AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

”ರಾಜಮೌಳಿಯಿಂದ ಡಾಲರ್ ಮೌಲ್ಯ ಕುಸಿದು, ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ”

SS Rajamouli: ನಿರ್ದೇಶಕ ರಾಜಮೌಳಿಯಿಂದಾಗಿ ಭಾರತದ ರೂಪಾಯಿ ಮೌಲ್ಯ ಬಲಗೊಂಡು, ಡಾಲರ್ ಮೌಲ್ಯ ಕುಸಿಯುತ್ತದೆ ಎಂದು ನಿರ್ದೇಶಕ ತೇಜ ಹೇಳಿದ್ದಾರೆ. ತಮ್ಮ ಹೇಳಿಕೆಗೆ ವಿವರಣೆಯನ್ನೂ ನೀಡಿದ್ದಾರೆ.

''ರಾಜಮೌಳಿಯಿಂದ ಡಾಲರ್ ಮೌಲ್ಯ ಕುಸಿದು, ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ''
ರಾಜಮೌಳಿ
ಮಂಜುನಾಥ ಸಿ.
|

Updated on:May 25, 2023 | 8:00 PM

Share

ರಾಜಮೌಳಿ (SS Rajamouli), ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ ಜೊತೆಗೆ ಭಾರತೀಯ ಚಿತ್ರರಂಗವನ್ನು (Indian Cinema) ವಿಶ್ವ ಸಿನಿಮಾ ಪ್ರೇಮಿಗಳು ತಿರುಗಿ ನೋಡುವಂತೆ ಮಾಡಿದ್ದಾರೆ. ಆರ್​ಆರ್​ಆರ್ ಸಿನಿಮಾಕ್ಕೆ ವಿದೇಶಗಳಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸು ಹಾಗೂ ಆಸ್ಕರ್ ಲಭಿಸಿದ ಬಳಿಕವಂತೂ ರಾಜಮೌಳಿಯ ಗರಿಮೆಯನ್ನು ಕೊಂಡಾಡದವರಿಲ್ಲ. ‘ರಾಜಮೌಳಿ ಭಾರತೀಯ ಚಿತ್ರರಂಗದ ದಿಕ್ಕು ಬದಲಾಯಿಸಿದ್ದಾರೆ’ ಎಂಬಿತ್ಯಾದಿ ಹೊಗಳಿಕೆಗಳ ಸುರಿಮಳೆಯೇ ಆಗಿವೆ, ಈಗಲೂ ಆಗುತ್ತಿವೆ. ಆದರೆ ಈ ನಡುವೆ ತೆಲುಗಿನ ಮತ್ತೊಬ್ಬ ಜನಪ್ರಿಯ, ಪ್ರತಿಭಾವಂತ ನಿರ್ದೇಶಕ ತೇಜ, ರಾಜಮೌಳಿ ಬಗ್ಗೆ ಮಾತನಾಡುತ್ತಾ, ”ರಾಜಮೌಳಿಯಿಂದ ಡಾಲರ್ ಮೌಲ್ಯ ಕುಸಿಯುತ್ತದೆ ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ” ಎಂದಿದ್ದಾರೆ ತಮ್ಮ ಈ ಹೇಳಿಕೆ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ.

ನಿರ್ದೇಶಕ ತೇಜ, ಯಾರನ್ನು ಸುಲಭಕ್ಕೆ ಹೊಗಳುವವರಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ರಾಜಮೌಳಿಯನ್ನು ಟೀಕಿಸಿದ್ದೂ ಇದೆ. ಆದರೆ ಭಾರತೀಯ ಸಿನಿಮಾಕ್ಕೆ ಅಂತರಾಷ್ಟ್ರೀಯ ಸ್ಥಾಯಿ ದೊರಕಿಸಿಕೊಟ್ಟ ವಿಷಯದಲ್ಲಿ ರಾಜಮೌಳಿಯನ್ನು ಗ್ರೇಟ್ ಎಂದಿರುವ ತೇಜ, ”ರಾಜಮೌಳಿ, ಕಿಂಗ್ ಆಫ್ ಇಂಡಿಯನ್ ಸಿನಿಮಾ” ಎಂದಿದ್ದಾರೆ. ”ರಾಜಮೌಳಿ ಇನ್ನೊಂದೆರಡು ಸಿನಿಮಾಗಳನ್ನು ಮಾಡಿಬಿಟ್ಟರೆ ಡಾಲರ್ ಮೌಲ್ಯ ಕುಸಿದು ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ” ಎಂದಿದ್ದಾರೆ. ಅದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ ಸಹ.

