AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಆ ಸಿನಿಮಾವನ್ನು ಹಾಳು ಮಾಡಿದ: ನಿರ್ದೇಶಕ ಪ್ರವೀಣ್

Salman Khan: ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾವನ್ನು ಹಾಳು ಮಾಡಿದರು ಎಂದು ಮರಾಠಿ ನಿರ್ದೇಶಕ ಆರೋಪ ಮಾಡಿದ್ದಾರೆ.

ಸಲ್ಮಾನ್ ಖಾನ್ ಆ ಸಿನಿಮಾವನ್ನು ಹಾಳು ಮಾಡಿದ: ನಿರ್ದೇಶಕ ಪ್ರವೀಣ್
ಸಲ್ಮಾನ್ ಖಾನ್
ಮಂಜುನಾಥ ಸಿ.
|

Updated on:Aug 10, 2023 | 8:06 PM

Share

ಒಂದು ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಇನ್ನೊಂದು ಭಾಷೆಗೆ ರೀಮೇಕ್ ಆದಾಗ ಧಾರುಣ ಸೋಲು ಕಂಡ ಉದಾಹರಣೆ ಸಾಕಷ್ಟಿದೆ. ಅದರಲ್ಲಿಯೂ ಒಂದು ಭಾಷೆಯಲ್ಲಿ ಸಣ್ಣ ಬಜೆಟ್​ನಲ್ಲಿ ಹೊಸಬರು ಮಾಡಿದ ಸಿನಿಮಾ ಸೂಪರ್ ಹಿಟ್ ಆಗಿ ಆ ಸಿನಿಮಾವನ್ನು ಪರಭಾಷೆಯಲ್ಲಿ ಸೂಪರ್ ಸ್ಟಾರ್ ಒಬ್ಬ ಕೈಗೆತ್ತಿಕೊಂಡು ಆ ಸಿನಿಮಾ ಅಟ್ಟರ್ ಫ್ಲಾಪ್ ಆಗಿದ್ದು ಮಾತ್ರವಲ್ಲದೆ ಮೂಲ ಸಿನಿಮಾದ ಫ್ಲೇವರ್ ಅನ್ನೇ ಹಾಳು ಮಾಡಿದ ಹಲವು ಉದಾಹರಣೆಗಳಿವೆ. ಅದರಲ್ಲಿ ಸಲ್ಮಾನ್ ಖಾನ್ (Salman Khan) ನಟನೆಯ ಅಂತಿಮ್ಸಿನಿಮಾ ಸಹ ಒಂದು.

2021 ರಲ್ಲಿ ಸಲ್ಮಾನ್ ಖಾನ್ ನಟನೆಯ ಅಂತಿಮ್ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಇನ್​ಸ್ಪೆಕ್ಟರ್ ರಾಜ್ವೀರ್ ಸಿಂಗ್ ನಟಿಸಿದ್ದರು. ಸಿನಿಮಾದಲ್ಲಿ ಅವರೇ ನಾಯಕ, ವಿಲನ್ ಪಾತ್ರದಲ್ಲಿ ಅವರ ತಂಗಿಯ ಪತಿ, ನಟ ಆಯುಷ್ ಶರ್ಮಾ ನಟಿಸಿದ್ದರು. ‘ಅಂತಿಮ್ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತ್ತು. ‘ಅಂತಿಮ್ಸಿನಿಮಾ ಮರಾಠಿ ಭಾಷೆಯ ಮುಲ್ಷಿ ಪಟ್ಟೇರನ್ಸಿನಿಮಾದ ರೀಮೇಕ್ ಆಗಿದ್ದು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಮಾತ್ರವೇ ಅಲ್ಲದೆ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಆದರೆ ಹಿಂದಿಯಲ್ಲಿ ಈ ಸಿನಿಮಾ ಇನ್ನಿಲ್ಲದಂತೆ ಸೋತಿತು.

ಮೂಲ ಸಿನಿಮಾ ಮುಲ್ಷಿ ಪಟ್ಟೇರನ್ನ ನಿರ್ದೇಶಕ ಪ್ರವೀಣ್ ತಾಂಡೆ, ಸಂದರ್ಶನವೊಂದರಲ್ಲಿ ಮಾತನಾಡಿ, ”ಮುಲ್ಷಿ ಪಟೇರನ್ಸಿನಿಮಾ ನೋಡಿದಾಗ ಅದ್ಭುತವಾದ ಸಿನಿಮಾ ಅದ್ಭುತವಾದ ಸಿನಿಮಾ ಎಂದಿದ್ದರು. ಆದರೆ ಅವರೇ ಸಿನಿಮಾ ಮಾಡಿದಾಗ ಬಹಳ ಕೆಟ್ಟದಾಗಿ ಸಿನಿಮಾ ಮಾಡಿದರು, ಮೂಲ ಸಿನಿಮಾವನ್ನು ಹಾಳು ಮಾಡಿದರುಎಂದಿದ್ದಾರೆ.

