AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!

ಖ್ಯಾತ ನಟಿ ಮಧುಬಾಲ ಅವರ ಸಹೋದರಿಗೆ ಈ ದುಸ್ಥಿತಿ ಬಂದಿದೆ. ಸೊಸೆಯ ಶೋಷಣೆಯಿಂದ ಈ ರೀತಿ ಆಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೀದಿಗೆ ಬಿದ್ದ ಖ್ಯಾತ ಬಾಲಿವುಡ್​ ನಟಿಯ ಸಹೋದರಿ; ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಹಣವಿಲ್ಲ!
ಮಧುಬಾಲಾ
TV9 Web
| Edited By: |

Updated on: Feb 04, 2022 | 9:02 AM

Share

ಹಿಂದಿ ಚಿತ್ರರಂಗದಲ್ಲಿ ಮಧುಬಾಲಾ (Madhubala) ಅವರು ಸೂಪರ್​ ಸ್ಟಾರ್​ ನಟಿಯಾಗಿ ಮಿಂಚಿದ್ದರು. ಇಂದಿಗೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಅವರ ಸಹೋದರಿಯ ಬದುಕಿನಲ್ಲಿ ದುರಂತ ನಡೆದಿದೆ. ಮಧುಬಾಲ ಅವರ ಸಹೋದರಿ ಕನೀಜ್​ (Kaniz Balsara) ಅವರ ಬದುಕು ಬೀದಿಗೆ ಬಂದಿದೆ. ಕನೀಜ್​ ಅವರಿಗೆ ಈಗ 96 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಹಣವಿಲ್ಲದೇ, ಕುಟುಂಬದ ಸಹಕಾರ ಇಲ್ಲದೇ ನಡುರಸ್ತೆಯಲ್ಲಿ ನಿಲ್ಲುವಂತಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಏಕಾಂಗಿಯಾಗಿ ನಿಂತ ಬಗ್ಗೆ ವರದಿ ಆಗಿದೆ. ತೀರಾ ಅಸಹಾಯಕ ಸ್ಥಿತಿಯಲ್ಲಿ ಇರುವ ಅವರಿಗೆ ಆರ್​ಟಿಪಿಸಿಆರ್​ ಟೆಸ್ಟ್ (RTPCR Test)​ ಮಾಡಿಸಲು ಕೂಡ ಹಣ ಇಲ್ಲದಂತಾಗಿದೆ. ಅವರ ಈ ದುಸ್ಥಿತಿಗೆ ಸೊಸೆಯೇ ಕಾರಣ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಮಗ ಮತ್ತು ಸೊಸೆಯ ಜೊತೆಗೆ ಕನೀಜ್​ ಅವರು ನ್ಯೂಜಿಲೆಂಡ್​ಗೆ ತೆರಳಿದ್ದರು. ಆದರೆ ಅವರು ಈಗ ಇಂಥ ಹೀನಾಯ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್​ನಿಂದ ಮರಳುವಂತಾಗಿದೆ. 96ನೇ ವಯಸ್ಸಿನಲ್ಲಿ ಅವರನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಭಾರತಕ್ಕೆ ಕಳಿಸಲಾಗಿದೆ!

ಜ.29ರಂದು ಕನೀಜ್​ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದು ಇಳಿದರು. ಈ ಸುದ್ದಿಯನ್ನು ಮುಂಬೈನಲ್ಲಿ ಇರುವ ಅವರ ಮಗಳು ಪರ್ವೀಸ್​ಗೆ ದೂರದ ಸಂಬಂಧಿಯೊಬ್ಬರು ಫೋನ್​ ಮಾಡಿ ತಿಳಿಸಿದರು. ಇಷ್ಟೆಲ್ಲ ಆಗಿದ್ದಕ್ಕೆ ಕಾರಣ ಏನೆಂಬುದನ್ನು ಪರ್ವೀಸ್​ ವಿವರಿಸಿದ್ದಾರೆ. ಈ ಬಗ್ಗೆ ‘ಟೈಮ್ಸ್​ ಆಫ್​ ಇಂಡಿಯಾ’ ವರದಿ ಪ್ರಕಟಿಸಿದೆ. ‘ಮಗ ಫಾರೂಕ್​ ಮತ್ತು ಸೊಸೆ ಸಮೀನಾ ಜೊತೆ 17-18 ವರ್ಷದ ಹಿಂದೆ ನಮ್ಮ ತಂದೆ-ತಾಯಿ (ಕನೀಜ್​) ನ್ಯೂಜಿಲೆಂಡ್​ಗೆ ಹೋಗಿದ್ದರು. ಮಗನನ್ನು ಬಿಟ್ಟಿರಲು ಆಗುವುದಿಲ್ಲ ಅಂತ ಅವರು ಅಲ್ಲಿಗೆ ಹೋಗಿದ್ದರು’ ಎಂದು ಪರ್ವೀಸ್​ ಹೇಳಿದ್ದಾರೆ.

