AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lockdown: ಮತ್ತೆ ಪ್ರಸಾರ ಆಗಲಿದೆ ‘ರಾಮಾಯಣ’ ಸೀರಿಯಲ್​! ಹಾಗಾದ್ರೆ ಲಾಕ್​ಡೌನ್​ ಆಗೋದು ಖಚಿತ?

ಕೊರೊನಾ ವೈರಸ್​ ಎರಡನೇ ಅಲೆ ಎಲ್ಲೆಲ್ಲೂ ಜೋರಾಗಿ ಹಬ್ಬುತ್ತಿದೆ. ಜನರಿಗೆ ಮತ್ತೆ ಚಿಂತೆ ಆರಂಭವಾಗಿದೆ. ಲಸಿಕೆ ಬಂದ ನಂತರವೂ ಪರಿಸ್ಥಿತಿ ಕೈ ಮೀರುತ್ತಿರುವುದು ವಿಪರ್ಯಾಸವೇ ಸರಿ. ನಾಳೆ ಏನಾಗುತ್ತದೋ ಎಂಬ ಚಿಂತೆಯಲ್ಲೇ ದಿನ ದೂಡುವಂತಾಗಿದೆ. ದೇಶದೆಲ್ಲೆಡೆ ಮತ್ತೆ ಲಾಕ್​ಡೌನ್​ ಆಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಲಾಕ್​ಡೌನ್​ ಆಗಬಹುದು ಎಂಬುದಕ್ಕೆ ಸೂಚನೆ ಸಿಗುವ ರೀತಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದ ವರ್ಷ ಲಾಕ್​ಡೌನ್​ ಆರಂಭ ಆದಾಗ ಹಿಂದಿಯ ರಾಮಾಯಣ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಈಗ ಅದೇ ಸ್ಥಿತಿ […]

Lockdown: ಮತ್ತೆ ಪ್ರಸಾರ ಆಗಲಿದೆ ‘ರಾಮಾಯಣ’ ಸೀರಿಯಲ್​! ಹಾಗಾದ್ರೆ ಲಾಕ್​ಡೌನ್​ ಆಗೋದು ಖಚಿತ?
(ರಾಮಾಯಣ ಧಾರಾವಾಹಿ)
ಮದನ್​ ಕುಮಾರ್​
|

Updated on: Apr 16, 2021 | 11:32 AM

Share

ಕೊರೊನಾ ವೈರಸ್​ ಎರಡನೇ ಅಲೆ ಎಲ್ಲೆಲ್ಲೂ ಜೋರಾಗಿ ಹಬ್ಬುತ್ತಿದೆ. ಜನರಿಗೆ ಮತ್ತೆ ಚಿಂತೆ ಆರಂಭವಾಗಿದೆ. ಲಸಿಕೆ ಬಂದ ನಂತರವೂ ಪರಿಸ್ಥಿತಿ ಕೈ ಮೀರುತ್ತಿರುವುದು ವಿಪರ್ಯಾಸವೇ ಸರಿ. ನಾಳೆ ಏನಾಗುತ್ತದೋ ಎಂಬ ಚಿಂತೆಯಲ್ಲೇ ದಿನ ದೂಡುವಂತಾಗಿದೆ. ದೇಶದೆಲ್ಲೆಡೆ ಮತ್ತೆ ಲಾಕ್​ಡೌನ್​ ಆಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಲಾಕ್​ಡೌನ್​ ಆಗಬಹುದು ಎಂಬುದಕ್ಕೆ ಸೂಚನೆ ಸಿಗುವ ರೀತಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದ ವರ್ಷ ಲಾಕ್​ಡೌನ್​ ಆರಂಭ ಆದಾಗ ಹಿಂದಿಯ ರಾಮಾಯಣ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಈಗ ಅದೇ ಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ!

ಲಾಕ್​ಡೌನ್​ ಆಗುತ್ತೋ ಇಲ್ಲವೋ ಎಂಬ ಗೊಂದಲ ಕಾಡುತ್ತಿರುವಾಗಲೇ ಈ ವರ್ಷ ಕೂಡ ‘ರಾಮಾಯಣ’ ಧಾರಾವಾಹಿ ಮರು ಪ್ರಸಾರಕ್ಕೆ ಸಜ್ಜಾಗಿದೆ. ಕಳೆದ ವರ್ಷ ಜನರನ್ನು ಮನೆಯೊಳಗೆ ಕೂರಿಸಲು ಮಾರ್ಚ್​ ತಿಂಗಳಿಂದ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಸೀರಿಯಲ್​ ಆರಂಭಿಸಲಾಗಿತ್ತು. ಈ ವರ್ಷ ಸ್ಟಾರ್​ ಭಾರತ್​ ವಾಹಿನಿಯಲ್ಲಿ ಮತ್ತೆ ರಾಮಾಯಣ ಪ್ರಸಾರ ಆಗಲಿದೆ. ಈ ಸುದ್ದಿ ಕೇಳಿದವರೆಲ್ಲ ‘ಹಾಗಾದ್ರೆ ಮತ್ತೆ ಲಾಕ್​ಡೌನ್​ ಆಗೋದು ಖಚಿತ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

