Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?

Shahid Kapoor: ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಚಿತ್ರ ಬಾಕ್ಸಾಫೀಸ್​ನಲ್ಲಿ ಸೋಲು ಕಂಡಿತ್ತು. ಇದೀಗ ನಟ ಚಿತ್ರದ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ.

Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?
‘ಜೆರ್ಸಿ’ ಚಿತ್ರದಲ್ಲಿ ಶಾಹಿದ್ ಕಪೂರ್
Follow us
| Updated By: shivaprasad.hs

Updated on:Jun 05, 2022 | 9:35 AM

ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಅಭಿನಯಿಸಿದ್ದ ‘ಜೆರ್ಸಿ’ (Jersey Movie) ಏಪ್ರಿಲ್ 22ರಂದು ತೆರೆಕಂಡಿತ್ತು. ಅದೇ ಹೆಸರಿನ ತೆಲುಗು ಚಿತ್ರದ ರಿಮೇಕ್ ಆಗಿದ್ದ ‘ಜೆರ್ಸಿ’ ಬಾಕ್ಸಾಫೀಸ್​ನಲ್ಲಿ ಸೋಲು ಕಂಡಿತ್ತು. ಜತೆಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ನಟ ಚಿತ್ರದ ಸೋಲಿನ ಬಗ್ಗೆ ಮೌನಮುರಿದಿದ್ದಾರೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಐಐಎಫ್​ಎ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಜೆರ್ಸಿ ಸೋಲಿನ ಬಗ್ಗೆ ಪ್ರಶ್ನೆ ಎದುರಾಗಿದೆ. ಕ್ರಿಕೆಟ್​​ ಕುರಿತ ಕತೆ ಹೊಂದಿರುವ ‘ಜೆರ್ಸಿ’ ತಮಗೆ ಬಹಳ ಆಪ್ತವಾಗಿತ್ತು. ಆದರೆ ಜೀವನದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಪಾಠವನ್ನು ಈ ಚಿತ್ರ ಕಲಿಸಿದೆ ಎಂದಿದ್ದಾರೆ ಶಾಹಿದ್.

‘ಜೆರ್ಸಿ’ ಚಿತ್ರದಲ್ಲಿ ಮೃಣಾಲ್ ಥಾಕೂರ್, ಪಂಕಜ್ ಕಪೂರ್ ಮೊದಲಾದವರು ಬಣ್ಣಹಚ್ಚಿದ್ದರು. 2019ರಲ್ಲಿ ತೆಲುಗಿನಲ್ಲಿ ತೆರೆಕಂಡಿದ್ದ ನಾನಿ ಅಭಿನಯದ ‘ಜೆರ್ಸಿ’ ಅಲ್ಲಿ ಯಶಸ್ಸನ್ನು ಪಡೆದ ಬಳಿಕ ಬಾಲಿವುಡ್​ನಲ್ಲಿ ರಿಮೇಕ್ ಆಗಿತ್ತು. ಅಲ್ಲು ಅರವಿಂದ್, ದಿಲ್ ರಾಜು, ಅಮನ್ ಗಿಲ್​ ಈ ಚಿತ್ರವನ್ನು ನಿರ್ಮಿಸಿದ್ದರು. ಸುಮಾರು 35 ಕೋಟಿ ರೂ ವೆಚ್ಚದಲ್ಲಿ ಚಿತ್ರ ತಯಾರಾಗಿತ್ತು. ರಿಲೀಸ್ ಆದ ಮೊದಲ ದಿನ ಕೇವಲ 4 ಕೋಟಿ ರೂ ಗಳಿಸಿದ್ದ ಚಿತ್ರ ಒಟ್ಟಾರೆ 20 ಕೋಟಿ ರೂ ಆಸುಪಾಸಿನಷ್ಟು ಗಳಿಸಿತ್ತು ಎಂದು ವರದಿಗಳು ಹೇಳಿವೆ. ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರದ ಸೋಲಿನ ಬಗ್ಗೆ ಶಾಹಿದ್ ಕಪೂರ್ ಮುಕ್ತವಾಗಿ ಮಾತನಾಡಿದ್ದಾರೆ.

