AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!

ಖ್ಯಾತ ನಟಿ ಮಧುಬಾಲ ಅವರ ಸಹೋದರಿಗೆ ಈ ದುಸ್ಥಿತಿ ಬಂದಿದೆ. ಸೊಸೆಯ ಶೋಷಣೆಯಿಂದ ಈ ರೀತಿ ಆಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!
ಮಧುಬಾಲಾ
TV9 Web
| Edited By: |

Updated on: Feb 04, 2022 | 9:02 AM

Share

ಹಿಂದಿ ಚಿತ್ರರಂಗದಲ್ಲಿ ಮಧುಬಾಲಾ (Madhubala) ಅವರು ಸೂಪರ್​ ಸ್ಟಾರ್​ ನಟಿಯಾಗಿ ಮಿಂಚಿದ್ದರು. ಇಂದಿಗೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಅವರ ಸಹೋದರಿಯ ಬದುಕಿನಲ್ಲಿ ದುರಂತ ನಡೆದಿದೆ. ಮಧುಬಾಲ ಅವರ ಸಹೋದರಿ ಕನೀಜ್​ (Kaniz Balsara) ಅವರ ಬದುಕು ಬೀದಿಗೆ ಬಂದಿದೆ. ಕನೀಜ್​ ಅವರಿಗೆ ಈಗ 96 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಹಣವಿಲ್ಲದೇ, ಕುಟುಂಬದ ಸಹಕಾರ ಇಲ್ಲದೇ ನಡುರಸ್ತೆಯಲ್ಲಿ ನಿಲ್ಲುವಂತಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಏಕಾಂಗಿಯಾಗಿ ನಿಂತ ಬಗ್ಗೆ ವರದಿ ಆಗಿದೆ. ತೀರಾ ಅಸಹಾಯಕ ಸ್ಥಿತಿಯಲ್ಲಿ ಇರುವ ಅವರಿಗೆ ಆರ್​ಟಿಪಿಸಿಆರ್​ ಟೆಸ್ಟ್ (RTPCR Test)​ ಮಾಡಿಸಲು ಕೂಡ ಹಣ ಇಲ್ಲದಂತಾಗಿದೆ. ಅವರ ಈ ದುಸ್ಥಿತಿಗೆ ಸೊಸೆಯೇ ಕಾರಣ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಮಗ ಮತ್ತು ಸೊಸೆಯ ಜೊತೆಗೆ ಕನೀಜ್​ ಅವರು ನ್ಯೂಜಿಲೆಂಡ್​ಗೆ ತೆರಳಿದ್ದರು. ಆದರೆ ಅವರು ಈಗ ಇಂಥ ಹೀನಾಯ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್​ನಿಂದ ಮರಳುವಂತಾಗಿದೆ. 96ನೇ ವಯಸ್ಸಿನಲ್ಲಿ ಅವರನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಭಾರತಕ್ಕೆ ಕಳಿಸಲಾಗಿದೆ!

ಜ.29ರಂದು ಕನೀಜ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರು. ಈ ಸುದ್ದಿಯನ್ನು ಮುಂಬೈನಲ್ಲಿ ಇರುವ ಅವರ ಮಗಳು ಪರ್ವೀಸ್​ಗೆ ದೂರದ ಸಂಬಂಧಿಯೊಬ್ಬರು ಫೋನ್​ ಮಾಡಿ ತಿಳಿಸಿದರು. ಇಷ್ಟೆಲ್ಲ ಆಗಿದ್ದಕ್ಕೆ ಕಾರಣ ಏನೆಂಬುದನ್ನು ಪರ್ವೀಸ್​ ವಿವರಿಸಿದ್ದಾರೆ. ಈ ಬಗ್ಗೆ ‘ಟೈಮ್ಸ್​ ಆಫ್​ ಇಂಡಿಯಾ’ ವರದಿ ಪ್ರಕಟಿಸಿದೆ. ‘ಮಗ ಫಾರೂಕ್​ ಮತ್ತು ಸೊಸೆ ಸಮೀನಾ ಜೊತೆ 17-18 ವರ್ಷದ ಹಿಂದೆ ನಮ್ಮ ತಂದೆ-ತಾಯಿ (ಕನೀಜ್​) ನ್ಯೂಜಿಲೆಂಡ್​ಗೆ ಹೋಗಿದ್ದರು. ಮಗನನ್ನು ಬಿಟ್ಟಿರಲು ಆಗುವುದಿಲ್ಲ ಅಂತ ಅವರು ಅಲ್ಲಿಗೆ ಹೋಗಿದ್ದರು’ ಎಂದು ಪರ್ವೀಸ್​ ಹೇಳಿದ್ದಾರೆ.

