Pathaan: ‘ಶಾರುಖ್​ ಖಾನ್​ ಯಾಕೆ ಮನೆಯಿಂದ ಹೊರಗೆ ಬಂದಿಲ್ಲ?’; ನೇರ ಪ್ರಶ್ನೆ ಕೇಳಿದ ಅಭಿಮಾನಿಗೆ ಸಿಕ್ತು ಉತ್ತರ

| Updated By: ಮದನ್​ ಕುಮಾರ್​

Updated on: Jan 22, 2023 | 10:17 AM

Shah Rukh Khan Fans | Mannat: ಬಹುನಿರೀಕ್ಷಿತ ‘ಪಠಾಣ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 25ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಆ ಪ್ರಯುಕ್ತ ಶಾರುಖ್​ ಖಾನ್​ ಅವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

Pathaan: ‘ಶಾರುಖ್​ ಖಾನ್​ ಯಾಕೆ ಮನೆಯಿಂದ ಹೊರಗೆ ಬಂದಿಲ್ಲ?’; ನೇರ ಪ್ರಶ್ನೆ ಕೇಳಿದ ಅಭಿಮಾನಿಗೆ ಸಿಕ್ತು ಉತ್ತರ
ಶಾರುಖ್ ಖಾನ್
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಒಮ್ಮೆಯಾದರೂ ಅವರನ್ನು ನೇರವಾಗಿ ನೋಡಬೇಕು ಎಂಬುದು ಫ್ಯಾನ್ಸ್​ ಆಸೆ. ಅದಕ್ಕಾಗಿ ಅವರ ಮುಂಬೈ ನಿವಾಸ ‘ಮನ್ನತ್​’ (Mannat) ಎದುರು ಅನೇಕರು ಕಾಯುತ್ತಾರೆ. ಆದರೆ ಎಲ್ಲರಿಗೂ ಅವರನ್ನು ನೋಡುವ ಚಾನ್ಸ್​ ಸಿಗುವುದಿಲ್ಲ. ಕೆಲವು ವಿಶೇಷ ದಿನಗಳಲ್ಲಿ ಮಾತ್ರ ಶಾರುಖ್ ಖಾನ್​ ದರ್ಶನ ಸಿಗುತ್ತದೆ. ಇತ್ತೀಚೆಗೆ ಅಭಿಮಾನಿಯೊಬ್ಬರು ‘ಮನ್ನತ್​’ ಎದುರು ಗಂಟೆಗಟ್ಟಲೆ ಕಾದಿದ್ದಾರೆ. ಎಷ್ಟು ಕಾದರೂ ತಮ್ಮ ನೆಚ್ಚಿನ ಹೀರೋ ಹೊರಬಂದಿಲ್ಲ. ‘ಯಾಕೆ ನೀವು ಮನೆಯಿಂದ ಆಚೆ ಬಂದಿಲ್ಲ’ ಎಂದು ಆ ಅಭಿಮಾನಿ ಈಗ ನೇರವಾಗಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ‘ಪಠಾಣ್​’ (Pathaan Movie) ಹೀರೋ ಕಡೆಯಿಂದ ಉತ್ತರ ಕೂಡ ಸಿಕ್ಕಿದೆ.

ಬಹುನಿರೀಕ್ಷಿತ ‘ಪಠಾಣ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜನವರಿ 25ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಆ ಪ್ರಯುಕ್ತ ಶಾರುಖ್​ ಖಾನ್​ ಅವರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಟ್ವಿಟರ್​ನಲ್ಲಿ ಅವರು ಇತ್ತೀಚೆಗೆ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ಆಗ ಫ್ಯಾನ್ಸ್​ ಬಗೆಬಗೆಯ ಪ್ರಶ್ನೆ ಕೇಳಿದ್ದಾರೆ. ಆ ಪೈಕಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆ ಗಮನ ಸೆಳೆದಿದೆ.

ಇದನ್ನೂ ಓದಿ
Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ
Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​
Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ
Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

ಇದನ್ನೂ ಓದಿ: Pathaan: ‘ದೇಶ ಮಾತ್ರವಲ್ಲ, ಇಡೀ ಪ್ರಪಂಚವೇ ಶಾರುಖ್​ ಅವರನ್ನು ಮಿಸ್​ ಮಾಡಿಕೊಂಡಿದೆ’: ಜಾನ್​ ಅಬ್ರಾಹಂ

ಶಾರುಖ್​ ಖಾನ್​ ಅವರ ಮನೆ ಮುಂದಿನ ಖಾಲಿ ರಸ್ತೆಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಕರಣ್​ ಸಿಂಗ್​ ಎಂಬ ಅಭಿಮಾನಿ ಪೋಸ್ಟ್​ ಮಾಡಿದ್ದಾರೆ. ‘ನಿಮಗಾಗಿ ಕಾಯುತ್ತಿದ್ದೆ. ನೀವೇಕೆ ಹೊರಗೆ ಬರಲಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ. ‘ಆಲಸ್ಯ ಎನಿಸುತ್ತಿತ್ತು. ಹಾಗಾಗಿ ಮಲಗಿಕೊಂಡಿದ್ದೆ’ ಎಂದು ಶಾರುಖ್ ಖಾನ್​ ಅವರು ಉತ್ತರ ನೀಡಿದ್ದಾರೆ. ಈ ಟ್ವೀಟ್​ ವೈರಲ್​ ಆಗಿದೆ.

‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್​ ಅಬ್ರಾಹಂ ಅವರಿಗೆ ಈ ಚಿತ್ರದಲ್ಲಿ ವಿಲನ್​ ಪಾತ್ರವಿದೆ. ಈ ಸಿನಿಮಾದ ಟ್ರೇಲರ್​ ಧೂಳೆಬ್ಬಿಸಿದೆ. ‘ಬೇಷರಂ ರಂಗ್​..’ ಹಾಗೂ ‘ಜೂಮೇ ಜೋ ಪಠಾಣ್​..’ ಹಾಡುಗಳು ಶಾರುಖ್​ ಅಭಿಮಾನಿಗಳ ಮನ ಗೆದ್ದಿವೆ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

ಶಾರುಖ್​ ಖಾನ್​ ಅವರಿಗೆ ‘ಪಠಾಣ್​’ ಸಿನಿಮಾದ ಗೆಲುವು ಬಹಳ ಮುಖ್ಯವಾಗಲಿದೆ. ಈ ಹಿಂದೆ ಅವರು ನಟಿಸಿದ್ದ ‘ಜೀರೋ’ ಚಿತ್ರ  ಹೀನಾಯವಾಗಿ ಸೋತಿತ್ತು. ಆ ಬಳಿಕ ಅವರು ನಾಲ್ಕು ವರ್ಷ ಗ್ಯಾಪ್​ ತೆಗೆದುಕೊಂಡರು. ಈಗ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ಫ್ಯಾನ್ಸ್​ ಸಜ್ಜಾಗಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ವರ್ಷನ್​ನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:17 am, Sun, 22 January 23