”ರಾಜಮೌಳಿ ಭಾರತದ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಿದ್ದಾರೆ ಆ ಮೂಲಕ ಭಾರತದ ಕಡೆಗೆ ಕೋಟ್ಯಂತರ ಜನರ ಆಸಕ್ತಿಯನ್ನು, ಗಮನವನ್ನು ಸೆಳೆದಿದ್ದಾರೆ. ಯಾವುದೇ ಒಂದು ದೇಶ, ನಗರದ ಬಗ್ಗೆ ಆಸಕ್ತಿ, ಕುತೂಹಲಗಳನ್ನು ಬೆಳೆಸುವುದರಲ್ಲಿ ಸಿನಿಮಾಗಳ ಪಾತ್ರ ಬಹಳ ಪ್ರಮುಖವಾದುದು. ಅಮೆರಿಕ ದೊಡ್ಡ ದೇಶ, ಮಹಾನ್ ಶಕ್ತಿಶಾಲಿ ದೇಶ ಎಂದು ನಾವು ನಂಬಿರುವುದು ಹಾಲಿವುಡ್ ಸಿನಿಮಾಗಳ ಕಾರಣವೇ ಹೊರತು ಇತಿಹಾಸದ ಮೂಲಕ ಅಲ್ಲ. ಹಾಗಾಗಿ ರಾಜಮೌಳಿ ಆರ್​ಆರ್​ಆರ್ ರೀತಿಯಲ್ಲಿಯೇ ಇನ್ನೊಂದೆರಡು ಅಥವಾ ಇನ್ನೂ ಹೆಚ್ಚು ಸಿನಿಮಾ ಮಾಡಿ ಭಾರತದ ಬಗ್ಗೆ ವಿಶ್ವದ ಗಮನ ಸೆಳೆದರೆ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಜನರು ಭಾರತದತ್ತ ನೋಡಲಾರಂಭಿಸುತ್ತಾರೆ, ಆಸಕ್ತರಾಗುತ್ತಾರೆ” ಎಂದಿದ್ದಾರೆ ತೇಜ.

”ಭಾರತದ ಬಗ್ಗೆ ಆಸಕ್ತಿವಹಿಸಿ ವಿಶ್ವದ ಇತರೆ ರಾಷ್ಟ್ರಗಳಿಂದ ಭಾರತಕ್ಕೆ ಪ್ರವಾಸ ಬರುತ್ತಾರೆ. ಇಲ್ಲಿ ತಮ್ಮ ಹಣವನ್ನು ಬಂಡವಾಳ ಹೂಡುತ್ತಾರೆ. ಡಾಲರ್ ಅಥವಾ ಬೇರೆ ದೇಶದ ಕರೆನ್ಸಿ ಮೂಲಕ ಭಾರತದ ರೂಪಾಯಿಯನ್ನು ಖರೀದಿಸುತ್ತಾರೆ. ಇದೆಲ್ಲ ಹೆಚ್ಚಾದಷ್ಟು ರೂಪಾಯಿ ಶಕ್ತಿಯುತವಾಗುತ್ತದೆ, ರೂಪಾಯಿ ಎದುರು ಡಾಲರ್ ಮೌಲ್ಯ ಕುಸಿಯುತ್ತದೆ. ಇದು ಖಂಡಿತ ಆಗುತ್ತದೆ ನೋಡುತ್ತಿರಿ” ಎಂದು ಸಂದರ್ಶನವೊಂದರಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ತೇಜ.

ಇದನ್ನೂ ಓದಿ:SS Rajamouli: 10 ವರ್ಷ ಒಂದೇ ಪ್ರಾಜೆಕ್ಟ್​​ಮೇಲೆ ಕೆಲಸ ಮಾಡಲಿದ್ದಾರೆ ನಿರ್ದೇಶಕ ರಾಜಮೌಳಿ?

ರೂಪಾಯಿ ಬಲಗೊಳ್ಳಲು ಅದರ ವಿನಿಮಯ ಹೆಚ್ಚಾಗಬೇಕು ಹಾಗಾಗಿ ತೇಜ ಹೇಳಿವುದು ತಪ್ಪೆಂದೊ, ಸುಳ್ಳೆಂದೋ ಹೇಳಲಾಗದು. ಅಮೆರಿಕವನ್ನು ‘ಗ್ರೇಟ್’ ಮಾಡುವುದರಲ್ಲಿ ಹಾಲಿವುಡ್ ಸಿನಿಮಾಗಳ ಯೋಗದಾನ ಬಹಳ ದೊಡ್ಡದ್ದು. ಅಂತೆಯೇ ಭಾರತೀಯ ಸಿನಿಮಾಗಳು ಭಾರತವನ್ನು ವಿಶ್ವಕ್ಕೆ ತಲುಪಿಸುವ ಕೆಲಸವನ್ನು ಸತತವಾಗಿ ಮಾಡುತ್ತಾ ಸಾಗಿದರೆ ತೇಜ ಹೇಳಿದ ಮಾತು ನಿಜವಾಗುವ ಸಾಧ್ಯತೆ ಇದೆ.

ತೇಜ ಸಾಮಾನ್ಯ ನಿರ್ದೇಶಕರೇನಲ್ಲ, ತೆಲುಗು ಚಿತ್ರರಂಗದ ಐತಿಹಾಸಿಕ ಹಿಟ್​ಗಳಲ್ಲಿ ಒಂದಾದ ಜಯಂ ಸಿನಿಮಾ ನಿರ್ದೇಶಿಸಿದ್ದು ಇವರೇ. ಜೊತೆಗೆ ಚಿತ್ರಂ, ಔನನ್ನಾ ಕಾದನ್ನ, ನುವ್ವು ನೇನು, ನಿಜಂ, ಧೈರ್ಯಂ, ನೇನೆ ರಾಜು ನೇನೆ ಮಂತ್ರಿ, ಲಕ್ಷ್ಮಿ ಕಲ್ಯಾಣಂ ಇನ್ನು ಹಲವು ನೆನಪುಳಿವ ಸಿನಿಮಾಗಳನ್ನು ತೇಜ ನೀಡಿದ್ದಾರೆ. ಈಗ ಅಹಿಂಸಾ ಹೆಸರಿನ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Thu, 25 May 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!