AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Payal Ghosh: ‘ದೊಡ್ಡ ಸಿನಿಮಾ ಚಾನ್ಸ್​ ಸಿಗಬೇಕು ಅಂದ್ರೆ ಅವರ ಜೊತೆ ಮಲಗಬೇಕು’: ನಟಿ ಪಾಯಲ್​ ಘೋಷ್​ ಶಾಕಿಂಗ್​ ಹೇಳಿಕೆ

Casting Couch: ಕನ್ನಡದ ‘ವರ್ಷಧಾರೆ’ ಸಿನಿಮಾದಲ್ಲಿ ನಟಿಸಿದ್ದ ಪಾಯಲ್​ ಘೋಷ್​ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಸ್ಟಿಂಗ್​ ಕೌಚ್​ ಬಗ್ಗೆ ಅವರು ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.

Payal Ghosh: ‘ದೊಡ್ಡ ಸಿನಿಮಾ ಚಾನ್ಸ್​ ಸಿಗಬೇಕು ಅಂದ್ರೆ ಅವರ ಜೊತೆ ಮಲಗಬೇಕು’: ನಟಿ ಪಾಯಲ್​ ಘೋಷ್​ ಶಾಕಿಂಗ್​ ಹೇಳಿಕೆ
ಪಾಯಲ್​ ಘೋಷ್​
ಮದನ್​ ಕುಮಾರ್​
|

Updated on: Jul 08, 2023 | 8:35 PM

Share

ಸಿನಿಮಾದ ಪರದೆ ಮೇಲೆ ಬಣ್ಣ ಬಣ್ಣದ ದೃಶ್ಯಗಳು ಕಾಣುತ್ತವೆ. ಆದರೆ ತೆರೆಹಿಂದೆ ಕೆಲವು ಕರಾಳ ವಿಷಯಗಳು ಇರುತ್ತವೆ. ಈ ಹಿಂದೆ ಅನೇಕ ನಟಿಯರು ತಮಗೆ ಆದ ಕಹಿ ಅನುಭವಗಳ ಬಗ್ಗೆ ಮೀಟೂ (Me Too) ಅಭಿಯಾನದಲ್ಲಿ ಹೇಳಿಕೊಂಡಿದ್ದರು. ಹಾಗಂತ ಅಂಥ ಪ್ರಕರಣಗಳು ಇಂದಿಗೂ ನಿಂತಿಲ್ಲ. ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ (Casting Couch) ಭೂತದ ನೆರಳು ಆಗಾಗ ಸುಳಿಯುತ್ತದೆ. ಈಗ ನಟಿ ಪಾಯಲ್ ಘೋಷ್​ ಅವರು ಒಂದು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ‘ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗಬೇಕು ಎಂದರೆ ಅವರ ಜೊತೆ ಮಲಗಬೇಕು’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಕೂಡಲೇ ಅದನ್ನು ಡಿಲೀಟ್​ ಮಾಡಿದ್ದಾರೆ. ಪಾಯಲ್ ಘೋಷ್ (Payal Ghosh) ಅವರ ಈ ವರ್ತನೆಯಿಂದ ಚರ್ಚೆ ಶುರುವಾಗಿದೆ.

2008ರಿಂದಲೂ ಚಿತ್ರರಂಗದಲ್ಲಿ ಇರುವ ಪಾಯಲ್​ ಘೋಷ್​ ಅವರು ಈತನಕ ಮಾಡಿರುವುದು ಬೆರಣೆಳಿಕೆಯಷ್ಟು ಸಿನಿಮಾ ಮಾತ್ರ. 2010ರಲ್ಲಿ ಬಂದ ಕನ್ನಡದ ‘ವರ್ಷಧಾರೆ’ ಸಿನಿಮಾದಲ್ಲೂ ಅವರು ನಟಿಸಿದ್ದರು. ಈಗ ‘ಫೈರ್​ ಆಫ್​ ಲವ್​: ರೆಡ್​’ ಸಿನಿಮಾದಲ್ಲಿ ಪಾಯಲ್​ ಘೋಷ್​ ಅಭಿನಯಿಸಿದ್ದಾರೆ. ಇದು ಅವರ 11ನೇ ಸಿನಿಮಾ. ಚಿತ್ರರಂಗದಲ್ಲಿ ಕಾಂಪ್ರಮೈಸ್​ ಆದರೆ ಮಾತ್ರ ಹೆಚ್ಚು ಸಿನಿಮಾಗಳನ್ನು ಮಾಡಲು ಸಾಧ್ಯ ಎಂಬುದು ಪಾಯಲ್​ ಘೋಷ್​ ಅಭಿಪ್ರಾಯ. ಅದನ್ನೇ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ

‘ನಾನು ಮಲಗಿದ್ದಿದ್ದರೆ ಇಂದು 30 ಸಿನಿಮಾ ಮಾಡಿರುತ್ತಿದ್ದೆ. ದೊಡ್ಡ ಸಿನಿಮಾಗಳ ಆಫರ್​ ಸಿಗಬೇಕು ಎಂದರೆ ಅವರ ಜೊತೆ ಮಲಗಬೇಕು. ಮಲಗದ ಹೊರತು ಅದು ಸಾಧ್ಯವಿಲ್ಲ’ ಎಂದು ಪಾಯಲ್​ ಘೋಷ್​ ಬರೆದುಕೊಂಡಿದ್ದರು. ಇದು ನೆಟ್ಟಿಗರ ಗಮನ ಸೆಳೆಯಿತು. ಯಾರ ಬಗ್ಗೆ ಪಾಯಲ್​ ಘೋಷ್​ ಈ ರೀತಿ ಹೇಳಿರಬಹುದು ಎಂಬ ಚರ್ಚೆ ಶುರುವಾಯಿತು. ಜನರಿಂದ ಹಲವು ಪ್ರಶ್ನೆಗಳು ಬರಲು ಆರಂಭವಾದವು. ಕೂಡಲೇ ಅವರು ಪೋಸ್ಟ್​ ಡಿಲೀಟ್​ ಮಾಡಿದರು. ಆ ಮೂಲಕ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ ಹೆಸರನ್ನು ಪಾಯಲ್​ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Payal Ghosh: ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ್ದ ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನ

ಪಾಯಲ್​ ಘೋಷ್​ ಅವರು ಈ ರೀತಿ ಆರೋಪ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ಆರೋಪ ಹೊರಿಸಿದ್ದರು. ತಮಗೆ ಮುಂಬೈನಲ್ಲಿ ಅನುರಾಗ್​ ಕಶ್ಯಪ್​ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆ ಆರೋಪಗಳನ್ನು ಅನುರಾಗ್​ ಕಶ್ಯಪ್​ ತಳ್ಳಿ ಹಾಕಿದ್ದರು. ಲೈಂಗಿಕ ಕಿರುಕುಳ ನಡೆದಿತ್ತು ಎನ್ನಲಾದ ದಿನದಂದು ತಾವು ಮುಂಬೈನಲ್ಲಿ ಇರಲೇ ಇಲ್ಲ ಎಂಬ ದಾಖಲೆಯನ್ನು ಪೊಲೀಸರಿಗೆ ಒದಗಿಸುವ ಮೂಲಕ ಅನುರಾಗ್​ ಕಶ್ಯಪ್​ ಅವರು ಆರೋಪಮುಕ್ತರಾಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?