AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Om Raut: ಸಾವಿರ ಕೋಟಿ ರೂ. ಬಜೆಟ್​ನಲ್ಲಿ ‘ಆದಿಪುರುಷ್​ 2’ ಮಾಡುವ ಪ್ಲಾನ್​; ನಿರ್ದೇಶಕರ ಐಡಿಯಾಗೆ ಪ್ರಭಾಸ್​ ಏನಂದ್ರು?

Adipurush 2: ‘ಆದಿಪುರುಷ್​’ ಶೂಟಿಂಗ್​ ಕೊನೇ ಹಂತದಲ್ಲಿ ಇದ್ದಾಗ 2ನೇ ಪಾರ್ಟ್​ ಮಾಡುವ ಐಡಿಯಾ ನಿರ್ದೇಶಕರಿಗೆ ಬಂತು. ಅದಕ್ಕಾಗಿ ಇನ್ನೂ ಒಂದು ತಿಂಗಳ ಕಾಲ ಹೆಚ್ಚಿನ ಶೂಟಿಂಗ್​ನಲ್ಲಿ ಭಾಗಿ ಆಗುವಂತೆ ಅವರು ಪ್ರಭಾಸ್​ಗೆ ಹೇಳಿದ್ದರು.

Om Raut: ಸಾವಿರ ಕೋಟಿ ರೂ. ಬಜೆಟ್​ನಲ್ಲಿ ‘ಆದಿಪುರುಷ್​ 2’ ಮಾಡುವ ಪ್ಲಾನ್​; ನಿರ್ದೇಶಕರ ಐಡಿಯಾಗೆ ಪ್ರಭಾಸ್​ ಏನಂದ್ರು?
ಓಂ ರಾವತ್​, ಪ್ರಭಾಸ್​
ಮದನ್​ ಕುಮಾರ್​
|

Updated on: Jun 25, 2023 | 1:05 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಆದಿಪುರುಷ್​’ (Adipurush) ಚಿತ್ರವು ಸ್ಥಾನ ಪಡೆದುಕೊಂಡಿತ್ತು. ಪ್ರಭಾಸ್​ ಅಭಿಮಾನಿಗಳು ಈ ಚಿತ್ರದ ಮೇಲೆ ತುಂಬ ಭರವಸೆ ಇಟ್ಟುಕೊಂಡಿದ್ದರು. ‘ತಾನಾಜಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದ ನಿರ್ದೇಶಕ ಓಂ ರಾವತ್​ (Om Raut) ಅವರು ‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದರಿಂದ ಹೈಪ್​ ಹೆಚ್ಚಿತ್ತು. ಆದರೆ ಚಿತ್ರ ಬಿಡುಗಡೆ ಆದ ಬಳಿಕ ಪ್ರೇಕ್ಷಕರಿಗೆ ಭಾರಿ ನಿರಾಸೆ ಆಯಿತು. ಯಾಕೆಂದರೆ, ರಾಮಾಯಣದ ಕಥೆ ಆಧರಿಸಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ತುಂಬ ಅಸಂಬದ್ಧ ಅಂಶಗಳು ಇವೆ ಎಂದು ಜನರು ತಕರಾರು ತೆಗೆದರು. ಜೂನ್​ 16ರಂದು ಬಿಡುಗಡೆಯಾದ ‘ಆದಿಪುರುಷ್​’ ಸಿನಿಮಾ ಈಗಲೂ ಟ್ರೋಲ್​ ಕಾಟ ಎದುರಿಸುತ್ತಿದೆ. ಅಚ್ಚರಿ ಏನೆಂದರೆ, ಈ ಸಿನಿಮಾಗೆ ಸೀಕ್ವೆಲ್​ (Adipurush 2) ಮಾಡುವ ಆಲೋಚನೆ ಕೂಡ ನಿರ್ದೇಶಕ ಓಂ ರಾವತ್​ ಅವರಿಗೆ ಇತ್ತು! ಆದರೆ ಅದಕ್ಕೆ ಪ್ರಭಾಸ್​ ಅವರು ಒಪ್ಪಿಕೊಂಡಿರಲಿಲ್ಲ.

