AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ

Madhuri Dixit Mother Death: ಮುಂಬೈನ ನಿವಾಸದಲ್ಲಿ ಮಾಧುರಿ ದೀಕ್ಷಿತ್​ ಅವರ ತಾಯಿ ಸ್ನೇಹಲತಾ ದೀಕ್ಷಿತ್​ ಕೊನೆಯುಸಿರು ಎಳೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಪ್ತರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Snehalata Dixit: ಮಾಧುರಿ ದೀಕ್ಷಿತ್​ ತಾಯಿ ಸ್ನೇಹಲತಾ ನಿಧನ; 91ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಹಿರಿಯ ಜೀವ
ಸ್ನೇಹಲತಾ ದೀಕ್ಷಿತ್, ಮಾಧುರಿ ದೀಕ್ಷಿತ್
Follow us
ಮದನ್​ ಕುಮಾರ್​
|

Updated on:Mar 12, 2023 | 5:16 PM

ಬಾಲಿವುಡ್​ನ ಖ್ಯಾತ ನಟಿ ಮಾಧುರಿ ದೀಕ್ಷಿತ್​ (Madhuri Dixit) ಅವರ ಮನೆಯಲ್ಲಿ ಶೋಕದ ವಾತಾವರಣ ಸೃಷ್ಟಿ ಆಗಿದೆ. ಮಾಧುರಿ ತಾಯಿ ಸ್ನೇಹಲತಾ ದೀಕ್ಷಿತ್​ (Snehalata Dixit) ಅವರು ನಿಧನರಾಗಿದ್ದಾರೆ. ಮಾಧುರಿ ದೀಕ್ಷಿತ್​ ವೃತ್ತಿಜೀವನಕ್ಕೆ ಅವರ ತಾಯಿ ನೀಡಿದ ಬೆಂಬಲ ಅಪಾರ. ಅಮ್ಮ ಕಲಿಸಿದ ಶಿಸ್ತಿನ ಪಾಠದ ಬಗ್ಗೆ ಮಾಧುರಿ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಇಂದು (ಮಾರ್ಚ್​ 12) ಸ್ನೇಹಲತಾ ದೀಕ್ಷಿತ್​ ಅವರು ಮುಂಬೈನ ನಿವಾಸದಲ್ಲಿ ಕೊನೆಯುಸಿರು ಎಳೆದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮುಂಬೈನಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿ ಆಗಿದೆ. ತಾಯಿಯನ್ನು ಕಳೆದುಕೊಂಡ ಮಾಧುರಿ ದೀಕ್ಷಿತ್​ ಅವರಿಗೆ ಬಾಲಿವುಡ್​ನ (Bollywood) ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳು ಕೂಡ ಸ್ನೇಹಲತಾ ದೀಕ್ಷಿತ್​ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಗಾಯನದಲ್ಲಿ ಸ್ನೇಹಲತಾ ದೀಕ್ಷಿತ್​ ಅವರು ಆಸಕ್ತಿ ಹೊಂದಿದ್ದರು. 2013ರಲ್ಲಿ ಮಾಧುರಿ ದೀಕ್ಷಿತ್​ ನಟಿಸಿದ್ದ ‘ಗುಲಾಬ್​ ಗ್ಯಾಂಗ್​’ ಸಿನಿಮಾದ ಒಂದು ಹಾಡಿಗೆ ಸ್ನೇಹಲತಾ ಧ್ವನಿ ನೀಡಿದ್ದರು. ಆ ಘಟನೆಯನ್ನು ನಿರ್ದೇಶಕ ಅನುಭವ್​ ಸಿನ್ಹಾ ಅವರು ವಿವರಿಸಿದ್ದರು. ‘ಒಂದು ಹಾಡು ಹೇಳಬೇಕು ಅಂತ ನಾವು ಮಾಧರಿ ಅವರಿಗೆ ಕೇಳಿದೆವು. ರೆಕಾರ್ಡಿಂಗ್​ ದಿನ ಮಾಧುರಿ ಜೊತೆ ಸ್ನೇಹಲತಾ ಕೂಡ ಬಂದಿದ್ದರು. ಅವರ ಧ್ವನಿಯೂ ಮಧುರವಾಗಿದೆ ಅಂತ ಗೊತ್ತಾಯಿತು. ಹಾಗಾಗಿ ಅವರ ಬಳಿಯೂ ಹಾಡುವಂತೆ ಕೇಳಿಕೊಂಡೆವು. ಇಬ್ಬರೂ ಜೊತೆಯಾಗಿ ಆ ಹಾಡಿಗೆ ಧ್ವನಿ ನೀಡಿದರು’ ಎಂದು ಅನುಭವ್​ ಸಿನ್ಹಾ ಹೇಳಿದ್ದರು.

