Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ಸ್ತ್ರೀ ವಿರೋಧಿ ಸಿನಿಮಾ ಅಲ್ಲ: ನಟಿ ತೃಪ್ತಿ ದಿಮ್ರಿ ಸಮರ್ಥನೆ

ರಣಬೀರ್​ ಕಪೂರ್​ ನಟನೆಯ ‘ಅನಿಮಲ್’ ಸಿನಿಮಾ ಬಿಡುಗಡೆ ಆದಾಗ ಅದನ್ನು ಮಹಿಳಾ ವಿರೋಧಿ ಚಿತ್ರ ಎಂದು ಅನೇಕರು ಕರೆದಿದ್ದರು. ಆದರೆ ಈ ಮಾತನ್ನು ನಟಿ ತೃಪ್ತಿ ದಿಮ್ರಿ ಅವರು ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಅನಿಮಲ್’ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ಅವರು ತಿಳಿಸಿದ್ದಾರೆ.

‘ಅನಿಮಲ್’ ಸ್ತ್ರೀ ವಿರೋಧಿ ಸಿನಿಮಾ ಅಲ್ಲ: ನಟಿ ತೃಪ್ತಿ ದಿಮ್ರಿ ಸಮರ್ಥನೆ
Ranbir Kapoor, Tripti Dimri
Follow us
ಮದನ್​ ಕುಮಾರ್​
|

Updated on: Jan 05, 2025 | 7:18 PM

ನಟಿ ತೃಪ್ತಿ ದಿಮ್ರಿ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿದ್ದೇ ‘ಅನಿಮಲ್’ ಸಿನಿಮಾ ಮೂಲಕ. ಅದಕ್ಕೂ ಮುನ್ನ ‘ಬುಲ್ ಬುಲ್’, ‘ಕಲಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರೂ ಕೂಡ ಭಾರಿ ಜನಪ್ರಿಯತೆ ಸಿಕ್ಕಿರಲಿಲ್ಲ. ಆದರೆ ‘ಅನಿಮಲ್’ ಸಿನಿಮಾದಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಆದರೆ ಈ ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ವಿಮರ್ಶಕರು ತಕರಾರು ತೆಗೆದಿದ್ದರು. ಇದನ್ನು ಮಹಿಳಾ ವಿರೋಧಿ ಸಿನಿಮಾ ಎಂದು ಕೂಡ ಹೇಳಲಾಗಿತ್ತು. ಆದರೆ ಈ ಮಾತುಗಳಿಗೆ ತೃಪ್ತಿ ದಿಮ್ರಿ ಅವರು ಸಹಮತ ಸೂಚಿಸಿಲ್ಲ.

ಫಿಲ್ಮ್​ಫೇರ್​ಗೆ ತೃಪ್ತಿ ದಿಮ್ರಿ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರಿಗೆ ಒಂದು ಮುಖ್ಯವಾದ ಪ್ರಶ್ನೆ ಎದುರಾಗಿದೆ. ‘ಕಲಾ ರೀತಿಯ ಮಹಿಳಾ ಪ್ರಧಾನ ಸಿನಿಮಾ ಮಾಡಿದ ಬಳಿಕ ಅನಿಮಲ್ ರೀತಿಯ ಮಹಿಳಾ ವಿರೋಧಿ ಸಿನಿಮಾವನ್ನು ನೀವು ಒಪ್ಪಿಕೊಂಡಿದ್ದು ಯಾಕೆ’ ಎಂಬುದು ಪ್ರಶ್ನೆ. ಅದಕ್ಕೆ ತಮ್ಮದೇ ರೀತಿಯಲ್ಲಿ ತೃಪ್ತಿ ದಿಮ್ರಿ ಅವರು ಉತ್ತರ ನೀಡಿದ್ದಾರೆ.

