AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ

‘ಹೀರಾಮಂಡಿ’ ವೆಬ್​ ಸರಣಿ ಮೂಲಕ ನಟಿ ಮನಿಷಾ ಕೊಯಿರಾಲಾ ಅವರು ದೊಡ್ಡ ಯಶಸ್ಸು ಪಡೆದಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ಗಳು ಮನಿಷಾಗೆ ಒತ್ತಾಯ ಮಾಡುತ್ತಿದ್ದರು. ಆ ಸಂದರ್ಭ ಹೇಗಿತ್ತು ಎಂಬುದನ್ನು ಮನಿಷಾ ಈಗ ವಿವರಿಸಿದ್ದಾರೆ.

‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ
ಮನಿಷಾ ಕೊಯಿರಾಲಾ
ಮದನ್​ ಕುಮಾರ್​
|

Updated on: Jul 08, 2024 | 9:28 PM

Share

ನಟಿ ಮನಿಷಾ ಕೊಯಿರಾಲಾ ಅವರು ಸ್ಟಾರ್​ ನಟಿಯಾಗಿ ಬೆಳೆದಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರು ಅನೇಕ ಕಹಿ ಘಟನೆಗಳನ್ನು ಎದುರಿಸಿದ್ದರು. ಆ ಪೈಕಿ ಒಂದು ಘಟನೆಯ ಬಗ್ಗೆ ಈಗ ಅವರು ಮಾತನಾಡಿದ್ದಾರೆ. 90ರ ದಶಕದಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ನಟಿಯಾಗಬೇಕು ಎಂಬ ಹಂಬಲ ಹೊಂದಿದ್ದ ಅವರು ಫೋಟೋಶೂಟ್​ ಮಾಡಿಸಲು ತೆರಳಿದ್ದರು. ಆಗ ಫೋಟೋಗ್ರಾಫರ್​ ನಡೆದುಕೊಂಡ ರೀತಿಯ ಬಗ್ಗೆ ಮನಿಷಾಗೆ ತೀವ್ರ ಅಸಮಾಧಾನ ಇದೆ. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ ಒತ್ತಾಯ ಮಾಡಿದ್ದ ಎಂಬುದನ್ನು ಮನಿಷಾ ಕೊಯಿರಾಲಾ ಈಗ ನೆನಪು ಮಾಡಿಕೊಂಡಿದ್ದಾರೆ.

‘ನನ್ನ ವೃತ್ತಿಜೀವನದ ಆರಂಭದಲ್ಲಿ ಫೋಟೋಶೂಟ್​ ಮಾಡಿಸಲು ಹೇಳಿದ್ದರು. ಆಗ ತುಂಬ ಫೇಮಸ್​ ಆಗಿದ್ದ ಫೋಟೋಗ್ರಾಫರ್​ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅವರ ಬಳಿ ಹೋದೆ. ನೀವೇ ಮುಂದಿನ ಸೂಪರ್​ ಸ್ಟಾರ್​ ಎಂದು ಆ ಫೋಟೋಗ್ರಾಫರ್ ನನಗೆ ಹೇಳಿದರು. ನಂತರ ಒಂದು ಬಿಕಿನಿ ತಂದುಕೊಟ್ಟು, ಅದನ್ನು ಧರಿಸು ಅಂತ ಒತ್ತಾಯಿಸಿದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

‘ಸರ್​, ನಾನು ಇದನ್ನು ಬೀಚ್​ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎಂಬುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಅವರಿಗೆ ನೇರವಾಗಿ ಹೇಳಿದೆ’ ಎಂದು ಆ ಘಟನೆಯನ್ನು ಮನಿಷಾ ಕೊಯಿರಾಲಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

ಮನಿಷಾ ನೀಡಿದ ಉತ್ತರದಿಂದ ಆ ಫೋಟೋಗ್ರಾಫರ್​ಗೆ ಕೋಪ ಬಂದಿತ್ತು. ‘ಮಣ್ಣು ಹಸಿಯಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ’ ಎಂದು ಆತ ಸಿಟ್ಟುಮಾಡಿಕೊಂಡಿದ್ದ. ‘ಇದು ಅಂಥ ಜನರ ಮನಸ್ಥಿತಿ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ವ್ಯಕ್ತಿ ನನ್ನ ಫೋಟೋಶೂಟ್​ ಮಾಡಿದ. ಅವರಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅವರ ತಿಳಿವಳಿಕೆಯೇ ಅಷ್ಟು. ಆದ್ದರಿಂದ ಅವರು ಆ ರೀತಿ ವರ್ತಿಸಿದ್ದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?