AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದ ಎದುರು ಸಿಹಿ ಹಂಚಿ, ‘ಫೋಟೋ ತೆಗೆಯಬೇಡಿ’ ಎಂದು ಸಾರಾ ಅಲಿ ಖಾನ್​

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ಅವರು ದೇವಾಲಯಗಳಿಗೆ ತೆರಳಿದಾಗಲೆಲ್ಲ ಕೆಲವರು ಟ್ರೋಲ್​ ಮಾಡುತ್ತಾರೆ. ಈ ಬಾರಿಯೂ ಕೂಡ ಟ್ರೋಲ್​ ಕಾಟ ಮುಂದುವರಿದಿದೆ. ಸೈಫ್​ ಅಲಿ ಖಾನ್​ ಪುತ್ರಿಯು ದೇವಸ್ಥಾನದ ಮುಂದೆ ಜನರಿಗೆ ಸಿಹಿ ಹಂಚಿದ ವಿಡಿಯೋಗಳು ವೈರಲ್​ ಆಗಿವೆ. ಸಾರಾ ಅಲಿ ಖಾನ್ ಪ್ರಚಾರಕ್ಕಾಗಿ ಇದನ್ನೆಲ್ಲ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ದೇವಸ್ಥಾನದ ಎದುರು ಸಿಹಿ ಹಂಚಿ, ‘ಫೋಟೋ ತೆಗೆಯಬೇಡಿ’ ಎಂದು ಸಾರಾ ಅಲಿ ಖಾನ್​
ಸಾರಾ ಅಲಿ ಖಾನ್​
ಮದನ್​ ಕುಮಾರ್​
|

Updated on: Mar 31, 2024 | 5:48 PM

Share

ನಟಿ ಸಾರಾ ಅಲಿ ಖಾನ್​ (Sara Ali Khan) ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಸೋಲು ಗೆಲುವು ಏನೇ ಇದ್ದರೂ ಅವರಿಗೆ ಸಿಗುವ ಅವಕಾಶ ಕಡಿಮೆ ಆಗಿಲ್ಲ. ಈ ತಿಂಗಳು ಅವರ ಎರಡು ಸಿನಿಮಾಗಳು ರಿಲೀಸ್​ ಆಗಿವೆ. ಈ ನಡುವೆ ಅವರು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕವೂ ಸುದ್ದಿ ಆಗುತ್ತಾರೆ. ಸಾರಾ ಅಲಿ ಖಾನ್​ ಈಗ ಜುಹೂನಲ್ಲಿ ಇರುವ ಶನಿ ದೇವಸ್ಥಾನಕ್ಕೆ (Shani Temple) ಭೇಟಿ ನೀಡಿದ್ದಾರೆ. ದೇವಸ್ಥಾನದ ಹೊರಗೆ ಇರುವ ಅನೇಕರಿಗೆ ಅವರು ಸಿಹಿ ಹಂಚಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್​ ಆಗಿವೆ. ಸಿಹಿ ಹಂಚುವಾಗ ತಮ್ಮ ಫೋಟೋ ತೆಗೆಯುವುದು ಬೇಡ ಎಂದು ಪಾಪರಾಜಿಗಳ ಬಳಿ ಸಾರಾ ಅಲಿ ಖಾನ್​ ಅವರು ಮನವಿ ಮಾಡಿಕೊಂಡಿದ್ದಾರೆ.

ಸಾರಾ ಅಲಿ ಖಾನ್​ ಅವರು ಹಿಂದೂ ದೇವಾಲಯಗಳಿಗೆ ತೆರಳಿದಾಗೆಲ್ಲ ಒಂದಷ್ಟು ಮಂದಿ ಟ್ರೋಲ್​ ಮಾಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಸಾರಾ ಅವರು ಶನಿ ದೇವಸ್ಥಾನದ ಎದುರು ಸಿಹಿ ಹಂಚಿದ ವಿಡಿಯೋಗಳು ಪಾಪರಾಜಿಗಳ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ವೈರಲ್​ ಆಗಿವೆ. ಪ್ರಚಾರಕ್ಕಾಗಿ ಸಾರಾ ಅಲಿ ಖಾನ್ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಸೈಫ್​ ಅಲಿ ಖಾನ್​ ಅವರ ಮಗಳು ಸಾರಾ ಅಲಿ ಖಾನ್​. ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತಿವೆ. ಅವರು ನೆಪೋಟಿಸಂನ ಫಲಾನುಭವಿ ಎಂದು ಅನೇಕರು ಟೀಕಿಸುತ್ತಿದ್ದಾರೆ. ಸಾರಾ ಅಲಿ ಖಾನ್ ನಟನೆಯ ‘ಯೇ ವತನ್​ ಮೇರೆ ವತನ್​’ ಹಾಗೂ ‘ಮರ್ಡರ್​ ಮುಬಾರಕ್​’ ಸಿನಿಮಾಗಳು ಮಾರ್ಚ್​ನಲ್ಲಿ ಒಟಿಟಿ ಮೂಲಕ ನೇರವಾಗಿ ಬಿಡುಗಡೆ ಆದವು.

ಹೊಗಳಿಕೆ ನಿರೀಕ್ಷಿಸಿದ್ದ ಸಾರಾ ಅಲಿ ಖಾನ್​ಗೆ ಸಿಕ್ಕಿದ್ದು ಟ್ರೋಲ್​ ಮಾತ್ರ

‘ಯೇ ವತನ್​ ಮೇರೆ ವತನ್​’ ಸಿನಿಮಾದಲ್ಲಿ ರೆಟ್ರೋ ಕಾಲದ ರಿಯಲ್​ ಲೈಫ್​ ಕಥೆ ಇದೆ. ಈ ಸಿನಿಮಾ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಮಾ.21ರಂದು ಬಿಡುಗಡೆ ಆಯಿತು. ಅದೇ ರೀತಿ, ‘ಮರ್ಡರ್​ ಮುಬಾರಕ್​’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಮಾರ್ಚ್​ 15ರಂದು ಪ್ರಸಾರ ಆರಂಭಿಸಿತು. ಕೆಲವರು ಸಾರಾ ಅಲಿ ಖಾನ್​ ನಟನೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ಮತ್ತೆ ಪ್ರಚಾರದ ಮೂಲಕ ಮುನ್ನೆಲೆಗೆ ಬರಲು ದೇವಸ್ಥಾನದ ಎದುರು ಸಿಹಿ ಹಂಚುವ ಗಿಮಿಕ್​ ಮಾಡಿದ್ದಾರೆ ಎಂದು ಕೆಲವರು ಕಮೆಂಟ್​ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ಸಾರಾ ಅಲಿ ಖಾನ್​ ಯಾವ ರೀತಿ ಉತ್ತರಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​