AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಹೀರೋಗಳು ಚಿತ್ರರಂಗ ಹಾಳು ಮಾಡುತ್ತಿದ್ದಾರೆ: ನಿರ್ದೇಶಕ ರೋಹಿತ್

ಒಂದೆರಡು ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ಹೊಸ ಹೀರೋಗಳು ತಮ್ಮ ಸಂಭಾವನೆಯನ್ನು ದೊಡ್ಡದಾಗಿ ಏರಿಸಿಕೊಳ್ಳುವುದಲ್ಲದೆ ಇಲ್ಲ-ಸಲ್ಲದ ಡಿಮ್ಯಾಂಡ್​ಗಳನ್ನು ಇಡುತ್ತಾರೆ, ಹೊಸ ಹೀರೋಗಳಿಂದ ಚಿತ್ರರಂಗ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಯಶಸ್ವಿ ನಿರ್ದೇಶಕರೊಬ್ಬರು.

ಹೊಸ ಹೀರೋಗಳು ಚಿತ್ರರಂಗ ಹಾಳು ಮಾಡುತ್ತಿದ್ದಾರೆ: ನಿರ್ದೇಶಕ ರೋಹಿತ್
ಮಂಜುನಾಥ ಸಿ.
|

Updated on: Oct 27, 2024 | 10:19 AM

Share

ಕೋವಿಡ್ ಬಳಿಕ ಭಾರತೀಯ ಚಿತ್ರರಂಗ ದೊಡ್ಡ ಹಂತದಲ್ಲಿ ಬೆಳೆಯುತ್ತಿದೆ. ಭಾರತೀಯ ಚಿತ್ರರಂಗ ಸಾವಿರಾರು ಕೋಟಿ ಉದ್ಯಮವಾಗಿದೆ. ಸಿನಿಮಾಗಳಿಗೆ ನೂರು ಕೋಟಿ ಎನ್ನುವುದು ಮಾಮೂಲಿ ವಿಷಯವಾಗಿದೆ. ಸಿನಿಮಾಗಳಿಂದ ಲಾಭ ಬರುವುದು ಹೆಚ್ಚಾದಂತೆ ನಟ-ನಟಿಯರ ಬೇಡಿಕೆಗಳೂ ಸಹ ಹೆಚ್ಚಾಗಿದೆ. ಕೆಲವು ನಿರ್ಮಾಪಕ, ನಿರ್ದೇಶಕರು ಈಗಾಗಲೇ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಸಿನಿಮಾ ನಟರು ತಮ್ಮ ಸಂಭಾವನೆ ತಗ್ಗಿಸಿಕೊಳ್ಳಬೇಕು ಎಂದಿದ್ದಾರೆ. ನಟ-ನಟಿಯರಿಂದ ಅನವಶ್ಯಕ ಖರ್ಚುಗಳಾಗುತ್ತಿವೆ ಎಂದಿದ್ದಾರೆ. ಇದೀಗ ಯಶಸ್ವಿ ನಿರ್ದೇಶಕರೊಬ್ಬರು ಹೊಸ ಹೀರೋಗಳಿಂದ ಚಿತ್ರರಂಗ ಹಾಳಾಗುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಬಾಲಿವುಡ್​ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ರೋಹಿತ್ ಶೆಟ್ಟಿ, ‘ಗೋಲ್​ಮಾಲ್’, ‘ಸಿಂಘಂ’, ‘ಸೂರ್ಯವಂಶಂ’ ಸರಣಿ ಸಿನಿಮಾಗಳ ಜೊತೆಗೆ ಇನ್ನೂ ಕೆಲವು ಸಿನಿಮಾಗಳನ್ನು ಮಾಡಿದ್ದು ಬಾಲಿವುಡ್​ನ ಮಾಸ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ವಿವಾದಗಳಿಂದ ದೂರವೇ ಇರುವ ರೋಹಿತ್ ಶೆಟ್ಟಿ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ಹೊಸ ನಾಯಕ ನಟರುಗಳಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ಅವರೇ ಚಿತ್ರರಂಗವನ್ನು ಕೆಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ನಲ್ಲಿ ರಿಲೀಸ್ ಕ್ಲ್ಯಾಷ್, ರೋಹಿತ್ ಶೆಟ್ಟಿ ವಿರುದ್ಧ ಟಿ-ಸೀರೀಸ್ ದೂರು

‘ನಮ್ಮ ಹಿರಿಯರನ್ನು ಒಮ್ಮೆ ನೋಡಿ, ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವಗನ್ ಅವರ್ಯಾರೂ ಸಹ ಸಿನಿಮಾದ ನಂಬರ್​ಗಳ ಬಗ್ಗೆ ಮಾತನಾಡುವುದಿಲ್ಲ. ಅಜಯ್ ದೇವಗನ್ ನಟಿಸಿದ ‘ದೃಶ್ಯಂ 2’ ಸಿನಿಮಾ 200 ಕೋಟಿಗೂ ಹೆಚ್ಚು ಹಣ ಗಳಿಸಿತು. ಆದರೆ ಅವರು ಅದನ್ನು ಸೆಲೆಬ್ರೇಟ್ ಮಾಡಲಿಲ್ಲ. ನನ್ನ ಸಿನಿಮಾ ಇಷ್ಟು ಗಳಿಸಿದೆ ಎಂದು ಹೇಳಿಕೊಂಡು ಓಡಾಡುವುದಿಲ್ಲ. ಆದರೆ ಈಗಿನ ಕೆಲವು ನಾಯಕರು, ಒಂದು ಸಿನಿಮಾ ಹಿಟ್ ಆದರೆ ಸಾಕು ಸ್ಟಾರ್​ಗಳಂತೆ ವರ್ತಿಸುತ್ತಾರೆ. ಸಂಭಾವನೆಯನ್ನು ಥಟ್ಟನೆ ಹೆಚ್ಚಿಸಿಕೊಳ್ಳುತ್ತಾರೆ. ಮ್ಯಾನೇಜರ್​ಗಳ ಮೂಲಕ ಇಲ್ಲ-ಸಲ್ಲದ ಬೇಡಿಕೆಗಳನ್ನು ಇಡುತ್ತಾರೆ. ನಮ್ಮಂಥಹಾ ನಿರ್ದೇಶಕರು ಸಹ ಅವರೊಟ್ಟಿಗೆ ನೇರವಾಗಿ ಮಾತನಾಡಲು ಆಗಲ್ಲ, ಮ್ಯಾನೇಜರ್ ಮೂಲಕವೇ ಮಾತನಾಡಬೇಕು ಅಂಥಹಾ ಸ್ಥಿತಿ ನಿರ್ಮಾಣ ಆಗಿದೆ’ ಎಂದಿದ್ದಾರೆ.

‘ಇಂಥಹಾ ಹೊಸ ನಾಯಕ ನಟರೇ ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ. ಒಂದೆರಡು ಸಿನಿಮಾ ಹಿಟ್ ಆದ ಕೂಡಲೇ ಸ್ಟಾರ್​ಗಳಂತೆ ವರ್ತಿಸುವುದನ್ನು ಬಿಡಬೇಕು’ ಎಂದಿದ್ದಾರೆ ರೋಹಿತ್ ಶೆಟ್ಟಿ. ಈ ಹಿಂದೆ ಕರಣ್ ಜೋಹರ್ ಸಹ ಇದೇ ವಿಷಯವನ್ನು ಹೇಳಿದ್ದರು. ಕಾರ್ತಿಕ್ ಆರ್ಯನ್ ಒಂದೆರಡು ಸಿನಿಮಾ ಹಿಟ್ ನೀಡಿ ಈಗ ಸುಮಾರು 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಮಾತ್ರವೇ ಅಲ್ಲದೆ ಇತ್ತೀಚೆಗೆ ಒಂದೂ ಹಿಟ್ ನೀಡದ ಟೈಗರ್ ಶ್ರಾಫ್ ಇನ್ನೂ ಕೆಲವು ನಟರು ಸಹ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