AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೆನ್ಸಾರ್ ಮಂಡಳಿ ನಮ್ಮ ಚಿತ್ರವನ್ನು ಕೊಂದಿದೆ’; ಖ್ಯಾತ ನಿರ್ದೇಶಕನ ಗಂಭೀರ ಆರೋಪ

‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದರಿಂದ 18 ವರ್ಷ ಕೆಳಗಿನವರಿಗೆ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಮೂಲ ಉದ್ದೇಶ ನಾಶ ಆಗುವುದರ ಜೊತೆ ಚಿತ್ರದ ಗಳಿಕೆಯೂ ತಗ್ಗಿತು. ಈ ಬಗ್ಗೆ ಅಮಿತ್ ಮಾತನಾಡಿದ್ದಾರೆ.

‘ಸೆನ್ಸಾರ್ ಮಂಡಳಿ ನಮ್ಮ ಚಿತ್ರವನ್ನು ಕೊಂದಿದೆ’; ಖ್ಯಾತ ನಿರ್ದೇಶಕನ ಗಂಭೀರ ಆರೋಪ
ಅಕ್ಷಯ್ ಕುಮಾರ್
ರಾಜೇಶ್ ದುಗ್ಗುಮನೆ
|

Updated on:Jan 10, 2024 | 1:55 PM

Share

ಸನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2 Movie) ಹಾಗೂ ಅಕ್ಷಯ್​ ಕುಮಾರ್, ಪಂಕಜ್ ತ್ರಿಪಾಠಿ ನಟನೆಯ ‘ಒಎಂಜಿ 2’ ಸಿನಿಮಾ ಕಳೆದ ವರ್ಷ ಒಟ್ಟಿಗೆ ರಿಲೀಸ್ ಆದವು. ‘ಗದರ್ 2’ ಚಿತ್ರ ಭಾರತದಲ್ಲಿ 500+ ಕೋಟಿ ರೂಪಾಯಿ ಗಳಿಕೆ ಮಾಡಿತು. ‘ಒಎಂಜಿ 2’ ಕಲೆಕ್ಷನ್ 100 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ಚಿತ್ರ ಕಡಿಮೆ ಗಳಿಕೆ ಮಾಡಲು ಸೆನ್ಸಾರ್ ಮಂಡಳಿ ಮಾಡಿರುವ ತಪ್ಪು ಕಾರಣ ಎಂದು ನಿರ್ದೇಶಕ ಅಮಿತ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.

‘ಒಎಂಜಿ 2’ ಸಿನಿಮಾದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತದಲ್ಲಿರುವ ಮಕ್ಕಳಿಗೆ ಈ ಬಗ್ಗೆ ಅರಿವು ಕಡಿಮೆ. ಈ ವಿಚಾರದಲ್ಲಿ ಅನೇಕರು ಓಪನ್ ಆಗಿಲ್ಲ. ಈ ಬಗ್ಗೆ ಶಿಕ್ಷಣ ಸಿಗಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಆದರೆ, ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದರಿಂದ 18 ವರ್ಷ ಕೆಳಗಿನವರಿಗೆ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಮೂಲ ಉದ್ದೇಶ ನಾಶ ಆಗುವುದರ ಜೊತೆ ಚಿತ್ರದ ಗಳಿಕೆಯೂ ತಗ್ಗಿತು. ಈ ಬಗ್ಗೆ ಅಮಿತ್ ಮಾತನಾಡಿದ್ದಾರೆ.

‘ಒಂದೊಮ್ಮೆ ನಮ್ಮ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಗದೇ ಇದ್ದರೆ ನಾವು ‘ಗದರ್​ 2’ ಚಿತ್ರಕ್ಕೆ ಸರಿಸಮನಾಗಿ ಫೈಟ್ ಕೊಡುತ್ತಿದ್ದೆವು. ಎ ಪ್ರಮಾಣ ಪತ್ರವನ್ನು ನೀಡದೇ ಇದ್ದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ಸಿನಿಮಾ ನೋಡಲು ಬರುತ್ತಿದ್ದರು’ ಎಂದಿದ್ದಾರೆ ಅಮಿತ್ ರಾಯ್. ‘ಗದರ್ 2’ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 686 ಕೋಟಿ ರೂಪಾಯಿ ಹಾಗೂ  ‘ಒಎಂಜಿ 2’ ವಿಶ್ವ ಮಟ್ಟದಲ್ಲಿ 221.75 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: 99ನೇ ವಯಸ್ಸಿಗೆ ಪಂಕಜ್​ ತ್ರಿಪಾಠಿ ತಂದೆ ನಿಧನ; ‘ಒಎಂಜಿ 2’ ಗೆಲುವಿನ ನಡುವೆ ಆವರಿಸಿತು ಶೋಕ

‘ಎ ಪ್ರಮಾಣಪತ್ರ ನೀಡಿ ನನ್ನ ಸಿನಿಮಾನ ಕೊಲ್ಲಲಾಗಿದೆ. ಸೆನ್ಸಾರ್ ಮಂಡಳಿ ಆರ್ಥಿಕವಾಗಿ ಹಾಗೂ ಸಿನಿಮಾದ ವಿಷಯವಾಗಿ ನನಗೆ ನೋವುಂಟು ಮಾಡಿದೆ’ ಎಂದಿದ್ದಾರೆ ಅಮಿತ್. ಈ ಚಿತ್ರವು 27 ಚೇಂಜ್​ಗಳನ್ನು ಮಾಡಿಸಿತ್ತು. ಕೆಲವು ಕಡೆ ಕತ್ತರಿ ಹಾಕಲು ಸೂಚಿಸಿತ್ತು. ಲೈಂಗಿಕ ಶಿಕ್ಷಣ ಹಾಗೂ ಇತರ ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Wed, 10 January 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್