AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 16, 2021 | 6:16 PM

ಹಿರಿಯ ನಟರ ಬಳಿ ನಿರ್ದೇಶಕರು ತುಂಬಾನೇ ನಾಜೂಕಾಗಿ ನಡೆದುಕೊಳ್ಳಬೇಕು. ಶೂಟಿಂಗ್​ ವೇಳೆ ಹೆಚ್ಚು ಟೇಕ್​ ತೆಗೆದುಕೊಂಡರೆ ಹಿರಿಯ ನಟರು ಇದನ್ನು ಸಹಿಸುವುದೇ ಇಲ್ಲ. ಈಗ ನಟ ಸನ್ನಿ ಡಿಯೋಲ್​ ವಿಚಾರದಲ್ಲೂ ಹೀಗೆಯೇ ಆಗಿದೆ. ನಾಲ್ಕು ಬಾರಿ ರಿಟೇಕ್​ ಹೇಳಿದ ವ್ಯಕ್ತಿ ಎದುರೇ ಸ್ಕ್ರಿಪ್ಟ್​ ಪೇಪರ್​​ಅನ್ನು ಮುದ್ದೆಕಟ್ಟಿ ಎಸೆದಿದ್ದಾರೆ ಸನ್ನಿ. ಈ ವೇಳೆ ಸನ್ನಿ ಮುಖದಲ್ಲಿ ತುಂಬಾನೇ ಗಾಂಭೀರ್ಯತೆ ಹಾಗೂ ಕೋಪ ಇತ್ತು. ಆದರೆ, ಇದು ತಮಾಷೆಗೆ ಮಾಡಿದ ವಿಡಿಯೋ ಎನ್ನುವುದು ಸನ್ನಿ ಹೇಳಿದ ಡೈಲಾಗ್​ ಹಾಗೂ ಈ ಪೋಸ್ಟ್​​ಗೆ ನೀಡಿದ ಕ್ಯಾಪ್ಶನ್​​​ನಿಂದ ಅಭಿಮಾನಿಗಳಿಗೆ ಮನದಟ್ಟಾಗಿದೆ.

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ. ಅದರಂತೆ ಸನ್ನಿ ಮೊದಲ ಬಾರಿ ಈ ಡೈಲಾಗ್​ ಹೇಳಿದ್ದಾರೆ. ಆಗ ಎದುರಿದ್ದ ವ್ಯಕ್ತಿ ಧ್ವನಿ ಏರಿಸುವಂತೆ ಕೋರಿದ್ದ. ಇದು ನಾಲ್ಕು ಬಾರಿ ರಿಪೀಟ್​ ಆಗಿದೆ. ಆಗ ಸನ್ನಿಗೆ ಕೋಪ ಬಂದಿದೆ. ಎದುರಿದ್ದ ವ್ಯಕ್ತಿಯ ಸ್ಕ್ರಿಪ್ಟ್​ ಪೇಪರ್​ ಕಸಿದು ಎಸೆದ ಸನ್ನಿ, ‘ನಾನೇನು ಇಂದಿರಾ ನಗರದ ಗೂಂಡಾ ಎಂದುಕೊಂಡಿದ್ದೀಯಾ?’ ಎಂದು ಪ್ರಶ್ನೆ ಮಾಡಿದ್ದಾರೆ.

View this post on Instagram

A post shared by Sunny Deol (@iamsunnydeol)

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್​ಗಳು ಪ್ರಸಾರವಾದರೆ ಚಾನೆಲ್​ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ಹೊಸ ವಿಧವಾದ ಆ್ಯಡ್​ನೊಂದಿಗೆ ಕ್ರೆಡ್​ ಬಂದಿತ್ತು. ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಬೆಂಗಳೂರು ಟ್ರಾಫಿಕ್​ ಬಗ್ಗೆ ತುಂಬಾನೇ ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಟ್ರಾಫಿಕ್​ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದರು.  ಈ ಜಾಹೀರಾತು ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು