‘ಹನುಮಾನ್​’ ನಿರ್ದೇಶಕನ ಜೊತೆ ರಣವೀರ್​ ಸಿಂಗ್​ ಸಿನಿಮಾ ಮಾಡಲ್ಲ; ಸಿಕ್ತು ಸ್ಪಷ್ಟನೆ

‘ಹನುಮಾನ್​’ ಚಿತ್ರದ ನಿರ್ದೇಶಕ ಪ್ರಶಾಂತ್​ ವರ್ಮಾ ಮತ್ತು ಬಾಲಿವುಡ್​ ನಟ ರಣವೀರ್​ ಸಿಂಗ್​ ಅವರು ಜೊತೆಯಾಗಿ ‘ರಾಕ್ಷಸ್​’ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಈ ಬಗ್ಗೆ ಪ್ರಶಾಂತ್​ ವರ್ಮಾ ಮತ್ತು ರಣವೀರ್​ ಸಿಂಗ್​ ಕಡೆಯಿಂದಲೇ ಅಧಿಕೃತವಾಗಿ ಸ್ಪಷ್ಟನೆ ಸಿಕ್ಕಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿದೆ.

‘ಹನುಮಾನ್​’ ನಿರ್ದೇಶಕನ ಜೊತೆ ರಣವೀರ್​ ಸಿಂಗ್​ ಸಿನಿಮಾ ಮಾಡಲ್ಲ; ಸಿಕ್ತು ಸ್ಪಷ್ಟನೆ
ಪ್ರಶಾಂತ್​ ವರ್ಮಾ, ರಣವೀರ್​ ಸಿಂಗ್​

Updated on: May 30, 2024 | 10:34 PM

ಈ ವರ್ಷ ಸೂಪರ್​ ಹಿಟ್​ ಆದ ‘ಹನುಮಾನ್​’ ಸಿನಿಮಾದ ಮೂಲಕ ನಿರ್ದೇಶಕ ಪ್ರಶಾಂತ್​ ವರ್ಮಾ (Prasanth Varma) ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿತು. ಅಲ್ಲದೇ ಬೇರೆ ಬೇರೆ ಭಾಷೆಯಲ್ಲೂ ಅವರಿಗೆ ಡಿಮ್ಯಾಂಡ್​ ಹೆಚ್ಚಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಾಲಿವುಡ್​ ನಟ ರಣವೀರ್​ ಸಿಂಗ್​ ಜೊತೆ ಪ್ರಶಾಂತ್​ ವರ್ಮಾ ಸಿನಿಮಾ ಮಾಡಬೇಕಿತ್ತು. ‘ರಾಕ್ಷಸ್​’ (Rakshas) ಎಂಬ ಹೊಸ ಸಿನಿಮಾ ಸಲುವಾಗಿ ಅವರಿಬ್ಬರು ಹಲವು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂದು ಕೂಡ ಸುದ್ದಿ ಆಗಿತ್ತು. ಆದರೆ ಈಗ ಆ ಸಿನಿಮಾ ನಿಂತುಹೋಗಿದೆ. ಆ ಬಗ್ಗೆ ಸ್ವತಃ ಪ್ರಶಾಂತ್​ ವರ್ಮಾ ಮತ್ತು ರಣವೀರ್​ ಸಿಂಗ್​ (Ranveer Singh) ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಬೆಂಕಿ ಇಲ್ಲದೇ ಹೊಗೆ ಆಡಲ್ಲ ಎಂಬ ಮಾತನ್ನು ಗಾಸಿಪ್​ ಮಂದಿ ಬಲವಾಗಿ ನಂಬುತ್ತಾರೆ. ರಣವೀರ್​ ಸಿಂಗ್​ ಮತ್ತು ಪ್ರಶಾಂತ್​ ವರ್ಮಾ ಅವರು ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಹಾಗೂ ಆ ಸಿನಿಮಾಗೆ ‘ರಾಕ್ಷಸ್​’ ಎಂದು ಹೆಸರು ಇಡಲಾಗಿದೆ ಎಂದು ಗಾಸಿಪ್​ ಹರಡಿತ್ತು. ನಂತರ ಪ್ರಶಾಂತ್​ ವರ್ಮಾ ಮತ್ತು ರಣವೀರ್​ ಸಿಂಗ್​ ನಡುವೆ ಕಿರಿಕ್​ ಆಗಿದ್ದರಿಂದ ಆ ಸಿನಿಮಾ ನಿಂತು ಹೋಯಿತು ಎಂಬ ಗುಸುಗುಸು ಕೂಡ ಕೇಳಿಬಂದಿತ್ತು. ಆ ಸುದ್ದಿ ನಿಜವಾಗಿದೆ.

ಈ ಬಗ್ಗೆ ರಣವೀರ್​ ಸಿಂಗ್​ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ವರ್ಮಾ ಅವರು ವಿಶೇಷವಾದ ಪ್ರತಿಭಾವಂತ. ನಾವು ಭೇಟಿಯಾಗಿ ಸಿನಿಮಾ ಬಗ್ಗೆ ಮಾತನಾಡಿದ್ದೆವು. ಭವಿಷ್ಯದಲ್ಲಿ ನಾವು ಜೊತೆಯಾಗಿ ಸಿನಿಮಾ ಮಾಡುತ್ತೇವೆ ಎಂಬ ನಂಬಿಕೆ ಇದೆ’ ಎಂದು ರಣವೀರ್​ ಸಿಂಗ್​ ಹೇಳಿದ್ದಾರೆ. ಆ ಮೂಲಕ ಸದ್ಯಕ್ಕೆ ‘ರಾಕ್ಷಸ್​’ ಸಿನಿಮಾ ಸೆಟ್ಟೇರುವುದಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: 3 ಪ್ರತ್ಯೇಕ ಒಟಿಟಿಯಲ್ಲಿ ‘ಹನುಮಾನ್​’ ಸಿನಿಮಾ; ಯಾವುದರಲ್ಲಿದೆ ಕನ್ನಡ ವರ್ಷನ್​?

ಅದೇ ರೀತಿ, ಪ್ರಶಾಂತ್​ ವರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ‘ರಣವೀರ್ ಸಿಂಗ್​ ಅವರ ಎನರ್ಜಿ ಮತ್ತು ಪ್ರತಿಭೆ ತುಂಬ ಅಪರೂಪದ್ದು. ಮುಂದಿನ ದಿನಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ. ‘ರಾಕ್ಷಸ್’ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಬಂಡವಾಳ ಹೂಡಬೇಕಿತ್ತು. ‘ಕೆಲವೊಂದು ವಿಚಾರಗಳಿಗೆ ಈಗ ಸಮಯ ಕೂಡಿಬಂದಿರುವುದಿಲ್ಲ’ ಎನ್ನುವ ಮೂಲಕ ಈ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us