Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ನಂತರವೂ ಬೇರೆ ಸಂಬಂಧ ಇಟ್ಟುಕೊಂಡಿದ್ದ ಬಾಲಿವುಡ್‌ ನಟರು

Bollywood: ಬಾಲಿವುಡ್​ ಸೆಲೆಬ್ರಿಟಿಗಳು ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ಜೀವನದಿಂದಲೂ ಸಾಕಷ್ಟು ಸುದ್ದಿಯಾಗುತ್ತಿರುತ್ತಾರೆ. ಪದೇ ಪದೇ ಬಾಯ್​ಫ್ರೆಂಡ್, ಪತಿ-ಪತ್ನಿಯರನ್ನು ಬದಲಾಯಿಸುತ್ತಲೇ ಇರುವ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ.

ಮದುವೆ ನಂತರವೂ ಬೇರೆ ಸಂಬಂಧ ಇಟ್ಟುಕೊಂಡಿದ್ದ ಬಾಲಿವುಡ್‌ ನಟರು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 10, 2024 | 2:45 PM

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ವಿಚಾರ ಸುದ್ದಿಯಲ್ಲಿದೆ. ಅಭಿಷೇಕ್ ಬಚ್ಚನ್ ಜೊತೆ ನಟಿ ನಿಮ್ರತ್ ಕೌರ್ ಸಂಬಂಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಕಾರಣಕ್ಕೆ ವಿಚ್ಛೇದನ ಆಗುತ್ತಿದೆ ಎನ್ನಲಾಗಿದೆ. ಈ ರೀತಿಯ ಕಾರಣಕ್ಕೆ ಸೆಲೆಬ್ರಿಟಿಗಳು ಸುದ್ದಿ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ವಿವಾಹೇತರ ಸಂಬಂಧದಿಂದ ಅನೇಕ ಸೆಲೆಬ್ರಿಟಿಗಳ ದಾಂಪತ್ಯ ಮುರಿದು ಬಿದ್ದಿದೆ.

ಶತ್ರುಘ್ನ ಸಿನ್ಹಾ

70-80ರ ದಶಕದಲ್ಲಿ ಶತ್ರುಘ್ನ ಸಿನ್ಹಾ ಅವರ ಅಫೇರ್ ಬಗ್ಗೆ ಚರ್ಚೆಯಾಗುತ್ತಿತ್ತು. ಮದುವೆಯ ನಂತರವೂ ಶತ್ರುಘ್ನ ಸಿನ್ಹಾ ಅವರು ರೀನಾ ರಾಯ್ ಅವರೊಂದಿಗೆ ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದ್ದು, ಈ ವಿಷಯ ಅವರ ಪತ್ನಿಗೂ ತಿಳಿದಿತ್ತು ಎನ್ನಲಾಗಿದೆ. ಆದರೆ, ಕೆಲ ವರ್ಷಗಳ ಬಳಿಕ ರೀನಾ ಜತೆಗಿನ ಸಂಬಂಧ ಮುರಿದುಬಿತ್ತು.

ಮಿಥುನ್ ಚಕ್ರವರ್ತಿ

ಮಿಥುನ್ ಚಕ್ರವರ್ತಿ 1979ರಕ್ಕು ಯೋಗಿತಾ ಬಾಲಿ ಅವರನ್ನು ವಿವಾಹವಾದರು. ಆದರೆ ಈ ಮಧ್ಯೆ ಅವರ ಹೆಸರು ಶ್ರೀದೇವಿಯೊಂದಿಗೆ ಸಂಬಂಧ ಹೊಂದಿತ್ತು. ಇದೇ ವೇಳೆ ಮಿಥುನ್ ಪತ್ನಿಗೆ ವಿಚ್ಛೇದನ ನೀಡಿಲ್ಲ ಎಂಬುದು ಶ್ರೀದೇವಿಗೆ ತಿಳಿಯಿತು. ನಂತರ ಶ್ರೀದೇವಿ 1988 ರಲ್ಲಿ ಸಂಬಂಧವನ್ನು ಕೊನೆಗೊಳಿಸಿದರು.

