AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಯ್ ದೇವಗನ್​ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ

‘ಸನ್​ ಆಫ್​ ಸರ್ದಾರ್ 2’ ಸಿನಿಮಾದಲ್ಲಿ ಅಜಯ್​ ದೇವಗನ್ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಯುನೈಡೆಟ್​ ಕಿಂಗ್​ಡಮ್​ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದರೆ ಶೂಟಿಂಗ್​ ಸೆಟ್​ನಲ್ಲಿ ಕಲಾವಿದರ ನಡುವೆ ಕಿರಿಕ್​ ಆದಂತಿದೆ. ಅಜಯ್​ ದೇವಗನ್ ಅವರಿಗೆ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ವಿಜಯ್ ರಾಝ್​ ಅವರನ್ನು ತೆಗೆದು ಹಾಕಿದ ಬಗ್ಗೆ ಸುದ್ದಿ ಆಗಿದೆ.

ಅಜಯ್ ದೇವಗನ್​ಗೆ ನಮಸ್ಕಾರ ಮಾಡಿಲ್ಲ ಅಂತ ಹಿರಿಯ ನಟನನ್ನೇ ಸಿನಿಮಾದಿಂದ ತೆಗೆದ ನಿರ್ಮಾಪಕ
ಅಜಯ್​ ದೇವಗನ್​, ವಿಜಯ್​ ರಾಝ್
ಮದನ್​ ಕುಮಾರ್​
|

Updated on: Aug 17, 2024 | 3:09 PM

Share

ಬಾಲಿವುಡ್​ನ ‘ಸನ್​ ಆಫ್​ ಸರ್ದಾರ್ 2’ ಸಿನಿಮಾ ಸಿಕ್ಕಾಪಟ್ಟೆ ವಿವಾದ ಮಾಡಿಕೊಳ್ಳುತ್ತಿದೆ. ಈಗಾಗಲೇ ಈ ಸಿನಿಮಾದಿಂದ ನಟ ಸಂಜಯ್​ ದತ್​ ಅವರನ್ನು ಹೊರಗಿಡಲಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ಹಿರಿಯ ನಟ ವಿಜಯ್ ರಾಝ್​ ಅವರನ್ನು ಚಿತ್ರತಂಡದಿಂದ ತೆಗೆದು ಹಾಕಲಾಗಿದೆ. ಪಾತ್ರವರ್ಗದಲ್ಲಿ ಬದಲಾವಣೆ ಆಗುವುದು ಸಹಜ. ಆದರೆ ಅದಕ್ಕೆ ಕಾರಣ ಏನು ಎಂಬುದು ಮುಖ್ಯ. ‘ಸನ್​ ಆಫ್​ ಸರ್ದಾರ್ 2’ ಸಿನಿಮಾದ ಹೀರೋ ಅಜಯ್​ ದೇವಗನ್​ಗೆ ವಿಜಯ್​ ರಾಝ್​ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ಅವರಿಗೆ ಗೇಟ್​ ಪಾಸ್​ ನೀಡಿದ್ದು ಅಚ್ಚರಿಯ ಸಂಗತಿ.

ಬಹುನಿರೀಕ್ಷಿತ ‘ಸನ್​ ಆಫ್​ ಸರ್ದಾರ್ 2’ ಚಿತ್ರದಲ್ಲಿ ಅಜಯ್​ ದೇವಗನ್ ಅವರು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಯುನೈಡೆಟ್​ ಕಿಂಗ್​ಡಮ್​ನಲ್ಲಿ ಈ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ. ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು ಎಂಬುದನ್ನು ವಿಜಯ್ ರಾಝ್​ ಹೇಳಿದ್ದಾರೆ. ‘ನಾನು ವ್ಯಾನಿಟಿ ವ್ಯಾನ್​ನಿಂದ ಹೊರಬಂದು ನೋಡಿದಾಗ ಅಜಯ್​ ದೇವಗನ್​ ಅವರು 25 ಮೀಟರ್​ ದೂರದಲ್ಲಿ ನಿಂತಿದ್ದರು. ಅವರು ಬ್ಯುಸಿ ಇದ್ದರು ಎಂಬ ಕಾರಣಕ್ಕಾಗಿ ನಾನು ಅವರನ್ನು ಮಾತನಾಡಿಸಿಲ್ಲ. 25 ನಿಮಿಷಗಳ ಬಳಿಕ ನಿರ್ಮಾಪಕರು ಬಂದು ನಿಮ್ಮನ್ನು ಸಿನಿಮಾದಿಂದ ತೆಗೆದುಹಾಕಿದ್ದೇವೆ ಅಂತ ತಿಳಿಸಿದರು’ ಎಂದಿದ್ದಾರೆ ವಿಜಯ್ ರಾಝ್​.

‘ನನ್ನಿಂದ ಆದ ಏಕೈಕ ತಪ್ಪು ಎಂದರೆ ಅಜಯ್​ ದೇವಗನ್​ ಅವರನ್ನು ಮಾತನಾಡಿಸಿ ನಮಸ್ಕಾರ ಮಾಡದೇ ಇರುವುದು. ಚಿತ್ರತಂಡದ ಬೇರೆ ಯಾರನ್ನೂ ನಾನು ಭೇಟಿ ಮಾಡಿಲ್ಲ. ಅಜಯ್​ ದೇವಗನ್​ಗೆ ನಮಸ್ಕಾರ ಮಾಡಿಲ್ಲದ ಕಾರಣ, ಶೂಟಿಂಗ್​ ಸೆಟ್​ಗೆ ಬಂದು 25 ನಿಮಿಷಗಳ ಬಳಿಕ ನನ್ನನ್ನು ತೆಗೆದುಹಾಕಿದರು. ಇವರೆಲ್ಲ ತುಂಬ ಪ್ರಭಾವಿ ವ್ಯಕ್ತಿಗಳು’ ಎಂದು ವಿಜಯ್​ ರಾಝ್​ ಹೇಳಿದ್ದಾರೆ.

ಇದನ್ನೂ ಓದಿ: ಸಂಜಯ್​ ದತ್​ ಅಪರಾಧ ಹಿನ್ನೆಲೆಯಿಂದ ಚಿತ್ರತಂಡಕ್ಕೆ ತೊಂದರೆ; ನಟನಿಗೆ ಗೇಟ್​ ಪಾಸ್​?

ಅನೇಕ ಸಿನಿಮಾಗಳಲ್ಲಿ ನಟಿಸಿ ವಿಜಯ್​ ರಾಝ್​ ಅವರು ಫೇಮಸ್​ ಆಗಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ. ಶೂಟಿಂಗ್​ ವೇಳೆ ಅವರು ಸರಿಯಾಗಿ ನಡೆದುಕೊಂಡಿಲ್ಲ ಹಾಗೂ ವಿಪರೀತಿ ಬೇಡಿಕೆ ಇಟ್ಟಿದ್ದಾರೆ ಎಂಬ ಕಾರಣಕ್ಕೆ ಅವರನ್ನು ತೆಗೆದುಹಾಕಲಾಗಿದೆ ಎಂದು ಮಾಧ್ಯಮಗಳಿಗೆ ‘ಸನ್​ ಆಫ್​ ಸರ್ದಾರ್ 2’ ಸಿನಿಮಾದ ನಿರ್ಮಾಪಕರು ತಿಳಿಸಿದ್ದಾರೆ. ಈ ಬಗ್ಗೆ ಅಜಯ್​ ದೇವಗನ್​ ಇನ್ನಷ್ಟೇ ಮೌನ ಮುರಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