AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯುಸಿನೆಸ್​ ಪಾರ್ಟ್ನರ್ ಬಿಚ್ಚಿಟ್ರು ರಾಜ್​ ಕುಂದ್ರಾ ಕರಾಳ ಮುಖ; ಇನ್ಮೇಲೆ ಮತ್ತಷ್ಟು ಸಂಕಷ್ಟ

ರಾಜ್​ ಕುಂದ್ರಾ ಪ್ರಕರಣದ ತನಿಖೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ​ಇವರು ಆರಂಭಿಸದ ಕಂಪನಿಗೆ ಆರ್ಮ್ಸ್​ಪ್ರೈಮ್​ ಲಿಮಿಟೆಡ್​ ಎಂದು ಹೆಸರು ಇಡಲಾಗಿತ್ತು.

ಬ್ಯುಸಿನೆಸ್​ ಪಾರ್ಟ್ನರ್ ಬಿಚ್ಚಿಟ್ರು ರಾಜ್​ ಕುಂದ್ರಾ ಕರಾಳ ಮುಖ; ಇನ್ಮೇಲೆ ಮತ್ತಷ್ಟು ಸಂಕಷ್ಟ
ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ
TV9 Web
| Edited By: |

Updated on: Sep 17, 2021 | 1:46 PM

Share

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ ಸಂಕಷ್ಟ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಬಗೆದಷ್ಟು ಹೊಸಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದರಿಂದ ಅವರಿಗೆ ಜಾಮೀನು ಸಿಗೋದು ಮತ್ತಷ್ಟು ಕಷ್ಟ ಆಗುತ್ತಿದೆ. ಈ ಮಧ್ಯೆ ರಾಜ್​ ಕುಂದ್ರಾ ಬ್ಯುಸಿನೆಸ್​ ಪಾರ್ಟ್ನರ್​ ಒಬ್ಬರು ರಾಜ್​ ಕುಂದ್ರಾ ಅವರ ನಿಜವಾದ ಬಣ್ಣವನ್ನು ಅನಾವರಣ ಮಾಡಿದ್ದಾರೆ.

ರಾಜ್​ ಕುಂದ್ರಾ ಪ್ರಕರಣದ ತನಿಖೆ ವೇಳೆ ಪಾರ್ಟ್ನರ್ ಸೌರಭ್​ ಕುಶ್ವಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ​ಇವರು ಆರಂಭಿಸಿದ ಕಂಪನಿಗೆ ಆರ್ಮ್ಸ್​ಪ್ರೈಮ್​ ಲಿಮಿಟೆಡ್​ ಎಂದು ಹೆಸರು ಇಡಲಾಗಿತ್ತು. ಇದಕ್ಕೆ ರಾಜ್​ ಕುಂದ್ರಾ ಹಾಗೂ ಸೌರಭ್​ ಕುಶ್ವಾನ್​ ನಿರ್ದೇಶಕರಾಗಿದ್ದರು. ಈ ಕಂಪನಿ ಅಡಿಯಲ್ಲಿ ಹಾಟ್​ಶಾಟ್ಸ್​ ಆ್ಯಪ್​ ಆರಂಭಗೊಂಡಿತ್ತು. ಸೌರಭ್​ ಈ ಕಂಪನಿಯಲ್ಲಿ ಶೇ.35 ಷೇರನ್ನು ಹೊಂದಿದ್ದರು. ಆದರೆ, ವಿಡಿಯೋ ನಿರ್ಮಾಣ, ಅದನ್ನು ಯಾವಾಗ ಅಪ್​ಲೋಡ್​ ಮಾಡಬೇಕು, ಆ್ಯಪ್​ನಲ್ಲಿ ಏನೆಲ್ಲ ಬದಲಾವಣೆ ತರಬೇಕು ಎನ್ನುವುದರ ನಿಯಂತ್ರಣ ರಾಜ್​ ಕುಂದ್ರಾ ಬಳಿಯೇ ಇತ್ತು. ಪೋರ್ನ್​ ವಿಡಿಯೋ ಹಂಚುವ ಉದ್ದೇಶದಿಂದಲೇ ಈ ಆ್ಯಪ್​ ಆರಂಭಿಸಲಾಗಿತ್ತು ಎನ್ನುವ ಮಾಹಿತಿಯನ್ನು ಸೌರಭ್​ ಪೊಲೀಸರಿಗೆ ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಕರಣದಿಂದ ಅವರು ತಪ್ಪಿಸಿಕೊಂಡಿದ್ದಾರೆ. ಸೌರಭ್​ ಹೇಳಿಕೆಯಿಂದ ರಾಜ್​ ಕುಂದ್ರಾ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ.

ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ವಿರುದ್ಧ 1,400 ಪುಟಗಳ ಆರೋಪ ಪಟ್ಟಿಯನ್ನು ತಯಾರಿಸಿ, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ನಟಿ ಶಿಲ್ಪಾ ಶೆಟ್ಟಿ ಸೇರಿ ಸಾಕಷ್ಟು ಜನರ ಹೇಳಿಕೆ ಉಲ್ಲೇಖಿಸಲಾಗಿದೆ. ‘ಹಾಟ್​ಶಾಟ್ಸ್ ಹಾಗೂ ಬಾಲಿಫೇಮ್ ಆ್ಯಪ್​ಗಳ ಕುರಿತಾಗಿ ಮಾಹಿತಿಯಿರಲಿಲ್ಲ. ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಿದ್ದೆ. ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂಬುದರ ಕುರಿತಾಗಿ ನನಗೆ ಮಾಹಿತಿಯಿರಲಿಲ್ಲ’ ಎಂದು ಶಿಲ್ಪಾ ಪೊಲೀಸರ ಎದುರು ಹೇಳಿದ್ದರು.

ರಾಜ್​ ಕುಂದ್ರಾ ಬಂಧನವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಆದಾಗ್ಯೂ ಅವರಿಗೆ ಜಾಮೀನು ಸಿಕ್ಕಿಲ್ಲ. ಜಾಮೀನು ಪಡೆಯೋಕೆ ಎಷ್ಟೇ ಹರಸಾಹಸ ನಡೆಸಿದರೂ ಅದು ಸಾಧ್ಯವಾಗುತ್ತಿಲ್ಲ. ಇತ್ತ ಶಿಲ್ಪಾ ಶೆಟ್ಟಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್