AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ.

ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
ಹೆಚ್ಚು ರೀಟೇಕ್​ ಕೇಳಿದ ನಿರ್ದೇಶಕ; ಸಿಟ್ಟಲ್ಲಿ ಸ್ಕ್ರಿಪ್ಟ್​ ಪೇಪರ್​ ಮುದ್ದೆಕಟ್ಟಿ ಎಸೆದ ಖ್ಯಾತ ನಟ
TV9 Web
| Edited By: |

Updated on: Aug 16, 2021 | 6:16 PM

Share

ಹಿರಿಯ ನಟರ ಬಳಿ ನಿರ್ದೇಶಕರು ತುಂಬಾನೇ ನಾಜೂಕಾಗಿ ನಡೆದುಕೊಳ್ಳಬೇಕು. ಶೂಟಿಂಗ್​ ವೇಳೆ ಹೆಚ್ಚು ಟೇಕ್​ ತೆಗೆದುಕೊಂಡರೆ ಹಿರಿಯ ನಟರು ಇದನ್ನು ಸಹಿಸುವುದೇ ಇಲ್ಲ. ಈಗ ನಟ ಸನ್ನಿ ಡಿಯೋಲ್​ ವಿಚಾರದಲ್ಲೂ ಹೀಗೆಯೇ ಆಗಿದೆ. ನಾಲ್ಕು ಬಾರಿ ರಿಟೇಕ್​ ಹೇಳಿದ ವ್ಯಕ್ತಿ ಎದುರೇ ಸ್ಕ್ರಿಪ್ಟ್​ ಪೇಪರ್​​ಅನ್ನು ಮುದ್ದೆಕಟ್ಟಿ ಎಸೆದಿದ್ದಾರೆ ಸನ್ನಿ. ಈ ವೇಳೆ ಸನ್ನಿ ಮುಖದಲ್ಲಿ ತುಂಬಾನೇ ಗಾಂಭೀರ್ಯತೆ ಹಾಗೂ ಕೋಪ ಇತ್ತು. ಆದರೆ, ಇದು ತಮಾಷೆಗೆ ಮಾಡಿದ ವಿಡಿಯೋ ಎನ್ನುವುದು ಸನ್ನಿ ಹೇಳಿದ ಡೈಲಾಗ್​ ಹಾಗೂ ಈ ಪೋಸ್ಟ್​​ಗೆ ನೀಡಿದ ಕ್ಯಾಪ್ಶನ್​​​ನಿಂದ ಅಭಿಮಾನಿಗಳಿಗೆ ಮನದಟ್ಟಾಗಿದೆ.

1993ರಲ್ಲಿ ತೆರೆಗೆ ಬಂದ ‘ದಾಮಿನಿ’ ಸಿನಿಮಾದಲ್ಲಿ ಸನ್ನಿ ಡಿಯೋಲ್​ ನಟಿಸಿದ್ದರು. ಈ ಸಿನಿಮಾದಲ್ಲಿ ‘ತಾರಿಖ್​ ಪೇ ತಾರಿಖ್​..’ ಎನ್ನುವ ಡೈಲಾಗ್​ ಬರುತ್ತದೆ. ಈ ಡೈಲಾಗ್​ ಅನ್ನು ಹೇಳುವಂತೆ ಎದುರು ಕೂತಿದ್ದ ವ್ಯಕ್ತಿ ಸನ್ನಿ ಅವರಿಗೆ ಸೂಚಿಸಿದ್ದ. ಅದರಂತೆ ಸನ್ನಿ ಮೊದಲ ಬಾರಿ ಈ ಡೈಲಾಗ್​ ಹೇಳಿದ್ದಾರೆ. ಆಗ ಎದುರಿದ್ದ ವ್ಯಕ್ತಿ ಧ್ವನಿ ಏರಿಸುವಂತೆ ಕೋರಿದ್ದ. ಇದು ನಾಲ್ಕು ಬಾರಿ ರಿಪೀಟ್​ ಆಗಿದೆ. ಆಗ ಸನ್ನಿಗೆ ಕೋಪ ಬಂದಿದೆ. ಎದುರಿದ್ದ ವ್ಯಕ್ತಿಯ ಸ್ಕ್ರಿಪ್ಟ್​ ಪೇಪರ್​ ಕಸಿದು ಎಸೆದ ಸನ್ನಿ, ‘ನಾನೇನು ಇಂದಿರಾ ನಗರದ ಗೂಂಡಾ ಎಂದುಕೊಂಡಿದ್ದೀಯಾ?’ ಎಂದು ಪ್ರಶ್ನೆ ಮಾಡಿದ್ದಾರೆ.

View this post on Instagram

A post shared by Sunny Deol (@iamsunnydeol)

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್​ಗಳು ಪ್ರಸಾರವಾದರೆ ಚಾನೆಲ್​ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ಹೊಸ ವಿಧವಾದ ಆ್ಯಡ್​ನೊಂದಿಗೆ ಕ್ರೆಡ್​ ಬಂದಿತ್ತು. ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಬೆಂಗಳೂರು ಟ್ರಾಫಿಕ್​ ಬಗ್ಗೆ ತುಂಬಾನೇ ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಟ್ರಾಫಿಕ್​ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದರು.  ಈ ಜಾಹೀರಾತು ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