AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

750 ರೂಪಾಯಿಯಲ್ಲಿ ಮದುವೆ, ಮಗು ಹುಟ್ಟಿದಾಗ ಅಸಮಾಧಾನ; ಇದು ನಾನಾ ಪಾಟೇಕರ್ ಜೀವನದ ಕಥೆ

ನಾನಾ ಪಾಟೇಕರ್ ಅವರಿಗೆ ಕಷ್ಟದ ಕಾಲವದು. ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಜೀಬ್ರಾ ಕ್ರಾಸಿಂಗ್‌ಗೆ ಬಣ್ಣ ಬಳಿದು ಅವರು ಹಣ ಸಂಪಾದಿಸುತ್ತಿದ್ದರು. ಅದರಿಂದ ಮನೆ ನಡೆದುಕೊಂಡು ಹೋಗುತ್ತಿತ್ತು. ಆದಾಗ್ಯೂ, ಅವರು ನಟನೆಗೆ ಕಾಲಿಡಬೇಕು ಎಂದು ಪಣತೊಟ್ಟರು.

750 ರೂಪಾಯಿಯಲ್ಲಿ ಮದುವೆ, ಮಗು ಹುಟ್ಟಿದಾಗ ಅಸಮಾಧಾನ; ಇದು ನಾನಾ ಪಾಟೇಕರ್ ಜೀವನದ ಕಥೆ
ನಾನಾ ಪಾಟೇಕರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 03, 2024 | 8:16 AM

Share

ನಟ ನಾನಾ ಪಾಟೇಕರ್ (Nana Patekar) ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜೀವನದಲ್ಲಿ ಮುಂದೆ ಬರಲು ಯಾರಿಂದಲೂ ಸಹಾಯ ಪಡೆಯದ ನಟರಲ್ಲಿ ನಾನಾ ಪಾಟೇಕರ್ ಕೂಡ ಒಬ್ಬರು. ನಾನಾ ರೀತಿಯ ಕಷ್ಟ ಸನ್ನಿವೇಶಗಳನ್ನು ಮೆಟ್ಟಿ ನಿಂತು ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ವೃತ್ತಿ ಜೀವನ ಆರಂಭಿಸಿದಾಗ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಬಂದವು. ಅವರು ಅನೇಕ ಬಾರಿ ನಿಷ್ಠುರವಾಗಿ ಕಂಡಿದಿದ್ದೆ. ಅವರ ಮದುವೆ ಆಗಿದ್ದು ಸಖತ್ ಫನ್ನಿ ಆಗಿದೆ.

ನಾನಾ ಪಾಟೇಕರ್ ಅವರಿಗೆ ಕಷ್ಟದ ಕಾಲವದು. ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಜೀಬ್ರಾ ಕ್ರಾಸಿಂಗ್‌ಗೆ ಬಣ್ಣ ಬಳಿದು ಅವರು ಹಣ ಸಂಪಾದಿಸುತ್ತಿದ್ದರು. ಅದರಿಂದ ಮನೆ ನಡೆದುಕೊಂಡು ಹೋಗುತ್ತಿತ್ತು. ಆದಾಗ್ಯೂ, ಅವರು ನಟನೆಗೆ ಕಾಲಿಡಬೇಕು ಎಂದು ಪಣತೊಟ್ಟರು. ಹೀಗಾಗಿ ರಂಗಭೂಮಿಯತ್ತ ಮುಖ ಮಾಡಿದರು. ಅವರು ರಂಗಭೂಮಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ನೀಲಕಂಠಿ ಅವರನ್ನು ಭೇಟಿಯಾದರು. ನೀಲಕಂಠಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ನಟನೆಯನ್ನೂ ಮಾಡುತ್ತಿದ್ದರು.  ಆಗ ನೀಲಕಂಠಿಯವರ ಮಾಸಿಕ ವೇತನ 2500 ರೂಪಾಯಿ ಮತ್ತು ನಾನಾ ಪಾಟೇಕರ್ ಒಂದು ಪ್ರದರ್ಶನಕ್ಕೆ ಪಡೆಯುತ್ತಿದ್ದ ಸಂಭಾವನೆ 50 ರೂಪಾಯಿ.

