‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ

‘ಹೀರಾಮಂಡಿ’ ವೆಬ್​ ಸರಣಿ ಮೂಲಕ ನಟಿ ಮನಿಷಾ ಕೊಯಿರಾಲಾ ಅವರು ದೊಡ್ಡ ಯಶಸ್ಸು ಪಡೆದಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ಗಳು ಮನಿಷಾಗೆ ಒತ್ತಾಯ ಮಾಡುತ್ತಿದ್ದರು. ಆ ಸಂದರ್ಭ ಹೇಗಿತ್ತು ಎಂಬುದನ್ನು ಮನಿಷಾ ಈಗ ವಿವರಿಸಿದ್ದಾರೆ.

‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ
ಮನಿಷಾ ಕೊಯಿರಾಲಾ
Follow us
|

Updated on: Jul 08, 2024 | 9:28 PM

ನಟಿ ಮನಿಷಾ ಕೊಯಿರಾಲಾ ಅವರು ಸ್ಟಾರ್​ ನಟಿಯಾಗಿ ಬೆಳೆದಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರು ಅನೇಕ ಕಹಿ ಘಟನೆಗಳನ್ನು ಎದುರಿಸಿದ್ದರು. ಆ ಪೈಕಿ ಒಂದು ಘಟನೆಯ ಬಗ್ಗೆ ಈಗ ಅವರು ಮಾತನಾಡಿದ್ದಾರೆ. 90ರ ದಶಕದಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ನಟಿಯಾಗಬೇಕು ಎಂಬ ಹಂಬಲ ಹೊಂದಿದ್ದ ಅವರು ಫೋಟೋಶೂಟ್​ ಮಾಡಿಸಲು ತೆರಳಿದ್ದರು. ಆಗ ಫೋಟೋಗ್ರಾಫರ್​ ನಡೆದುಕೊಂಡ ರೀತಿಯ ಬಗ್ಗೆ ಮನಿಷಾಗೆ ತೀವ್ರ ಅಸಮಾಧಾನ ಇದೆ. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ ಒತ್ತಾಯ ಮಾಡಿದ್ದ ಎಂಬುದನ್ನು ಮನಿಷಾ ಕೊಯಿರಾಲಾ ಈಗ ನೆನಪು ಮಾಡಿಕೊಂಡಿದ್ದಾರೆ.

‘ನನ್ನ ವೃತ್ತಿಜೀವನದ ಆರಂಭದಲ್ಲಿ ಫೋಟೋಶೂಟ್​ ಮಾಡಿಸಲು ಹೇಳಿದ್ದರು. ಆಗ ತುಂಬ ಫೇಮಸ್​ ಆಗಿದ್ದ ಫೋಟೋಗ್ರಾಫರ್​ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅವರ ಬಳಿ ಹೋದೆ. ನೀವೇ ಮುಂದಿನ ಸೂಪರ್​ ಸ್ಟಾರ್​ ಎಂದು ಆ ಫೋಟೋಗ್ರಾಫರ್ ನನಗೆ ಹೇಳಿದರು. ನಂತರ ಒಂದು ಬಿಕಿನಿ ತಂದುಕೊಟ್ಟು, ಅದನ್ನು ಧರಿಸು ಅಂತ ಒತ್ತಾಯಿಸಿದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

‘ಸರ್​, ನಾನು ಇದನ್ನು ಬೀಚ್​ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎಂಬುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಅವರಿಗೆ ನೇರವಾಗಿ ಹೇಳಿದೆ’ ಎಂದು ಆ ಘಟನೆಯನ್ನು ಮನಿಷಾ ಕೊಯಿರಾಲಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

ಮನಿಷಾ ನೀಡಿದ ಉತ್ತರದಿಂದ ಆ ಫೋಟೋಗ್ರಾಫರ್​ಗೆ ಕೋಪ ಬಂದಿತ್ತು. ‘ಮಣ್ಣು ಹಸಿಯಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ’ ಎಂದು ಆತ ಸಿಟ್ಟುಮಾಡಿಕೊಂಡಿದ್ದ. ‘ಇದು ಅಂಥ ಜನರ ಮನಸ್ಥಿತಿ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ವ್ಯಕ್ತಿ ನನ್ನ ಫೋಟೋಶೂಟ್​ ಮಾಡಿದ. ಅವರಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅವರ ತಿಳಿವಳಿಕೆಯೇ ಅಷ್ಟು. ಆದ್ದರಿಂದ ಅವರು ಆ ರೀತಿ ವರ್ತಿಸಿದ್ದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