1987ರಲ್ಲಿ ಮೂಡಿಬಂದ ರಾಯಾಯಣ ಧಾರಾವಾಹಿಗೆ ರಮಾನಂದ್​ ಸಾಗರ್​ ನಿರ್ದೇಶನ ಮಾಡಿದ್ದರು. ಅದರಲ್ಲಿ ಸೀತೆ ಪಾತ್ರಕ್ಕೆ ದೀಪಿಕಾ ಚಿಕ್ಲಿಯಾ ಬಣ್ಣ ಹಚ್ಚಿದ್ದರು. ಈಗ ಸ್ಟಾರ್​ ಭಾರತ್​ ವಾಹಿನಿಯಲ್ಲಿ ರಾಮಾಯಣ ಮರುಪ್ರಸಾರ ಆಗಲಿದೆ ಎಂಬ ಸುದ್ದಿಯನ್ನು ದೀಪಿಕಾ ಚಿಕ್ಲಿಯಾ ಹಂಚಿಕೊಂಡಿದ್ದಾರೆ. ‘ಈ ವರ್ಷ ಕೂಡ ರಾಮಾಯಣ ಧಾರಾವಾಹಿ ಕಿರುತೆರೆಯಲ್ಲಿ ಮತ್ತೆ ಬರಲಿದೆ ಎಂದು ವಿಷಯವನ್ನು ಹಂಚಿಕೊಳ್ಳಲು ಎಗ್ಸೈಟ್​​ ಆಗಿದ್ದೇನೆ’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

‘ಕಳೆದ ವರ್ಷ ಲಾಕ್​ಡೌನ್​ನಲ್ಲಿ ರಾಮಾಯಣ ಪ್ರಸಾರವಾಗಿತ್ತು. ಈ ವರ್ಷ ಕೂಡ ಇತಿಹಾಸ ಮರುಕಳಿಸಲಿದೆ ಎನಿಸುತ್ತದೆ’ ಎಂದು ದೀಪಿಕಾ ಊಹೆ ಮಾಡಿದ್ದಾರೆ. ಈ ಧಾರಾವಾಹಿ ನನಗೆ ಮಾತ್ರವಲ್ಲದೆ ಸಾವಿರಾರು ಕುಟುಂಬಗಳ ಜೀವನದ ಭಾಗವೇ ಆಗಿದೆ. ರಾಮಾಯಣ ವೀಕ್ಷಿಸಲು ಪ್ರತಿ ರಾತ್ರಿ 7 ಗಂಟೆಗೆ ಸ್ಟಾರ್​ ಭಾರತ್​ ವಾಹಿನಿಯನ್ನು ನೋಡಿ ಎಂದು ದೀಪಿಕಾ ಬರೆದುಕೊಂಡಿದ್ದಾರೆ.

ರಾಮನಾಗಿ ಅರುಣ್​ ಗೋವಿಲ್​, ಲಕ್ಷ್ಮಣನಾಗಿ ಸುನಿಲ್​ ಲಹರಿ, ರಾವಣನಾಗಿ ಅರವಿಂದ್​ ತ್ರಿವೇದಿ, ಹನುಮಂತನ ಪಾತ್ರದಲ್ಲಿ ಧಾರಾ ಸಿಂಗ್​ ನಟಿಸಿದ್ದ ಈ ಸೀರಿಯಲ್​ ಎಷ್ಟೇ ವರ್ಷ ಕಳೆದರೂ ತನ್ನ ಚಾರ್ಮ್​ ಕಳೆದುಕೊಂಡಿಲ್ಲ. ಹಾಗಾಗಿ ಜನರು ಮತ್ತೆ ಮತ್ತೆ ಇದನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಧಾರಾವಾಹಿ ಕಥೆ ಹಾಗಿರಲಿ, ಒಂದು ವೇಳೆ ಮತ್ತೆ ಲಾಕ್​ಡೌನ್​ ಆದರೆ ಏನು ಮಾಡೋದು ಎಂದು ಜನಸಾಮಾನ್ಯರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ಬಗ್ಗೆ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಬಾರದು: ಕಾಂಗ್ರೆಸ್​ ಟ್ವೀಟ್​

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್​ ಬೇಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?