‘ನಾವು ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು’: ಶಾಹಿದ್ ಕಪೂರ್​

ಇದನ್ನೂ ಓದಿ
Image
ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್​? ಶಾಕಿಂಗ್​ ಸುದ್ದಿ ವೈರಲ್​
Image
Aniruddha Jatkar: ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಲಹೆಗಳನ್ನು ಮುಂದಿಟ್ಟ ನಟ ಅನಿರುದ್ಧ; ವಿವರ ಇಲ್ಲಿದೆ
Image
ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’
Image
Samantha: ಆ ಸ್ಟಾರ್ ನಟನೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರಾ ಸಮಂತಾ? ಕೇಳಿ ಬರುತ್ತಿದೆ ಹೊಸ ಗುಸುಗುಸು

ಸಂವಾದದಲ್ಲಿ ಮಾತನಾಡಿದ ಶಾಹಿದ್, ‘‘ಜೆರ್ಸಿ ನನಗೆ ಬಹಳ ಆಪ್ತವಾದ ಚಿತ್ರವಾಗಿತ್ತು. ಅದಕ್ಕೆ ಜನರ ಪ್ರೀತಿಯೂ ಸಿಕ್ಕಿದೆ. ಆದರೆ ಕೊವಿಡ್​ ನಂತರದ ಕಳೆದ ಎರಡು ವರ್ಷಗಳಿಂದ ಜನರ ಮನಸ್ಥಿತಿ ಬದಲಾಗಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದಿದ್ದಾರೆ. ಈ ಮೂಲಕ ಚಿತ್ರದ ಸೋಲಿಗೆ ಕಾರಣ ಹುಡುಕುವ ಯತ್ನ ನಡೆಸಿದ್ದಾರೆ.

‘‘ಜೆರ್ಸಿ ಮುಂದೆಯೂ ನನ್ನ ಹೃದಯಕ್ಕೆ ಆಪ್ತವಾದ ಚಿತ್ರವೇ ಆಗಿರುತ್ತದೆ’’ ಎಂದಿರುವ ನಟ, ‘‘ಆದರೆ ಈ ಚಿತ್ರ ನನಗೆ ಜೀವನದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದನ್ನು ಕಲಿಸಿದೆ’’ ಎಂದಿದ್ದಾರೆ. ‘ಜೆರ್ಸಿ’ ಬಾಕ್ಸಾಫೀಸ್​ ಸೋಲು ನಿರಾಶೆ ತಂದಿದೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಇಲ್ಲ ಎಂದಿದ್ದಾರೆ ಶಾಹಿದ್.

ಶಾಹಿದ್ ಕಪೂರ್ ಅವರ ಈ ಹಿಂದಿನ ಚಿತ್ರ ‘ಕಬೀರ್ ಸಿಂಗ್’ ಕೂಡ ತೆಲುಗು ರಿಮೇಕ್ ಆಗಿತ್ತು. ‘ಅರ್ಜುನ್ ರೆಡ್ಡಿ’ ಚಿತ್ರವನ್ನು ಕಬೀರ್ ಸಿಂಗ್ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಆ ಚಿತ್ರ ಬಾಕ್ಸಾಫೀಸ್​ನಲ್ಲಿ ಗೆದ್ದು ಬೀಗಿತ್ತು. ನಂತರದಲ್ಲಿ ಶಾಹಿದ್ ‘ಜೆರ್ಸಿ’ ರಿಮೇಕ್​ಗೆ ಮುಂದಾಗಿದ್ದರು. ಆದರೆ ಅದು ಯಶಸ್ವಿಯಾಗಿಲ್ಲ. ಇತ್ತೀಚೆಗೆ ಬಾಲಿವುಡ್​ನ ಸ್ಟಾರ್ ನಟರು ಮೂಲ ಚಿತ್ರಗಳಿಗಿಂತ ದಕ್ಷಿಣದ ಚಿತ್ರಗಳ ರಿಮೇಕ್ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ತೀವ್ರ ಟೀಕೆಗಳೂ ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಹಿದ್ ಕಪೂರ್ ಮುಂದಿನ ಚಿತ್ರಗಳ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವುದು ಕುತೂಹಲ ಮೂಡಿಸಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sun, 5 June 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