‘ನನ್ನ ಸಹೋದರ ಒಳ್ಳೆಯವನು. ಆದರೆ ಸಮೀನಾಗೆ ನನ್ನ ತಂದೆ-ತಾಯಿಯನ್ನು ಕಂಡರೆ ಆಗುವುದಿಲ್ಲ. ಅತ್ತೆ-ಮಾವನಿಗೆ ಆಕೆ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತಿರದ ರೆಸ್ಟೋರೆಂಟ್​ನಿಂದ ಅಣ್ಣ ಊಟ ತರಿಸುತ್ತಿದ್ದ. ಅಣ್ಣನ ಮಗಳಿಗೆ ಮದುವೆಯಾಗಿ ಆಸ್ಪ್ರೇಲಿಯಾಗೆ ತೆರಳಿದ್ದಾಳೆ. ಆಕೆ ಕೂಡ ನಮ್ಮ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಳೆ. ನಮ್ಮ ಅಣ್ಣ ಒಂದು ತಿಂಗಳ ಹಿಂದೆ ತೀರಹೋದ. ಅವನ ಮರಣದ ನಂತರ ಅಮ್ಮನಿಗೆ ಈ ಸ್ಥಿತಿ ಆಗಿದೆ’ ಎಂದು ಪರ್ವೀಸ್​ ಹೇಳಿದ್ದಾರೆ.

‘96 ವರ್ಷದ ವೃದ್ಧೆಯನ್ನು ಏಕಾಂಗಿಯಾಗಿ ವಿಮಾನ ಹತ್ತಿಸಿ ಕಳಿಸಿದ ಸಮೀನಾ ಸರಿಯಾಗಿ ನಮಗೆ ಮಾಹಿತಿಯನ್ನೂ ತಿಳಿಸಲಿಲ್ಲ. ವಿಮಾನ ಮುಂಬೈನಲ್ಲಿ ಲ್ಯಾಂಡ್​ ಆಗುವುದಕ್ಕಿಂತ ಕೇವಲ 8 ಗಂಟೆ ಮುನ್ನ ಬೇರೆ ಯಾರಿಗೋ ಫೋನ್​ ಮಾಡಿ ಹೇಳಿದ್ದಾಳೆ. ಅವರು ನನಗೆ ಮಾಹಿತಿ ತಿಳಿಸಿದಾಗ ನಾನು ಬೇರೆ ಕಡೆ ಇದ್ದೆ. ಕೆಲವೇ ಗಂಟೆಗಳಲ್ಲಿ ನಾನು ಏರ್​ಪೋರ್ಟ್​ ತಲುಪಬೇಕಾಯಿತು. ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ನನಗೆ ಕರೆ ಮಾಡಿದರು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲು ಕೂಡ ಅಮ್ಮನ ಬಳಿ ಹಣ ಇರಲಿಲ್ಲ’ ಎಂದು ಪರ್ವೀಸ್​ ವಿವರಿಸಿದ್ದಾರೆ.

ಇದನ್ನೂ ಓದಿ:

ಎದುರು ಮನೆಯವನನ್ನು ನಂಬಿ ಮೋಸ ಹೋದ ವೃದ್ಧೆಗೀಗ ಆಸ್ಪತ್ರೆಗೆ ಹೋಗಲೂ ಹಣವಿಲ್ಲ

ಪತ್ರಕರ್ತರಿಗೆ ಖಡಕ್​ ತಿರುಗೇಟು ಕೊಟ್ಟ ಕಂಗನಾ; ದೀಪಿಕಾ ಬಟ್ಟೆ ಬಗ್ಗೆ ಮಾತಾಡಲು ಬಂದವರು ಗಪ್​ಚುಪ್​

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