ಸನ್ನಿ ಡಿಯೋಲ್

ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ ಅವರ ಅಫೇರ್ ಒಂದು ಕಾಲದಲ್ಲಿ ಹಾಟ್ ಟಾಪಿಕ್ ಆಗಿತ್ತು. 80ರ ದಶಕದಲ್ಲಿ ಸನ್ನಿ ಮತ್ತು ಡಿಂಪಲ್ ಜೋಡಿ ಎಲ್ಲರ ಗಮನ ಸೆಳೆದಿತ್ತು. ಡಿಂಪಲ್ ಅವರ ಸಹೋದರಿ ಸಿಂಪಲ್ ಕಪಾಡಿಯಾ ನಿಧನರಾದಾಗಲೂ ಸನ್ನಿ ಡಿಯೋಲ್ ಅವರು ತೆರಳಿ ಡಿಂಪಲ್ಗೆ ಸಾಂತ್ವನ ಹೇಳುತ್ತಿದ್ದರು. ಇಬ್ಬರೂ ಸುಮಾರು 11 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ವಿಡಿಯೋ: ರಾಶಿ ಖನ್ನಾಗೆ ಮೇಕಪ್ ಮಾಡಿದ ಬಾಲಿವುಡ್ ನಟ

ಆಮಿರ್ ಖಾನ್

ನಂತರ ಅಮೀರ್ ಖಾನ್ ತನ್ನ ಬಾಲ್ಯದ ಗೆಳತಿ ರೀನಾಳನ್ನು ವಿವಾಹವಾದರು. ಇದಾದ ನಂತರ ಅಮೀರ್ ‘ಲಗಾನ್’ನ ಸಹಾಯಕ ನಿರ್ದೇಶಕ ಕಿರಣ್ ರಾವ್ ಅವರನ್ನು ಪ್ರೀತಿಸಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು.

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರ ಹೆಸರು ಈ ಪಟ್ಟಿಯಲ್ಲಿ ಪ್ರಮುಖವಾಗಿ ಬರುತ್ತದೆ. ಏಕೆಂದರೆ ಅವರ ಮತ್ತು ರೇಖಾ ಅವರ ಸಂಬಂಧವು ಇಂದಿಗೂ ಸಹ ಚರ್ಚೆಯಲ್ಲಿದೆ. ಇದು ಯಾವಾಗಲೂ ವಿವಾದಾತ್ಮಕವಾಗಿ ಉಳಿಯುತ್ತದೆ. ಜಯಾ ಮದುವೆ ಬಳಿಕ ಅವರು ರೇಖಾ ಜೊತೆ ಸಂಬಂಧ ಹೊಂದಿದ್ದರು.

ಧರ್ನೇಂದ್ರ

ಧರ್ಮೇಂದ್ರ ಅವರು ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಧರ್ಮೇಂದ್ರ ಅವರು ನಟಿ ಹೇಮಾ ಮಾಲಿನಿ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಬಯಸಿದ್ದರು. ಆದರೆ ಧರ್ಮೇಂದ್ರನ ಮೊದಲ ಪತ್ನಿ ವಿಚ್ಛೇದನ ನೀಡಲು ಸಿದ್ಧವಿಲ್ಲದ ಕಾರಣ ಧರ್ಮವನ್ನು ಬದಲಿಸಿ ಹೇಮಾರನ್ನು ಮದುವೆಯಾದರು.

ರಾಜ್ ಕಪೂರ್

ರಾಜ್ ಕಪೂರ್ ಮತ್ತು ನರ್ಗೀಸ್ ನಡುವಿನ ಸಂಬಂಧ ಸಾಕಷ್ಟು ಚರ್ಚೆ ಆಗಿತ್ತು. ನಟನು ತನ್ನ ಹೆಂಡತಿಗೆ ನಿಷ್ಠೆಯಿಂದ ನಟಿಯನ್ನು ಮದುವೆಯಾಗಲು ನಿರಾಕರಿಸಿದನು ಮತ್ತು ನಂತರ ಇಬ್ಬರೂ ತಮ್ಮ ಜೀವನವನ್ನು ಮುಂದುವರೆಸಿದರು.

ದಿಲೀಪ್ ಕುಮಾರ್

ದಿಲೀಪ್ ಕುಮಾರ್ 44 ನೇ ವಯಸ್ಸಿನಲ್ಲಿ ಸಾಯಿರಾ ಬಾನು ಅವರನ್ನು ವಿವಾಹವಾದರು ಮತ್ತು ಈ ಸಮಯದಲ್ಲಿ ಅವರು ಆಸ್ಮಾ ಎಂಬ ಪಾಕಿಸ್ತಾನಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್