AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ತಲಾದ್ರೂ ಕಾದಿದ್ದ ಜನಸಾಗರ; ಮನೆಯಿಂದ ಹೊರಬಂದು ವಿಶ್​ ಮಾಡಿದ ಶಾರುಖ್​, ಸಲ್ಲು

ದಿನವಿಡೀ ಹಬ್ಬದ ಖುಷಿಯಲ್ಲಿ ಬ್ಯುಸಿಯಾಗಿದ್ದ ಸಲ್ಮಾನ್​ ಖಾನ್​ ಸಂಜೆ ವೇಳೆಗೆ ಮನೆಯ ಬಾಲ್ಕನಿಗೆ ಬಂದರು. ಕತ್ತಲಾಗಿದ್ದರೂ ಅಭಿಮಾನಿಗಳ ಉತ್ಸಾಹ ಕಮ್ಮಿ ಆಗಿರಲಿಲ್ಲ. ಸಾವಿರಾರು ಜನರು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಮೊಬೈಲ್​ ಫೋನ್​ ಟಾರ್ಚ್​ ಆನ್​ ಮಾಡಿ ಅಭಿಮಾನ ಪ್ರದರ್ಶಿಸಿದರು. ಎಲ್ಲರ ಕಡೆಗೂ ಕೈ ಬೀಸಿ ಸಲ್ಮಾನ್​ ಖಾನ್​ ವಿಶ್​ ಮಾಡಿದರು. ಅದೇ ರೀತಿ ಶಾರುಖ್​ ಖಾನ್ ಅವರು ಸಂಜೆ ವೇಳೆಗೆ ಪುತ್ರ ಅಬ್ರಾಮ್​ ಜತೆ ‘ಮನ್ನತ್​’ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದರು.

ಕತ್ತಲಾದ್ರೂ ಕಾದಿದ್ದ ಜನಸಾಗರ; ಮನೆಯಿಂದ ಹೊರಬಂದು ವಿಶ್​ ಮಾಡಿದ ಶಾರುಖ್​, ಸಲ್ಲು
ಶಾರುಖ್​ ಖಾನ್​, ಸಲ್ಮಾನ್​ ಖಾನ್​
ಮದನ್​ ಕುಮಾರ್​
|

Updated on: Apr 11, 2024 | 10:32 PM

Share

ಬಾಲಿವುಡ್​ನ ಸ್ಟಾರ್​ ನಟರಾದ ಆಮಿರ್​ ಖಾನ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್​ (Salman Khan) ಮುಂತಾದವರು ಅದ್ದೂರಿಯಾಗಿ ಈದ್​ (Eid 2024) ಹಬ್ಬ ಆಚರಿಸಿದ್ದಾರೆ. ಇಂದು (ಏಪ್ರಿಲ್​ 11) ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ ಅವರು ಹಬ್ಬದ ಆಚರಣೆಯಲ್ಲಿ ಭಾಗಿ ಆಗಿದ್ದಾರೆ. ಈ ವಿಶೇಷ ದಿನದಂದು ಅವರನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಹಾಗಾಗಿ ಸಲ್ಮಾನ್​ ಖಾನ್​ ಹಾಗೂ ಶಾರುಖ್​ ಖಾನ್​ (Shah Rukh Khan) ಅವರ ಮನೆ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಕಾದಿದ್ದರು. ಅವರಿಗೆಲ್ಲ ಶಾರುಖ್​, ಸಲ್ಲು ದರ್ಶನ​ ನೀಡಿದ್ದಾರೆ. ಮನೆಯ ಬಾಲ್ಕನಿಗೆ ಬಂದು ಈದ್​ ಶುಭಾಶಯ ತಿಳಿಸಿದ್ದಾರೆ.

ಬರ್ತ್​ಡೇ ಹಾಗೂ ಈದ್​ ರೀತಿಯ ವಿಶೇಷ ದಿನದಂದು ಈ ಸ್ಟಾರ್​ ನಟರ ಮನೆ ಎದುರು ಅಭಿಮಾನಿಗಳು ಸೇರುತ್ತಾರೆ. ಇಂದು (ಏ.11) ಕೂಡ ಹಾಗೆಯೇ ಆಯಿತು. ಬೆಳಗ್ಗೆಯಿಂದಲೇ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರ ಮನೆ ಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಕತ್ತಲಾಗುವ ತನಕವೂ ಸಲ್ಮಾನ್​ ಖಾನ್​ ಅವರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು.

ಬೆಳಗ್ಗೆಯಿಂದ ಹಬ್ಬದ ಖುಷಿಯಲ್ಲಿ ಬ್ಯುಸಿ ಆಗಿದ್ದ ಸಲ್ಮಾನ್​ ಖಾನ್​ ಅವರು ಸಂಜೆ ನಂತರ ಮನೆಯ ಬಾಲ್ಕನಿಗೆ ಬಂದರು. ಆಗಲೂ ಅಭಿಮಾನಿಗಳ ಉತ್ಸಾಹ ಕಡಿಮೆ ಆಗಿರಲಿಲ್ಲ. ಸಾವಿರಾರು ಅಭಿಮಾನಿಗಳು ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಮೊಬೈಲ್​ ಟಾರ್ಚ್​ ಆನ್​ ಮಾಡಿ ಅಭಿಮಾನ ಪ್ರದರ್ಶಿಸಿದರು. ಎಲ್ಲರ ಕಡೆಗೂ ಕೈ ಬೀಸಿ ಸಲ್ಮಾನ್​ ಖಾನ್​ ವಿಶ್​ ಮಾಡಿದರು. ಅದೇ ರೀತಿ ಶಾರುಖ್​ ಖಾನ್ ಅವರು ಸಂಜೆ ವೇಳೆಗೆ ಪುತ್ರ ಅಬ್ರಾಮ್​ ಜೊತೆ ‘ಮನ್ನತ್​’ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದರು.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮನೆಗೆ ಪದೇಪದೇ ಭೇಟಿ ನೀಡುತ್ತಿರುವ ಅಟ್ಲಿ; ಏನು ಸಮಾಚಾರ?

ನಡೆಯಿತು ಲಾಠಿಚಾರ್ಚ್​

ಈದ್​ ಹಬ್ಬದ ಪ್ರಯುಕ್ತ ಮಧ್ಯಾಹ್ನ ಸಲ್ಮಾನ್​ ಖಾನ್​ ಅವರ ಮನೆ ಎದುರು ಜನಸಾಗರವೇ ಸೇರಿತ್ತು. ಅದರಿಂದ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದ್ದರಿಂದ ಪೊಲೀಸರು ಲಾಠಿಚಾರ್ಜ್​ ಮಾಡುವುದು ಅನಿವಾರ್ಯ ಆಯಿತು. ಹಾಗಿದ್ದರೂ ಕೂಡ ಜನರ ಉತ್ಸಾಹ ಕುಂದಲಿಲ್ಲ. ಸಂಜೆ ತನಕ ಕಾದಿದ್ದ ಅಭಿಮಾನಿಗಳು ಸಲ್ಮಾನ್​ ಖಾನ್​ ಅವರನ್ನು ನೋಡಿಕೊಂಡು ವಾಪಸ್​ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