ಸಿನಿಮಾಗಳನ್ನು ಎರಡು ಪಾರ್ಟ್​​ನಲ್ಲಿ ಮಾಡುವ ಟ್ರೆಂಡ್​ ಜೋರಾಗಿದೆ. ‘ಬಾಹುಬಲಿ’, ‘ಕೆಜಿಎಫ್​’ ಮುಂತಾದ ಸಿನಿಮಾಗಳು ಈ ಸೂತ್ರ ಅನುಸರಿಸಿ ಭರ್ಜರಿ ಲಾಭ ಮಾಡಿಕೊಂಡವು. ‘ಪುಷ್ಟ’ ಸಿನಿಮಾಗೂ ಸೀಕ್ವೆಲ್​ ಮೂಡಿಬರುತ್ತಿದೆ. ಹೀಗಾಗಿ ‘ಆದಿಪುರುಷ್​’ ಸಿನಿಮಾದ ಕಥೆಯನ್ನೂ ಎರಡು ಪಾರ್ಟ್​ನಲ್ಲಿ ಹೇಳಬೇಕು ಎಂಬುದು ನಿರ್ದೇಶಕರ ಪ್ಲ್ಯಾನ್​ ಆಗಿತ್ತಂತೆ. ಮೊದಲ ಪಾರ್ಟ್​ ಬಿಡುಗಡೆ ಆದ ಬಳಿಕ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಆದಿಪುರುಷ್​ 2’ ಸಿನಿಮಾವನ್ನು ಮಾಡಬೇಕು ಎಂದು ಓಂ ರಾವುತ್​ ಆಲೋಚಿಸಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: Project K: ‘ಆದಿಪುರುಷ್​’ ಟ್ರೋಲ್​ ಮರೆತು ‘ಪ್ರಾಜೆಕ್ಟ್​ ಕೆ’ ಅಪ್​ಡೇಟ್​ ತಿಳಿಯಲು ಕಾದಿರುವ ಪ್ರಭಾಸ್​ ಅಭಿಮಾನಿಗಳು

‘ಆದಿಪುರುಷ್​’ ಸಿನಿಮಾದ ಶೂಟಿಂಗ್​ ಕೊನೇ ಹಂತದಲ್ಲಿ ಇದ್ದಾಗ ಎರಡನೇ ಪಾರ್ಟ್​ ಮಾಡುವ ಐಡಿಯಾ ನಿರ್ದೇಶಕರಿಗೆ ಬಂತು. ಅದಕ್ಕಾಗಿ ಇನ್ನೂ ಒಂದು ತಿಂಗಳ ಕಾಲ ಹೆಚ್ಚಿನ ಶೂಟಿಂಗ್​ನಲ್ಲಿ ಭಾಗಿ ಆಗುವಂತೆ ಅವರು ಪ್ರಭಾಸ್​ಗೆ ಹೇಳಿದರು. ಆದರೆ ಅದು ಪ್ರಭಾಸ್​ಗೆ ಸರಿ ಎನಿಸಲಿಲ್ಲ. ಈ ಕಥೆಯನ್ನು ಎರಡು ಪಾರ್ಟ್​​ನಲ್ಲಿ ಹೇಳಿದರೆ ವರ್ಕೌಟ್​ ಆಗುವುದಿಲ್ಲ ಎಂಬುದು ಪ್ರಭಾಸ್​ಗೆ ಅನಿಸಿತು. ಹಾಗಾಗಿ ‘ಆದಿಪುರುಷ್​ 2’ ಮಾಡುವ ಉದ್ದೇಶ ಇಟ್ಟುಕೊಂಡಿದ್ದ ಓಂ ರಾವತ್​ಗೆ ಪ್ರಭಾಸ್​ ಅವರು ಗ್ರೀನ್​ ಸಿಗ್ನಲ್​ ನೀಡಲಿಲ್ಲ. ಅಂದು ಪ್ರಭಾಸ್​ ತೆಗೆದುಕೊಂಡ ನಿರ್ಧಾರದಿಂದ ಬಹುಕೋಟಿ ರೂಪಾಯಿ ವೇಸ್ಟ್​ ಆಗುವುದು ತಪ್ಪಿತು.

ಇದನ್ನೂ ಓದಿ: Om Raut: ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ಗೆ ಮುಂಬೈ ಪೊಲೀಸರಿಂದ​ ಭದ್ರತೆ?

ಮಹಾಭಾರತ, ರಾಮಾಯಣ ಮುಂತಾದ ಮಹಾಕಾವ್ಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಚಿತ್ರತಂಡದವರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ‘ಆದಿಪುರುಷ್​’ ಸಿನಿಮಾತಂಡದವರು ರಾಮಾಯಣದ ಕಥೆಗೆ ಆಧುನಿಕ ಟಚ್​ ನೀಡಲು ಹೋಗಿ ಎಡವಿದರು. ಸೈಫ್​ ಅಲಿ ಖಾನ್​ ಮಾಡಿದ ರಾವಣನ ಪಾತ್ರ ನೋಡಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಆಂಜನೇಯನ ಪಾತ್ರದ ಸಂಭಾಷಣೆ ತೀರಾ ಕಳಪೆ ಆಗಿದೆ ಎಂಬ ಆಕ್ಷೇಪ ಕೂಡ ಎದುರಾಯಿತು. ಇದೆಲ್ಲದರ ಪರಿಣಾಮವಾಗಿ ಚಿತ್ರತಂಡಕ್ಕೆ ತೀವ್ರ ಮುಖಭಂಗ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್