ಗೋವಿಂದ ಮಾತ್ರವಲ್ಲ ಈ ಸೆಲೆಬ್ರಿಟಗಳ ಬಳಿ ಇದೆ ಗನ್

Bollywood stars: ಬಾಲಿವುಡ್ ನಟ ಗೋವಿಂದ ಇತ್ತೀಚೆಗಷ್ಟೆ ತಮ್ಮ ಕಾಲಿಗೆ ತಾವೇ ಶೂಟ್ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಹಾಗೆ ಗೋವಿಂದಾ ಮಾತ್ರವಲ್ಲ ಬಾಲಿವುಡ್​ನ ಹಲವು ತಾರೆಯರ ಬಳಿ ಅವರದ್ದೇ ಆದ ಬಂದೂಕು ಇದೆ.

ಗೋವಿಂದ ಮಾತ್ರವಲ್ಲ ಈ ಸೆಲೆಬ್ರಿಟಗಳ ಬಳಿ ಇದೆ ಗನ್
Follow us
| Updated By: ಮಂಜುನಾಥ ಸಿ.

Updated on: Oct 02, 2024 | 12:11 PM

ನಟ ಗೋವಿಂದ ಮೊಣಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್ 1ರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೋವಿಂದ ಕೋಲ್ಕತ್ತಾಗೆ ಹೋಗಲು ತಯಾರಿ ನಡೆಸಿದ್ದರು. ಇದೇ ವೇಳೆ ನಟ ತಮ್ಮ ಪರವಾನಗಿ ಹೊಂದಿರುವ ರಿವಾಲ್ವರ್ ಅನ್ನು ಹೊತ್ತೊಯ್ಯುತ್ತಿದ್ದಾಗ ರಿವಾಲ್ವರ್ ಕೈಯಿಂದ ಜಾರಿ ಬಿದ್ದು ಗುಂಡು ಅವರ ಕಾಲಿಗೆ ತಗುಲಿದೆ. ಗುಂಡು ತಗುಲಿದ ತಕ್ಷಣ ನಟನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಗೋವಿಂದ ಅವರ ಕಾಲಿನಿಂದ ಗುಂಡನ್ನು ಹೊರತೆಗೆದಿದ್ದು, ಗೋವಿಂದ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಗೋವಿಂದ ಅವರ ಅಭಿಮಾನಿ ಬಳಗ ದೊಡ್ಡದಿದೆ. ಇದರಿಂದಾಗಿ ಅಭಿಮಾನಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಗೋವಿಂದ ಮಾತ್ರ ತಮ್ಮ ರಕ್ಷಣೆಗಾಗಿ ಗನ್ ಹೊಂದಿರುವ ಸ್ಟಾರ್ ಅಲ್ಲ. ಅನೇಕ ಸೆಲೆಬ್ರಿಟಿಗಳು ಸಹ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಅಂತಹ ಸೆಲೆಬ್ರಿಟಿಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.

ನಟ ಸನ್ನಿ ಡಿಯೋಲ್ – ವರದಿಯ ಪ್ರಕಾರ ನಟ ಸನ್ನಿ ಡಿಯೋಲ್ ರಿವಾಲ್ವರ್ ಹೊಂದಿದ್ದಾರೆ. ‘ಸಿಂಗ್ ಸಾಹಬ್’ ಸಿನಿಮಾದ ಶೂಟಿಂಗ್ ವೇಳೆಯೂ ಈ ನಟ ರಿವಾಲ್ವರ್ ಬಳಸಿದ್ದರು. ಸನ್ನಿ ಯಾವಾಗಲೂ ಸ್ವಯಂ ರಕ್ಷಣೆಗಾಗಿ ರಿವಾಲ್ವರ್ ಅನ್ನು ಒಯ್ಯುತ್ತಾರೆ.

