AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!

ಖ್ಯಾತ ನಟಿ ಮಧುಬಾಲ ಅವರ ಸಹೋದರಿಗೆ ಈ ದುಸ್ಥಿತಿ ಬಂದಿದೆ. ಸೊಸೆಯ ಶೋಷಣೆಯಿಂದ ಈ ರೀತಿ ಆಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!
ಮಧುಬಾಲಾ
TV9 Web
| Edited By: |

Updated on: Feb 04, 2022 | 9:02 AM

Share

ಹಿಂದಿ ಚಿತ್ರರಂಗದಲ್ಲಿ ಮಧುಬಾಲಾ (Madhubala) ಅವರು ಸೂಪರ್​ ಸ್ಟಾರ್​ ನಟಿಯಾಗಿ ಮಿಂಚಿದ್ದರು. ಇಂದಿಗೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಅವರ ಸಹೋದರಿಯ ಬದುಕಿನಲ್ಲಿ ದುರಂತ ನಡೆದಿದೆ. ಮಧುಬಾಲ ಅವರ ಸಹೋದರಿ ಕನೀಜ್​ (Kaniz Balsara) ಅವರ ಬದುಕು ಬೀದಿಗೆ ಬಂದಿದೆ. ಕನೀಜ್​ ಅವರಿಗೆ ಈಗ 96 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಹಣವಿಲ್ಲದೇ, ಕುಟುಂಬದ ಸಹಕಾರ ಇಲ್ಲದೇ ನಡುರಸ್ತೆಯಲ್ಲಿ ನಿಲ್ಲುವಂತಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಏಕಾಂಗಿಯಾಗಿ ನಿಂತ ಬಗ್ಗೆ ವರದಿ ಆಗಿದೆ. ತೀರಾ ಅಸಹಾಯಕ ಸ್ಥಿತಿಯಲ್ಲಿ ಇರುವ ಅವರಿಗೆ ಆರ್​ಟಿಪಿಸಿಆರ್​ ಟೆಸ್ಟ್ (RTPCR Test)​ ಮಾಡಿಸಲು ಕೂಡ ಹಣ ಇಲ್ಲದಂತಾಗಿದೆ. ಅವರ ಈ ದುಸ್ಥಿತಿಗೆ ಸೊಸೆಯೇ ಕಾರಣ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಮಗ ಮತ್ತು ಸೊಸೆಯ ಜೊತೆಗೆ ಕನೀಜ್​ ಅವರು ನ್ಯೂಜಿಲೆಂಡ್​ಗೆ ತೆರಳಿದ್ದರು. ಆದರೆ ಅವರು ಈಗ ಇಂಥ ಹೀನಾಯ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್​ನಿಂದ ಮರಳುವಂತಾಗಿದೆ. 96ನೇ ವಯಸ್ಸಿನಲ್ಲಿ ಅವರನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಭಾರತಕ್ಕೆ ಕಳಿಸಲಾಗಿದೆ!

ಜ.29ರಂದು ಕನೀಜ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರು. ಈ ಸುದ್ದಿಯನ್ನು ಮುಂಬೈನಲ್ಲಿ ಇರುವ ಅವರ ಮಗಳು ಪರ್ವೀಸ್​ಗೆ ದೂರದ ಸಂಬಂಧಿಯೊಬ್ಬರು ಫೋನ್​ ಮಾಡಿ ತಿಳಿಸಿದರು. ಇಷ್ಟೆಲ್ಲ ಆಗಿದ್ದಕ್ಕೆ ಕಾರಣ ಏನೆಂಬುದನ್ನು ಪರ್ವೀಸ್​ ವಿವರಿಸಿದ್ದಾರೆ. ಈ ಬಗ್ಗೆ ‘ಟೈಮ್ಸ್​ ಆಫ್​ ಇಂಡಿಯಾ’ ವರದಿ ಪ್ರಕಟಿಸಿದೆ. ‘ಮಗ ಫಾರೂಕ್​ ಮತ್ತು ಸೊಸೆ ಸಮೀನಾ ಜೊತೆ 17-18 ವರ್ಷದ ಹಿಂದೆ ನಮ್ಮ ತಂದೆ-ತಾಯಿ (ಕನೀಜ್​) ನ್ಯೂಜಿಲೆಂಡ್​ಗೆ ಹೋಗಿದ್ದರು. ಮಗನನ್ನು ಬಿಟ್ಟಿರಲು ಆಗುವುದಿಲ್ಲ ಅಂತ ಅವರು ಅಲ್ಲಿಗೆ ಹೋಗಿದ್ದರು’ ಎಂದು ಪರ್ವೀಸ್​ ಹೇಳಿದ್ದಾರೆ.