‘ನಾವು ಯಾವುದೇ ಸಿನಿಮಾವನ್ನು ಸ್ತ್ರೀ ವಿರೋಧಿ ಎಂಬ ರೀತಿಯಲ್ಲಿ ನೋಡುವುದಿಲ್ಲ. ಸಿನಿಮಾಗಳಿಗೆ ನಾನು ಅಂತಹ ಹಣೆಪಟ್ಟಿ ನೀಡುವುದಿಲ್ಲ. ಬುಲ್ ಬುಲ್ ಮತ್ತು ಕಲಾ ಸಿನಿಮಾವನ್ನು ಮಾಡುವಾಗ ನಾನು ಸ್ತ್ರೀವಾದಿ ಸಿನಿಮಾ ಮಾಡುತ್ತಿದ್ದೇನೆ ಅಂತ ಯೋಚಿಸಿರಲಿಲ್ಲ. ನಾನು ಪಾತ್ರಗಳ ಜೊತೆ ಕನೆಕ್ಟ್​ ಆಗುತ್ತೇನೆ. ನಿರ್ದೇಶಕರ ಮೇಲೆ ನಂಬಿಕೆ ಇಡುತ್ತೇನೆ. ಆ ಸಿನಿಮಾ ಮಾಡಬೇಕು ಅಂತ ನನಗೆ ಅನಿಸಬೇಕು ಅಷ್ಟೇ’ ಎಂದು ತೃಪ್ತಿ ದಿಮ್ರಿ ಹೇಳಿದ್ದಾರೆ.

‘ನನಗೆ ಅನಿಮಲ್ ಸಿನಿಮಾದ ಆಫರ್​ ಬಂದಾಗ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ನನ್ನನ್ನು ಭೇಟಿಯಾಗಿ ಕಥೆ ವಿವರಿಸಿದರು. ಅವರು ಕಥೆಯ ಬಗ್ಗೆ ನನಗೆ ಹೆಚ್ಚೇನೂ ಹೇಳಿರಲಿಲ್ಲ. ನನ್ನ ಪಾತ್ರವನ್ನು ವಿವರಿಸಿದರು. ನನಗೆ ಇಷ್ಟ ಆಗಿದ್ದು ಏನೆಂದರೆ, ಈವರೆಗೂ ನಾನು ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ. ಕಥೆಯ ಅಂತ್ಯದಲ್ಲಿ ಆ ಪಾತ್ರಗಳಿಗೆ ಪ್ರೇಕ್ಷಕರು ಕರುಣೆ ತೋರುತ್ತಾರೆ. ಆದರೆ ಈಗ ಮಾಡಬೇಕಿರುವುದು ಬೇರೆ ಆಗಿತ್ತು’ ಎಂದಿದ್ದಾರೆ ತೃಪ್ತಿ ದಿಮ್ರಿ.

ಇದನ್ನೂ ಓದಿ: ‘ಅನಿಮಲ್ ಸಿನಿಮಾ ಮಾಡಿದವರು ವಿಕೃತ ಮನಸ್ಸಿನವರು’: ಜಾವೇದ್ ಅಖ್ತರ್​

‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಅನೇಕ ದೃಶ್ಯಗಳಿಗೆ ಕೆಲವರಿಂದ ಖಂಡನೆ ವ್ಯಕ್ತವಾಯಿತು. ಮಹಿಳೆಯರಿಗೆ ಅವಹೇಳನ ಆಗುವಂತಹ ದೃಶ್ಯಗಳು ಇವೆ ಎಂದು ಟೀಕಿಸಲಾಯಿತು. ಜಾವೇದ್ ಅಖ್ತರ್​ ಅವರಂತಹ ಹಿರಿಯರು ಈ ಸಿನಿಮಾವನ್ನು ಖಂಡಿಸಿದರು. ಇಂಥ ಕೆಲವು ಕಾರಣಗಳಿಂದಾಗಿ ‘ಅನಿಮಲ್’ ಸಿನಿಮಾ ಸುದ್ದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