ಇದನ್ನೂ ಓದಿ:58ನೇ ವಯಸ್ಸಿನಲ್ಲೂ ಹೇಗಿದೆ ನೋಡಿ ಸಲ್ಮಾನ್ ಖಾನ್ ಫಿಟ್ನೆಸ್​; ಇಲ್ಲಿದೆ ಫೋಟೋ

ನಟ ಸಲ್ಮಾನ್ ಖಾನ್‌ಗೂ ನಿರಂತರ ಕೊಲೆ ಬೆದರಿಕೆಗಳು ಬರುತ್ತಿವೆ. ಹಾಗಾಗಿ ನಟ ರಿವಾಲ್ವರ್ ಒಯ್ಯಲು ಲೈಸನ್ಸ್ ಕೂಡ ಪಡೆದಿದ್ದಾರೆ. ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್ ಖಾನ್​ಗೆ ಹಲವು ಬೆದರಿಕೆಗಳು ಬಂದಿದ್ದವು. ನಟನ ಕುಟುಂಬಕ್ಕೂ ಬೆದರಿಕೆಗಳು ಬರುತ್ತವೆ.

ನಟಿ ಪೂನಂ ಧಿಲ್ಲೋನ್ ಕೂಡ ತಮ್ಮ ರಕ್ಷಣೆಗೆ ಅಸ್ತ್ರ ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಫೆಮಿನಾ ಮಿಸ್ ಇಂಡಿಯಾ ಮತ್ತು ನಟಿ ಪೂನಂ ಧಿಲ್ಲೋನ್ ಅವರು ಭದ್ರತೆಗಾಗಿ ತಮ್ಮೊಂದಿಗೆ ಬಂದೂಕನ್ನು ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಇದನ್ನು ಬಹಿರಂಗಪಡಿಸಿದ್ದರು.

ಅಮಿತಾಭ್ ಬಚ್ಚನ್ ಕೂಡ ರಿವಾಲ್ವರ್ ಹೊಂದಿದ್ದಾರೆ. ನಿಜ ಜೀವನದಲ್ಲೂ ಅವರ ಬಳಿ ಲೈಸೆನ್ಸ್‌ ಇರುವ ಆಯುಧವಿದೆ. ವರದಿಗಳ ಪ್ರಕಾರ, ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ ನಂತರ ಅಮಿತಾಭ್ ಈ ಗನ್ ಖರೀದಿಸಿದರು. ಅವರ ಬಳಿ ರಿವಾಲ್ವರ್ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಸಿಎಂ ಸಿದ್ದರಾಮಯ್ಯಗೆ ಗಾಂಧಿ ಟೋಪಿ ಹಾಕಿದ ಡಿಕೆ ಶಿವಕುಮಾರ್​
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಂಯತಿ 2024: ವಿಧಾನಸೌಧದವರೆಗೂ ನಡೆದುಕೊಂಡೇ ಹೋದ ಸಿಎಂ, ಡಿಸಿಎಂ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಮೋದಿ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ಬೆಂಗಳೂರು ಹನುಮಂತನಗರದಲ್ಲಿ ಲಾಂಗ್, ಬ್ಯಾಟ್ ಹಿಡಿದು ಪುಡಿ ರೌಡಿಗಳ ಅಟ್ಟಹಾಸ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ರಾಜ್​ಘಾಟ್​ನಲ್ಲಿ ರಾಷ್ಟ್ರಪಿತನಿಗೆ ಪುಷ್ಟನಮನ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತೆ ತಿಳಿಯಿರಿ
Nithya Bhavishya: ಮಹಾಲಯ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಮಹಾಲಯ ಅಮವಾಸ್ಯೆ ದಿನದ ರಾಶಿ ಭವಿಷ್ಯ ತಿಳಿಯಿರಿ
ಪರೀಕ್ಷೆಯ ಹಿಂದಿನ ರಾತ್ರಿ ಬೆಂಗಳೂರು ಹಾಸ್ಟೆಲ್ ಹುಡುಗೀರ ಡ್ಯಾನ್ಸ್
ಪರೀಕ್ಷೆಯ ಹಿಂದಿನ ರಾತ್ರಿ ಬೆಂಗಳೂರು ಹಾಸ್ಟೆಲ್ ಹುಡುಗೀರ ಡ್ಯಾನ್ಸ್
ಮರೆಯಲಾಗದ ಉಡುಗೊರೆ; ಎದೆ ಮೇಲೆ ತಾಯಿಯ ಫೋಟೋ ಹಚ್ಚೆ ಹಾಕಿಸಿದ ಮಗ
ಮರೆಯಲಾಗದ ಉಡುಗೊರೆ; ಎದೆ ಮೇಲೆ ತಾಯಿಯ ಫೋಟೋ ಹಚ್ಚೆ ಹಾಕಿಸಿದ ಮಗ