ಇದನ್ನೂ ಓದಿ: Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

ಇದನ್ನೂ ಓದಿ
Image
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
Image
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​
Image
Chalapathi Chowdary Death: ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ ನಿಧನ
Image
Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ

ವೃತ್ತಿಜೀವನದಲ್ಲಿ ಎಷ್ಟೇ ಜನಪ್ರಿಯತೆ, ಯಶಸ್ಸು ಸಿಕ್ಕರೂ ಕೂಡ ವೈಯಕ್ತಿಕ ಬದುಕು ಹೇಗೆ ಇರಬೇಕು ಎಂದು ಮಾಧುರಿ ದೀಕ್ಷಿತ್​ಗೆ ಕಲಿಸಿದ್ದೇ ಅವರ ತಾಯಿ ಸ್ನೇಹಲತಾ. ಆ ಬಗ್ಗೆ ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾಧುರಿ ದೀಕ್ಷಿತ್​ ಹೇಳಿಕೊಂಡಿದ್ದರು.

‘ನಾನು ಸಿನಿಮಾ ನಟಿ ಆದ ನಂತರವೂ ಒಂದು ವೇಳೆ ನನ್ನ ರೂಮ್​ ಸರಿಯಾಗಿ ಇಟ್ಟುಕೊಳ್ಳದೇ ಇದ್ದರೆ ಅಮ್ಮ ಬೈಯ್ಯುತ್ತಿದ್ದರು. ಆ ರೀತಿ ಅವರು ನನ್ನನ್ನು ಬೆಳೆಸಿದರು. ಅದಕ್ಕಾಗಿಯೇ ನಾನು ಹೀಗೆ ಇದ್ದೇನೆ. ಮನೆಗೆ ಬಂದಾಗ ಗಂಡ ಮತ್ತು ಮಕ್ಕಳನ್ನು ನೋಡುತ್ತೇನೆ. ಕೆಲಸದ ವಿಚಾರವನ್ನು ಸ್ಟುಡಿಯೋದಲ್ಲಿ ಬಿಟ್ಟು ಬರುತ್ತೇನೆ’ ಎಂದು ಮಾಧುರಿ ದೀಕ್ಷಿತ್​ ಹೇಳಿದ್ದರು.

ಇದನ್ನೂ ಓದಿ: ಸಲಿಂಗಕಾಮಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್​? ಹೊರಬಿತ್ತು ಫ್ಯಾನ್ಸ್​ ಅಚ್ಚರಿಪಡುವಂತಹ ಬ್ರೇಕಿಂಗ್​ ನ್ಯೂಸ್​

ಸ್ನೇಹಲತಾ ದೀಕ್ಷಿತ್​ ಅವರ 90ನೇ ವರ್ಷದ ಹುಟ್ಟುಹಬ್ಬಕ್ಕೆ ಮಾಧುರಿ ದೀಕ್ಷಿತ್​ ಭಾವುಕವಾಗಿ ಪೋಸ್ಟ್​ ಮಾಡಿದ್ದರು. ‘ನೀವು ಕಲಿಸಿದ ಪಾಠಗಳೇ ನನ್ನ ಬದುಕಿಗೆ ದೊಡ್ಡ ಉಡುಗೊರೆ’ ಎಂದು ಅವರು ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:16 pm, Sun, 12 March 23

Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