‘ನನ್ನ ಸಹೋದರ ಒಳ್ಳೆಯವನು. ಆದರೆ ಸಮೀನಾಗೆ ನನ್ನ ತಂದೆ-ತಾಯಿಯನ್ನು ಕಂಡರೆ ಆಗುವುದಿಲ್ಲ. ಅತ್ತೆ-ಮಾವನಿಗೆ ಆಕೆ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತಿರದ ರೆಸ್ಟೋರೆಂಟ್​ನಿಂದ ಅಣ್ಣ ಊಟ ತರಿಸುತ್ತಿದ್ದ. ಅಣ್ಣನ ಮಗಳಿಗೆ ಮದುವೆಯಾಗಿ ಆಸ್ಪ್ರೇಲಿಯಾಗೆ ತೆರಳಿದ್ದಾಳೆ. ಆಕೆ ಕೂಡ ನಮ್ಮ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಳೆ. ನಮ್ಮ ಅಣ್ಣ ಒಂದು ತಿಂಗಳ ಹಿಂದೆ ತೀರಹೋದ. ಅವನ ಮರಣದ ನಂತರ ಅಮ್ಮನಿಗೆ ಈ ಸ್ಥಿತಿ ಆಗಿದೆ’ ಎಂದು ಪರ್ವೀಸ್​ ಹೇಳಿದ್ದಾರೆ.

‘96 ವರ್ಷದ ವೃದ್ಧೆಯನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಕಳಿಸಿದ ಸಮೀನಾ ಸರಿಯಾಗಿ ನಮಗೆ ಮಾಹಿತಿಯನ್ನೂ ತಿಳಿಸಲಿಲ್ಲ. ವಿಮಾನ ಮುಂಬೈನಲ್ಲಿ ಲ್ಯಾಂಡ್​ ಆಗುವುದಕ್ಕಿಂತ ಕೇವಲ 8 ಗಂಟೆ ಮುನ್ನ ಬೇರೆ ಯಾರಿಗೋ ಫೋನ್​ ಮಾಡಿ ಹೇಳಿದ್ದಾಳೆ. ಅವರು ನನಗೆ ಮಾಹಿತಿ ತಿಳಿಸಿದಾಗ ನಾನು ಬೇರೆ ಕಡೆ ಇದ್ದೆ. ಕೆಲವೇ ಗಂಟೆಗಳಲ್ಲಿ ನಾನು ಏರ್​ಪೋರ್ಟ್​ ತಲುಪಬೇಕಾಯಿತು. ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ನನಗೆ ಕರೆ ಮಾಡಿದರು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಅಮ್ಮನ ಬಳಿ ಹಣ ಇರಲಿಲ್ಲ’ ಎಂದು ಪರ್ವೀಸ್​ ವಿವರಿಸಿದ್ದಾರೆ.

ಇದನ್ನೂ ಓದಿ:

ಎದುರು ಮನೆಯವನನ್ನು ನಂಬಿ ಮೋಸ ಹೋದ ವೃದ್ಧೆಗೀಗ ಆಸ್ಪತ್ರೆಗೆ ಹೋಗಲೂ ಹಣವಿಲ್ಲ

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