AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ಲಕ್ಷ ರೂಪಾಯಿಗೆ ರಾಖಿ ಸಾವಂತ್​ ಬೆತ್ತಲೆ ವಿಡಿಯೋ ಮಾರಾಟ ಮಾಡಿದ ಗಂಡ? ವಿಚ್ಛೇದನಕ್ಕೆ ನಟಿ ನಿರ್ಧಾರ

‘ನಾವು ಹನಿಮೂನ್​ಗೆ ತೆರಳಿದ್ದಾಗ ನನ್ನ ಗಂಡ ಆದಿಲ್​ ಖಾನ್​ ದುರಾನಿ ಬೆತ್ತಲೆ ವಿಡಿಯೋ ಚಿತ್ರಿಸಿಕೊಂಡ. 47 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ಪಡೆದು ಅರಬ್​ ದೇಶದ ಒಬ್ಬ ವ್ಯಕ್ತಿಗೆ ಆ ವಿಡಿಯೋಗಳನ್ನು ಆದಿಲ್​ ಖಾನ್​ ಮಾರಿದ್ದಾನೆ’ ಎಂದು ರಾಖಿ ಸಾವಂತ್​ ಆರೋಪ ಮಾಡಿದ್ದಾರೆ. ಈ ರೀತಿಯ ಅನೇಕ ಆರೋಪಗಳನ್ನು ಅವರು ಹೊರಿಸಿದ್ದಾರೆ.

50 ಲಕ್ಷ ರೂಪಾಯಿಗೆ ರಾಖಿ ಸಾವಂತ್​ ಬೆತ್ತಲೆ ವಿಡಿಯೋ ಮಾರಾಟ ಮಾಡಿದ ಗಂಡ? ವಿಚ್ಛೇದನಕ್ಕೆ ನಟಿ ನಿರ್ಧಾರ
ಆದಿಲ್​ ಖಾನ್​, ರಾಖಿ ಸಾವಂತ್​
ಮದನ್​ ಕುಮಾರ್​
|

Updated on: Aug 23, 2023 | 5:42 PM

Share

ನಟಿ ರಾಖಿ ಸಾವಂತ್​ (Rakhi Sawant) ಅವರು ಮತ್ತೆ ವಿವಾದದ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ತಮ್ಮ ಜೊತೆ ಕಿರಿಕ್​ ಮಾಡಿಕೊಂಡು ದೂರಾಗಿರುವ ಗಂಡ ಆದಿಲ್​ ಖಾನ್​ ದುರಾನಿ (Adil Khan Durrani) ಬಗ್ಗೆ ಅವರು ಸರಣಿ ಆರೋಪಗಳನ್ನು ಮಾಡುತ್ತಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ಈ ಜೋಡಿಯ ನಡುವೆ ವೈಮನಸ್ಸು ಉಂಟಾಯಿತು. ಆದಿಲ್​ ಖಾನ್​ ದುಬಾರಿಯಿಂದ ತಾವು ಹಲ್ಲೆಗೆ ಒಳಗಾಗಿರುವುದಾಗಿ ರಾಖಿ ಸಾವಂತ್​ ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಬೆತ್ತಲೆ ವಿಡಿಯೋವನ್ನು ಆದಿಲ್​ ಖಾನ್​ ದುರಾನಿ ಮಾರಾಟ ಮಾಡಿದ್ದಾರೆ ಎಂದು ಕೂಡ ರಾಖಿ ಸಾವಂತ್​ ಆರೋಪಿಸಿದ್ದಾರೆ. ಈ ಘಟನೆಯಿಂದ ನೊಂದಿರುವ ಅವರು ವಿಚ್ಛೇದನ (Divorce) ನೀಡಲು ನಿರ್ಧರಿಸಿದ್ದಾರೆ. ಅವರ ಸಂಸಾರದ ರಂಪಾಟ ಬೀದಿಗೆ ಬಂದಿದೆ.

ರಾಖಿ ಸಾವಂತ್​ ನೀಡಿದ ದೂರಿನ ಮೇರೆಗೆ ಆದಿಲ್​ ಖಾನ್​ ದುರಾನಿಯನ್ನು ಪೊಲೀಸರು ಬಂದಿಸಿದ್ದರು. ಹಲವು ತಿಂಗಳ ಕಾಲ ಜೈಲಿನಲ್ಲಿ ಇದ್ದ ಅವರು ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅದರ ಬೆನ್ನಲ್ಲೇ ರಾಖಿ ಸಾವಂತ್​ ಅವರು ಸುದ್ದಿಗೋಷ್ಠಿ ಕರೆದು ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಲಕ್ಷಾಂತರ ರೂಪಾಯಿಗೆ ತಮ್ಮ ನಗ್ನ ವಿಡಿಯೋವನ್ನು ಮಾರಾಟ ಮಾಡಲಾಗಿದೆ ಎಂಬುದು ರಾಖಿ ಸಾವಂತ್​ ಅವರ ಪ್ರಮುಖ ಆರೋಪಗಳಲ್ಲಿ ಒಂದು. ಇದಕ್ಕೆ ಆದಿಲ್​ ಖಾನ್​ ದುರಾನಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಗಂಡಸರ ಜೊತೆಗೂ ಆದಿಲ್​ ಖಾನ್​ ಲೈಂಗಿಕ ಕ್ರಿಯೆ ನಡೆಸುತ್ತಿದ್ದ’: ಗಂಡನ ಬಗ್ಗೆ ರಾಖಿ ಸಾವಂತ್ ಆರೋಪ

