AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್​ ರಾಝ್ ಮೇಲೆ ದುರ್ನಡತೆ ಆರೋಪ: ಸಹಾಯಕನಿಂದ ಲೈಂಗಿಕ ಕಿರುಕುಳ ಆಗಿದ್ಯಾ?

‘ಸನ್​ ಆಫ್​ ಸರ್ದಾರ್​ 2’ ಸಿನಿಮಾ ತಂಡದ ಜೊತೆ ಹಿರಿಯ ಕಲಾವಿದರ ವಿಜಯ್ ರಾಝ್​ ಅವರು ಕಿರಿಕ್​ ಮಾಡಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ನಟನ ಸಹಾಯಕರಿಂದ ಹೋಟೆಲ್​ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂಬ ಆರೋಪ ಕೂಡ ಇದೆ. ಈ ಘಟನೆಗಳ ಬಗ್ಗೆ ವಿಜಯ್ ರಾಝ್​ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಇಲ್ಲಿದೆ ವಿವರ..

ವಿಜಯ್​ ರಾಝ್ ಮೇಲೆ ದುರ್ನಡತೆ ಆರೋಪ: ಸಹಾಯಕನಿಂದ ಲೈಂಗಿಕ ಕಿರುಕುಳ ಆಗಿದ್ಯಾ?
ವಿಜಯ್​ ರಾಝ್​
ಮದನ್​ ಕುಮಾರ್​
|

Updated on: Aug 17, 2024 | 7:17 PM

Share

ಬಾಲಿವುಡ್​ನ ಖ್ಯಾತ ನಟ ವಿಜಯ್ ರಾಝ್ ಅವರು ವಿವಾದದಲ್ಲಿ ಸಿಲುಕಿದ್ದಾರೆ. ‘ಸನ್​ ಆಫ್​ ಸರ್ದಾರ್​ 2’ ಸಿನಿಮಾ ತಂಡದಿಂದ ಅವರನ್ನು ಹೊರಗೆ ಹಾಕಲಾಗಿದೆ. ಇದಕ್ಕೆಲ್ಲ ಕಾರಣ ಏನು ಎಂಬುದನ್ನು ಸಹ-ನಿರ್ಮಾಪಕ ಕುಮಾರ್​ ಪಾಠಕ್​ ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಶೂಟಿಂಗ್ ಸೆಟ್​ನಲ್ಲಿ ವಿಜಯ್ ರಾಝ್​ ಅವರು ದುರ್ವರ್ತನೆ ತೋರಿದ್ದಾರೆ ಎಂಬುದು ನಿರ್ಮಾಪಕರ ಆರೋಪ. ಅಲ್ಲದೇ, ವಿಜಯ್ ರಾಝ್​ ಅವರ ಸಹಾಯಕನಿಂದ ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಕೂಡ ಆರೋಪಿಸಲಾಗಿದೆ.

ವಿಜಯ್​ ರಾಝ್​ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ‘ಸನ್​ ಆಫ್ ಸರ್ದಾರ್​ 2’ ಸಿನಿಮಾದಲ್ಲಿ ಅವರು ಅಜಯ್​ ದೇವಗನ್​ ಜೊತೆ ನಟಿಸುತ್ತಿದ್ದಾರೆ. ಆದರೆ ಅಜಯ್​ ದೇವಗನ್​ಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ತಮಗೆ ನೀಡಬೇಕು ಎಂದು ವಿಜಯ್ ರಾಝ್​ ಡಿಮ್ಯಾಂಡ್​ ಮಾಡಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ವಿದೇಶದಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಅಲ್ಲಿಗೆ ವಿಜಯ್ ರಾಝ್​ ತೆರಳಿದ್ದರು. ತಮಗೆ ಉಳಿದುಕೊಳ್ಳಲು ನೀಡಿದ ಹೋಟೆಲ್​ ರೂಮ್​ ತುಂಬ ಚಿಕ್ಕದಾಗಿದೆ ಎಂದು ವಿಜಯ್ ರಾಝ್ ಅವರು ಸಮಸ್ಯೆ ಹೇಳಿಕೊಂಡಿದ್ದಾರೆ. ಆ ಕಾರಣದಿಂದಲೇ ನಿರ್ಮಾಪಕರು ಇಷ್ಟೆಲ್ಲ ಕಿರಿಕ್​ ಶುರು ಮಾಡಿದ್ದಾರೆ ಎನ್ನಲಾಗಿದೆ. ಅಜಯ್​ ದೇವಗನ್​ಗೆ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಸಿನಿಮಾದಿಂದ ಹೊರಗೆ ಇಡಲಾಗಿದೆ ಎಂದು ವಿಜಯ್ ರಾಝ್​ ಹೇಳಿದ್ದಾರೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಹೀನಾಯವಾಗಿ ಸೋತ ಅಜಯ್​ ದೇವಗನ್​-ಟಬು ಜೋಡಿಯ ಸಿನಿಮಾ

ಪ್ರತಿ ಕಲಾವಿದರನ್ನು ನೋಡಿಕೊಳ್ಳಲು ಸಹಾಯಕರನ್ನು ನೀಡಲಾಗುತ್ತದೆ. ಅವರನ್ನು ಸ್ಪಾಟ್​ ಬಾಯ್ಸ್​ ಎಂದು ಕರೆಯುತ್ತಾರೆ. ಆ ಪೈಕಿ ಒಬ್ಬನಿಂದ ಹೋಟೆಲ್​ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಇದೆ. ಅದರ ಬಗ್ಗೆಯೂ ವಿಜಯ್ ರಾಝ್​ ಮಾತನಾಡಿದ್ದಾರೆ. ‘ನನ್ನನ್ನು ಸಿನಿಮಾದಿಂದ ತೆಗೆದುಹಾಕಿದ್ದು ಹಾಗೂ ಸ್ಪಾಟ್​ ಬಾಯ್​ ಮೇಲಿನ ಆರೋಪ ಎಂಬುದು ಎರಡು ಪ್ರತ್ಯೇಕ ಘಟನೆ. ಇದನ್ನು ಒಟ್ಟಾಗಿ ನೋಡಬೇಡಿ. ಸ್ಪಾಟ್ ಬಾಯ್​ ವರ್ತನೆಗೂ ನನಗೂ ಸಂಬಂಧ ಇಲ್ಲ. ಅಂಥ ಕೃತ್ಯವನ್ನು ನಾನು ಬೆಂಬಲಿಸುವುದಿಲ್ಲ. ಆ ವ್ಯಕ್ತಿ ಜೊತೆ ನಾನು ಇನ್ಮುಂದೆ ಕೆಲಸ ಮಾಡಲ್ಲ’ ಎಂದು ವಿಜಯ್ ರಾಝ್​ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