ಇದನ್ನೂ ಓದಿ:ಆ್ಯಕ್ಷನ್ ಚಿತ್ರಕ್ಕೆ ಸಹಿ ಹಾಕಿದ ಸಲ್ಮಾನ್ ಖಾನ್; ಕರಣ್ ಜೋಹರ್ ನಿರ್ಮಾಣದ ಈ ಚಿತ್ರಕ್ಕೆ 8 ತಿಂಗಳು ಶೂಟಿಂಗ್

ಮುಂದುವರೆದು, ”ನಾನು ಈವರೆಗೆ ಅಂತಿಮ್ಸಿನಿಮಾವನ್ನು ನೋಡಿಯೇ ಇಲ್ಲ. ಮಹೇಶ್ ಅವರು ಆ ಸಿನಿಮಾವನ್ನು ನಿರ್ದೇಶನ ಮಾಡಿದರು. ನನಗೂ ಆ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ ಮಾತ್ರವಲ್ಲ ಆ ಸಿನಿಮಾವನ್ನು ಈ ವರೆಗೆ ನೋಡಿಲ್ಲ, ಮುಂದೆಯೂ ನೋಡುವುದಿಲ್ಲ, ನನ್ನ ಪಾಲಿಗೆ ಇರುವುದು ಒಂದೇ ಮುಲ್ಷಿ ಪಟೇರನ್‘. ಆದರೆ ನಾನು ನಂಬುವ ಕೆಲವು ಗೆಳೆಯರಿಂದ ಅಂತಿಮ್ಸಿನಿಮಾ ಎಷ್ಟು ಕೆಟ್ಟದಾಗಿದೆ ಎಂಬುದು ಗೊತ್ತಾಯಿತುಎಂದಿದ್ದಾರೆ.

ಮುಲ್ಷಿ ಪಟೇರನ್ಹಾಗೂ ಅಂತಿಮ್ಎರಡೂ ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರ ಲೆಮಿಯಾ ಸಹ ನಿರ್ದೇಶಕ ಪ್ರವೀಣ್ ತಾಂಡೆ ಮಾತಿಗೆ ಸಮ್ಮತಿ ಸೂಚಿಸಿದ್ದು, ನಾನು ಎರಡೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ, ಪ್ರವೀಣ್ ತಾಂಡೆ ಸಿನಿಮಾದ ಬಗ್ಗೆ ನಿಜವಾದ ಕಾಳಜಿ, ವಿಷಯದ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿ ಸಿನಿಮಾ ಮಾಡಿದ್ದರು. ಪ್ರವೀಣ್ ಮಾಡಿದ್ದು ನಿಜವಾದ ಮಣ್ಣಿನ (ಮುಲ್ಷಿ)ಯ ಕತೆ. ಆದರೆ ರೀಮೇಕ್​ನಲ್ಲಿ ಆ ಮಣ್ಣಿನ ಗುಣ ಇಲ್ಲವಾಯಿತುಎಂದಿದ್ದಾರೆ.

ಸಲ್ಮಾನ್ ಖಾನ್​ರ ಅಂತಿಮ್ಸಿನಿಮಾದಲ್ಲಿ ಸಲ್ಮಾನ್ ಖಾನ್​ರ ಹೀರೋಯಿಸಂ ತುಸು ಅಧಿಕವಾಗಿತ್ತು, ಆದರೆ ಮೂಲ ಸಿನಿಮಾದಲ್ಲಿ ಯಾವುದೇ ಹೀರೋಯಿಸಂಗಳಿಗೆ ಕಟ್ಟು ಬೀಳದೆ ಕೇವಲ ಪಾತ್ರಗಳು, ಕತೆಗಷ್ಟೆ ಪ್ರಾಮುಖ್ಯತೆ ನೀಡಿ ಸಿನಿಮಾ ಮಾಡಲಾಗಿತ್ತು. ಹಿಂದಿಯಲ್ಲಿ, ಸಲ್ಮಾನ್ ಖಾನ್​ರ ಇಮೇಜಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಸಿನಿಮಾದಲ್ಲಿ ಮಾಡಲಾಗಿತ್ತು.

Published On - 8:05 pm, Thu, 10 August 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು