Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗರು ‘ರೇಸಿಸ್ಟ್’ ಎಂದ ಯೂಟ್ಯೂಬರ್, ಹಾಕಿದ್ದಾನೆ ಸವಾಲು

Shrinkhal: ಹಿಂದಿ ಯೂಟ್ಯೂಬರ್ ಶ್ರೀಂಕಾಲ್​ ಎಂಬಾತ ಕನ್ನಡಿಗರನ್ನು ಜನಾಂಗೀಯ ನಿಂದಕರೆಂದು ಕರೆದಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೆ ಯೂಟ್ಯೂಬರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೆಲ್ಲದರ ನಡುವೆ ಆ ಯೂಟ್ಯೂಬರ್ ಕನ್ನಡಿಗರಿಗೆ ಸವಾಲು ಸಹ ಹಾಕಿದ್ದಾನೆ.

ಕನ್ನಡಿಗರು ‘ರೇಸಿಸ್ಟ್’ ಎಂದ ಯೂಟ್ಯೂಬರ್, ಹಾಕಿದ್ದಾನೆ ಸವಾಲು
Follow us
ಮಂಜುನಾಥ ಸಿ.
|

Updated on: Mar 14, 2024 | 12:56 PM

ಕನ್ನಡಿಗರು (Kannadiga) ಸಹಿಷ್ಣುಗಳು, ಗೌರವ ಕೊಟ್ಟು ಪಡೆಯುವರು, ಅತಿಥಿಗಳ ಸತ್ಕರಿಸುವವರು, ಬೆಂಗಳೂರಿನಲ್ಲಿ ಬದುಕುತ್ತಿರುವ ವಿವಿಧ ರಾಜ್ಯದ, ದೇಶಗಳ ಲಕ್ಷಾಂತರ ಜನರೇ ಇದಕ್ಕೆ ಸಾಕ್ಷಿ. ಆದರೆ ಇಲ್ಲೊಬ್ಬ ಯೂಟ್ಯೂಬರ್ ಕನ್ನಡಿಗರನ್ನು ಜನಾಂಗೀಯ ನಿಂದಕರು (ರೇಸಿಸ್ಟ್​) ಎಂದು ನಾಲಗೆ ಹರಿಬಿಟ್ಟಿದ್ದಾರೆ. ಹಿಂದಿ ಯೂಟ್ಯೂಬರ್​ನ ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಕನ್ನಡದ ಕೆಲವು ಯೂಟ್ಯೂಬರ್​ಗಳು, ಹಿಂದಿ ಯೂಟ್ಯೂಬರ್​ ವಿರುದ್ಧ ಮುಗಿಬಿದ್ದಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸಹ ಯೂಟ್ಯೂಬರ್ ನ ಹೇಳಿಕೆ ಖಂಡಿಸಿದ್ದಾರೆ. ಇದರ ನಡುವೆ ಹಿಂದಿ ಯೂಟ್ಯೂಬರ್ ಸಹ ಕನ್ನಡಿಗರಿಗೆ ಸವಾಲು ಹಾಕಿದ್ದಾನೆ.

ಎಸ್​ಆರ್​ಪೆ ಹೆಸರಿನ ಚಾನೆಲ್​ ಹೊಂದಿರುವ ಹಿಂದಿ ಯೂಟ್ಯೂಬರ್ ಶ್ರಿಂಕಾಲ್ ಕೆಲ ತಿಂಗಳ ಹಿಂದೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದರು. ಆ ವಿಡಿಯೋನಲ್ಲಿ ಇತರೆ ಕೆಲವರೊಟ್ಟಿಗೆ ಸೇರಿಕೊಂಡು ವಿಡಿಯೋ ಕಾಲ್ ಮೂಲಕ ತಮಾಷೆಯ ಮಾತುಗಳನ್ನಾಡುತ್ತಿದ್ದರು. ವಿಡಿಯೋನಲ್ಲಿ ಯುವತಿಯೊಬ್ಬರು, ಮುಂಬೈನಲ್ಲಿ ನೆಲೆಸಿರುವವರನ್ನು ‘ಮುಂಬೈಕರ್’ ಎಂದು ಕರೆಯುವುದಾದರೆ ಕರ್ನಾಟಕದಲ್ಲಿ ನೆಲೆಸಿರುವವರನ್ನು ಏನೆಂದು ಕರೆಯುತ್ತಾರೆ? ಎಂದು ಪ್ರಶ್ನಿಸಿದ್ದರು, ಅದಕ್ಕೆ ಉತ್ತರಿಸಿದ್ದ ಶ್ರೀಂಕಾಲ್ ‘ರೇಸಿಸ್ಟ್’ ಎಂದಿದ್ದರು. ಶ್ರೀಂಕಾಲ್​ನ ಈ ಮಾತಿಗೆ ವಿಡಿಯೋ ಕಾಲ್​ನಲ್ಲಿರುವ ಅವನ ಗೆಳೆಯರು ಜೋರಾಗಿ ನಕ್ಕಿದ್ದರು.

ಇದನ್ನೂ ಓದಿ:ಮುಗಿಯುತ್ತಿಲ್ಲ ಬಿಗ್ ಬಾಸ್ ವಿನ್ನರ್ ರಂಪಾಟ; ಯೂಟ್ಯೂಬರ್​ ಮೇಲೆ ಹಲ್ಲೆ, ವಿಡಿಯೋ ವೈರಲ್

ಆ ವಿಡಿಯೋ ಇದೀಗ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು, ಕನ್ನಡಿಗರ ಬಗ್ಗೆ ನಾಲಗೆ ಹರಿಬಿಟ್ಟ ಯೂಟ್ಯೂಬರ್​ನ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಬೆನ್ನಲ್ಲೆ ‘ಅಪಾಲಜೀಸ್ ಟು ಕನ್ನಡಿಗಾಸ್’ ಹೆಸರಿನ ಥಂಬ್​ನೈಲ್​ ನಲ್ಲಿ ವಿಡಿಯೋ ಒಂದನ್ನು ಯೂಟ್ಯೂಬರ್ ಶ್ರೀಂಕಾಲ್ ಅಪ್​ಲೋಡ್ ಮಾಡಿದ್ದರು. ಆದರೆ ಆ ವಿಡಿಯೋನಲ್ಲಿಯೂ ಸಹ ಅಹಂಕಾರದಿಂದ ಮಾತನಾಡಿದ್ದ, ಅಲ್ಲದೆ ಮಾರ್ಚ್ 15ರಂದು ಬೆಂಗಳೂರಿನ ಒರಾಯಿನ್ ಮಾಲ್​ಗೆ ಬರುತ್ತೀನೆಂದು ಸವಾಲು ಸಹ ಹಾಕಿದ್ದಾನೆ.

ಯೂಟ್ಯೂಬರ್ ಶ್ರೀಂಕಾಲ್​ನ ದುರಹಂಕಾರದ ವರ್ತನೆ ಹಾಗೂ ಕನ್ನಡಿಗರ ಬಗ್ಗೆ ಆತನಿಗಿರುವ ನಂಜನ್ನು ಕನ್ನಡಿಗರು ತೀವ್ರವಾಗಿ ಖಂಡಿಸಿದ್ದಾರೆ. ಸಿನಿಮಾ ನಿರ್ದೇಶಕ ಸಂತೋಷ್ ಆನಂದ್​ರಾಮ್ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಕನ್ನಡಿಗರು ಎಲ್ಲರನ್ನು ಸ್ವಾಗತಿಸೊ ಸಹೃದಯಿಗಳು racist ಗಳಲ್ಲ…!ಕನ್ನಡಿಗರ ಹೊರತುಪಡಿಸು ಪರಭಾಷಿಕರನ್ನು ಸ್ನೇಹಿತರಂತೆ ನೋಡುವ ಮತ್ತೊಬ್ಬ ಭಾಷಿಕ ಭಾರತದಲ್ಲಿಲ್ಲ. ನೀನು ಬದುಕುತ್ತಿರುವ ನಗರ ಹಾಗೂ ಜನಗಳ ಬಗ್ಗೆ ಗೌರವ ಇರಲಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್