ಸೈಫ್ ಅವರು ಕರೀನಾ ಕಪೂರ್ ಜೊತೆ ವಿವಾಹ ಆದರು. ಇವರಿಗೆ ತೈಮೂರ್ ಹಾಗೂ ಜೇ ಹೆಸರಿನ ಮಕ್ಕಳಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್​: ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ರಿಲೇಶನ್​ಶಿಪ್​ನಲ್ಲಿದ್ದರು. ಆ ಬಳಿಕ ರಣಬೀರ್ ಹಾಗೂ ದೀಪಿಕಾ ಬೇರೆ ಆದರು. ನಂತರ ಅವರ ಬಾಳಲ್ಲಿ ಕತ್ರಿನಾ ಬಂದರು. ನಂತರ ಇವರ ಸಂಬಂಧವೂ ಮುರಿದು ಬಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