‘ನನ್ನ ಸಹೋದರ ಒಳ್ಳೆಯವನು. ಆದರೆ ಸಮೀನಾಗೆ ನನ್ನ ತಂದೆ-ತಾಯಿಯನ್ನು ಕಂಡರೆ ಆಗುವುದಿಲ್ಲ. ಅತ್ತೆ-ಮಾವನಿಗೆ ಆಕೆ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತಿರದ ರೆಸ್ಟೋರೆಂಟ್​ನಿಂದ ಅಣ್ಣ ಊಟ ತರಿಸುತ್ತಿದ್ದ. ಅಣ್ಣನ ಮಗಳಿಗೆ ಮದುವೆಯಾಗಿ ಆಸ್ಪ್ರೇಲಿಯಾಗೆ ತೆರಳಿದ್ದಾಳೆ. ಆಕೆ ಕೂಡ ನಮ್ಮ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಳೆ. ನಮ್ಮ ಅಣ್ಣ ಒಂದು ತಿಂಗಳ ಹಿಂದೆ ತೀರಹೋದ. ಅವನ ಮರಣದ ನಂತರ ಅಮ್ಮನಿಗೆ ಈ ಸ್ಥಿತಿ ಆಗಿದೆ’ ಎಂದು ಪರ್ವೀಸ್​ ಹೇಳಿದ್ದಾರೆ.

‘96 ವರ್ಷದ ವೃದ್ಧೆಯನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಕಳಿಸಿದ ಸಮೀನಾ ಸರಿಯಾಗಿ ನಮಗೆ ಮಾಹಿತಿಯನ್ನೂ ತಿಳಿಸಲಿಲ್ಲ. ವಿಮಾನ ಮುಂಬೈನಲ್ಲಿ ಲ್ಯಾಂಡ್​ ಆಗುವುದಕ್ಕಿಂತ ಕೇವಲ 8 ಗಂಟೆ ಮುನ್ನ ಬೇರೆ ಯಾರಿಗೋ ಫೋನ್​ ಮಾಡಿ ಹೇಳಿದ್ದಾಳೆ. ಅವರು ನನಗೆ ಮಾಹಿತಿ ತಿಳಿಸಿದಾಗ ನಾನು ಬೇರೆ ಕಡೆ ಇದ್ದೆ. ಕೆಲವೇ ಗಂಟೆಗಳಲ್ಲಿ ನಾನು ಏರ್​ಪೋರ್ಟ್​ ತಲುಪಬೇಕಾಯಿತು. ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ನನಗೆ ಕರೆ ಮಾಡಿದರು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಅಮ್ಮನ ಬಳಿ ಹಣ ಇರಲಿಲ್ಲ’ ಎಂದು ಪರ್ವೀಸ್​ ವಿವರಿಸಿದ್ದಾರೆ.

ಇದನ್ನೂ ಓದಿ:

ಎದುರು ಮನೆಯವನನ್ನು ನಂಬಿ ಮೋಸ ಹೋದ ವೃದ್ಧೆಗೀಗ ಆಸ್ಪತ್ರೆಗೆ ಹೋಗಲೂ ಹಣವಿಲ್ಲ

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್