‘ನಾವು ಹನಿಮೂನ್​ಗೆ ತೆರಳಿದ್ದಾಗ ನನ್ನ ಗಂಡ ಆದಿಲ್​ ಖಾನ್​ ದುರಾನಿ ಬೆತ್ತಲೆ ವಿಡಿಯೋ ಚಿತ್ರಿಸಿಕೊಂಡ. ಬಾತ್​ರೂಮ್​ನಲ್ಲಿ, ಬೆಡ್​ ರೂಮ್​ನಲ್ಲಿ ನನ್ನ ವಿಡಿಯೋ ಸೆರೆ ಹಿಡಿದಿದ್ದ. 47 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ಪಡೆದು ಅರಬ್​ ದೇಶದ ಒಬ್ಬ ವ್ಯಕ್ತಿಗೆ ಆ ವಿಡಿಯೋಗಳನ್ನು ಆದಿಲ್​ ಖಾನ್​ ಮಾರಿದ್ದಾನೆ. ತನ್ನದೇ ಪತ್ನಿಯ ಬೆತ್ತಲೆ ವಿಡಿಯೋವನ್ನು ಆತ ಮಾರಾಟ ಮಾಡಿದ್ದಾನೆ’ ಎಂದು ರಾಖಿ ಸಾವಂತ್​ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್

ಮೈಸೂರು ಮೂಲದ ವ್ಯಕ್ತಿ ಆದಿಲ್​ ಖಾನ್​. ತಮ್ಮನ್ನು ಮೈಸೂರಿಗೆ ಕರೆಸಿಕೊಂಡು, ರೂಮಿನಲ್ಲಿ ಕೂಡಿಹಾಕಿ, ಬಟ್ಟೆಗಳನ್ನು ಹರಿದು ಕಿರುಕುಳ ನೀಡಿರುವುದಾಗಿ ರಾಖಿ ಸಾವಂತ್​ ಹೇಳಿದ್ದಾರೆ. ಆ ಘಟನೆ ನಡೆದ ಕೆಲವು ದಿನಗಳ ನಂತರ ಆದಿಲ್​ ಖಾನ್​ ಗೋವಾಗೆ ಬಂದು ರಾಖಿ ಜೊತೆ ಮದುವೆ ಮಾಡಿಕೊಂಡರು. ಈಗ ಆದಿಲ್​ನನ್ನು ತಮ್ಮ ಗಂಡ ಎಂದು ಕರೆಯಲು ರಾಖಿ ಸಾವಂತ್​ ಸಿದ್ಧರಿಲ್ಲ. ಶೀಘ್ರದಲ್ಲೇ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: Rakhi Sawant: ಗಂಡನ ಮೇಲೆ ತಾನೇ ಕೇಸ್​ ಹಾಕಿ ಜೈಲಿಗೆ ಕಳಿಸಿ, ಈಗ ಜಾಮೀನು ಸಿಗಲಿ ಅಂತ ಪ್ರಾರ್ಥಿಸಿದ ರಾಖಿ ಸಾವಂತ್​

‘ಇಷ್ಟು ತಿಂಗಳು ಅವನು ಜೈಲಿನಲ್ಲಿ ಇದ್ದಿದ್ದಕ್ಕೆ ನಾನು ಕಾರಣವಲ್ಲ. ಅವನ ಇರಾನಿ ಪ್ರೇಯಸಿಯು ರೇಪ್​ ಕೇಸ್​ ಹಾಕಿದ್ದಳು. ನನಗೆ ಆದಿಲ್​ ಖಾನ್​ ಹೊಡೆದು, ಟಾರ್ಚರ್​ ಮಾಡಿದ್ದ. ಆ ಕಾರಣಕ್ಕೆ ಆತ ಜೈಲಲ್ಲಿ ಇದ್ದಿದ್ದು ಕೇವಲ 22 ದಿನಗಳು ಅಷ್ಟೇ. ಮನೆಯಲ್ಲಿ ಬೇರೆ ಮಹಿಳೆಯರು ಹಾಗೂ ಗಂಡಸರ ಜತೆ ಅವನು ಲೈಂಗಿಕ ಕ್ರಿಯೆ ನಡೆಸಿದ್ದನ್ನು ನಾನು ಕಂಡಿದ್ದೇನೆ. ಇಲ್ಲಿ ಮತ್ತು ದುಬೈನಲ್ಲಿ ಅವನು ನನಗೆ ಹೊಡೆಯಲು ಪ್ರಯತ್ನಿಸಿದ. ಆದರೂ ನಾನು ಸೈಲೆಂಟ್​ ಆಗಿದ್ದೆ’ ಎಂದು ರಾಖಿ ಸಾವಂತ್​ ಅವರು ಆರೋಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!