ನಾನಾ ಮತ್ತು ನೀಲಕಂಠಿ ಮದುವೆಯಾಗಲು ನಿರ್ಧರಿಸಿದರು. 1978ರಲ್ಲಿ 750 ರೂಪಾಯಿಗೆ ಮದುವೆಯಾದರು. ಮದುವೆ ಪಾರ್ಟಿಗೆ ಖರ್ಚು ಮಾಡಿದ್ದು ಕೇವಲ 24 ರೂಪಾಯಿ. ನೀಲಕಂಠಿ ಉತ್ತಮ ಕಲಾವಿದೆ ಕೂಡ ಹೌದು. ಅವರ ಅಭಿನಯಕ್ಕಾಗಿ ಅವರು ಹಲವು ಪ್ರಶಸ್ತಿ ಪಡೆದಿದ್ದಾರೆ. ಮದುವೆಯ ನಂತರ ನೀಲಕಂಠಿ ಸಿನಿಮಾ ಮಾಡುವುದನ್ನು ನಿಲ್ಲಿಸಿದರು.

ನೀಲಕಂಠಿ ಪ್ರೆಗ್ನೆಂಟ್ ಆದರು. ಈ ಶುಭ ಸಮಾಚಾರ ಕೇಳಿದ ನಾನಾಗೆ ಖುಷಿ ಆಗಿತ್ತು. ಆದರೆ, ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ನೋಡಿ ಅವರು ಗಾಬರಿಯಾದರು. ಏಕೆಂದರೆ ನವಜಾತ ಶಿಶುವಿನ ತುಟಿಗಳು ಹುಟ್ಟುವಾಗಲೇ ಭಾಗಶಃ ಸೀಳಿದ್ದವು. ಇದರಿಂದಾಗಿ ಮಗುವಿನ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದವು. ನಾನಾಗೂ ಮಗುವನ್ನು ಕಂಡರೆ ಅಷ್ಟಕ್ಕಷ್ಟೇ. ಮಗುವಿನ ಮುಖ ನೋಡಿದಾಗೆಲ್ಲ ನಾನಾ ನೊಂದುಕೊಳ್ಳುತ್ತಿದ್ದರು. ಕೆಲವು ದಿನಗಳ ನಂತರ, ಅವರು ತಾಯಿ ಮತ್ತು ಮಗುವನ್ನು ಮನೆಗೆ ಕರೆತಂದರು. ನಾನಾ ಅವರು ಮಗನ ಜೊತೆ ಆಟವಾಡುತ್ತಿರಲಿಲ್ಲ, ಅವನತ್ತ ಗಮನ ಹರಿಸುತ್ತಿರಲಿಲ್ಲ.

ಇದನ್ನೂ ಓದಿ: ‘ಇನ್ಮುಂದೆ ಹೀಗೆ ಮಾಡಲ್ಲ, ಕ್ಷಮಿಸಿ’: ಅಭಿಮಾನಿಗೆ ಹೊಡೆದು ಕ್ಷಮೆ ಕೇಳಿದ ನಾನಾ ಪಾಟೇಕರ್​

ಒಮ್ಮೆ ಮನೆಯವರೆಲ್ಲ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮನೆಯಲ್ಲಿ ನಾನಾ ಮತ್ತು ಮಗು ಮಾತ್ರ ಇತ್ತು. ಸ್ವಲ್ಪ ಸಮಯದ ನಂತರ ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು. ನಾನಾ ಎದ್ದು ಮಗುವಿನ ಬಳಿ ಹೋದರು. ಅವನು ಮಗುವಿನ ಕಣ್ಣುಗಳಲ್ಲಿದ್ದ ನೀರು ನೋಡಿದರು. ಅದು ಅವರಲ್ಲಿದ್ದ ತಂದೆಯನ್ನು ಎಚ್ಚರಿಸಿತು. ಆ ಬಳಿಕ ಅವರು ತಪ್ಪನ್ನು ಅರಿತುಕೊಂಡರು. ಆದರೆ ಈ ಮಗು ಹೆಚ್ಚು ದಿನ ಬದುಕಲಿಲ್ಲ. ಮಗು ಎರಡೂವರೆ ವರ್ಷದವನಿದ್ದಾಗ ತೀರಿಹೋಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Wed, 3 January 24

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು